Padmaraj Ramaiah Fans

Padmaraj Ramaiah Fans

Contact information, map and directions, contact form, opening hours, services, ratings, photos, videos and announcements from Padmaraj Ramaiah Fans, Public Figure, .

23/09/2023
Photos from Padmaraj Ramaiah's post 06/01/2023

Opening Ceremony INZONE SERVICES INDIA PVT. LTD.

Photos from Team Padmaraj's post 06/01/2023
03/01/2023

''ತಿರುಗಾಟ'' ಪರಿಕಲ್ಪನೆಯೊಂದಿಗೆ ಸಾಮಾಜಿಕ ಪರಿವರ್ತನೆಯ ಮೂಲ ಮಂತ್ರದೊಂದಿಗೆ ರಾಜ್ಯದಾದ್ಯಂತ ಪ್ರದರ್ಶನಗೊಳ್ಳಲಿರುವ ಶ್ರೀ ನಾರಾಯಣ ಗುರುಗಳ ಜೀವನಾಧಾರಿತ ನಾಟಕ
"ಶೂದ್ರ ಶಿವ''....
ಶುಭಹಾರೈಕೆಗಳು🌹

*ತಿರುಗಾಟಕ್ಕೆ ಸಜ್ಜಾಗಿದೆ.....ಮೊದಲ ಪ್ರಯೋಗ 21/1/2023 ಶನಿವಾರ ಸಂಜೆ 6ಕ್ಕೆ ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರ ಮಂಗಳೂರು*

Mobile uploads 01/01/2023
01/01/2023

Many many congratulations Roopesh😍

Photos from Padmaraj Ramaiah's post 26/12/2022

ಹಿಂದು ಯುವಸೇನೆ ಅಂಬಿಕಾನಗರ ಶಾಂತಿನಗರ ಕಾವೂರು ವತಿಯಿಂದ ಆಯೋಜಿಸಲಾದ 30ನೇ ವರ್ಷದ ಶ್ರೀ ಶನೀಶ್ವರ ಪೂಜೆ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ....

Photos from Padmaraj Ramaiah's post 24/12/2022

ಬಿಲ್ಲವ ಬ್ರಿಗೇಡ್ ಕೇಂದ್ರೀಯ ಸಮಿತಿ ವತಿಯಿಂದ ಹೆಜಮಾಡಿ ರಾಜೀವ್ ಗಾಂಧಿ ಕ್ರೀಡಾಂಗಣದಲ್ಲಿ ವರ್ಲ್ಡ್ ಬಿಲ್ಲವ ಪ್ರೀಮಿಯರ್ ಲೀಗ್ ಕ್ರಿಕೆಟ್ ಟೂರ್ನಿ ಉದ್ಘಾಟನಾ ಕಾರ್ಯಕ್ರಮ.....

21/12/2022

*ಸರ್ಕಾರವೇ ಭರಿಸಲಿದೆ ಪುರುಷೋತ್ತಮ್ ಚಿಕಿತ್ಸಾ ವೆಚ್ಚ*

* ಗುರುಬೆಳದಿಂಗಳು ಫೌಂಡೇಶನ್ ಅಧ್ಯಕ್ಷ ಪದ್ಮರಾಜ್ ಆಗ್ರಹಕ್ಕೆ ಸ್ಪಂದನೆ

ಮಂಗಳೂರು: ಕುಕ್ಕರ್ ಬಾಂಬ್‌ ಬ್ಲಾಸ್ಟ್‌ನಿಂದ ಗಾಯಗೊಂಡು ಚಿಕಿತ್ಸೆ ಪಡೆಯುತ್ತಿರುವ ಪುರುಷೋತ್ತಮ ಪೂಜಾರಿ ಅವರ ಚಿಕಿತ್ಸಾ ವೆಚ್ಚವನ್ನು ಸರ್ಕಾರವೇ ನೀಡುವುದಾಗಿ ಜಿಲ್ಲಾಡಳಿತ ಆದೇಶಿಸಿದೆ.

ಈವರೆಗಿನ ಚಿಕಿತ್ಸಾ ವೆಚ್ಚವನ್ನು ಪುರುಷೋತ್ತಮ ಪೂಜಾರಿ ಅವರ ಮಗಳು ಮೇಘ್ರಶ್ರೀಯವರ ಇಎಸ್‌ಐಯಿಂದ ಭರಿಸಲಾಗಿತ್ತು. ಮುಂದೆ ಯಾವುದೇ ವೆಚ್ಚವನ್ನು ಸದ್ರಿಯವರ ಕುಟುಂಬದಿಂದ ಭರಿಸಲು ಒತ್ತಡ ಹಾಕದೇ ಅವರಿಗೆ ಸೂಕ್ತ ಚಿಕಿತ್ಸೆಯನ್ನು ಮುಂದುವರೆಸಲು ನಿರ್ದೇಶನ ನೀಡಲಾಗಿದೆ, ಹಾಗೂ ಮೇಘಶ್ರೀಯವರು ತಮ್ಮ ತಂದೆಗೆ ಇಎಸ್‌ಐ ವತಿಯಿಂದ ಭರಿಸಿರುವ ವೆಚ್ಚವನ್ನು ಸರ್ಕಾರವತಿಯಿಂದ ಮರುಪಾವತಿಸಲಾಗುವುದು ಎಂಬ ಮಾಹಿತಿಯನ್ನು ಆದೇಶದಲ್ಲಿ ತಿಳಿಸಲಾಗಿದೆ.

ಕಳೆದ ಭಾನುವಾರ ಗುರುಬೆಳದಿಂಗಳು ಫೌಂಡೇಶನ್ ಅಧ್ಯಕ್ಷ ಪದ್ಮರಾಜ್ ಆರ್.‌ನೇತೃತ್ವದ ತಂಡ ಪುರುಷೋತ್ತಮ ಪೂಜಾರಿಯವರ ಮನೆಗೆ ಭೇಟಿ ನೀಡಿ ಸಂಕಷ್ಟ ಆಲಿಸಿ, ಈ ಬಗ್ಗೆ ಸರ್ಕಾರ ಕೂಡಲೇ ಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸಿದ್ದರು.

ಆಸ್ಪತ್ರೆಯಲ್ಲಿರುವ ಪುರುಷೋತ್ತಮ ಪೂಜಾರಿಯವರನ್ನು ಭೇಟಿಯಾದಾಗ 'ಮಗಳ ಮದುವೆಯ ಮೊದಲು ಮನೆ ನವೀಕರಣಗೊಳಿಸಬೇಕೆಂಬ ನನ್ನ ಕನಸು ನನಸು ಮಾಡಲು ಸಾಧ್ಯವಾಗಿಲ್ಲ' ಎಂದು ದುಃಖವನ್ನು ವ್ಯಕ್ತಪಡಿಸಿದ್ದರು. ಈ ವೇಳೆ ಮನೆಯನ್ನು ನವೀಕರಿಸುವ ಜವಾಬ್ದಾರಿಯನ್ನು ಫೌಂಡೇಶನ್ ಮಾಡಲಿದೆ ಎಂದು ಪದ್ಮರಾಜ್ ಆತ್ಮ ಸ್ಥೈರ್ಯ ತುಂಬಿದ್ದರು. ಅದರಂತೆ ಇಂಜಿನಿಯರ್ ದೀವರಾಜ್‌ರೊಂದಿಗೆ ಭೇಟಿ ನೀಡಿದ ಪದ್ಮರಾಜ್ ಅವರ ಕುಟುಂಬದ ಸದಸ್ಯರೊಂದಿಗೆ ಮಾತನಾಡಿ, ಮನೆಯನ್ನು ಪರಿಶೀಲಿಸಿ ಮುಂದಿನ ವಾರದಿಂದ ನವೀಕರಣ ಕಾಮಗಾರಿ ಆರಂಭಿಸುವುದಾಗಿ ಅವರಿಗೆ ತಿಳಿಸಿದ್ದರು.

Photos from Padmaraj Ramaiah's post 19/12/2022

ಆತ್ಮೀಯ ಗೆಳೆಯ ಪ್ರದೀಪ್ ಅವರ ರಾಮ್ಸ್ ಟೆಕ್ಸ್ & ಫ್ಯಾಬ್ ಲಾಂಜ್ ನ್ಯೂ ಫ್ಲ್ಯಾಗ್ ಶಿಫ್ ಸ್ಟೋರ್ ಉದ್ಘಾಟನಾ ಸಮಾರಂಭದಲ್ಲಿ....

Photos from Padmaraj Ramaiah's post 17/12/2022

ಎಕ್ಸಲ್ ಪಿಯು ಕಾಲೇಜು ಗುರುವಾಯನಕೆರೆ ಇದರ ಎಕ್ಸಲ್ ಪರ್ಬ-2022ರ ಅಂಗವಾಗಿ ಪಾಲಕ- ಶಿಕ್ಷಕರ ಸಮ್ಮಿಲನ ಉದ್ಘಾಟನಾ ಕಾರ್ಯಕ್ರಮ....

13/12/2022

Humanity …

Photos from Padmaraj Ramaiah's post 27/11/2022
Photos from Padmaraj Ramaiah's post 25/11/2022

*ಯುವಕರೇ ಹೃದಯಾಘಾತಕ್ಕೆ ಹೆಚ್ಚು ಬಲಿ... ಸರ್ಕಾರದ ನಿಲುವೇನು?*

ಆಕೆ 25 ವರ್ಷದ ಯುವತಿ... ಸಂಬಂಧಿಕ ಮನೆಯಲ್ಲಿ ರೋಸ್ ಕಾರ್ಯಕ್ರಮದಲ್ಲಿ ಖುಷಿಖುಷಿಯಿಂದ ನೃತ್ಯ ಮಾಡುತ್ತಿರುವಾಗಲೇ ಕುಸಿದುಬಿದ್ದು ಮೃತಪಡುತ್ತಾಳೆ... ಅವರು ಪ್ರತಿಷ್ಠಿತ ಬ್ಯಾಂಕೊಂದರಲ್ಲಿ ಪ್ರಬಂಧಕರಾಗಿದ್ದವರು, ತನ್ನ ಸಂಬಂಧಿಕರ ಮನೆಯಲ್ಲಿ ವಿವಾಹ ಕಾರ್ಯ ಮುಗಿಸಿ ಹೋಗುವಾಗ ಹೃದಯಾಘಾತಕ್ಕೊಳಗಾಗಿ ಕುಸಿದು ಬಿದ್ದು ಸಾವನಪ್ಪುತ್ತಾರೆ.... ಹೌದು ಇಂತಹ ಘಟನೆಗಳು ಕೋವಿಡ್ ಬಳಿಕ ವಿಪರೀತವಾಗಿ ಹೆಚ್ಚಳವಾಗಿದೆ. ರಾಜ್ಯಾದ್ಯಂತ 18ರಿಂದ 55ವರ್ಷದೊಳಗಿನ ನೂರಾರು ಯುವಕ ಯುವತಿಯರು ಹೃದಯಾಘಾತಕ್ಕೆ ಬಲಿಯಾಗುತ್ತಿದ್ದಾರೆ. ಇದೊಂದು ಗಂಭೀರ ಸಮಸ್ಯೆ. ಆದರೂ ಇದು ಸರ್ಕಾರದ ಗಮನಕ್ಕೆ ಬಂದಿಲ್ಲವೇ? ಈ ಬಗ್ಗೆ ಸರ್ಕಾರ, ಆರೋಗ್ಯ ಇಲಾಖೆಯ ನಿಲುವು ಏನು? ಇಂತಹ ಅಸಹಜ ಸಾವುಗಳು ಸಂಭವಿಸುತ್ತಿದ್ದರೂ ಸರ್ಕಾರ ಇದರ ಅಧ್ಯಯನಕ್ಕೆ ಏನಾದರೂ ಕ್ರಮ ಕೈಗೊಂಡಿದೆಯೆ? ಈ ಬಗ್ಗೆ ಸರ್ಕಾರ ಗಮನಹರಿಸಿ ಸೂಕ್ತ ನಿರ್ಧಾರ ಕೈಗೊಳ್ಳಲಿ...

- ಪದ್ಮರಾಜ್ ಆರ್., ವಕೀಲರು ‌ಮತ್ತು ನೋಟರಿ ಮಂಗಳೂರು

24/11/2022

27 ರಂದು ಉಚಿತ ಬೃಹತ್ ಆರೋಗ್ಯ ಮೇಳ

ಗುರುಬೆಳದಿಂಗಳು ಫೌಂಡೇಶನ್‌ ಕುದ್ರೋಳಿ ಆಶ್ರಯದಲ್ಲಿ ಭರವಸೆ ಚಾರಿಟೆಬಲ್ ಫೌಂಡೇಶನ್ ಬೆಂಗಳೂರು ವತಿಯಿಂದ ನ.27ರಂದು ಬೆಳಗ್ಗೆ 8.30ರಿಂದ ಸಾಯಂಕಾಲ 4ರವರೆಗೆ ಮಂಗಳೂರಿನ ಶ್ರೀ ಗೋಕರ್ಣನಾಥ ಕಾಲೇಜು ಸಭಾಂಗಣದಲ್ಲಿ ಉಚಿತ ಬೃಹತ್ ಆರೋಗ್ಯ ಮೇಳ ಆಯೋಜಿಸಲಾಗಿದೆ.

ಮಹಿಳೆಯರ ಮುಟ್ಟಿನ ತೊಂದರೆ, ಬಂಜೆತನ, ಲೈಂಗಿಕ ಸಮಸ್ಯೆ, ರಕ್ತಹೀನತೆ, HPV ಪರೀಕ್ಷೆ (ಗರ್ಭಕಂಠದ ಕ್ಯಾನ್ಸರ್, ಸ್ತನ ಕ್ಯಾನ್ಸರ್) ತಪಾಸಣೆ, ತಡೆಗಟ್ಟವಿಕೆ, ಎಲ್ಲಾ ಸ್ತ್ರೀ ರೋಗಗಳ ತಡೆಗಟ್ಟುವಿಕೆ, ಮಾರ್ಗದರ್ಶನ, ಚಿಕಿತ್ಸೆ, ಅರಿವು ಆಪ್ತಸಮಾಲೋಚನೆ ಮೂಲಕ ಖ್ಯಾತ ಸ್ತ್ರೀರೋಗ ತಜ್ಞೆ, ರಾಜ್ಯ ಪ್ರಶಸ್ತಿ ಪುರಸ್ಕೃತೆ, ಕರ್ನಾಟಕ ರಾಜ್ಯದ ಪ್ರಥಮ ಲೈಂಗಿಕ ತಜ್ಞೆ ಎಂಬ ಹೆಗ್ಗಳಿಕೆಗೆ ಪಾತ್ರರಾದ ಡಾ.ಪದ್ಮನಿ ಪ್ರಸಾದ್ ನೇತೃತ್ವ ಹಾಗೂ ಉಪಸ್ಥಿತಿಯಲ್ಲಿ ಖ್ಯಾತ ವೈದ್ಯರ ತಂಡದೊಂದಿಗೆ ಈ ಆರೋಗ್ಯ ಮೇಳ ನಡೆಯಲಿದೆ. ಸಾರ್ವಜನಿಕರು ಶಿಬಿರದ ಪ್ರಯೋಜನ ಪಡೆಯಬಹುದು. ಮಾಹಿತಿಗೆ 9901246123 ಸಂಪರ್ಕಿಸಬಹುದು.

Photos from Padmaraj Ramaiah's post 23/11/2022

ದಯಾನಂದ ಪೈ ಸತೀಶ್ ಪೈ ಯಕ್ಷಗಾನ ಅಧ್ಯಯನ ಕೇಂದ್ರ ಮಂಗಳೂರು ವಿಶ್ವವಿದ್ಯಾಲಯ, ಕರ್ನಾಟಕ ಯಕ್ಷಭಾರತಿ ಪುತ್ತೂರು, ಯಕ್ಷಾಂಗಣ ಮಂಗಳೂರು ವತಿಯಿಂದ ಮಂಗಳೂರು ವಿವಿ ಕಾಲೇಜಿನ ರವೀಂದ್ರ ಕಲಾಶಭವನದಲ್ಲಿ ಬುಧವಾರ (ನ.23) ಕನ್ನಡ ರಾಜ್ಯೋತ್ಸವ ಕಲಾಸಂಭ್ರಮ, ದಶಮಾನ ಸಡಗರ, ಯಕ್ಷಗಾನ ತಾಳಮದ್ದಳೆ ಸಪ್ತಾಹ-2022, ಯಕ್ತಾಂಗಣ ರಾಜ್ಯೋತ್ಸವ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ಉದ್ಘಾಟನೆ ಸಮಾರಂಭದಲ್ಲಿ.....

Photos from Padmaraj Ramaiah's post 22/11/2022

ಶರವು ಶ್ರೀ ಮಹಾಗಣಪತಿ ದೇವರ ದೀಪಾರಾಧನೆಯ ಅಂಗವಾಗಿ ಸೋಮವಾರ (ನ.21) ಬಳ್ಳಾಲ್‌ಭಾಗ್‌ನಲ್ಲಿ 71ನೇ ವರ್ಷದ ಗುರ್ಜಿ ದೀಪಾರಾಧಾನೋತ್ಸವದಲ್ಲಿ ಪಾಲ್ಗೊಂಡ ಕ್ಷಣ. ಮೇಯರ್ ಜಯಾನಂದ ಅಂಚನ್, ಸುರೇಶ್ಚಂದ್ರ ಶೆಟ್ಟಿ, ಸುರೇಶ್‌ ಬಳ್ಳಾಲ್, ರಘುನಾಥ್ ಶೇಟ್‌, ಕೆನರಾ ಬ್ಯಾಂಕ್ ಮ್ಯಾನೇಜರ್ ಮನೀಶ್‌, ಮಾಜಿ ಕಾರ್ಪೋರೇಟರ್ಗಳಾದ ಪ್ರಕಾಶ್ ಸಾಲ್ಯಾನ್, ಪದ್ಮನಾಭ ಅಮೀನ್, ಉದ್ಯಮಿ ಗಣೇಶ ಶೆಟ್ಟಿ, ಗುರ್ಜಿ ಸಮಿತಿ ಅಧ್ಯಕ್ಷರು, ಪದಾಧಿಕಾರಿಗಳು ಪಾಲ್ಗೊಂಡಿದ್ದರು..

Photos from Padmaraj Ramaiah's post 20/11/2022

ಬ್ರಹ್ಮಶ್ರೀ ನಾರಾಯಣ ಗುರು ಬಿಲ್ಲವ ಸಮಾಜ ಸೇವಾ ಸಂಘ ಮಳಲಿ ವಲಯದ ಉದ್ಘಾಟನೆ ಮತ್ತು ಪದಪ್ರದಾನ ಸಮಾರಂಭದ ಆಮಂತ್ರಣ ಪತ್ರಿಕೆಯನ್ನು ಕುದ್ರೋಳಿ ಶ್ರೀ ಗೋಕರ್ಣನಾಥ ದೇವಸ್ಥಾನದಲ್ಲಿ ಕ್ಷೇತ್ರದ ಬಿಡುಗಡೆಗೊಳಿಸಿದರು. ಸಂಘದ ನಿಯೋಜಿತ ಗೌರವಾಧ್ಯಕ್ಷರಾದ ವಿಶ್ವನಾಥ ಪೂಜಾರಿ, ಯೋಗೀಶ್ ಪೂಜಾರಿ, ಹರಿಶ್ಚಂದ್ರ ಬಿರಾವು, ನಿಯೋಜಿತ ಅಧ್ಯಕ್ಷ ಕೇಶವ ಪೂಜಾರಿ ಮಟ್ಟಿ, ನಿಯೋಜಿತ ಉಪಾಧ್ಯಕ್ಷ ಸದಾನಂದ ಪೂಜಾರಿ, ಕಾರ್ಯದರ್ಶಿ ಸಚಿನ್ ಸಾಲ್ಯಾನ್ ಮಟ್ಟಿ, ಕೋಶಾಧಿಕಾರಿ ಮೋಹನದಾಸ್, ಜತೆ ಕೋಶಾಧಿಕಾರಿ ದಯಾನಂದ ಪೂಜಾರಿ ಮಳಲಿ ಸೈಟ್, ಸಂಘಟನಾ ಕಾರ್ಯದರ್ಶಿ ನೀಲಯ್ಯ ಪೂಜಾರಿ, ಮಹಿಳಾ ಘಟಕದ ನಿಯೋಜಿತ ಕಾರ್ಯದರ್ಶಿ ವಾಣಿ ಕೈಕಂಬ, ಪ್ರಮುಖರಾದ ಸದಾಶಿವ ಕರ್ಕೇರ, ಬಿಲ್ಲವ ಬ್ರಿಗೇಡ್‌ನ ಪ್ರಜ್ವಲ್ ದಂಡೆಕೇರಿ, ಕೃಷ್ಣ ಶಾಂತಿ, ರೂಪೇಶ್ ಶಾಂತಿ, ಚಂದ್ರಹಾಸ ಶಾಂತಿ ಮೊದಲಾವರಿದ್ದರು. ನೂತನ ಸಂಘದ ಉದ್ಘಾಟನೆ ಡಿ.25ರಂದು ಮಳಲಿ ಮಟ್ಟಿ ಶ್ರೀ ಕಾಲಭೈರವ ಮಂಜುನಾಥೇಶ್ವರ ದೇವಸ್ಥಾನ ಬಳಿ ಜರುಗಲಿದೆ.

Photos from Padmaraj Ramaiah's post 20/11/2022

ಬಿಲ್ಲವ ಸಮಾಜ ಸೇವಾ ಸಂಘ ಮೀಂಜ ವಲಯ ದಶಮಾನೋತ್ಸವ, ಬಿಲ್ಲವ ಸಮಾವೇಶ ಉದ್ಘಾಟನೆ...

Videos (show all)

ಜನಸಾಮಾನ್ಯರ ಜೊತೆ ಸಾಮಾನ್ಯರಂತೆ ಇರುವ ನಾಯಕ ನಮ್ಮ Padmaraj Ramaiah
ಸಂಕುಪೂಂಜ ದೇವುಪೂಂಜ ಕಂಬುಲ...ತಿರುವೈಲೋತ್ಸವ❤️
ಬ್ರಹ್ಮಶ್ರೀ ನಾರಾಯಣಗುರುಗಳ ಜನ್ಮದಿನಾಚರಣೆಯನ್ನು ಆಚರಿಸಲು ಕರ್ನಾಟಕದಲ್ಲಿ ಕುದ್ರೋಳಿ‌ ಗೋಕರ್ಣನಾಥ ಕ್ಷೇತ್ರಕ್ಕಿಂದ ಮತ್ತೊಂದು ಪ್ರಾಶಸ್ತ್ಯವಾದ ...
ಭೇಧ ಬುದ್ಧಿಯಿಂದ ರಾಜಕೀಯಕ್ಕಾಗಿ ಗುರುಗಳ ಹೆಸರು ಬಳಸುತ್ತಿರುವ ಯಾವುದೇ ಪಕ್ಷದವರಾದರೂ ಅವರಿಗೆ ಸದ್ಬುದ್ಧಿ ನೀಡು ಗುರುದೇವ, ಓಂ ಶ್ರೀ ನಾರಾಯಣ ಪರ...
ಕೋಮುವಾದದ ಪ್ರಕರಣವನ್ನು ತ್ವರಿತ ನ್ಯಾಯಾಲಯ ಸ್ಥಾಪಿಸಿ ಶೀಘ್ರ ನ್ಯಾಯ ಕೊಡಿಸಿ: ಪದ್ಮರಾಜ್ಮಂಗಳೂರು:  ಸರ್ಕಾರಕ್ಕೆ ಇಚ್ಛಾಶಕ್ತಿ ಇದ್ದರೆ ಪ್ರವೀಣ್...

Telephone

Website