Thayimane
THAYIMANE (ತಾಯಿ ಮನೆ) is a Child care institute, provides education, residence, care&protect children.
THAYIMANE is a residential institution devoted to the care of orphans – children whose biological parents are deceased or otherwise unable or unwilling to care for them. Biological parents, and sometimes biological grandparents, are legally responsible for supporting children, but in the absence of these, no named godparent, or other relatives willing to care for the children, they become a ward
ತಾಯಿಮನೆ ಮಕ್ಕಳಿಗೆ “ಶರತ್ ಭೂಪಾಳಂ ಚಾರಿಟೇಬಲ್ ಟ್ರಸ್ಟ್” ವತಿಯಿಂದ ಸಂಗೀತ ಮೇಡಂ ಸಹಕಾರದಿಂದ ಪ್ರತಿ ವಾರ ಸಂಗೀತ ತರಬೇತಿಯನ್ನು ಯುವ ಗಾಯಕರಾದ ಶ್ರೀಯುತ ಪೃಥ್ವಿ, ಶ್ರೀಯುತ ವಿನಯ್ ಮತ್ತು ಶ್ರೀಯುತತ ಪಾರ್ಥ ಅವರು ಮಕ್ಕಳಿಗೆ ನೀಡುತ್ತಿದ್ದಾರೆ.
ತಾಯಿಮನೆಯಲ್ಲಿ ದೀಪಾವಳಿಯ ಸಂಭ್ರಮ.
"ತಾಯಿಮನೆ ಸಂಸ್ಥೆಗೆ 14ರ ಸೇವಾ ಕಾರ್ಯದ ಸಂಭ್ರಮ"
ತಾಯಿಮನೆ ಸಂಸ್ಥೆಯು 26- 9-2009 ರಂದು ಪ್ರಾರಂಭವಾಗಿ ಶಿಕ್ಷಣದಿಂದ ವಂಚಿತರಾದ, ಕೌಟುಂಬಿಕ ಸಮಸ್ಯೆಗೊಳಗಾದ, ಆರ್ಥಿಕ ಸಮಸ್ಯೆಯಲ್ಲಿರುವ, ಏಕ ಪೋಷಕರು, ನಿರ್ಗತಿಕ ಮಕ್ಕಳ ಆಶಾಕಿರಣವಾಗಿ ನೂರಾರು ಮಕ್ಕಳಿಗೆ ಆಶ್ರಯ ನೀಡಿ ಊಟ-ಉಪಚಾರ, ಶಿಕ್ಷಣ ಒದಗಿಸಿ ಆಪ್ತಸಮಾಲೋಚನೆ, ಮಾನವೀಯ ಮೌಲ್ಯಗಳು, ವ್ಯಕ್ತಿ ವಿಕಸನ, ಸಂಸ್ಕಾರ, ದೇಶಾಭಿಮಾನ ಒದಗಿಸಿಕೊಡುತ್ತಾ ಬಂದಿದೆ. ಮಕ್ಕಳಿಗೆ ಮೌಲ್ಯಾಧಾರಿತ ಔಪಚಾರಿಕ, ಅನೌಪಚಾರಿಕ ಶಿಕ್ಷಣಗಳನ್ನು ಒದಗಿಸುತ್ತಾ ಸೇವಾಕಾರ್ಯವನ್ನು ಮಾಡುತ್ತಿದೆ. ತಾಯಿಮನೆಯಲ್ಲಿ ಮಕ್ಕಳ ಜ್ಞಾನಾಭಿವೃದ್ಧಿ ಗಾಗಿ ಪುಸ್ತಕ ಭಂಡಾರವೇ ಇದ್ದು, ಮಕ್ಕಳ ಪ್ರತಿಭೆಯನ್ನು ಗುರುತಿಸುವ ವೇದಿಕೆಗಳನ್ನು ರೂಪಿಸುತ್ತಾ ಮಾನವೀಯ ತತ್ವವನ್ನು ತಿಳಿಸುತ್ತಾ ಬಂದಿದೆ. ಈ 14 ವರ್ಷಗಳಲ್ಲಿ ತಾಯಿಮನೆ ಸಂಸ್ಥೆಯ ಸೇವಾಕಾರ್ಯಕ್ಕೆ ಪ್ರತ್ಯಕ್ಷ ಮತ್ತು ಪರೋಕ್ಷವಾಗಿ ಹಲವಾರು ಹೃದಯವಂತ ಪ್ರೀತಿಯ ಕೈಗಳು ಸಹಾಯವನ್ನು, ಸಹಕಾರವನ್ನು, ಸಲಹೆಯನ್ನು ನೀಡುತ್ತಾ ತಾಯಿಮನೆಯ ಕುಟುಂಬವಾಗಿ, ಪೋಷಕರಾಗಿ, ತಂದೆ- ತಾಯಿಯಾಗಿ, ಅಕ್ಕ- ಅಣ್ಣನಾಗಿ "ನಿಮ್ಮ ತಾಯಿಮನೆ"ಯನ್ನು ಮುನ್ನಡೆಸುತ್ತಿದ್ದೀರಿ. ನಿಮ್ಮ ಈ ಪ್ರೀತಿ ಹೀಗೆ ಮುಂದುವರೆಯಲಿ, ಇನ್ನೂ ಸಾವಿರಾರು ಮಕ್ಕಳ ಆಶಾಕಿರಣವಾಗಿ ನಿಮ್ಮ ತಾಯಿಮನೆ ಪ್ರಾಮಾಣಿಕವಾಗಿ ಸೇವೆ ಸಲ್ಲಿಸಲು ಸಿದ್ದವಿದೆ 🙏
(ತಾಯಿಮನೆ ಎಂದೂ ಸಹ ಅನಾಥಾಶ್ರಮ ವೆಂಬ ಪದವನ್ನು ಬಳಸದೆ ಇದು "ಮಕ್ಕಳ ಮನೆ" ಎಂಬ ಶೀರ್ಷಿಕೆಯಲ್ಲಿ ಕಾರ್ಯ ನಿರ್ವಹಿಸಿಕೊಂಡು ಬಂದಿದೆ)
ತಾಯಿಮನೆ ಸಂಸ್ಥೆಯಲ್ಲಿ 77ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸಲಾಯಿತು. ಸಹ್ಯಾದ್ರಿ ವಿಜ್ಞಾನ ಕಾಲೇಜಿನ ಪ್ರೊಫೆಸರ್ ಲತಾ ಮೇಡಂ ಅವರು ಧ್ವಜಾರೋಹಣ ಮಾಡುವ ಮೂಲಕ ಸ್ವಾತಂತ್ರ್ಯ ದಿನಾಚರಣೆಯ ಮಹತ್ವವನ್ನು ಮಕ್ಕಳಿಗೆ ತಿಳಿಸಿದರು. ಕಾರ್ಯಕ್ರಮದಲ್ಲಿ ಜೆಸಿಐ ಶಿವಮೊಗ್ಗ ಶರಾವತಿ ಘಟಕದ ಸದಸ್ಯರು ಭಾಗವಹಿಸಿದ್ದರು.
ತಾಯಿಮನೆಯಲ್ಲಿ ಹೂವುಗಳ ಸಂಭ್ರಮ….
ತಾಯಿಮನೆ ಮಕ್ಕಳಿಗೆ ಶ್ರೀಮತಿ ಸಂಗೀತ ಶರತ್ ಮತ್ತು ಸಂಚಿತ್ ಅವರು ಮಕ್ಕಳಿಗೆ ಕೌಶಲ್ಯಭರಿತ ಚಟುವಟಿಕೆ ಹೇಳಿಕೊಡುವ ಮೂಲಕ ಯುನೋ ಆಟವನ್ನು ಹೇಳಿಕೊಟ್ಟರು ಮತ್ತು ಸ್ನೇಹಿತರ ದಿನವನ್ನು ಆಚರಿಸಲಾಯಿತು.
ತಾಯಿಮನೆ ಸಂಸ್ಥೆ ಮತ್ತು ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪ್ರಕೃತಿ ಚಿಕಿತ್ಸೆ ಹಾಗೂ ಯೋಗವಿಜ್ಞಾನಗಳ ಮಹಾವಿದ್ಯಾಲಯ ಮತ್ತು ಆಸ್ಪತ್ರೆ ಉಜಿರೆ, ಜೆಸಿಐ ಶರಾವತಿ ಶಿವಮೊಗ್ಗ ವತಿಯಿಂದ 9ನೇ ವಿಶ್ವ ಯೋಗ ದಿನಾಚರಣೆ ಅಂಗವಾಗಿ ಉಚಿತ ಯೋಗ ಶಿಬಿರ ಹಮ್ಮಿಕೊಳ್ಳಲಾಗಿತ್ತು. ಯೋಗ ತರಬೇತಿಯನ್ನು ಗುರುಚರಣ್ ದೀಕ್ಷಿತ್ ನಡೆಸಿಕೊಟ್ಟರು, ತಾಯಿಮನೆ ಸಂಸ್ಥೆ ಮಕ್ಕಳು ಜೆಸಿಐ ಸದಸ್ಯರು, ಇನ್ನಿತರರು ಭಾಗವಹಿಸಿದ್ದರು.
ತಾಯಿಮನೆ ಸಂಸ್ಥೆಯ ಮಕ್ಕಳಿಗೆ ಶರಾವತಿ ಡೆಂಟಲ್ ಕಾಲೇಜಿನ ವತಿಯಿಂದ ದಂತ ತಪಾಸಣಾ ಶಿಬಿರವನ್ನು ಹಮ್ಮಿಕೊಳ್ಳಲಾಗಿತ್ತು.
ದೋಸೆ ಕ್ಯಾಂಪ್...
ತಾಯಿಮನೆ ಸಂಸ್ಥೆ ಮತ್ತು ಬಾಂಧವ್ಯ ಟೀಮ್ ವಿಭಿನ್ನವಾದ ಕಾರ್ಯಕ್ರಮವನ್ನು ಹಮ್ಮಿಕೊಂಡಿತ್ತು. ತಾಯಿಮನೆ ಮಕ್ಕಳಿಗೆ ಯಾವ ರೀತಿಯ ದೋಸೆ ಇಷ್ಟಾನೋ ಆ ರೀತಿಯ ಬಿಸಿಯಾದ ದೋಸೆ ತಿನ್ನುವ ಅವಕಾಶ. ಬೆಣ್ಣೆ ದೋಸೆ, ಮಸಾಲ ದೋಸೆ, ಪ್ಲೇನ್ ದೋಸೆ, ಸೆಟ್ ದೋಸೆ ,ಬಿಸ್ಕೆಟ್ ದೋಸೆ, ತುಪ್ಪದ ದೋಸೆ, ಚಟ್ನಿ, ಆಲೂಗಡ್ಡೆ ಪಲ್ಯ, ಖಾರದ ಚಟ್ನಿ, ಶೇಂಗಾ ಚಟ್ನಿ. ಎಲ್ಲರೂ ಅವರಿಗೆ ಇಷ್ಟವಾದ ದೋಸೆ ಚೆನ್ನಾಗಿ ತಿಂದ್ರು ಅಷ್ಟೇ ಎಂಜಾಯ್ ಮಾಡಿದ್ರು. ಶ್ರೀಯುತ ರವೀಶ್ ಸರ್ ಬಾಂಧವ್ಯ ಟೀಮ್ ಕಾರ್ಯಕ್ರಮದ ಸಾರಥ್ಯ ವಹಿಸಿದ್ದರು.
ತಾಯಿಮನೆಯಲ್ಲಿ ರಾಷ್ಟ್ರೀಯ ಬಾಲ ಸ್ವಾಸ್ಥ್ಯ ಕಾರ್ಯಕ್ರಮದ ಅಡಿಯಲ್ಲಿ ಆರೋಗ್ಯ ಇಲಾಖೆಯ ವತಿಯಿಂದ ಮಕ್ಕಳಿಗೆ ಆರೋಗ್ಯ ತಪಾಸಣಾ ಶಿಬಿರ ಹಮ್ಮಿಕೊಳ್ಳಲಾಗಿತ್ತು.
ಭಾವಪೂರ್ಣ ಶ್ರದ್ಧಾಂಜಲಿ
ತಾಯಿಮನೆಯ ಅಪರೂಪದ ಅತಿಥಿಗಳಾದ "ಬ್ರೂನೋ" ರವರು ಕಳೆದ ವರ್ಷ ತಾಯಿಮನೆಗೆ ವೈಭವ್ ರೊಂದಿಗೆ ಭೇಟಿ ನೀಡಿ ಮಕ್ಕಳೊಂದಿಗೆ ತಮ್ಮ ಪ್ರವಾಸದ ಬಗ್ಗೆ ವಿಚಾರಗಳನ್ನು ತಿಳಿಸಿ, ಮಕ್ಕಳೊಂದಿಗೆ ಆಟವಾಡಿ ಹಾಗೂ ನಮ್ಮೆಲ್ಲರೊಂದಿಗೆ ಊಟ ಮಾಡಿ, ಕನ್ನಡ ಕಲಿಯುವ ಪ್ರಯತ್ನ ಮಾಡಿ ಎರಡು ದಿನ ನಮ್ಮೊಂದಿಗೆ ಅಮೂಲ್ಯ ಸಮಯವನ್ನು ಕಳೆದಿದ್ದರು. ಅವರು ನಮ್ಮ ದೇಶದ ಸಂಸ್ಕೃತಿ, ಆಹಾರ, ಐತಿಹಾಸಿಕ ಸ್ಥಳಗಳನ್ನು ತುಂಬಾ ಇಷ್ಟಪಟ್ಟಿದ್ದರು. ಇಂತಹ ಒಳ್ಳೆಯ ಮನಸ್ಸಿನ ವ್ಯಕ್ತಿ ಆಗ್ನೇಯ ಏಷ್ಯಾ ಪ್ರವಾಸದಲ್ಲಿ ಇರುವಾಗ ಅನಾರೋಗ್ಯಕ್ಕೆ ಒಳಗಾಗಿ ದೈವಾಧೀನರಾಗಿರುತ್ತಾರೆ. ನಿಜವಾಗಲೂ ಈ ವಿಷಯವನ್ನು ಕೇಳಿ ಮನಸ್ಸಿಗೆ ತುಂಬಾ ಭಾರವಾಯಿತು. ಅವರ ಆತ್ಮಕ್ಕೆ ಚಿರಶಾಂತಿ ಸಿಗಲಿ ಹಾಗೂ ಅವರ ತಂದೆ ತಾಯಿಗೆ ನೋವು ಭರಿಸುವ ಶಕ್ತಿ ನೀಡಲಿ ಎಂದು ತಾಯಿಮನೆ ತಂಡದಿಂದ ಪ್ರಾರ್ಥಿಸುತ್ತೇವೆ. 🙏
ಬೇಸಿಗೆ ಶಿಬಿರ
ತಾಯಿಮನೆ ಸಂಸ್ಥೆಯ ಮಕ್ಕಳಿಗೆ ರೋಬೋಟಿಕ್ ಆಟಿಕೆಗಳನ್ನು ಮಾಡುವ ಬಗ್ಗೆ ಮಕ್ಕಳಿಗೆ ತರಬೇತಿ ನೀಡಲಾಯಿತು.
ಬೇಸಿಗೆ ಶಿಬಿರ
ತಾಯಿಮನೆ ಸಂಸ್ಥೆಯ ಮಕ್ಕಳಿಗೆ ಟೆಲಿಸ್ಕೋಪ್ ಮೂಲಕ ಬಾಹ್ಯಾಕಾಶ ವೀಕ್ಷಣೆ ಮಾಡಿಸಲಾಯಿತು, ಚಂದ್ರನ ಮೇಲಿನ ಗುಳಿಗಳು, ಸೀರಿಯಸ್ ನಕ್ಷತ್ರ (Sirius star) Red jiant ಸ್ಟಾರ್, ಶುಕ್ರ ಗ್ರಹ (Venus planet), ಇತರೆ ನಕ್ಷತ್ರ ಪುಂಜಗಳನ್ನು ಮಕ್ಕಳು ವೀಕ್ಷಿಸಿ ಅದರ ಮಾಹಿತಿಯನ್ನು ತಿಳಿದುಕೊಂಡರು.
ಬೇಸಿಗೆ ಶಿಬಿರ 3ನೇ ದಿನ
ತಾಯಿಮನೆ ಸಂಸ್ಥೆಯ ಮಕ್ಕಳಿಗೆ ರೋಬೋಟಿಕ್ ಆಟಿಕೆಗಳನ್ನು ಮಾಡುವ ಬಗ್ಗೆ ಮಕ್ಕಳಿಗೆ ತರಬೇತಿ ನೀಡಲಾಯಿತು.
ಬೇಸಿಗೆ ಶಿಬಿರ 2ನೇ ದಿನ
ತಾಯಿಮನೆ ಸಂಸ್ಥೆಯ ಮಕ್ಕಳಿಗೆ ವಿದ್ಯುತ್ ಶಕ್ತಿಯ ಮಹತ್ವ ಅದರ ಸದ್ಬಳಕೆ, ಅನುಪಯುಕ್ತ ವಸ್ತುಗಳನ್ನು ಬಳಸಿ ಸೈನ್ಸ್ ಮಾಡೆಲ್ಗಳನ್ನ ಮಾಡಿಸಲಾಯಿತು. ಅನುಪಯುಕ್ತ ವಸ್ತುಗಳ ಮೂಲಕ ಫನ್ನಿ ಗೇಮ್ಸ್ ಆಡಿಸಲಾಯಿತು.
“ಬೇಸಿಗೆ ಶಿಬಿರ”
ತಾಯಿಮನೆ ಮಕ್ಕಳಿಗೆ Do Minds Design Lab Shimoga ಇವರು ಬೇಸಿಗೆ ಶಿಬಿರ ಹಮ್ಮಿಕೊಳ್ಳುವ ಮೂಲಕ ಮಕ್ಕಳಿಗೆ ಕೌಶಲ್ಯ ಭರಿತ ಚಟುವಟಿಕೆಗಳ ಮೂಲಕ “ವಿಜ್ಞಾನ ಮತ್ತು ನಾವು” ಹಲವಾರು ಮಾಹಿತಿಗಳನ್ನು ನೀಡಿದರು, ಮಕ್ಕಳಿಗೆ ಪೇಪರ್ ಗಳಿಂದ ಬೂಮರಾಂಗ್( ಆಸ್ಟ್ರೇಲಿಯಾದ ಅಬೋರಿಜೀನ್ಸ್ ಬೇಟೆಯಾಡುವ ಸಾಧನ, ಸಂಪ್ರದಾಯವಾಗಿ ಬಳಸುವ ಎಸೆದರೆ ಹಿಂದಿರುಗುವಂತೆ ಮಾಡುವ ಒಂದು ಬಾಗಿದ, ಸಪಾಟಾದ ಮರದ ತುಂಡು.) ಮಾಡುವುದನ್ನು ಹೇಳಿಕೊಟ್ಟರು ತರಬೇತುದಾರರಾಗಿ ಶ್ರೀಯುತ ಗುರುಪ್ರಸಾದ್, ಶ್ರೀಯುತ ನವೀನ್, ಶ್ರೀಯುತ ವೆಂಕಟೇಶ್ ಕೌಶಲ್ಯ ಚಟುವಟಿಕೆಯನ್ನು, ಹೇಳಿಕೊಟ್ಟರು ಶ್ರೀಮತಿ ಸಂಗೀತ ಶರತ್ ಆಯೋಜಿಸಿದ್ದರು.
ನೀರಿಗಾಗಿ ಹಾಹಾಕಾರ ಮಾಡುವ ಹೆಜ್ಜೇನು ನೊಣಗಳಿಗೆ ತನ್ನ ಕೊಕ್ಕಲ್ಲಿ ನೀರು ತಂದು ಕೊಂಡುವ ಪರೋಪಕಾರಿ ಹಕ್ಕಿ.
ತಾಯಿಮನೆ ಮಕ್ಕಳಿಗೆ ಶಿವರಾತ್ರಿ ಪ್ರಯುಕ್ತ ಶ್ರೀಮತಿ ಪುಷ್ಪ ಚಿನ್ಮಯ್ ಮಿಷನ್ ಇವರು ಮಕ್ಕಳಿಗೆ ಕೌಶಲ್ಯ ಭರಿತ ಚಟುವಟಿಕೆಗಳ ಮೂಲಕ ಭಜನೆಯನ್ನು ಹೇಳಿಕೊಟ್ಟರು ಹಾಗೂ ಮಹಾಭಾರತದ ಪಾತ್ರಗಳನ್ನು ಪರಿಚಯಿಸಿದರು ಕೌಶಲ್ಯ ಚಟುವಟಿಕೆಯನ್ನು ಶ್ರೀಮತಿ ಸಂಗೀತ ಶರತ್ ಆಯೋಜಿಸಿದ್ದರು.
ತಾಯಿಮನೆಯಲ್ಲಿ ದಿವ್ಯಸತ್ಸಂಗ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತು ಕಾರ್ಯಕ್ರಮದಲ್ಲಿ ಶಿವಮೊಗ್ಗ ರಾಮಕೃಷ್ಣ ವಿವೇಕಾನಂದ ಆಶ್ರಮದ ಪೂಜ್ಯ ಸ್ವಾಮಿ ವಿನಯಾನಂದ ಸರಸ್ವತಿಯವರು ದಿವ್ಯಸಾನಿಧ್ಯ ವಹಿಸಿದ್ದರು. ಖ್ಯಾತ ವಾಗ್ಮಿಗಳಾದ ಶ್ರೀ ರಮೇಶ್ ಉಮ್ರಾಣಿ ಉಪನ್ಯಾಸ ನೀಡಿದರು ಮತ್ತು ಭಜನೆ ಹಾಗೂ ಪ್ರವಚನ ಕಾರ್ಯಕ್ರಮಗಳು ನೆರವೇರಿದವು.
*ಎಳ್ಳು ಬೆಲ್ಲ ಸವಿಯುತ್ತಾ*
*ಕಬ್ಬಿನ ಸಿಹಿಯ ಹೀರುತ್ತಾ*
*ದ್ವೇಷ ಅಸೂಯೆ ಮರೆಯುತ್ತಾ*
*ಸವಿ ಮಾತುಗಳನ್ನು ನುಡಿಯುತ್ತಾ*
*ಮಕರ ಸಂಕ್ರಾಂತಿಗೆ ಸ್ವಾಗತ ಕೋರೋಣ...*
*ಮೂಡಣದ ಅರಮನೆಯ ಕದವು ತೆರೆದು*
*ಪಡುವಣದ ಕತ್ತಲೆಯ ಪರದೆ ಸರಿದು*
*ಹೊಂಬಣ್ಣದ ರವಿಯ ಕಿರಣ ಹರಿದು*
*ಕೆಂಬಣ್ಣದ ತಂಬೆಳಕ ಸುರಿದು*
*ತಂಪಾದ ತಂಗಾಳಿ ಸುಳಿದು*
*ಇಂಪಾದ ರಾಗ ಮಿಡಿದು*
*ಹೂಕಂಪು ಸೂಸಿ ಹೇಳುತಿದೆ..*
*ನಿಮಗೆ ನಿಮ್ಮ ಕುಟುಂಬಕ್ಕೆ*
*💐"ಮಕರ ಸಂಕ್ರಾಂತಿ ಹಬ್ಬದ ಶುಭಾಶಯಗಳು "💐
ತಾಯಿಮನೆ ಮತ್ತು ವಿವೇಕಾನಂದ ಜಾಗೃತಿ ವೇದಿಕೆ ವತಿಯಿಂದ ಭವ್ಯ ಭಾರತ ನಿರ್ಮಾಣದ ಸಂಕಲ್ಪ ತೊಟ್ಟ ಅದಮ್ಯ ಚೇತನ ಸ್ವಾಮಿ ವಿವೇಕಾನಂದರ ಜಯಂತಿಯನ್ನು ಹಾಗೂ ರಾಷ್ಟ್ರೀಯ ಯುವ ದಿನವನ್ನು ಆಚರಿಸಲಾಯಿತು.
ಸಾವಿನಲ್ಲೂ ಮಾತು ತಪ್ಪದ ಶ್ರೀಯುತ ಶರತ್ ಭೂಪಾಳಂ .
ತಾಯಿಮನೆ ಸಂಸ್ಥೆಯ ಹಿತೈಷಿಗಳು ಹಾಗೂ ಸ್ನೇಹಿತರು ಆದ ಶಿವಮೊಗ್ಗದ ಟೆಕ್ನೋರಿಂಗ್ಸ್ ಮಾಲೀಕರು ಹಾಗೂ ಖ್ಯಾತ ಉದ್ಯಮಿಗಳೂ ಆದ ಶರತ್ ಭೂಪಾಳಂ ಅವರ ಅಕಾಲಿಕ ಅಗಲಿಕೆಯು ತೀವ್ರ ನೋವನ್ನು ಉಂಟುಮಾಡಿದೆ. ಇಂದು ತಾಯಿಮನೆಯಲ್ಲಿ ಮಕ್ಕಳಿಗೆ 12 ಗಂಟೆಗೆ ಮ್ಯಾಜಿಕ್ ಶೋ ಏರ್ಪಡಿಸಿದ್ದ ಶರತ್ ಅವರು ಹಾಗೂ ಅವರ ಪತ್ನಿ ಸಂಗೀತ ಮೇಡಂ ರವರು ಕಾರ್ಯಕ್ರಮವನ್ನು ಮೊದಲೇ ಪ್ಲಾನ್ ಮಾಡಿದ್ದರು, ಆದರೆ ಬೆಳಗ್ಗೆ ಅವರ ಮನೆಯಲ್ಲಿ ನಡೆದ ಶಾರ್ಟ್ ಸರ್ಕ್ಯೂಟ್ನಿಂದ ಶರತ್ ಅವರು ಅಕಾಲಿಕ ಮರಣಕ್ಕೆ ಒಳಗಾದರು. ಆದರೂ ಸಹ ಅವರ ಆಸೆಯಂತೆಯೇ ಮ್ಯಾಜಿಕ್ ಶೋ ನಡೆಸಲಾಯಿತು. ಈ ಮೂಲಕ ಅವರಿಗೆ ಭಾವಪೂರ್ಣ ಶ್ರದ್ಧಾಂಜಲಿಯನ್ನು ಸಲ್ಲಿಸಲಾಯಿತು. ತಾಯಿಮನೆ ಸಂಸ್ಥೆ ಪರವಾಗಿ ಮತ್ತು ಮಕ್ಕಳ ಪರವಾಗಿ ಭಗವಂತನು ಅವರ ಆತ್ಮಕ್ಕೆ ಚಿರಶಾಂತಿಯನ್ನು ಕರುಣಿಸಲಿ ಹಾಗೂ ಅವರ ಕುಟುಂಬಕ್ಕೆ ದುಃಖ ಭರಿಸುವ ಶಕ್ತಿಯನ್ನು ನೀಡಲಿ ಎಂದು ಪ್ರಾರ್ಥಿಸುತ್ತೇವೆ.
ಶಿವಮೊಗ್ಗದಲ್ಲಿ ಭೂಪಾಳಂ ಗ್ರೂಪ್ ಕಂಪನಿ ಅಡಿ ಟೆಕ್ನೋರಿಂಗ್ಸ್ ಕೈಗಾರಿಕಾ ಸಂಸ್ಥೆಯನ್ನು ಸ್ಥಾಪಿಸಿ, ನೂರಾರು ಜನರಿಗೆ ಉದ್ಯೋಗ ನೀಡುವ ಮೂಲಕ ಅವರ ಬದುಕಿಗೆ ಆಸರೆಯಾಗಿದ್ದರು. ಅಲ್ಲದೆ ಅತ್ಯುತ್ತಮವಾದ ಉತ್ಪನ್ನಗಳನ್ನು ತಯಾರಿಸುವ ಮೂಲಕ ಭಾರತದ ಕೈಗಾರಿಕೋದ್ಯಮ ಕ್ಷೇತ್ರ ಹಾಗೂ ಮಲೆನಾಡಿನಲ್ಲಿ ಹೆಸರುವಾಸಿಯಾಗಿದ್ದರು.
ಮಕ್ಕಳ ದಿನಾಚರಣೆ.
ತಾಯಿ ಮನೆಯಲ್ಲಿ ಮಕ್ಕಳ ದಿನಾಚರಣೆಯನ್ನು ಆಚರಿಸಲಾಯಿತು. ಕಾರ್ಯಕ್ರಮವನ್ನು ದೀಪಕ್ಕೆ ತೈಲ ಹಾಕುವ ಮೂಲಕ ಉದ್ಘಾಟನೆಯನ್ನು ಶ್ರೀಮತಿ ರೇಖಾ, ಅಧ್ಯಕ್ಷರು ಮಕ್ಕಳ ಕಲ್ಯಾಣ ಸಮಿತಿ ನೆರವೇರಿಸಿದರು ಹಾಗೂ ಶ್ರೀಮತಿ ರೇಣುಕಮ್ಮ, ಸದಸ್ಯರು ಮಕ್ಕಳ ಕಲ್ಯಾಣ ಸಮಿತಿ, ಶ್ರೀಮತಿ ಶೀಲಾ ಸುರೇಶ್ ಸದಸ್ಯರು ಮಕ್ಕಳ ಕಲ್ಯಾಣ ಸಮಿತಿ ಮತ್ತು ಶ್ರೀಮತಿ ಗಾಯತ್ರಿ ರಕ್ಷಣಾಧಿಕಾರಿಗಳು ಜಿಲ್ಲಾ ಮಕ್ಕಳ ರಕ್ಷಣಾ ಘಟಕ, ಸಿಸ್ಟರ್ ಲಿಲ್ಲಿ ಪುಷ್ಪ,ಮತ್ತು ಶಿವಮೊಗ್ಗದ ಮಕ್ಕಳ ಪಾಲನ ಸಂಸ್ಥೆಗಳು ಹಾಗೂ ಮಕ್ಕಳು ಹಾಜರಿದ್ದರು.
Happy children's day.
ಮಕ್ಕಳ ದಿನಾಚರಣೆ’ ಹುಟ್ಟಿದ್ದು ಹೀಗೆ...
ವಿ.ಎನ್. ಕುಲಕರ್ಣಿ ಎನ್ನುವವರು 1951ರಲ್ಲಿ ವಿಶ್ವಸಂಸ್ಥೆಯ ಒಂದು ಯೋಜನೆಯಡಿಯಲ್ಲಿ ಇಂಗ್ಲೆಂಡ್ನ ಮಕ್ಕಳ ಕಲ್ಯಾಣಕ್ಕಾಗಿ ದುಡಿಯುತ್ತಿದ್ದರು. ಆ ದಿನಗಳಲ್ಲಿ ಬಡ ಮಕ್ಕಳ ಅಭಿವೃದ್ಧಿಗಾಗಿ ನಿಧಿ ಸಂಗ್ರಹಕ್ಕೆ ರಾಣಿ ಎಲಿಜ಼ಬೆತ್-2 ಅವರ ಜನ್ಮದಿನವನ್ನು, ‘ಧ್ವಜ ದಿನಾಚರಣೆ’ಯನ್ನಾಗಿ ಆಚರಿಸುತ್ತಾ ಧನ ಸಂಗ್ರಹಿಸಲಾಗುತ್ತಿತ್ತು. ಆ ಸಂದರ್ಭದಲ್ಲಿ ಕುಲಕರ್ಣಿಯವರ ಮನಸ್ಸು ಸಹಜವಾಗಿಯೇ ಭಾರತೀಯ ಮಕ್ಕಳ ಸ್ಥಿತಿಗತಿಯ ಬಗ್ಗೆ ಮಿಡಿದಿತ್ತು.
ಇಂತಹದೊಂದು ಯೋಜನೆ ಭಾರತದಲ್ಲೂ ನಡೆಯಬೇಕು, ಮಕ್ಕಳಿಗಾಗಿ ಧನ ಸಂಗ್ರಹಿಸಿ ವಿಶೇಷ ಕಾರ್ಯಕ್ರಮಗಳನ್ನು ನಡೆಸಬೇಕು ಎನ್ನುವ ಬಗ್ಗೆ ವಿಶ್ವಸಂಸ್ಥೆಯಲ್ಲಿ ಪ್ರಸ್ತಾಪವಿಟ್ಟರು. ಇದಕ್ಕೆ ಭಾರತದ ಮೊದಲ ಪ್ರಧಾನಮಂತ್ರಿಯಗಿದ್ದ ಚಾಚಾ ನೆಹರೂ ಅವರ ಜನ್ಮದಿನದಷ್ಟು ಪ್ರಶಸ್ತವಾದ ದಿನ ಬೇರೊಂದಿಲ್ಲ ಎನ್ನುವ ಅಭಿಪ್ರಾಯವನ್ನೂ ಮುಂದಿಟ್ಟರು.
ಪಂಡಿತ್ ನೆಹರೂ ಇದಕ್ಕೆ ಒಪ್ಪಿಯಾರೇ? ಎನ್ನುವ ಆತಂಕ ಎಲ್ಲರನ್ನೂ ಕಾಡುತ್ತಿತ್ತು. ಆದರೆ ಚಾಚಾ ನೆಹರೂ ಅವರಿಗೆ ಮಕ್ಕಳ ಮೇಲಿನ ಮಮತೆ ಎಷ್ಟಿತ್ತೆಂದರೆ ಅವರು ಮಕ್ಕಳಿಗಾಗಿ ಏನು ಮಾಡಲೂ ಸಿದ್ಧವಿದ್ದರು. ಮುಜುಗರ ಬದಿಗಿಟ್ಟು ಅತ್ಯಂತ ಸಂತೋಷದಿಂದ ತಮ್ಮ ಜನ್ಮದಿನವನ್ನು ‘ಮಕ್ಕಳ ದಿನಾಚರಣೆ’ಯೆಂದು ಆಚರಿಸಲು ಒಪ್ಪಿಕೊಂಡರು.
ಈ ರೀತಿ 1951ರಲ್ಲಿ ನವೆಂಬರ್ 14ರಂದು ಭಾರತದಲ್ಲಿ ‘ಮಕ್ಕಳ ದಿನಾಚರಣೆ’ ಆರಂಭವಾಯಿತು. ಮಕ್ಕಳ ಹಕ್ಕು, ಹಿತರಕ್ಷಣೆ ಮತ್ತು ಯೋಗಕ್ಷೇಮದ ಉದ್ದೇಶದೊಂದಿಗೆ ಜಗತ್ತಿನಾದ್ಯಂತ ಮಕ್ಕಳ ದಿನಾಚರಣೆಯನ್ನು ಬೇರೆ ಬೇರೆ ದಿನಾಂಕಗಳಂದು ಆಚರಿಸುತ್ತಿದ್ದಾರೆ. ನವೆಂಬರ್ 20ರಂದು ‘ಯುನಿವರ್ಸಲ್ ಚಿಲ್ಡ್ರನ್ಸ್ ಡೇ’ ಎಂದಾದರೆ, ಜೂನ್ 1ರಂದು ‘ಇಂಟರ್ ನ್ಯಾಷನಲ್ ಚಿಲ್ಡ್ರನ್ಸ್ ಡೇ’ ಆಚರಣೆಯಲ್ಲಿದೆ. ಇಂದು ಬಹಳಷ್ಟು ದೇಶಗಳು, ತಮ್ಮ ಮಕ್ಕಳಪ್ರೇಮಿ ರಾಷ್ಟ್ರನಾಯಕರೊಬ್ಬರ ಜನ್ಮದಿನವನ್ನು ‘ಮಕ್ಕಳ ದಿನಾಚರಣೆ’ ರೂಪದಲ್ಲಿ ಆಚರಿಸುತ್ತಿವೆ.
ಪ್ರಪಂಚದಲ್ಲಿ ಮಕ್ಕಳ ದಿನ ನವೆಂಬರ್20, ಪ್ರತಿವರ್ಷಆಚರಿಸಲಾಗುತ್ತದೆ. ಆದರೆ, ಭಾರತದಲ್ಲಿ ಮಕ್ಕಳ ದಿನ 14ನೇ ನವೆಂಬರ್ ನಲ್ಲಿ ಆಚರಿಸಲಾಗುತ್ತಿದೆ.
ಜಗತ್ತಿನ ಎಲ್ಲಾ ಮಕ್ಕಳಿಗೂ ಮಕ್ಕಳಹಬ್ಬದ ಶುಭಾಶಯಗಳು. ಕಲ್ಮಶವರಿಯದ ಮುಗ್ಧ ಮಕ್ಕಳ ನಗು ನಮಗೆಲ್ಲಾ ಚೇತನ. ಈ ನಗು ಮಕ್ಕಳ ಮೊಗದಲ್ಲಿ ಸದಾ ಇರಲಿ.
'ಸತ್ಯಮೇವ ಜಯತೆ'
ತಾಯಿಮನೆಯಲ್ಲಿ 154ನೇ ಗಾಂಧಿ ಜಯಂತಿ ಯನ್ನು ಆಚರಿಸಲಾಯಿತು.. ಈ ಸುಸಂದರ್ಭದಲ್ಲಿ ಈ ಮಹಾನ್ ವ್ಯಕ್ತಿಯ ತತ್ವಗಳನ್ನು ಸ್ಮರಿಸಲಾಯಿತು.
"ತಾಯಿಮನೆ ಸಂಸ್ಥೆಗೆ 13ರ ಸೇವಾ ಕಾರ್ಯದ ಸಂಭ್ರಮ"
ತಾಯಿಮನೆ ಸಂಸ್ಥೆಯು 26- 9-2009 ರಂದು ಪ್ರಾರಂಭವಾಗಿ ಶಿಕ್ಷಣದಿಂದ ವಂಚಿತರಾದ, ಕೌಟುಂಬಿಕ ಸಮಸ್ಯೆಗೊಳಗಾದ, ಆರ್ಥಿಕ ಸಮಸ್ಯೆಯಲ್ಲಿರುವ, ಏಕ ಪೋಷಕರು, ನಿರ್ಗತಿಕ ಮಕ್ಕಳ ಆಶಾಕಿರಣವಾಗಿ ನೂರಾರು ಮಕ್ಕಳಿಗೆ ಆಶ್ರಯ ನೀಡಿ ಊಟ-ಉಪಚಾರ, ಶಿಕ್ಷಣ ಒದಗಿಸಿ ಆಪ್ತಸಮಾಲೋಚನೆ, ಮಾನವೀಯ ಮೌಲ್ಯಗಳು, ವ್ಯಕ್ತಿ ವಿಕಸನ, ಸಂಸ್ಕಾರ, ದೇಶಾಭಿಮಾನ ಒದಗಿಸಿಕೊಡುತ್ತಾ ಬಂದಿದೆ. ಮಕ್ಕಳಿಗೆ ಮೌಲ್ಯಾಧಾರಿತ ಔಪಚಾರಿಕ, ಅನೌಪಚಾರಿಕ ಶಿಕ್ಷಣಗಳನ್ನು ಒದಗಿಸುತ್ತಾ ಸೇವಾಕಾರ್ಯವನ್ನು ಮಾಡುತ್ತಿದೆ. ತಾಯಿಮನೆಯಲ್ಲಿ ಮಕ್ಕಳ ಜ್ಞಾನಾಭಿವೃದ್ಧಿ ಗಾಗಿ ಪುಸ್ತಕ ಭಂಡಾರವೇ ಇದ್ದು, ಮಕ್ಕಳ ಪ್ರತಿಭೆಯನ್ನು ಗುರುತಿಸುವ ವೇದಿಕೆಗಳನ್ನು ರೂಪಿಸುತ್ತಾ ಮಾನವೀಯ ತತ್ವವನ್ನು ತಿಳಿಸುತ್ತಾ ಬಂದಿದೆ. ಈ 13 ವರ್ಷಗಳಲ್ಲಿ ತಾಯಿಮನೆ ಸಂಸ್ಥೆಯ ಸೇವಾಕಾರ್ಯಕ್ಕೆ ಪ್ರತ್ಯಕ್ಷ ಮತ್ತು ಪರೋಕ್ಷವಾಗಿ ಹಲವಾರು ಹೃದಯವಂತ ಪ್ರೀತಿಯ ಕೈಗಳು ಸಹಾಯವನ್ನು, ಸಹಕಾರವನ್ನು, ಸಲಹೆಯನ್ನು ನೀಡುತ್ತಾ ತಾಯಿಮನೆಯ ಕುಟುಂಬವಾಗಿ, ಪೋಷಕರಾಗಿ, ತಂದೆ- ತಾಯಿಯಾಗಿ, ಅಕ್ಕ- ಅಣ್ಣನಾಗಿ "ನಿಮ್ಮ ತಾಯಿಮನೆ"ಯನ್ನು ಮುನ್ನಡೆಸುತ್ತಿದ್ದೀರಿ. ನಿಮ್ಮ ಈ ಪ್ರೀತಿ ಹೀಗೆ ಮುಂದುವರೆಯಲಿ, ಇನ್ನೂ ಸಾವಿರಾರು ಮಕ್ಕಳ ಆಶಾಕಿರಣವಾಗಿ ನಿಮ್ಮ ತಾಯಿಮನೆ ಪ್ರಾಮಾಣಿಕವಾಗಿ ಸೇವೆ ಸಲ್ಲಿಸಲು ಸಿದ್ದವಿದೆ 🙏
(ತಾಯಿಮನೆ ಎಂದೂ ಸಹ ಅನಾಥಾಶ್ರಮ ವೆಂಬ ಪದವನ್ನು ಬಳಸದೆ ಇದು "ಮಕ್ಕಳ ಮನೆ" ಎಂಬ ಶೀರ್ಷಿಕೆಯಲ್ಲಿ ಕಾರ್ಯ ನಿರ್ವಹಿಸಿಕೊಂಡು ಬಂದಿದೆ)
ತಾಯಿಮನೆಯ ಅಕ್ಷರ ಮಂಟಪದಲ್ಲಿ, ಶಿವಮೊಗ್ಗದ ಜ್ಞಾನದೀಪ ಶಾಲೆಯ ಸುಮಾರು 200 ಮಕ್ಕಳು "ಸಮುದಾಯ " ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಹಾಡು, ಯೋಗ, ಸ್ವಚ್ಛತಾ ಆಂದೋಲನ ಹಾಗೂ ಚರ್ಚೆಯ ಮೂಲಕ ಮನಸೆಳೆದರು. ಈ ಸೊಗಸಾದ ಕಾರ್ಯಕ್ರಮಕ್ಕೆ ಕಾರಣೀಭೂತರಾದ ಸಿಬ್ಬಂದಿವರ್ಗಕ್ಕೆ ಧನ್ಯವಾದಗಳು.
ತಾಯಿಮನೆ ಮಕ್ಕಳಿಗೆ "ಸರ್ಜಿ ಹಾಸ್ಪಿಟಲ್" ವತಿಯಿಂದ ಮಕ್ಕಳ ಆರೋಗ್ಯ ತಪಾಸಣೆ ಶಿಬಿರ ಆಯೋಜಿಸಲಾಗಿತ್ತು. ಮಕ್ಕಳ ತಜ್ಞರಾದ ಡಾ. ರಜತ್ ಡಾ. ಈಶ್ವರ್ ಸರ್ಜಿ, ಮತ್ತು ಆಸ್ಪತ್ರೆಯ ಸಿಬ್ಬಂದಿಗಳು ಪಾಲ್ಗೊಂಡಿದ್ದರು.
ತಾಯಿಮನೆಯಲ್ಲಿ ಅಮೃತ ಮಹೋತ್ಸವದ ಸಂಭ್ರಮ ಕಾರ್ಯಕ್ರಮದಲ್ಲಿ ಪ್ರೊಫೆಸರ್ ಲತಾ ಮೇಡಂ, ಸುದರ್ಶನ್, ಜೆಸಿಐ ಶರಾವತಿಯ ಸೌಮ್ಯ ಹರಳಪ್ಪ ಮಮತಾ ಶಿವಣ್ಣ, ದಿವ್ಯ ಸ್ವಪ್ನ, ಸ್ಮಿತಾ, ಸಿದ್ದರಾಮಣ್ಣ, ನವೀನ್, ಮೋಹನ್,ಯಾಹಿಯ, ಬಾಬು, ರಾಘವೇಂದ್ರ, ನವೀನ್, ಗಾನವಿ ಮತ್ತು ತಾಯಿ ಮನೆ ಮಕ್ಕಳು ಭಾಗವಹಿಸಿದ್ದರು.
"ಚಾರ್ಲಿ 777"
ತಾಯಿ ಮನೆ ಮಕ್ಕಳು ಶುಭಂ ಹೋಟೆಲ್ ಮಾಲೀಕರಾದ ಶ್ರೀಯುತ ಉದಯ ಕದಂಬ ಹಾಗೂ ಶ್ರೀಯುತ ಚಂದ್ರಹಾಸ ರವರ ಸಹಕಾರದಿಂದ ಮಕ್ಕಳು ಭರತ್ ಸಿನಿಮಾ ದಲ್ಲಿ ಚಾರ್ಲಿ 777 ಸಿನಿಮಾ ನೋಡಿ ಆನಂದಿಸಿದರು.
ತಾಯಿಮನೆಯಲ್ಲಿ ಅಂತರಾಷ್ಟ್ರೀಯ ಯೋಗ ದಿನವನ್ನು ಆಚರಿಸಲಾಯಿತು.
ತಾಯಿ ಎಂದ ಕೂಡಲೇ ಮನಸಿನಲ್ಲಿ ಮೂಡುವುದು ಪ್ರೀತಿ ವಾತ್ಸಲ್ಯ ಕರುಣೆ ಹೀಗೆ ತಾಯಿಯು ಹತ್ತು ಹಲವು ವಿಶ್ವದಾದ್ಯಂತ ತಾಯಂದಿರ ದಿನವನ್ನು ಆಚರಿಸಲಾಗುತ್ತದೆ. ತಾಯಿಗೆ ಪ್ರೀತಿ ತೋರಿಸಲು ದಿನದ ಹಂಗಿಲ್ಲ, ಆದರೂ ಸಹ ಅವಳಿಗೆ ವಿಶೇಷವಾದ ದಿನ ವಿದೆ, ಮೇ 9 1974 ರಂದು ಅಮೆರಿಕದ ರಾಷ್ಟ್ರಪತಿಯಾಗಿದ್ದ ವುಡೋ ವಿಲ್ಸನ್ ಪ್ರತಿ ವರ್ಷ ಮೇ 2ನೇ ಭಾನುವಾರದಂದು ತಾಯಂದಿರ ದಿನವೆಂದು ಆಚರಿಸಲಾಗುತ್ತದೆ ಎಂದು ಕಾನೂನನ್ನು ಜಾರಿಗೊಳಿಸಿದರು. ಈ ಕಾನೂನು ಜಾರಿ ಮಾಡಿದ ನಂತರ ಅಮೇರಿಕಾ ಭಾರತ ಹಾಗೂ ಹಲವು ದೇಶಗಳು ಮೇ ತಿಂಗಳ 2ನೇ ಭಾನುವಾರವನ್ನು ತಾಯಂದಿರ ದಿನವಾಗಿ ಆಚರಿಸಲಾಗುತ್ತದೆ.
ಅಮೆರಿಕದ ಸಾಮಾಜಿಕ ಕಾರ್ಯಕರ್ತರಾಗಿದ್ದ ಅನಾ ಜಾರ್ವಿಸ್ ತಮ್ಮ ತಾಯಿಯನ್ನು ತುಂಬಾ ಪ್ರೀತಿಸುತ್ತಿದ್ದರು. ತಾಯಿ ಮರಣ ಹೊಂದಿದ ನಂತರ ತಾಯಿಯ ನೆನಪಿನಾರ್ಥವಾಗಿ ಈ ದಿನವನ್ನು ಆಚರಿಸಲು ಪ್ರಾರಂಭಿಸಿದರು.
ತಾಯಿಗಾಗಿ ಪ್ರೀತಿ ಹಾಗೂ ಉಡುಗೊರೆ ನೀಡಲು ವಿಶೇಷ ದಿನದ ಅಗತ್ಯ ಇಲ್ಲ. ಆದರೂ ಸಹ ತಾಯಂದಿರ ದಿನದಂದು ತಾಯಿಗೆ ಗೌರವ ನೀಡುತ್ತಿರುವುದು ಹೆಮ್ಮೆಯ ವಿಷಯವೇ, ಪ್ರತಿಯೊಬ್ಬರು ಅವರ ತಾಯಂದಿರನ್ನು ಪ್ರೀತಿ ಪ್ರೇಮದಿಂದ ವಾತ್ಸಲ್ಯದಿಂದ ನೋಡಿಕೊಳ್ಳುವುದು ಮುಖ್ಯ.
(ಎಷ್ಟೋ ಜನರಿಗೆ ತಾಯಿಯ ಪ್ರೀತಿ ಸಿಕ್ಕಿರುವುದಿಲ್ಲ, ಇದ್ದವರು ಪ್ರೀತಿಸಿ ಗೌರವಿಸಿ, ಅದೊಂದು ಅಪರೂಪದ ಮಾಣಿಕ್ಯ )
ಬೇಸಿಗೆ ರಜೆಯಲ್ಲಿ ತಾಯಿಮನೆ ಮಕ್ಕಳಿಗೆ ಕ್ಯೂಬ್ ಅನ್ನು ಹೇಳಿಕೊಡುತ್ತಿರುವ ಸಮಂತ್, ಸಂಚಿತ್.
ಮಹಿಳಾ ದಿನದ ಹೃತ್ಪೂರ್ವಕ ಶುಭಾಶಯಗಳು
ತಾಯಿಮನೆ ಮಕ್ಕಳಿಗೆ "ಜಿಲ್ಲಾ ವೈದ್ಯಕೀಯ ಪ್ರಕೋಷ್ಠದ" ವತಿಯಿಂದ ಮಕ್ಕಳ ಆರೋಗ್ಯ ತಪಾಸಣೆ ಮತ್ತು ದಂತ ತಪಾಸಣಾ ಶಿಬಿರ ಆಯೋಜಿಸಲಾಗಿತ್ತು. ಮಕ್ಕಳ ತಜ್ಞರಾದ ಡಾ. ವಿನಯ್ ಹೆಗ್ಡೆ , ದಂತ ವೈದ್ಯರಾದ ಡಾ.ಸುರೇಶ, ಡಾ.ಗೌತಮ್, ಭಾಜಪದ ಜಿಲ್ಲಾ ವೈದ್ಯಕೀಯ ಪ್ರಕೋಷ್ಠದ ಸಂಚಾಲಕರು ಡಾ. ಹೇಮಂತ್ , ಸಹ ಸಂಚಾಲಕರು ಡಾ. ಶ್ರೀನಿವಾಸ ರೆಡ್ಡಿ , ಜಿಲ್ಲಾ ಸದಸ್ಯರು ಡಾ.ಮರುಳಾರಾಧ್ಯ ಮಠ ಇವರು ಪಾಲ್ಗೊಂಡಿದ್ದರು.
ತಾಯಿಮನೆ ಮಕ್ಕಳ ಸವಾರಿ,
ಲಯನ್ ಸಫಾರಿ ಕಡೆಗೆ....
ಮಹಿಂದ್ರಾ ಶೋ ರೂಂ ಆಡಳಿತ ಹಾಗೂ ಸಿಬ್ಬಂದಿ ವರ್ಗ ದವರಿಗೆ ತಾಯಿಮನೆ ಪರವಾಗಿ ಹೃತ್ಪೂರ್ವಕ ಧನ್ಯವಾದಗಳು....
ತಾಯಿಮನೆಯಲ್ಲಿ ಮಕ್ಕಳ ಆರೋಗ್ಯ ತಪಾಸಣೆ ಮತ್ತು ರಕ್ತ ಗುಂಪು ತಪಾಸಣೆ ಮಾಡಿಸಲಾಯಿತು.
ಇಂದು ಮಕ್ಕಳಿಗೆ ಗಾಂಧೀಜಿಯವರ ಪುಣ್ಯ ಸ್ಮರಣೆಯಂದು ಗಾಂಧೀಜಿ ಜೀವನ ಸಂದೇಶದ ಮಾಹಿತಿ ನೀಡಿ ನಮನ ಸಲ್ಲಿಸಲಾಯಿತು.
ತಾಯಿಮನೆಯಲ್ಲಿ ಗಣರಾಜ್ಯೋತ್ಸವದ ಪ್ರಯುಕ್ತ ಡಾ. ನೇತ್ರ ರವರು ಮಕ್ಕಳಿಗೆ ಸಂವಿಧಾನ ಮತ್ತು ಶಿಕ್ಷಣದ ಮಹತ್ವದ ಬಗ್ಗೆ ಅರಿವು ಮೂಡಿಸಿದರು ,
Click here to claim your Sponsored Listing.
Videos (show all)
Category
Contact the organization
Telephone
Website
Address
Shimoga
HTTPS://MAPS.APP.GOO.GL/EIHT28DERUWUPRWW8
Shimoga, 577201
Senior Chamber International is a platform which conducts many awareness programs, Training sessions for students permanent projects related to society for social work
Ward # 5, RMR Road, Park Extn, Durgigudi
Shimoga, 577201
ONE PERSON CAN MAKE A DIFFERENCE, AND EVERYONE SHOULD TRY.
Soraba
Shimoga, 577429
ಜನಸೇವೆ ಜನಾರ್ದನ ಸೇವೆ , ಸೊರಬದ ಸೇವೆ ಬಡವರ ಸೇವೆ,,
Shimoga, 577204
Social Services Poverty Alleviation Education Orphanage Old Age Home
Mallapura , Mydolallu Post
Shimoga, 577243
ಅಧ್ಯಕ್ಷರು, ಕ.ರ.ವೇ, ಭದ್ರಾವತಿ . ನಿರ್ದೇಶಕ?
Plat # 11, Ward # 5, RMR Road, Park Extn
Shimoga, 577201
Giving things for Happiness