pustaka.prapancha

ಕನ್ನಡ ಪುಸ್ತಕ ಕಣಜ,ಕಥೆ,ಕವನ ಜೀವನಾನುಭವಗಳ?

27/01/2024

ಶುಭೋದಯ...


ನಮ್ಮನ್ನು ಫಾಲೋ ಮಾಡಿ Notification on ಮಾಡ್ಕೋಳಿ.
FOLLOW 💟 .prapancha
FOLLOW 💟 .prapancha
FOLLOW 💟 .prapancha
👆ಈ quotes ನಿಮಗೆ ಇಷ್ಟವಾಗಿದಲ್ಲಿ ಲೈಕ್ ಮಾಡಿ ಶೇರ್ ಮಾಡಿ ಮತ್ತು ಕಾಮೆಂಟ್ ಮಾಡಿ
ಇದೆ ತರಹದ ಮೋಟಿವೇಶನ್ quotes ಮತ್ತು ಜೀವನಾನುಭವಗಳಿಗಾಗಿ ಹಳೆಯ ಪೋಸ್ಟ್ಗಳನ್ನು ಒಮ್ಮೆ ನೋಡಿ, ಪ್ರೋತ್ಸಾಹಿಸಿ 😍🥰

OK
ೂರ್ಣಚಂದ್ರ

26/01/2024

ಮಹಾಭಾರತದಲ್ಲಿ ಕರ್ಣ ಕೃಷ್ಣನ ಹತ್ರ ಕೇಳ್ತಾನೆ..

ನಮ್ಮಮ್ಮ ನನ್ನನ್ನ ಹಡೆದಕೂಡ್ಲೆ ನದೀಲಿ ತೇಲಿಸಿ ಬಿಟ್ಟೋದ್ಲು. ಅವ್ಳು ಮದ್ವೆಗೆ ಮೊದ್ಲೇ ನನ್ನ ಹೆತ್ತಿದ್ದು ನನ್ನ ತಪ್ಪಾ?
ದ್ರೋಣಾಚಾರ್ಯರು ನಾನು ಕ್ಷತ್ರಿಯ ಅಲ್ಲ ಅನ್ನೋ ಕಾರಣ ಕೊಟ್ಟು ನಂಗೆ ವಿದ್ಯೆ ಕಲಿಸಲಿಲ್ಲ.

ಅದೇ..ಪರಶುರಾಮರು ನಾನೊಬ್ಬ ಕ್ಷತ್ರಿಯ ಅನ್ನೋ ಕಾರಣಕ್ಕೆ ತಮ್ಮಿಂದ ಕಲಿತ ವಿದ್ಯೆಯೆಲ್ಲ ಸಮಯಕ್ಕೆ ಬಾರದಿರಲಿ ಎಂದು ಶಪಿಸಿಬಿಟ್ಟರು

ನಾನು ಕ್ಷತ್ರಿಯನೋ ಸೂತಪುತ್ರನೋ ಅಂತ ನಂಗೇ ಗೊತ್ತಿರಲಿಲ್ಲ. ಇದ್ರಲ್ಲಿ ನನ್ನ ತಪ್ಪೇನಿತ್ತು ಹೇಳು.

ಎಲ್ಲೋ ಅಕಸ್ಮಾತ್ತಾಗಿ ನನ್ನ ಬಾಣ ಹಸುವೊಂದನ್ನು ಕೊಂದುಬಿಟ್ಟಿತು. ಗೊತ್ತಿಲ್ಲದೇ ಆದ ತಪ್ಪಿಗೂ ನಾನು ಶಾಪಗ್ರಸ್ತನಾದೆ.

ನನ್ನದಲ್ಲದ ತಪ್ಪಿಗೆ ದ್ರೌಪದಿ ಸ್ವಯಂವರದಲ್ಲಿ ನಾನು ಅವಮಾನ ಅನುಭವಿಸೋ ಹಾಗಾಯ್ತು

ಹೆತ್ತತಾಯಿಯೇ ಆದ್ರೂ ಕುಂತಿ ತನ್ನ ಉಳಿದ ಮಕ್ಕಳು ಪಾಂಡವರನ್ನು ಉಳಿಸಿಕೊಳ್ಳೋಕೋಸ್ಕರ ನನ್ನ ಬಳಿ ಬಂದು ಸಮಯವಲ್ಲದ ಸಮಯದಲ್ಲಿ ಸತ್ಯ ಹೇಳಿ ಮಾತುಪಡೆದು ಹೊರಟು ನನ್ನನ್ನು ಧರ್ಮಸಂಕಟಕ್ಕೆ ಸಿಲುಕಿಸಿಬಿಟ್ಟಳು.

ಎಲ್ಲರಿಂದಲೂ ನನಗಾದದ್ದು ಅನ್ಯಾಯವೇ ಅವಮಾನವೇ ಮೋಸವೇ ದುಃಖವೇ.

ನಂಗೆ ಬದುಕು ಸ್ಥಾನಮಾನ ಸುಖ ಸಂತೋಷ ಏನೇ ಸಿಕ್ಕಿದ್ದರೂ ಅದು ದುರ್ಯೋಧನನಿಂದ.

ಹೀಗಿರುವಾಗ ನಾನು ದುರ್ಯೋಧನನ ಜೊತೆ ನಿಲ್ಲಬೇಕಿರೋದು ಸರಿ ತಾನೆ. ಅವ್ನು ಕೆಟ್ಟವ್ನೇ ಇರ್ಲಿ ತಪ್ಪೇ ಮಾಡಿರ್ಲಿ ಅವ್ನನ್ನ ಬೆಂಬಲಿಸಬೇಕಿರೋದು ನನ್ನ ಕರ್ತವ್ಯ‌‌ ಅಲ್ವೇ. ಅದೇ ಧರ್ಮ ಅಲ್ವೇ? ನಾನು ಅವರ ಜೊತೆ ಇರೋದ್ರಲ್ಲಿ ತಪ್ಪೇನಿದೆ?

ಪೂರ್ತಿ ಕೇಳಿಸಿಕೊಂಡ ಕೃಷ್ಣ ಉತ್ತರಿಸುತ್ತಾನೆ..

ಕರ್ಣ...
ನಿಂಗೊತ್ತು ಅಂದ್ಕೋತೀನಿ..ನಾನು ಹುಟ್ಟಿದ್ದು ಸೆರೆಮನೆಯಲ್ಲಿ.
ನಿಮ್ಮಮ್ಮ ನಿನ್ನನ್ನ ಹುಟ್ಟಿದ ಮೇಲೆ ನದೀಲಿ ತೇಲಿ ಬಿಟ್ಲು ಅಂತ ಕೊರಗ್ತೀಯ.‌ ನನ್ನ್‌ಕತೆ ಕೇಳು.. ನಾನು ಹುಟ್ಟೋಕೆ ಮೊದ್ಲೇ ನನ್ನನ್ನ ಕೊಲ್ಲೋಕೆ ಅಂತ ಹಲವಾರು ಸಂಚು ನಡೆದವು. ನಾನು ಹುಟ್ಟೋ ಹೊತ್ತಿಗೆ ನನ್ನ ಸಾವು ನನಗಾಗಿ ಕಾದಿತ್ತು. ಕಂಸ ಪೂತನಿ ಹೀಗೆ ಒಬ್ರಾ ಇಬ್ರಾ ನನ್ನನ್ನು ತೀರಾ ಮಗು ಇದ್ದಾಗ್ಲೇ ಕೊಲ್ಲೋಕೆ ಪ್ರಯತ್ನ ಪಟ್ಟವ್ರು..?

ನಾನು ಕೂಡ ನಿನ್ನ ಹಾಗೇನೇ ಹುಟ್ಟಿದ್ಕೂಡ್ಲೇ ಹೆತ್ತಮ್ಮ ಅಪ್ಪನಿಂದ ದೂರ ಆಗೋ ಹಾಗಾಯ್ತು.

ನೀನಾದ್ರೂ ಬಾಲ್ಯದಿಂದಲೇ ಖಡ್ಗ.. ಕುದುರೆ.. ರಥ.. ಬಿಲ್ಲು ಬಾಣ ಇವನ್ನೆಲ್ಲ ಕಂಡುಕೇಳಿ ಬೆಳೆದೆ. ನಾನು?
ನಾನು ನೋಡಿದ್ದೆಲ್ಲ ಹಸು, ಕೊಟ್ಟಿಗೆ, ಗೋಮೂತ್ರ, ಸಗಣಿ. ಬರೀ ಇದನ್ನೇ.
ಆಗಲೂ ನೆಮ್ಮದಿ ಕೊಡ್ಲಿಲ್ಲ ನಂಗೆ. ಹಲವಾರು ಬಾರಿ ನನ್ನ ಮೇಲೆ ಕೊಲೆ ಪ್ರಯತ್ನಗಳಾದ್ವು.

ನಿಂಗೆ ಪರಶುರಾಮರಿಂದ ವಿದ್ಯೆ ಕಲಿಯೋಕೆ ಅವಕಾಶವಾದ್ರೂ ಸಿಕ್ತು. ನಂಗೆ ಅಂಥ ಅವಕಾಶವೂ ಸಿಗಲಿಲ್ಲವಲ್ಲ. ದನಕಾಯ್ಕೊಂಡ್ ಇದ್ದೆ. ಹಾಗೂ ಸಿಕ್ಕಿದ್ದು ಬರೀ ಎಲ್ಲರಿಂದ ನಿಂದನೆ ದೂರು.
ನೀವೆಲ್ಲ ಆಗ್ಲೇ ವಿದ್ಯೆ ಕಲಿತು ಗಟ್ಟಿಯಾಗಿದ್ರಿ. ಅದೇ ನಾನು ಸಾಂದೀಪನಿ ಗುರುಗಳ ಬಳಿ ವಿದ್ಯೆಗಾಗಿ ಹೋದಾಗ ಆಗ್ಲೇಹದಿನಾರು ನಂಗೆ.
ನೀನು ನಿನ್ನಿಷ್ಟದ ಹುಡುಗೀನ ಮದ್ವೆ ಆದೆ. ನೀನು ಮಾತ್ರ ಅಲ್ಲ.. ಪಾಂಡವರು ಕೌರವರು ಎಲ್ಲರೂ. ನಾನು?

ನಾನು ಪ್ರಾಣದಂತೆ ಪ್ರೀತಿಸಿದ ಹುಡುಗಿಯನ್ನ ಮದ್ವೆ ಆಗೋಕೆ ಆಗ್ಲೇ ಇಲ್ಲ. ಇಷ್ಟವೋ ಇಷ್ಟವಿಲ್ಲವೋ ಯಾರ್ಯಾರನ್ನೋ ಮದುವೆ ಆಗಬೇಕಾಯ್ತು. ನೋಡುಗರ ಕಣ್ಣಿಗೆ ಮಾತ್ರ ಸುಖಪುರುಷ.

ಜರಾಸಂಧನಿಂದ ನನ್ನಿಡೀ ಕುಟುಂಬವನ್ನ ಉಳಿಸಿಕೊಳ್ಳೊ ಪರಿಸ್ಥಿತಿ ಬಂದಾಗ ಯಮುನೆ ತಟದಿಂದ ದೂರದ ಸಮುದ್ರತೀರಕ್ಕೆ ಎಲ್ಲರನ್ನೂ ಕರೆತಂದೆ. ನನಗೆ ಸಿಕ್ಕ ಸಮ್ಮಾನ ಏನು? ಹೇಡಿ ಎಂಬ ಮೂದಲಿಕೆ.
ಈಗ ಕುರುಕ್ಷೇತ್ರ ಯುದ್ಧದಲ್ಲಿ ದುರ್ಯೋಧನ ಗೆದ್ದರೆ ನಿಂಗೆ ಆ ಯಶಸ್ಸಿನ ಸಿಂಹಪಾಲು ಸಿಗುತ್ತೆ. ಜನ ನಿನ್ನನ್ನ ಕೊಂಡಾಡ್ತಾರೆ. ಅದೇ ಧರ್ಮರಾಯ ಗೆದ್ರೆ ಅದರ ಶ್ರೇಯ ನಂಗೆ ಸಿಗತ್ತಾ? ನಾನು ಯಕಶ್ಚಿತ್ ಅರ್ಜುನನ ಸಾರಥಿ ಆಗಿದ್ದೆ ಅಂತಷ್ಟೇ ಆಗೋದು. ಆದರೆ ಯುದ್ಧಕ್ಕೆ ಕಾರಣ ಸಾವುನೋವಿಗೆ ಕಾರಣ ನಾನು ಅನ್ನೋ ಮಾತುಗಳು ಬೇಕಾದ್ರೆ ನನ್ನ ಮೇಲೆ ಬರಬಹುದಷ್ಟೆ. ಕಪಟನಾಟಕ ಸೂತ್ರಧಾರಿ ಅಂತ ಕರೆದಾಗಿದೆ ಅಲ್ವಾ ಹೇಗೂ..!

ಹೇಳು ಈಗ. ನಿನ್ನ ಬದುಕು ನನ್ನ ಬದುಕಿಗಿಂತ ದಾರುಣವಾ?
ಒಂದು ಮಾತು ನೆನಪಿಟ್ಕೋ ಕರ್ಣ.. ಪ್ರತಿಯೊಬ್ಬರ ಜೀವನವೂ ಹೀಗೇನೆ. ಅವರದ್ದೇ ಆದ ಕಷ್ಟ ನೋವು ಅವಮಾನ ಸೋಲು ದುಃಖ ಸವಾಲು ಎಲ್ಲವೂ ಇರುತ್ತವೆ. ಇವೆಲ್ಲದರ ಸಂಕಲನವೇ ಬದುಕು.
ಯಾರ ಜೀವನವೂ ಸಲೀಸಾಗಿಲ್ಲ. ಎಲ್ಲರ ಬದುಕಿನ ಹಾದಿಯಲ್ಲೂ ಮುಳ್ಳುಗಳಿವೆ.

ಆದರೆ‌ ಸರಿ ಯಾವುದು.. ಧರ್ಮ ಯಾವುದು ಅನ್ನೋದು ನಿನ್ನ ಆತ್ಮಸಾಕ್ಷಿಗೆ ಗೊತ್ತಿರುತ್ತೆ. ನಮಗೆಷ್ಟು ಅನ್ಯಾಯ ಆಗಿದೆ ...ಎಷ್ಟು ಅವಮಾನವಾಗಿದೆ...ಎಷ್ಟು ಸಲ ಬಿದ್ದಿದ್ದೇವೆ.. ಅನ್ನೋದಕ್ಕಿಂತ.. ಇಂಥ ಸಮಯದಲ್ಲೆಲ್ಲ ನಾವು ಹೇಗೆ ಪ್ರತಿಕ್ರಿಯಿಸಿದ್ದೇವೆ ಅನ್ನೋದು ಮುಖ್ಯವಾಗುತ್ತೆ.

ನಮ್ಮ ಬದುಕಿಗೆ ನ್ಯಾಯ ಸಿಕ್ಕಿಲ್ಲ ಅನ್ನೋದು ತಪ್ಪುದಾರಿಯಲ್ಲಿ ನಡೆಯೋಕೆ ರಹದಾರಿ ಆಗೋದಿಲ್ಲ. ಆಗಕೂಡದು.

ನಿಜ.. ಜೀವನ ಸುಲಭ ಅಲ್ಲ. ಹಲವು ಕಷ್ಟಗಳನ್ನು ಒಡ್ದುತ್ತದೆ ಜಗತ್ತು. ಆದರೆ ಗುರಿ ತಲುಪಿಸೋದು ನಾವು ಹಾಕಿದ ಪಾದರಕ್ಷೆಗಳಲ್ಲ.. ನಾವಿಡೋ ಹೆಜ್ಜೆಗಳು. ಆ ಹೆಜ್ಜೆಗಳು ಸರಿ ಇರಬೇಕು. ಹೆಜ್ಜೆ ಇಡುವ ಹಾದಿ ಸರಿ ಇರಬೇಕು.

(ಅನುವಾದ. ಕೃಪೆ ಇಂಟರ್ನೆಟ್)
ಸಂಗ್ರಹ- ಮಮಶಿ

26/01/2024

75ನೇ ಗಣರಾಜ್ಯೋತ್ಸವದ ಶುಭಾಶಯಗಳು

25/01/2024

ಕೃಷ್ಣ ರುಕ್ಮಿಣಿಯರ ಮಗ ಪ್ರದ್ಯುಮ್ನ

ಶ್ರೀ ಕೃಷ್ಣ ಮತ್ತು ರುಕ್ಮಿಣಿ ಯರ ಮೊದಲ ಮಗುವೇ ಪ್ರದ್ಯುಮ್ನ. ಈ ಮಗು ಹುಟ್ಟಿದ 7ನೇ ದಿನವೇ ಶಂಬರಾಸುರ ಎಂಬ ರಾಕ್ಷಸನು ಅಪಹರಿಸಿದನು. ಕಾರಣ ಶಂಬರಾಸುರ ರಾಕ್ಷಸರ ನಾಯಕನಾಗಿದ್ದನು. ರಾಕ್ಷಸನು ಕಠಿಣ ತಪಸ್ಸು ಮಾಡಿ ವರ ಕೇಳಿದಾಗ ತನಗೆ ಯಾವುದರಿಂದಲೂ ಸಾವು ಬರಬಾರದು. ತನ್ನ ಮರಣ ಬರುವುದಾದರೆ ಕೃಷ್ಣ ರುಕ್ಮಿಣಿಯರಿಗೆ ಹುಟ್ಟುವ ಮಗನಿಂದ ಮಾತ್ರ ಬರಲಿ ಎಂದು ವರ ಪಡೆದಿದ್ದನು. ಅದೇ ರೀತಿ ಕೃಷ್ಣ ರುಕ್ಮಿಣಿಯರ ಕಲ್ಯಾಣ ವಾದ ಮೇಲೆ ಕೃಷ್ಣನಿಗೆ ಮಗು ಹುಟ್ಟುತ್ತದೆ ಎನ್ನುವ ಸುದ್ದಿ ತಿಳಿದಾಗ ನಿಂದಲೂ ರುಕ್ಮಿಣಿಯ ತವರು ಮನೆಯಲ್ಲಿ ಹಾಗೂ ಕೃಷ್ಣನ ಅರಮನೆಯಲ್ಲಿ ಗುಪ್ತಚರ ರನ್ನು ನೇಮಿಸಿದ್ದನು.

ರುಕ್ಮಿಣಿಗೆ ಮಗು ಹುಟ್ಟಿದ ಕೂಡಲೇ ಗುಪ್ತಚರರಿಂದ ವಿಷಯ ತಿಳಿದು ಹೆಣ್ಣಿನ ವೇಷ ಧರಿಸಿ ಅರಮನೆಗೆ ಬಂದ ಶಂಬರಾಸುರ ರುಕ್ಮಿಣಿಯ ಮಗ್ಗುಲಲ್ಲಿ ಮಲಗಿದ್ದ ಹಸುಗೂಸನ್ನು ಕದ್ದೊಯ್ದು ಕೊಲ್ಲಬೇಕೆಂದು ಸಮುದ್ರಕ್ಕೆ ಎಸೆದು ಹೋದನು. ಆ ಮಗುವನ್ನು ಸಮುದ್ರದ ದೊಡ್ಡ ಮೀನೊಂದು ನುಂಗುತ್ತದೆ. ನಂತರ ಅರಮನೆಯ ಊಳಿಗನಾಗಿದ್ದ ಬೆಸ್ತನೊಬ್ಬನಿಗೆ ಆ ಮೀನು ಸಿಗುತ್ತದೆ. ಬೆಸ್ತರವನು ಅರಸನ ಮೆಚ್ಚುಗೆ ಪಡೆಯುವ ಸಲುವಾಗಿ ಶಂಬರಾಸುರನಿಗೆ ಮೀನನ್ನು ಕೊಡುತ್ತಾನೆ. ಅದು ಪಾಕಶಾಲೆಗೆ ಬಂದಾಗ ಪರಿಚಾರಕ ಕತ್ತರಿಸಿದನು. ಆಗ ಅದರೊಳಗಿರುವ ಮಗುವನ್ನು ನೋಡಿ, ಮಗುವನ್ನು ಅರಸನಿಗೆ ಕೊಟ್ಟನು. ಮತ್ಸ್ಯದ ಹೊಟ್ಟೆಯೊಳಗೆ ಸಿಕ್ಕ ಮಗುವನ್ನು ಅರಮನೆಯಲ್ಲಿ ಬೆಳೆಯುವಂತೆ ಏರ್ಪಾಡು ಮಾಡಿದನು. ಹೀಗೆ ಆ ಮಗು ಅರಮನೆಯಲ್ಲಿ ಬೆಳೆದು ಯುದ್ಧ ಶಸ್ತ್ರಾಭ್ಯಾಸವನ್ನು ಕಲಿಯುತ್ತದೆ.

ಇನ್ನೊಂದು ಕಡೆ ಪೂರ್ವದಲ್ಲಿ ಶಿವನು ತನ್ನ ಪತ್ನಿಯಾದ ಸತಿಯನ್ನು ಕಳೆದು ಕೊಂಡ ದುಃಖದಿಂದ ಕಠೋರವಾದ ಧ್ಯಾನದಲ್ಲಿ ಮುಳುಗಿದ್ದನು. ಅದೇ ಸಮಯದಲ್ಲಿ ತಾರಕಾಸುರ ಎಂಬ ರಾಕ್ಷಸನ ಅಟ್ಟಹಾಸದಿಂದ ದೇವತೆಗಳು ನಲುಗಿದ್ದರು. ಶಿವನ ಪುತ್ರನಿಂದ ಮಾತ್ರ ತಾರಕಾಸುರನ ಸಾವು ಎಂದು ವರ ಪಡೆದಿದ್ದನು. ಆದರೆ ಶಿವನು ಸತಿ ಕಳೆದುಕೊಂಡ ಮೇಲೆ ನಿರಾಸಕ್ತನಾಗಿ ಸಂಸಾರ ಬಂಧನಗಳಲ್ಲಿ ಸಿಲುಕದೇ ಧ್ಯಾನ ಮಗ್ನನಾದನು. ಹೇಳಿ ಕೇಳುವರಿಲ್ಲದ ತಾರಕಾಸುರನು ಯಾರ ಅಂಕೆ ಶಂಕೆ ಇಲ್ಲದೆ ದೇವಾನು ದೇವತೆಗಳು, ಋಷಿಮುನಿಗಳಿಗೆ ಉಪಟಳ ಕೊಡಲು ಶುರು ಮಾಡಿದನು.

ವಿರಾಗಿಯಾಗಿದ್ದ ಶಿವನ ಗಮನವನ್ನು ಲೋಕದ ಕಡೆ ತಿರುಗಿಸುವ ಸಲುವಾಗಿ ಧ್ಯಾನದಲ್ಲಿ ನಿರತನಾಗಿದ್ದ ಶಿವನ ಮೇಲೆ ಪುಷ್ಪಬಾಣ ಬಿಡಲು ದೇವತೆಗಳು ಮನ್ಮಥನಿಗೆ ಹೇಳಿದರು. ದೇವತೆಗಳ ಆದೇಶಕ್ಕೆ ಒಪ್ಪಿ, ಶಿವನ ಭಯವಿದ್ದರೂ ಲೋಕೋದ್ಧಾರಕ್ಕಾಗಿ ರತಿಯ ಜೊತೆ ಬಂದ ಮನ್ಮಥನು ಶಿವನ ಮೇಲೆ ಪುಷ್ಪಬಾಣ ಪ್ರಯೋಗ ಮಾಡಿದನು. ಇದರಿಂದ ವ್ಯಸ್ತಿತನಾಗಿ ಕೋಪಗೊಂಡ ಶಿವನ ತೆರೆದ ಹಣೆಗಣ್ಣಿನ ನೋಟಕ್ಕೆ ಮನ್ಮಥ ಸುಟ್ಟು ಬೂದಿಯಾದನು. ಶಿವನ ಧ್ಯಾನಕ್ಕೆ ಭಂಗ ಬಂದು ಮೂರನೇ ಕಣ್ಣಿನ ಪ್ರಜ್ವಲತೆಯಿಂದ ರತಿಯ ಪತಿ ಮನ್ಮಥನು ಸುಟ್ಟು ಬೂದಿ ಆದದ್ದನ್ನು ನೋಡಿ ಸಹಿಸದ ರತಿಯ ದುಃಖಿಸಿದಳು.

ಮುಂದಿನ ಭಾಗ comment box ನಲ್ಲಿ ಓದಿ
ಸಂಗ್ರಹ-ಮಮಶಿ

23/01/2024

ಶ್ರೀಕೃಷ್ಣ ಯಾಕೆ ಅಭಿಮನ್ಯುವಿನ ಸಾವನ್ನು ತಪ್ಪಿಸಲಿಲ್ಲ?

ಯುಗ ಯುಗಗಳ ವರೆಗೂ ಚಿರಸ್ಥಾಯಿಯಾಗಿರುವ ಯೋಧ ಎಂದರೆ ಅದು ಮಹಾಭಾರತದ ಅಭಿಮನ್ಯು. ಕಾರಣ ಏನು ಅಂದ್ರೆ ಅಭಿಮನ್ಯುವಿನ ಶೌರ್ಯ ಹಾಗೂ ಪರಾಕ್ರಮವಾಗಿದೆ. ಅಭಿಮನ್ಯು ಸಾಯುವ ಗಳಿಗೆಯಲ್ಲಿ ಮಹಾರಥಿ ಕರ್ಣ ಹೇಳಿದ್ದು ಕೂಡ ಇದೇ ಮಾತಾಗಿತ್ತು ಈ ಜಗತ್ತಲ್ಲಿ ವೀರಯೋಧ ಎಂದು ಯಾರಾದರು ಇದ್ದಲ್ಲಿ ಅದು ನೀನು ಮಾತ್ರವೇ ಆಗಿರಲು ಸಾಧ್ಯ ನಾನು ಅಲ್ಲ ಹಾಗೂ ಅರ್ಜುನನೂ ಅಲ್ಲ ಎಂದು ಕರ್ಣ ಹೇಳಿದ್ದ. ಆದರೆ ಸಾಕ್ಷಾತ್ ಭಗವಂತ ಶ್ರೀಕೃಷ್ಣನೇ ಅಭಿಮನ್ಯವಿನ ಸೋದರಮಾವ ಆಗಿದ್ದರೂ ಸಹ ರಣರಂಗದಲ್ಲಿ ಅಭಿಮನ್ಯುವಿನ ಸಾವನ್ನು ತಪ್ಪಿಸಲು ಆಗಲಿಲ್ಲ. ಯಾಕೆ? ಅಭಿಮನ್ಯು ತನ್ನ ಸ್ವಂತ ತಂಗಿಯ ಮಗನೇ ಆಗಿದ್ದರೂ ಕೂಡ ಅಷ್ಟು ಚಿಕ್ಕ ವಯಸ್ಸಿನಲ್ಲಿ ಅವನಿಗೆ ಸಾವು ಬರುವುದು ಎಂದು ತಿಳಿದಿದ್ದರು ಶ್ರೀಕೃಷ್ಣ ಯಾಕೆ ಅಭಿಮನ್ಯುವಿನ ಸಾವನ್ನು ತಪ್ಪಿಸಲಿಲ್ಲ? ಇದಕ್ಕೆ ಮುಖ್ಯವಾಗಿ ಎರಡು ಕಾರಣಗಳಿವೆ ಅದನ್ನು ಇಲ್ಲಿ ಈ ಲೇಖನದ ಮೂಲಕ ತಿಳಿಯೋಣ.

ಪಾಂಡವರ ಮಹಾರಥಿ ಅರ್ಜುನ ರಣಭೂಮಿಯಲ್ಲಿ ಇಲ್ಲದ ಸಮಯ ನೋಡಿಕೊಂಡು ಗುರು ದ್ರೋಣಾಚಾರ್ಯರ ಚಕ್ರವ್ಯೂಹ ರಣರಂಗದಲ್ಲಿ ಪಾಂಡವರ ವಿರುದ್ಧ ಸಜ್ಜಾಗಿ ನಿಂತಿತ್ತು. ಇಂತಹ ಸಂದರ್ಭದಲ್ಲಿ ಒಂದು ದಿನದ ಮಟ್ಟಿಗೆ ತನ್ನನ್ನು ಯಾರೂ ಸೋಲಿಸಲು ಆಗದಂತೆ ಪರಶಿವನಿಂದ ವರ ಪಡೆದಿದ್ದ ಜಯದೃತ ಅಬ್ಬರಿಸುತ್ತಿದ್ದ. ಈ ಸಂದರ್ಭದಲ್ಲಿಯೇ ಚಕ್ರವ್ಯೂಹವನ್ನು ಭೇದಿಸಲು ಅಭಿಮನ್ಯು ಮುಂದಾಗುತ್ತಾನೆ. ಅಭಿಮನ್ಯು ಚಕ್ರವ್ಯೂಹವನ್ನು ಬೇಧಿಸಲು ಹೊರಟಾಗ ಯುಧಿಷ್ಠಿರ ಭೀಮ ನಕುಲ ಸಹದೇವ ತಡೆಯುತ್ತಾರೆ. ಇಷ್ಟು ಚಿಕ್ಕವಯಸ್ಸಿನಲ್ಲಿಯೇ ನಮ್ಮ ಕಣ್ಣೆದುರು ನಿನ್ನ ಸಾವನ್ನು ನೋಡಲಾರೆವು ಎನ್ನುತ್ತಾರೆ. ಆದರೆ ವೀರ ಅಭಿಮನ್ಯು ಇವರ ಯಾರ ಮಾತನ್ನು ಕೇಳದೆ ಇಟ್ಟ ಹೆಜ್ಜೆಯನ್ನು ಹಿಂದಕ್ಕಿಡದೆ ಚಕ್ರವ್ಯೂಹವನ್ನು ಭೇದಿಸಿ ಒಳಕ್ಕೆ ಹೋಗಿ ಕೌರವರ ಮಹಾರಥಿಗಳ ಎದುರು ನಿಂತು ಹೋರಾಡಿ ವೀರ ಮರಣವನ್ನು ಹೊಂದುತ್ತಾನೆ. ಈ ಕಥೆ ನಮ್ಮೆಲ್ಲರಿಗೂ ತಿಳಿದಿದೆ. ಆದರೆ ಭೂತ-ಭವಿಷ್ಯ ದವನು ತಿಳಿದು ಸಾಕ್ಷಾತ್ ಭಗವಂತನ ಅಭಿಮನ್ಯುವಿನ ಸೋದರಮಾವನಾಗಿದ್ದಾಗ ಕುರುಕ್ಷೇತ್ರದ ರಣರಂಗದಲ್ಲಿ ಅಭಿಮನ್ಯವಿನ ಮರಣ ಆಗಿದ್ದು ಯಾತಕ್ಕಾಗಿ? ಇಂತಹ ಮಹಾನ್ ವೀರಯೋಧನಿಗೆ ಅನ್ಯಾಯವಾಗುತ್ತಿದ್ದರೂ ಕೂಡ ಶ್ರೀಕೃಷ್ಣ ತಡೆಯಲಿಲ್ಲ ಯಾಕೆ? ಕುರುಕ್ಷೇತ್ರ ಯುದ್ಧ ಒಂದು ಧರ್ಮಯುದ್ಧ ವಾಗಿದ್ದು ಇಲ್ಲಿ ಧರ್ಮ ಗೆಲ್ಲಬೇಕಿತ್ತು ಹೊರತು ಅಧರ್ಮವಲ್ಲ. ಈ ಕಾರಣಕ್ಕೆ ಶ್ರೀಕೃಷ್ಣ ಅಭಿಮನ್ಯವಿನ ಸಾವನ್ನು ತಡೆಯಲಿಲ್ಲ ಎಂದು ಸಾಮಾನ್ಯವಾಗಿ ನಾವು ಹೇಳಬಹುದು. ಆದರೆ ಇದಕ್ಕೂ ಮೀರಿದ ಪೌರಾಣಿಕ ಹಿನ್ನೆಲೆ ಯೊಂದು ಅಭಿಮನ್ಯುವಿನ ಸಾವಿನ ಹಿಂದೆ ಇದೆ.

ಮಹಾಭಾರತದ ಒಂದು ಧರ್ಮಯುದ್ಧ. ಈ ಧರ್ಮಯುದ್ಧದಲ್ಲಿ ನಡೆದದ್ದು ದೇವಾಸುರರ ಕಾಳಗ. ಮಹಾಭಾರತದಲ್ಲಿ ಧರ್ಮದ ರಕ್ಷಣೆಗಾಗಿ ಹೇಗೆ ಭಗವಾನ್ ವಿಷ್ಣು ಶ್ರೀಕೃಷ್ಣನ ಅವತಾರ ದಲ್ಲಿ ಭೂಮಿಗೆ ಬಂದಿದ್ದ ಅದೇ ರೀತಿಯಲ್ಲಿ ಇನ್ನು ಹಲವಾರು ದೇವತೆಗಳು ಬೇರೆ ಬೇರೆ ಅವತಾರದಲ್ಲಿ ಬಂದಿದ್ದರು. ಒಂದೊಂದು ಮನುಷ್ಯ ರೂಪದಲ್ಲಿ ಒಬ್ಬೊಬ್ಬ ದೇವತೆಗಳು ಅವತಾರವೆತ್ತಿದ್ದರು.

ಧರ್ಮ ಸಂಸ್ಥಾಪನೆಯ ಕಾರ್ಯದಲ್ಲಿ ಎಲ್ಲ ದೇವತೆಗಳು ಕೂಡ ಶ್ರೀಕೃಷ್ಣನಿಗೆ ಬೆನ್ನೆಲುಬಾಗಿ ಇರುತ್ತಾರೆ. ಆದಿಶೇಷ ಬಲರಾಮನಾಗಿರುತ್ತಾನೆ. ಕೃಷ್ಣನ ಜನನದ ಸಮಯದಲ್ಲಿ ದೇವಕಿ ಇಂದ ಕೃಷ್ಣನ ಯಶೋದೆಯ ಬಳಿ ತೆಗೆದುಕೊಂಡು ಹೋಗಲಾಗುತ್ತದೆ ಯಶೋದೆಯ ಬಳಿ ಇರುವಂತಹ ಇನ್ನೊಂದು ಮಗು ಅದು ದೇವ ಮಾಯೆ ಆಗಿರುತ್ತದೆ. ಈ ದೇವ ಮಾಯೆಯೆ ಕೃಷ್ಣನ ಸಹೋದರಿ ಸುಭದ್ರ ಆಗಿ ಜನ್ಮತಾಳಿರುತ್ತಾಳೆ. ಸುಭದ್ರೆಯ ಪುತ್ರನಾಗಿ ಜನಿಸುವವ ಕೂಡ ಸಾಮಾನ್ಯ ಮನುಷ್ಯನಾಗಿ ಇರದೆ ಓರ್ವ ದೇವತೆ ಆಗಿರುತ್ತಾನೆ. ಚಂದ್ರದೇವನ ಪುತ್ರ ವರ್ಚ ಆಗಿರುತ್ತಾನೆ. ಮಹಾಭಾರತದ ಧರ್ಮ ಸ್ಥಾಪನೆಗೆ ಎಲ್ಲರೂ ಒಕ್ಕೊರಲಿನಿಂದ ಒಪ್ಪಿಗೆ ನೀಡಿದಾಗ ಚಂದ್ರದೇವ ಒಂದು ಶರತ್ತನ್ನು ಹಾಕುತ್ತಾನೆ. ನಾನು ನನ್ನ ಮಗನನ್ನು ಕೃಷ್ಣಾವತಾರ ಕ್ಕೇ ಸಂಯೋಜಿಸುತ್ತೇನೆ ಆದರೆ ಸುಧೀರ್ಘವಾಗಿ ನನಗೆ ನನ್ನ ಮಗ ವರ್ಚ ನನ್ನು ಬಿಟ್ಟಿರಲು ಆಗುವುದಿಲ್ಲ ಹಾಗಾಗಿ ಆದಷ್ಟು ಬೇಗ ಮತ್ತೆ ದೇವಲೋಕಕ್ಕೆ ಹಿಂತಿರುಗಿಸುವಂತೆ ಕೇಳಿಕೊಳ್ಳುತ್ತಾನೆ. ಆಗ ಭಗವಾನ್ ವಿಷ್ಣು ಚಂದ್ರನ ಮಾತಿಗೆ ಒಪ್ಪಿಕೊಂಡು ಅಭಿಮನ್ಯುವಿನ ಅವತಾರದಲ್ಲಿ ಚಂದ್ರದೇವನ ಮಗನಿಗೆ ಕೇವಲ ಹದಿನಾರು ವರ್ಷ ಮಾತ್ರ ಆಯಸ್ಸು ನೀಡುತ್ತಾನೆ. ಸಾಕ್ಷಾತ್ ಭಗವಂತನೇ ಆಗಿದ್ದ ಶ್ರೀಕೃಷ್ಣ ತಾನು ಚಂದ್ರ ದೇವನಿಗೆ ಕೊಟ್ಟ ಮಾತನ್ನು ಉಳಿಸಿಕೊಳ್ಳಬೇಕಾಗಿತ್ತು. ಹಾಗಾಗಿ ಅಭಿಮನ್ಯವಿನ ಸಾವಿನ ವಿಷಯ ತನಗೆ ಮೊದಲೇ ತಿಳಿದಿದ್ದರೂ ಕೂಡ ಶ್ರೀಕೃಷ್ಣ ಮಧ್ಯ ಪ್ರವೇಶಿಸಲಿಲ್ಲ.

ಮಹಾಭಾರತ ಯುದ್ಧದಲ್ಲಿ ಯುದ್ಧವನ್ನು ಗೆಲ್ಲಿಸುವ ಹೊಣೆ ಮಧ್ಯಮ ಪಾಂಡವ ಎನಿಸಿಕೊಂಡ ಅರ್ಜುನನ ಮೇಲೆ ಇರುತ್ತದೆ. ಏಕೆಂದರೆ ಭೀಮು ದ್ರೌಪದಿಯ ವಸ್ತ್ರಾಪಹರಣದಿಂದ ಆದ ಅವಮಾನದ ಪ್ರತೀಕಾರ ತೆಗೆದುಕೊಳ್ಳುವುದಾಗಿ ನೂರು ಜನ ಕೌರವರನ್ನು ಪಡೆಯುವುದರಲ್ಲಿ ಮಗ್ನನಾಗಿರುತ್ತಾನೆ. ಈ ಸಮಯದಲ್ಲಿ ಕೌರವರ ಪಕ್ಷದ ಮಹಾರಥಿಗಳು ಆದ ಭೀಷ್ಮ ದ್ರೋಣ ಕರ್ಣ ಇವರು ಪಾಂಡವರ ಮೇಲೆ ಯುದ್ಧಕ್ಕೆ ಬಂದಾಗ ಇವರನ್ನು ಮನಸಲು ಕೇವಲ ಅರ್ಜುನನಿಂದ ಮಾತ್ರ ಸಾಧ್ಯವಾಗಿರುತ್ತದೆ. ಹೀಗಿದ್ದಾಗ ಅರ್ಜುನನ ಕೋಪ ಅತಿ ಯಾಗುವುದು ಅಭಿಮನ್ಯುವಿನ ಸಾವಿನ ನಂತರ. ಕುರುಕ್ಷೇತ್ರ ಯುದ್ಧದಲ್ಲಿ ಮಹಾವಿದ್ವಾಂಸ ಗಳು ನಡೆಯುತ್ತವೆ. ಅರ್ಜುನ ಮಹಾ ಶಪಥವನ್ನು ಮಾಡಿ ದ್ರೋಣ ಹಾಗೂ ಕರ್ಣ ರನ್ನು ಸಂಹರಿಸುತ್ತಾನೆ. ಈ ಕಾರಣಕ್ಕಾಗಿ ಯುದ್ಧದ ವೇಗವನ್ನು ಹೆಚ್ಚಿಸಲು ಶ್ರೀಕೃಷ್ಣ ಅಭಿಮನ್ಯುವಿನ ಸಾವನ್ನು ತಡೆಯುವುದಿಲ್ಲ.

ಅಭಿಮನ್ಯುವಿನ ಸಾವಿನ ಕುರಿತಾಗಿ ಇರುವ ಇದು ಒಂದು ಕಥೆಯಾದರೆ ಇನ್ನೊಂದು ಕಥೆ ಕೂಡ ಇದೆ.

ಇನ್ನೊಂದು ಪೌರಾಣಿಕ ಕಥೆ ಎಂದರೆ ಅಭಿಮನ್ಯು ಅವನ ಹಿಂದಿನ ಜನ್ಮದಲ್ಲಿ ಒಬ್ಬ ಅಸುರನಾಗಿರುತ್ತಾನೆ. ಕೃಷ್ಣನ ಸೋದರ ಮಾವ ಕಂಸನ ಸೇವಕನಾಗಿ ಅವಿಕಾಸುರ ಎಂಬ ಹೆಸರಿನಲ್ಲಿ ಜನಿಸಿರುತ್ತಾನೆ ಅಭಿಮನ್ಯು. ಕೃಷ್ಣ ಕಂಸ ನನ್ನು ಸಂಹಾರ ಮಾಡಿದವ ಕೃಷ್ಣನ ಮೇಲೆ ಸೇಡು ತೀರಿಸಿಕೊಳ್ಳಬೇಕು ಎಂದು ಕೊಂಡಿರುತ್ತಾನೆ ಅವೀಕಾಸುರ. ಕೃಷ್ಣ ಇದನ್ನೆಲ್ಲ ಮೊದಲೇ ತಿಳಿದು ಅವೀಕಾರನನ್ನು ಒಂದು ಹುಳುವನ್ನಾಗಿಸಿ ಬಂಧಿಸಿಡುತ್ತಾನೆ. ಸುಭದ್ರ ಹಾಗೂ ಅರ್ಜುನರ ವಿವಾಹವಾದ ಸಂದರ್ಭದಲ್ಲಿ ಹುಳುವಿನ ರೂಪದಲ್ಲಿದ್ದ ಅಸುರ ಬಿಡುಗಡೆಹೊಂದಿ ಸುಭದ್ರೆಯ ಮಡಿಲು ಸೇರುತ್ತಾನೆ. ಅದೇ ಸಮಯದಲ್ಲಿ ಅರ್ಜುನ ಹೇಳುವ ಚಕ್ರವ್ಯೂಹದ ಕಥೆಯನ್ನು ಈ ಅಸುರ ಸುಭದ್ರೆ ಹೊಟ್ಟೆಯಲ್ಲಿ ಇದ್ದುಕೊಂಡು ಕೇಳಿಕೊಳ್ಳುತ್ತಾನೆ. ಇದೇ ಕಾರಣಕ್ಕಾಗಿ ಚಕ್ರವ್ಯೂಹ ಭೇದಿಸುವ ಕಥೆಯನ್ನು ಸುಭದ್ರೆ ಪೂರ್ತಿಯಾಗುತ್ತದೆ ಹಾಗೂ ಅಭಿಮನ್ಯುವಿನ ಆಯುಷ್ಯ ಅಷ್ಟಕ್ಕೆ ಇರುವಂತೆಯೂ ಕೃಷ್ಣ ತಡೆಯುತ್ತಾ ನಂತೆ. ಮುಂದೆ ಅಭಿಮನ್ಯುವಿನ ಜನನವಾದ ನಂತರ ಬಲರಾಮ ಹಾಗೂ ಕೃಷ್ಣನ ಮಾರ್ಗದರ್ಶನದಲ್ಲಿ ಅವಿಕಾಸುರನ ಬಾಲ್ಯ ಸಚ್ಚಾರಿತ್ರ್ಯ ಒಳ್ಳೆಯ ಗುಣಗಳನ್ನು ತುಂಬಿರುತ್ತದೆ. ಆದರೆ ಮುಂದೆ ಯಾವಾಗಲಾದರೂ ಅಭಿಮನ್ಯುವಿನ ಲ್ಲಿ ಇರುವಂತಹ ಅಸುರು ಗುಣ ಹೊರಬಂದರೆ ಇಡೀ ಜಗತ್ತಿಗೆ ಮಾರಕ ಎಂಬುದನ್ನು ಅರಿತ ಶ್ರೀ ಕೃಷ್ಣ , ಕುರುಕ್ಷೇತ್ರ ರಣರಂಗದಲ್ಲಿ ಅಭಿಮನ್ಯೂ ಚಕ್ರವ್ಯೂಹ ಭೇದಿಸುವುದು ಅರ್ಧ ತಿಳಿದಿರುವ ವಿಷಯ ತಿಳಿದಿದ್ದರೂ ಸಹ ಅಭಿಮನ್ಯುವನ್ನು ತಡೆಯಲು ಹೋಗಲಿಲ್ಲ. ಈ ಎರಡು ಪುರಾಣ ಕಥೆಗಳಿಂದ ನಾವು ಶ್ರೀಕೃಷ್ಣ ಅಭಿಮನ್ಯುವಿನ ಸಾವನ್ನು ಯಾಕೆ ತಡೆಯಲಿಲ್ಲ ಎನ್ನುವುದನ್ನು ತಿಳಿದುಕೊಳ್ಳಬಹುದು.
ಸಂಗ್ರಹ-ಮಮಶಿ

22/01/2024

ಶ್ರೀರಾಮನ ಈ 5 ಗುಣಗಳನ್ನು ಪಾಲಿಸಿದರೆ ಪುರುಷೋತ್ತಮರಾಗುವಿರಿ..!

ಭಗವಾನ್ ರಾಮನು ಅಯೋಧ್ಯೆಯ ರಾಜ ದಶರಥ ಮತ್ತು ರಾಣಿ ಕೌಸಲ್ಯೆಯ ಮಗ. ಶ್ರೀರಾಮನಲ್ಲಿದ್ದ ಅತ್ಯುತ್ತಮ ಗುಣಗಳಿಂದಾಗಿ ಆತನನ್ನು ಮರ್ಯಾದಾ ಪುರುಷೋತ್ತಮ ಎಂದು ಕರೆಯಲಾಗುತ್ತದೆ. ಶ್ರೀರಾಮನಲ್ಲಿದ್ದ ಗುಣಗಳನ್ನು ನಾವು ಕೂಡ ಅಳವಡಿಸಿಕೊಂಡರೆ ಜೀವನ ಪಾವನವಾಗುವುದು. ಭಗವಾನ್‌ ರಾಮನ ಯಾವೆಲ್ಲಾ ಗುಣಗಳನ್ನು ನಾವು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು..?

ಧಾರ್ಮಿಕ ನಂಬಿಕೆಯ ಪ್ರಕಾರ, ಭಗವಾನ್ ರಾಮನನ್ನು ಶ್ರೀ ಹರಿ ವಿಷ್ಣುವಿನ 7 ನೇ ಅವತಾರ ಎಂದು ಕರೆಯಲಾಗುತ್ತದೆ. ರಾಮನನ್ನು ಮಹಾನ್, ಆದರ್ಶ ವ್ಯಕ್ತಿ, ಅತ್ಯುತ್ತಮ ರಾಜನೊಂದಿಗೆ ಮರ್ಯಾದಾ ಪುರುಷೋತ್ತಮ ಎಂದೂ ಕರೆಯುತ್ತಾರೆ. ಆದರೆ ಇಂದು ಜನರು ಧರ್ಮ, ನಾಗರಿಕತೆ, ಸಂಸ್ಕೃತಿ, ಕರ್ಮ ಮತ್ತು ಜವಾಬ್ದಾರಿಗಳನ್ನು ಮರೆಯುತ್ತಿದ್ದಾರೆ. ಒಬ್ಬ ವ್ಯಕ್ತಿಯು ತನ್ನ ಕಾರ್ಯಗಳಿಂದ ಮಾತ್ರ ತನ್ನ ಗುರುತನ್ನು ಕಂಡುಕೊಳ್ಳುತ್ತಾನೆ ಎಂದು ಹಿರಿಯರು ಸಾಮಾನ್ಯವಾಗಿ ಹೇಳುತ್ತಾರೆ. ಈ ಗುಣಗಳಿಂದಾಗಿ ಶ್ರೀರಾಮನನ್ನು ಮರ್ಯಾದಾ ಪುರುಷೋತ್ತಮ ಎಂದೂ ಕರೆಯಲಾಗುತ್ತದೆ. ನಿಮ್ಮ ಜೀವನದಲ್ಲಿ ಅವರ ಪಾತ್ರದ ಕೆಲವು ಗುಣಗಳನ್ನು ನೀವು ಅಳವಡಿಸಿಕೊಂಡರೆ, ನಂತರ ನೀವು ಸಹ ಆದರ್ಶ ವ್ಯಕ್ತಿಯಾಗುತ್ತೀರಿ. ಇದರಿಂದ ನಿಮ್ಮ ಜೀವನವೂ ಯಶಸ್ವಿಯಾಗುತ್ತದೆ. ಶ್ರೀರಾಮನ ಈ ಗುಣಗಳು ಯಾವುವು ಎಂಬುದನ್ನು ನೋಡೋಣ.

ತಾಳ್ಮೆಯಿಂದಿರಬೇಕು

ಇಂದಿನ ಪುರುಷರಲ್ಲಿ ತಾಳ್ಮೆ ಮತ್ತು ಸಹನೆಯ ಗುಣಗಳ ಕೊರತೆಯಿದೆ. ಅವರು ಎಲ್ಲವನ್ನೂ ಮೊದಲು ಮತ್ತು ತ್ವರಿತವಾಗಿ ಪಡೆಯಲು ಬಯಸುತ್ತಾರೆ. ಆದರೆ ಸನ್ನದ್ಧತೆಯು ವ್ಯಕ್ತಿಯ ಕೆಟ್ಟ ಗುಣಗಳಲ್ಲಿ ಒಂದಾಗಿದೆ, ಅದು ನಿಮ್ಮ ಪ್ರತಿಯೊಂದು ಕೆಲಸವನ್ನು ಹಾಳುಮಾಡುತ್ತದೆ. ಆದ್ದರಿಂದಲೇ ಜೀವನದಲ್ಲಿ ಯಾವುದಕ್ಕೂ ಸಿದ್ಧವಾಗಿರುವುದು ಸರಿಯಲ್ಲ. ಮುಂದೆ ಸಾಗಲು ಮತ್ತು ಯಶಸ್ಸನ್ನು ಸಾಧಿಸಲು ಶ್ರೀರಾಮನಂತೆ ತಾಳ್ಮೆಯಿಂದಿರಬೇಕು. ಶ್ರೀರಾಮನಿಗಿದ್ದ ತಾಳ್ಮೆಯಿಂದ ಅವನು ಬರೋಬ್ಬರಿ 14 ವರ್ಷಗಳ ವನವಾಸವನ್ನು ಕಳೆಯುತ್ತಾನೆ. ಅಷ್ಟೇ ಅಲ್ಲ, ರಾಮನು ಸಮುದ್ರದ ಮೇಲೆ ಸೇತುವೆಯನ್ನು ನಿರ್ಮಿಸಲು ತೀವ್ರ ತಪಸ್ಸನ್ನು ಮಾಡಿದ್ದನು. ಭಗವಾನ್ ರಾಮನ ತಾಳ್ಮೆಯ ಈ ಪರಾಕಾಷ್ಠೆ ಇಂದು ಪ್ರತಿಯೊಬ್ಬ ಮನುಷ್ಯನಿಗೂ ಬೇಕಾಗಿದೆ.

ನಾಯಕತ್ವದ ಗುಣಗಳು

ವ್ಯಕ್ತಿಯಲ್ಲಿರಬೇಕಾದ ಮತ್ತೊಂದು ಅದ್ಭುತ ಗುಣವೆಂದರೆ ನಾಯಕತ್ವದ ಗುಣ. ಈ ಗುಣವನ್ನು ಪ್ರತಿಯೊಬ್ಬ ವ್ಯಕ್ತಿಯು ತನ್ನಲ್ಲಿ ಅಳವಡಿಸಿಕೊಳ್ಳಬೇಕು. ಎಲ್ಲರೊಂದಿಗೆ ಜೊತೆಯಾಗಿ ನಡೆದುಕೊಳ್ಳುವ ವ್ಯಕ್ತಿ ಜೀವನದಲ್ಲಿ ಯಶಸ್ವಿಯಾಗುತ್ತಾನೆ. ರಾಜನಾಗಿದ್ದರೂ, ಭಗವಾನ್ ರಾಮನು ದಕ್ಷ ವ್ಯವಸ್ಥಾಪಕನಾಗಿ ಎಲ್ಲರನ್ನೂ ಕರೆದುಕೊಂಡು ಹೋದನು. ಅವರ ನಾಯಕತ್ವದ ಸಾಮರ್ಥ್ಯದ ಈ ಗುಣದಿಂದಾಗಿ ಸಮುದ್ರದ ಮೇಲೆ ಸೇತುವೆಯನ್ನು ನಿರ್ಮಿಸಲಾಯಿತು.

ದಯಾ ಸ್ವಭಾವ
ಪುರುಷರಲ್ಲಿ ದಯೆಯ ಭಾವನೆ ಇರಬೇಕು. ಇದು ವ್ಯಕ್ತಿಯ ವ್ಯಕ್ತಿತ್ವವನ್ನು ಹೆಚ್ಚಿಸುತ್ತದೆ. ಶ್ರೀರಾಮನ ಅನೇಕ ಗುಣಗಳಲ್ಲಿ ದಯೆಯೂ ಒಂದು. ಭಗವಾನ್ ರಾಮನು ರಾಜನಾಗಿದ್ದನು, ಆದರೂ ಅವನು ಸುಗ್ರೀವ, ಹನುಮಂತ, ನಿಷಾದರಾಜ, ಕೇವಟ, ಜಾಂಬವಂತ ಮತ್ತು ವಿಭೀಷಣರಿಗೆ ದಯೆಯನ್ನು ತೋರಿಸಿದ್ದನು.

ದಯಾ ಸ್ವಭಾವ
ಪುರುಷರಲ್ಲಿ ದಯೆಯ ಭಾವನೆ ಇರಬೇಕು. ಇದು ವ್ಯಕ್ತಿಯ ವ್ಯಕ್ತಿತ್ವವನ್ನು ಹೆಚ್ಚಿಸುತ್ತದೆ. ಶ್ರೀರಾಮನ ಅನೇಕ ಗುಣಗಳಲ್ಲಿ ದಯೆಯೂ ಒಂದು. ಭಗವಾನ್ ರಾಮನು ರಾಜನಾಗಿದ್ದನು, ಆದರೂ ಅವನು ಸುಗ್ರೀವ, ಹನುಮಂತ, ನಿಷಾದರಾಜ, ಕೇವಟ, ಜಾಂಬವಂತ ಮತ್ತು ವಿಭೀಷಣರಿಗೆ ದಯೆಯನ್ನು ತೋರಿಸಿದ್ದನು.

ಆದರ್ಶ ಸಹೋದರ
ಅತ್ಯುತ್ತಮ ಸಹೋದರನ ಉದಾಹರಣೆಗಾಗಿ, ರಾಮ-ಲಕ್ಷ್ಮಣರ ಹೆಸರನ್ನು ಯಾವಾಗಲೂ ಮೊದಲು ತೆಗೆದುಕೊಳ್ಳಲಾಗುತ್ತದೆ. ಆದರ್ಶ ಸಹೋದರನಾಗಲು, ನೀವು ಭಗವಾನ್ ರಾಮನ ಗುಣಗಳನ್ನು ಅಳವಡಿಸಿಕೊಳ್ಳಬೇಕು. ಇಂದು, ಹೆಚ್ಚಿನ ಸಹೋದರರ ಸಂಬಂಧದಲ್ಲಿ ಬಿರುಕು ಇರುವುದನ್ನು ನೀವು ಗಮನಿಸಿರಬಹುದು. ಆದರೆ ಲಕ್ಷ್ಮಣ, ಭರತ ಮತ್ತು ಶತ್ರುಘ್ನರು ಭಗವಾನ್ ರಾಮನ ಮಲ ಸಹೋದರರು. ಆದರೆ ಇದರ ಹೊರತಾಗಿಯೂ, ಭಗವಾನ್ ರಾಮನು ಎಲ್ಲಾ ಸಹೋದರರೊಂದಿಗೆ ನಿಕಟ ಸಂಬಂಧವನ್ನು ಉಳಿಸಿಕೊಂಡಿದ್ದನು. ಸಹೋದರರ ಮೇಲಿನ ಪ್ರೀತಿ, ತ್ಯಾಗ ಮತ್ತು ಸಮರ್ಪಣೆಯಿಂದಾಗಿ ಅವರನ್ನು ಆದರ್ಶ ಸಹೋದರರು ಎಂದು ಕರೆಯಲಾಗುತ್ತದೆ.

ಸ್ನೇಹ
ಸ್ನೇಹಕ್ಕಾಗಿ ಮೋಸ, ದ್ವೇಷ ಮುಂತಾದವುಗಳು ಇರಬಾರದು. ಬದಲಿಗೆ, ರಾಮನು ಮಾಡಿದಂತೆ ಈ ಸಂಬಂಧವನ್ನು ಹೃದಯದಿಂದ ನಿರ್ವಹಿಸಬೇಕು. ಅವನೇ ಸ್ವತಃ ತನ್ನ ಗೆಳೆಯರಾದ ಕೇವಟ, ಸುಗ್ರೀವ, ನಿಷಾದರಾಜ ಮತ್ತು ವಿಭೀಷಣನಿಗಾಗಿ ಅನೇಕ ಬಾರಿ ಸಮಸ್ಯೆಗಳನ್ನು ಎದುರಿಸಿದ್ದನು.

ಸಂಗ್ರಹ-ಮಮಶಿ

Photos from pustaka.prapancha's post 22/01/2024

ಜೈ ಶ್ರೀರಾಮ....

22/01/2024

ರಾಮನ ಪರಿಪೂರ್ಣ ವ್ಯಕ್ತಿತ್ವದ 16 ಗುಣಗಳು ಯಾವೆಲ್ಲ ಯೋಚಿಸಿದ್ದೀರಾ?

ಶ್ರೀ ರಾಮನನ್ನು ಈ ಭೂಮಿ ನೋಡಿದ ಏಕೈಕ ಪರಿಪೂರ್ಣ ಆದರ್ಶ ವ್ಯಕ್ತಿ ಎಂದು ಹೇಳಲಾಗುತ್ತದೆ. ಆತ ಮರ್ಯಾದಾ ಪುರುಷೋತ್ತಮನ ಎಲ್ಲ 16 ಗುಣಗಳನ್ನು ಹೊಂದಿದ್ದ. ರಾಮನಲ್ಲಿದ್ದ ಆ 16 ಗುಣಗಳು ಯಾವೆಲ್ಲ ನೋಡೋಣ.

ಭಗವಾನ್ ರಾಮನನ್ನು ಮರ್ಯಾದಾ ಪುರುಷೋತ್ತಮ ಎಂದು ಕರೆಯಲಾಗುತ್ತದೆ - ಆತ ಪರಿಪೂರ್ಣ ವ್ಯಕ್ತಿ. ಸತ್ಯವನ್ನು ವ್ಯಕ್ತಿ ರೂಪಕ್ಕೆ ತಂದರೆ ಹೇಗಿರುತ್ತದೆಯೋ ಹಾಗಿದ್ದ ರಾಮ. ಅವನು ಎಲ್ಲಾ ರೀತಿಯಲ್ಲೂ ಅತ್ಯಂತ ಆದರ್ಶ ವ್ಯಕ್ತಿಯಾಗಿದ್ದಾನೆ- ಮೌಲ್ಯಗಳು, ನಡವಳಿಕೆ, ಸಂಬಂಧಗಳು ಮತ್ತು ಬಹುಶಃ ನೀವು ಯೋಚಿಸಬಹುದಾದ ಎಲ್ಲ ವಿಷಯದಲ್ಲೂ ಆತ ಪರಿಪೂರ್ಣವಾಗಿದ್ದ. ವಾಲ್ಮೀಕಿ ರಾಮಾಯಣದ ಪ್ರಕಾರ ಭಗವಾನ್ ಶ್ರೀರಾಮನು ಆದರ್ಶ ನಾಯಕನ ಎಲ್ಲಾ ಉತ್ತಮ ಗುಣಗಳನ್ನು ಹೊಂದಿರುವ ಏಕೈಕ ವ್ಯಕ್ತಿ. ಶ್ರೀ ರಾಮನನ್ನು ಪುರೋಷೋತ್ತಮನನ್ನಾಗಿ ಪರಿವರ್ತಿಸುವ 16 ಉದಾತ್ತ ಗುಣಗಳು ಯಾವೆಲ್ಲ ನೋಡೋಣ. 

ಗುಣ 1 – ಗುಣವಾನ್ / ಸೌಶೀಲ್ಯಮ್
ಶ್ರೀರಾಮನು ಎಲ್ಲರನ್ನೂ ಸಮಾನವಾಗಿ ಕಾಣುತ್ತಿದ್ದನು. ಅವನು ಬೇಟೆಗಾರರ ​​ನಾಯಕ ಗುಹ ಮತ್ತು ವಾನರ ರಾಜ ಸುಗ್ರೀವನನ್ನು ತನ್ನ ಸಹೋದರರನ್ನಾಗಿ ಸ್ವೀಕರಿಸಿದನು. ಭಗವಾನ್ ಹನುಮಂತನನ್ನು ತನ್ನ ಕಟ್ಟಾ ಭಕ್ತನಾಗಿ ಸ್ವೀಕರಿಸಿದ್ದನು. ವಿಭೀಷಣನು ರಾವಣನ ಸಹೋದರನಾಗಿದ್ದನು ಮತ್ತು ಅವನ ಅನುಯಾಯಿಗಳ ಅಸಮ್ಮತಿಯ ಹೊರತಾಗಿಯೂ ರಾಮನು ಅವನನ್ನು ಒಪ್ಪಿಕೊಂಡನು.

ಗುಣ 2 - ವೀರ್ಯವಾನ್: ಸಮರ್ಥನೆ
ವೀರ್ಯವಾನ್ ಎಂದರೆ ಬಲಶಾಲಿ ಅಥವಾ ಆಕ್ರಮಣಕಾರಿ ಎಂದರ್ಥ. ಭಗವಾನ್ ರಾಮನು ಉಗ್ರ ಯೋಧ ಮತ್ತು ಅಸಾಮಾನ್ಯ ಶಕ್ತಿಯನ್ನು ಹೊಂದಿದ್ದನು. ಆದಾಗ್ಯೂ, ಅವನು ಎಂದಿಗೂ ಇವುಗಳನ್ನು ದುರುಪಯೋಗಪಡಿಸಿಕೊಂಡಿಲ್ಲ. 

ಗುಣ 3 – ಧರ್ಮಜ್ಞ: ನೀತಿವಂತ
ಭಗವಾನ್ ರಾಮನು ಯಾವಾಗಲೂ ಧರ್ಮವನ್ನು , ಸದಾಚಾರದ ಮಾರ್ಗವನ್ನು ಅನುಸರಿಸಿದನು. ಸರಳವಾಗಿ ಹೇಳುವುದಾದರೆ, ಅವನು ಯಾವಾಗಲೂ ತನ್ನ ಮೌಲ್ಯಗಳಿಗೆ ಅಂಟಿಕೊಂಡಿರುತ್ತಾನೆ.  ಮೌಲ್ಯಗಳ ವಿಷಯದಲ್ಲಿ ಅವನು ಎಂದಿಗೂ ರಾಜಿಯಾಗಲಿಲ್ಲ.

ಗುಣ 4 – ಕೃತಜ್ಞ
ರಾವಣನನ್ನು ಸೋಲಿಸಿದ ನಂತರ, ಭಗವಾನ್ ರಾಮನು ವಾನರರ ಸಹಾಯಕ್ಕಾಗಿ ಮನಃಪೂರ್ವಕವಾಗಿ ಧನ್ಯವಾದಗಳನ್ನು ಅರ್ಪಿಸಿದನು. ಇದಲ್ಲದೆ, ತನ್ನ ಅವತಾರದ ಅಂತ್ಯದ ವೇಳೆಗೆ, ಭಗವಾನ್ ರಾಮನು ನಿಸ್ವಾರ್ಥ ಸೇವೆಗಾಗಿ ಭಗವಾನ್ ಹನುಮಂತನಿಗೆ ಋಣಿಯಾಗಿರುವುದನ್ನು ವ್ಯಕ್ತಪಡಿಸಿದನು.

ಗುಣ 5 – ಸತ್ಯವಾಕ್ಯಃ ಪರಿಪಾಲಕ
ಭಗವಾನ್ ರಾಮನು ಯಾವಾಗಲೂ ಸತ್ಯವನ್ನೇ ಹೇಳುತ್ತಾನೆ ಮತ್ತು ಸತ್ಯವನ್ನು ಹೊರತುಪಡಿಸಿ ಬೇರೇನೂ ಹೇಳುತ್ತಿರಲಿಲ್ಲ. ಬಾಲ ಖಾಂಡದಲ್ಲಿ ರಾಮನನ್ನು ಪ್ರಾಮಾಣಿಕ ವ್ಯಕ್ತಿಯಾಗಿ ನೋಡಲಾಗುತ್ತದೆ. ಪ್ರಾಮಾಣಿಕತೆಯು ನಾಯಕನನ್ನು ಅಧಿಕೃತವಾಗಿಸುತ್ತದೆ ಮತ್ತು ನಂಬಿಕೆಯನ್ನು ನಿರ್ಮಿಸುತ್ತದೆ.

ಗುಣ 6 – ದೃಢ
ಸ್ವಯಂ ನಿರ್ಧಾರಿತ, ಸತ್ಯ ಮತ್ತು ಸದಾಚಾರದ ಕಡೆಗೆ ಅವನು ಧೋರಣೆಯಲ್ಲಿ ದೃಢನಿಶ್ಚಯ ಹೊಂದಿರುವ ವ್ಯಕ್ತಿ. ಶ್ರೀರಾಮನು ವನವಾಸದಲ್ಲಿ ಇರಲು ಸಂತೋಷದಿಂದ ಒಪ್ಪಿಕೊಂಡನು. ಭರತನು ಅಯೋಧ್ಯೆಗೆ ಹಿಂತಿರುಗಲು ಮತ್ತು ರಾಜ್ಯವನ್ನು ವಹಿಸಿಕೊಳ್ಳುವಂತೆ ವಿನಂತಿಸಲು ಬಂದಾಗಲೂ ರಾಮನು ನಿರಾಕರಿಸಿದನು.

ಮುಂದಿನ ಭಾಗ comment boxನಲ್ಲಿ ಓದಿ
ಸಂಗ್ರಹ-ಮಮಶಿ

21/01/2024

ಇಡಿ‌ದೇಶವೇ ಒಂದಾಗಿರುವಾಗ ಒಂದದಿನ ರಜೆಮಾಡೊದ ನಮ್ಮಹುಡುಗರಿಗೆ ದೊಡ್ಡ ವಿಚಾರ ಅಲ್ಲಾ ಬಿಡಿ..

21/01/2024

ಅಹಲ್ಯೆ ಕಂಡು ಮೋಹಿತನಾದ ಇಂದ್ರ

ಗೌತಮ ಮುನಿಗಳು ಕಾಡಿನಲ್ಲಿ ವಾಸವಾಗಿದ್ದು ತಮ್ಮ ಕಾರ್ಯಗಳನ್ನು ಮಾಡಿಕೊಂಡು ಪತ್ನಿ ಅಹಲ್ಯಯೊಂದಿಗೆ ಸುಖವಾಗಿ ವಾಸಿಸುತ್ತಿದ್ದರು.
ಹೀಗೆ ಅವರ ಜೀವನ ಸಾಗುತ್ತಿರುವಾಗ ಅವರ ಸುಂದರವಾದ ಬದುಕಿನಲ್ಲಿ ಸಿಡಿಲಿನಂತೆ ಇಂದ್ರನ ಆಗಮನವಾಗುತ್ತೆ.
ಅಹಲ್ಯೆಯ ಸೌಂದರ್ಯಕ್ಕೆ ಮರುಳಾದ ಇಂದ್ರ ಹೇಗಾದರೂ ಅಹಲ್ಯೆಯನ್ನು ವಶ ಪಡಿಸಿಕೊಳ್ಳಲು ಪ್ರಯತ್ನಿಸುತ್ತಾನೆ. ಆದರೆ ಮಹಾ ಪತಿವ್ರತೆಯಾದ ಅಹಲ್ಯೆಯ ಮುಂದೆ ಇವನ ಆಟ ನಡಿಯೊದಿಲ್ಲಾ ಎಂದು ತಿಳಿದಾಗ ಇಂದ್ರ ಅಡ್ಡ ದಾರಿಯಲ್ಲಿ ಹೋಗಲು ನಿರ್ದರಿಸುತ್ತಾನೆ. ಬೆಳಗಿನ ಜಾವ ಸೂರ್ಯೋದಯಕ್ಕೆ ಬಹಳ ಮುಂಚೆ ಗೌತಮ ಮುನಿಗಳ ಆಶ್ರಮದ ಬಳಿ ಹೋಗಿ ಕೋಳಿ ಕೂಗಿದ ಹಾಗೆ ಕೂಗುತ್ತಾನೆ.
ಇದೇನು ಇನ್ನೂ ಇಷ್ಟೊಂದು ಕತ್ತಲಿದೆ, ಆಗಲೇ ಬೆಳಗಾಗಿ ಬಿಟ್ಟಿತಾ? ಎಂದು ಗೌತಮ ಮುನಿಗಳಿಗೆ ಅನುಮಾನ ಬರುತ್ತೆ. ಆದರೆ ಕೋಳಿ ಕೂಗಿತಲ್ಲ ಬೆಳಗಾಗಿರಬೇಕು ಅಂತ ನಿದ್ರೆಯಿಂದ ಎದ್ದು ತಮ್ಮ ಪ್ರಾತಃ ಕಾಲದ ಕೆಲಸಗಳನ್ನು ಪ್ರಾರಂಬಿಸಲು ನದಿ ಕಡೆ ಹೊರಡುತ್ತಾರೆ.
ಅವರು ಆ ಕಡೆ ಹೊರಡುತ್ತಿದ್ದ ಹಾಗೆ ಇಂದ್ರ ಗೌತಮರ ರೂಪದರಿಸಿ ಗೌತಮರ ಆಶ್ರಮದ ಒಳಗೆ ಹೋಗಿ ಅಹಲ್ಲೆಯನ್ನು ಕೂಡುತ್ತಿರುತ್ತಾರೆ. ಅಹಲ್ಲೆಗೆ ಇದ್ಯಾವುದರ ಬಗ್ಗೆ ಅನುಮಾನವೇ ಬರುವುದಿಲ್ಲ.

ಅಹಲ್ಯೆ ಹಾಗೂ ಇಂದ್ರನಿಗೆ ಗೌತಮರ ಶಾಪ

ಹೀಗೇ ಇಂದ್ರನ ವ್ಯವಹಾರ ನಡೆಯುತ್ತಿರುವಾಗ ಒಂದು ದಿನ ಎಂದಿನಂತೆ ನದಿಗೆ ಹೊಗಿದ್ದ ಗೌತಮರು ತಮ್ಮ ಕುಟೀರಕ್ಕೆ ಹಿಂದಿರಿಗಿ ಬಂದಾಗ ಇಂದ್ರ ಮತ್ತು ಗೌತಮರ ಮುಖಾಮುಖಿ ಆಗುತ್ತೆ. ಒಳಗಿನಿಂದ ಹೊರಬಂದ ಅಹಲ್ಲೆಗೆ ಇಬ್ಬರು ಮುನಿಗಳು ಎದುರು ಬದಿರಾಗಿ ನಿಂತಿರುವ ದ್ರುಶ್ಯ ನೋಡಿ, ಇವರಲ್ಲಿ ನಿಜವಾದ ಗೌತಮರು ಯಾರು ಎಂದು ತಿಳಿಯದೆ ತಬ್ಬಿಬ್ಬು ಆಗುತ್ತದೆ ಇಂದ್ರ ಇನ್ನೂ ಇಲ್ಲಿದ್ದರೆ ಕೆಟ್ಟೆ ಅಂತ ಅಲ್ಲಿಂದ ಕಾಲು ಕೀಳುತ್ತಾನೆ.

ಕುತಂತ್ರದಲ್ಲಿ ಅಯಲ್ಲೆಯದೂ ಕೈವಾಡವಿದೆ ಎಂದು ಭಾವಿಸಿ ಅಹಲ್ಯ ಗೆ ಶಿಲೆಯಾಗುವಂತೆ ಶಾಪ ಕೊಡುತ್ತಾರೆ. ಅಹಲ್ಲೆ ತಾನು ನಿರಪರಾದಿ ಇದರಲ್ಲಿ ತನ್ನ ತಪ್ಪೇನು ಇಲ್ಲವೆಂದು ಪರಿ ಪರಿಯಾಗಿ ಬೇಡುತ್ತಾಳೆ. ಆಗ ಗೌತಮ ಮುನಿಗಳು ತಮ್ಮ ದಿವ್ಯ ದೃಷ್ಟಿಯಿಂದ ನೋಡಿದಾಗ ಇದು ಇಂದ್ರನದೇ ಕೈವಾಡ ಎಂದು ತಿಳಿದು ಅವನಿಗೂ ಶಾಪ ಕೊಡುತ್ತಾರೆ.
ಕೊಟ್ಟ ಶಾಪ ಹಿಂದಕ್ಕೆ ಪಡೆಯಲಾಗದ ಕಾರಣ ಅಹಲ್ಯ ಗೆ ನೀನು ಶಿಲೆಯಾಗಿಯೇ ಇರು ತ್ರೇತಾಯುಗದಲ್ಲಿ ಶ್ರೀ ರಾಮನ ಪಾದ ಸ್ಪರ್ಷ ನಿನ್ನ ಶಿಲೆಗೆ ಆದಾಗ ನಿನಗೆ ಶಾಪ ವಿಮೋಚನೆ ಆಗುತ್ತೆ ಎಂದು ಹೇಳಿ ತಪಸ್ಸಿಗೆ ಹೊರಟುಹೊಗುತ್ತಾರೆ.

ರಾಮನ ಪಾದ ಸ್ಪರ್ಷದಿಂದ ಅಹಲ್ಯೆ ಶಾಪ ವಿಮೋಚನೆ

ಅಯೋಧ್ಯಾನಗರಿಯ ರಾಜಕುಮಾರನಾದ ಶ್ರೀರಾಮನು ಮಹರ್ಷಿ ವಿಶ್ವಾಮಿತ್ರರೊಡನೆ ಮಿಥಿಲೆಗೆ ಆಗಮಿಸುತ್ತಿದ್ದಾಗ, ಅವರು ನಿರ್ಜನವಾಗಿದ್ದ ಆಶ್ರಮವೊ೦ದನ್ನು ತಲುಪುತ್ತಾರೆ. ಆ ಆಶ್ರಮದ ಮಧ್ಯಭಾಗದಲ್ಲಿ ಶಿಲೆಯೊ೦ದಿರುತ್ತದೆ. ಆ ಶಿಲೆಯಿ೦ದ ತುಳಸೀ ಗಿಡವೊ೦ದು ಬೆಳೆಯುತ್ತಿರುತ್ತದೆ. ಆಗ ರಾಮನು ಹೀಗೆ ಹೇಳುತ್ತಾನೆ, ‘ಮಹರ್ಷಿ ವಿಶ್ವಾಮಿತ್ರರೇ, ಇದ೦ತೂ ನಿಜಕ್ಕೂ ವಿಸ್ಮಯಕರವಾಗಿದೆ. ಈ ಆಶ್ರಮದಲ್ಲ೦ತೂ ಯಾರೂ ವಾಸವಿರುವ೦ತೆ ಕಾಣುತ್ತಿಲ್ಲ. ಆದರೂ ಸಹ ತುಳಸಿ ಗಿಡವೊ೦ದು ಅದರಲ್ಲೂ ಶಿಲೆಯೊ೦ದರಿ೦ದ ಬೆಳೆಯುತ್ತಿದೆ’, ಎ೦ದು ಉದ್ಗರಿಸುತ್ತಾನೆ.

ಆಗ ವಿಶ್ವಾಮಿತ್ರರು ಹೀಗೆ ಹೇಳುತ್ತಾರೆ, ‘ಈ ಶಿಲೆಯ ಒಳಭಾಗದಲ್ಲಿ ಸ್ತ್ರೀಯೋರ್ವಳ ಆತ್ಮವು ನೆಲೆಯಾಗಿದೆ. ಆ ಸ್ತ್ರೀಯು ಓರ್ವನಿ೦ದ ಶಪಿಸಲ್ಪಟ್ಟು, ಮತ್ತೋರ್ವನಿ೦ದ ಮೋಸಹೋದವಳಾಗಿರುತ್ತಾಳೆ. ಎಲೈ ರಾಮನೇ, ತಪ್ಪುಮಾಡಿದವರನ್ನು ದೂಷಿಸಿ, ಶಿಕ್ಷಿಸುವುದನ್ನು ಎಲ್ಲರೂ ಬಲ್ಲರು. ಆದರೆ, ಕೇವಲ ವಿಶೇಷರಾದ ಮಹಾನ್ ವ್ಯಕ್ತಿಗಳಿಗೆ ಮಾತ್ರವೇ ತಪ್ಪಿತಸ್ಥರನ್ನೂ ಕ್ಷಮಿಸುವ ಸಾಮರ್ಥ್ಯವಿರುತ್ತದೆ ಹಾಗೂ ಅ೦ತಹವರನ್ನೇ ಪತಿತಪಾವನ ಎ೦ದು ಕರೆಯುತ್ತಾರೆ. ಎಲೈ ರಾಮನೇ, ನೀನು ಅ೦ತಹ ವಿಶೇಷವಾದ ವ್ಯಕ್ತಿಯು. ಹೀಗಾಗಿ, ನೀನು ನಿನ್ನ ಪಾದದಿ೦ದ ಆ ಶಿಲೆಯನ್ನು ಸ್ಪರ್ಶಿಸಿದಲ್ಲಿ, ನೀನು ಅಹಲ್ಯೆಯನ್ನು ಶಾಪದಿ೦ದ ಮುಕ್ತಗೊಳಿಸಿದ೦ತಾಗುವುದು’ ಎ೦ದು ಹೇಳುತ್ತಾರೆ.

ಭಗವಾನ್ ಶ್ರೀ ರಾಮಚ೦ದ್ರನು ಆ ಶಿಲೆಯತ್ತ ಸಾಗಿ, ಮಹರ್ಷಿ ವಿಶ್ವಾಮಿತ್ರರ ನಿರ್ದೇಶನದ೦ತೆ ತನ್ನ ಪಾದವನ್ನು ಆ ಶಿಲೆಯ ಮೇಲಿರಿಸುತ್ತಾನೆ. ಆಗ, ಶಿಲೆಯು ಅಹಲ್ಯೆಯಾಗಿ ಪರಿವರ್ತಿತವಾಯಿತು. ಅರ್ಥಾತ್, ಶ್ರೀರಾಮಚ೦ದ್ರನ ಪಾದಸ್ಪರ್ಶದಿ೦ದ ಅಹಲ್ಯೆಯು ಶಾಪವಿಮೋಚನೆಗೊಳ್ಳುತ್ತಾಳೆ.

ಸಂಗ್ರಹ-ಮಮಶಿ

21/01/2024

ಶ್ರೀಕೃಷ್ಣನ ಮುಕುಟದಲ್ಲಿ ನವಿಲುಗರಿ ಏಕೆ ? ಕಾರಣ ಇಲ್ಲಿದೆ.

ಶ್ರಿರಾಮ,ಸೀತೆ,ಲಕ್ಷ್ಮಣರು ವನವಾಸಕ್ಕೆಂದು,ಅಯೋಧ್ಯೆಯಿಂದ ಹೊರಟು,ಗುಹನಿಂದ ಗಂಗೆಯನ್ನು ದಾಟಿ,ಮುಂದೆ ಸಾಗಿ,ದಟ್ಟಡವಿಯನ್ನು ಪ್ರವೇಶಿಸಿದರು.
ನಡೆದು ದಣಿದ ಸೀತಾಮಾತೆಗೆ ಬಹಳ ಬಾಯಾರಿಕೆಯಾಗಿತ್ತು.
ಅಡವಿಯಲ್ಲಿ ಹತ್ತಿರದಲ್ಲೆಲ್ಲಿಯೂ ನೀರು
ಕಾಣಿಸಲಿಲ್ಲ.ದೂರ ದೂರದ ವರೆಗೆ ಬರೀ ಕಾಡೇ ಕಾಣುತ್ತಿತ್ತು.
ಆಗ ಶ್ರೀ ರಾಮನು ವಿಧಿಯನ್ನು ಪ್ರಾರ್ಥಿಸಿ,
"ಹೇ,ವನದೇವತೆಯೇ! ಕೃಪೆ ಮಾಡಿ ಎಲ್ಲಾದರೂ ಹತ್ತಿರದಲ್ಲಿ ನೀರಿದ್ದರೆ,ಅಲ್ಲಿಗೆ ಹೋಗುವ ಮಾರ್ಗವನ್ನು ತೋರಿಸು",ಎಂದು ಬೇಡಿಕೊಂಡನು.
ಆಗ ಅಲ್ಲೊಂದು ನವಿಲು ಬಂದು ಶ್ರೀ ರಾಮನಿಗೆಹೇಳಿತು...
"ಇಲ್ಲೇ ಸ್ವಲ್ಪ ದೂರದಲ್ಲಿ ಒಂದು ಜಲಾಶಯವಿದೆ.ನಡೆಯಿರಿ ನಾನು ಮಾರ್ಗವನ್ನು ತೋರಿಸುವೆನು.ಆದರೆ ಮಾರ್ಗದಲ್ಲಿ ನೀವು ದಾರಿ ತಪ್ಪುವ ಸಾಧ್ಯತೆ ಇದೆ" ಎಂದಿತು.
ಶ್ರೀರಾಮನು ಹಾಗೇಕೆ ? ಎಂದು ಕೇಳಿದ್ದಕ್ಕೆ, ನವಿಲು "ನಾನು ಹಾರುತ್ತಾ ಹೋಗುತ್ತೇನೆ.
ನೀವು ನಡೆಯುತ್ತಾ ಬರುವಿರಿ.
ಹಾರುತ್ತಿರುವ ನನ್ನನ್ನು ನೀವು ಹಿಂಬಾಲಿಸಲಾಗದೆ ದಾರಿ ತಪ್ಪಬಹುದು.
ನಿಮಗೆ ದಾರಿ ತಿಳಿಯಲು,ನಾನು ಹಾರುತ್ತ ನನ್ನ ಒಂದೊಂದೇ ಗರಿಯನ್ನು ಕಿತ್ತು ಕೆಳಗೆ ಹಾಕುತ್ತಾ ಹೋಗುವೆನು.ನೀವು ಬಿದ್ದ ಗರಿಯನ್ನು ಅನುಸರಿಸಿ ಬಂದರೆ ಜಲಾಶಯವನ್ನು ಸುಲಭವಾಗಿ ತಲುಪುವಿರಿ" ಎಂದು ಹೇಳಿತು.

ನವಿಲು ಗರಿಗಳು ವಿಶೇಷ ಸಮಯ ಹಾಗೂ ವಸಂತ ಋತುವಿನಲ್ಲಿ ಮಾತ್ರ ತಾವಾಗಿಯೇ ಉದುರುತ್ತವೆ. ಬಲವಂತವಾಗಿ ತೆಗೆದರೆ ನವಿಲಿನ ಸಾವು ನಿಶ್ಚಿತ.
ಇಲ್ಲಾಗಿದ್ದೂ ಅದೇ!!

ಆ ನವಿಲು ತನ್ನ ಕೊನೆಯ ಗರಿಯನ್ನು ಕಿತ್ತು ಉದುರಿಸಿ,ಕೊನೆಯ ಉಸಿರು ತೆಗೆದುಕೊಳ್ಳುವ ಮುನ್ನ ಅದರ ಮನಸ್ಸಿನಲ್ಲೊಂದು ಭಾವನೆ ಬಂದಿತು.!!

"ಯಾರು ಜಗತ್ತಿನ ಬಾಯಾರಿಕೆಯನ್ನು ತೀರಿಸುವರೋ,ಅಂತಹ ಪ್ರಭುವಿನ ಬಾಯಾರಿಕೆ ತೀರಿಸುವ ಸೌಭಾಗ್ಯ ಇಂದು ನನ್ನ ಪಾಲಿಗೆ ಬಂದಿದೆ.ನನ್ನ ಜೀವನ ಪಾವನವಾಯಿತು.ಇನ್ನು ನನ್ನ ಜೀವನದಲ್ಲಿ ಯಾವ ಆಸೆಯೂ ಉಳಿದಿಲ್ಲ" ಎಂದುಕೊಂಡಿತು.

ಅಷ್ಟರಲ್ಲಿ ಅಲ್ಲಿಗೆ ಬಂದ ಪ್ರಭು ಶ್ರೀರಾಮನು ನವಿಲಿಗೆ ಹೇಳಿದನು. "ನನಗಾಗಿ ನೀನು ನಿನ್ನ ಗರಿಗಳನ್ನ ಕಿತ್ತು ಜೀವನವನ್ನೇ ತ್ಯಾಗ ಮಾಡುತ್ತಿರುವೆ. ನನ್ನ ಮೇಲೆ ನಿನ್ನ ಋಣವಿದೆ. ಈ ಋಣವನ್ನು ನನ್ನ ಮುಂದಿನ ಅವತಾರದಲ್ಲಿ ಖಂಡಿತವಾಗಿಯೂ ತೀರಿಸುವೆನು.
ನಿನ್ನ ಗರಿಯನ್ನು ಸದಾ ನನ್ನ ತಲೆಯಲ್ಲಿ ಧರಿಸುವೆನು" ಎಂದನು.
ನವಿಲಿನ ಪ್ರಾಣಪಕ್ಷಿಯು ಹಾರಿ ಹೋಯಿತು.ಪ್ರಭುವು ಅದಕ್ಕೆ ಮೋಕ್ಷವನ್ನು ಕರುಣಿಸಿದನು.

ಆನಂತರ ಮುಂದಿನ ಶ್ರೀಕೃಷ್ಣಾವತಾರದಲ್ಲಿ ಸದಾ ತನ್ನ ಮುಕುಟದ ಮೇಲೆ ನವಿಲುಗರಿ ಧರಿಸುವುದರ ಮೂಲಕ ನವಿಲಿಗೆಕೊಟ್ಟ ವಚನವನ್ನು ಈಡೇರಿಸಿದನು.

ಇದರಲ್ಲಿರುವ ತತ್ವ...

ಋಣ ತೀರಿಸಲು,ಭಗವಂತನಿಗೇ ಪುನಃ ಜನ್ಮಧರಿಸ ಬೇಕಾಗುವುದೆಂದಮೇಲೆ,
ನಾವಂತೂ ಹುಲು ಮಾನವರು.ನಾವು ಎಷ್ಟೊಂದು ಋಣದಲ್ಲಿ ಇದ್ದೇವೆ.
ಅಳೆಯಲು ಸಾಧ್ಯವೇ? ಆ ಋಣ ಕಳೆಯಲು ಎಷ್ಟು ಜನ್ಮವೆತ್ತಿ ಬರಬೇಕಾಗುವುದೋ ಏನೋ??
ಆದ್ದರಿಂದ ಬದುಕಿದ್ದಾಗಲೇ ಸಾಧ್ಯವಾದಷ್ಟು ಎಲ್ಲರಿಗೂ ಒಳ್ಳೆಯದನ್ನು ಮಾಡೋಣ.

ಹರೇ ರಾಮ ಹರೇ ಕೃಷ್ಣ🙏🏻
ಸಂಗ್ರಹ:- ಮಮಶಿ

20/01/2024

ಅಂದು ಶ್ರೀರಾಮನಿಗೆ ಸಹಾಯ ಮಾಡಿದ ಪುಟ್ಟ ಅಳಿಲಿನ ಕಥೆ

ವನವಾಸದಲ್ಲಿ ಸೀತಾಮಾತೆಯನ್ನು ರಾವಣನು ಅಪಹರಿಸಿಕೊಂಡು ಹೋಗಿ ಲಂಕೆಯ ಅಶೋಕವನದಲ್ಲಿ ಇರಿಸಿಕೊಂಡ ಬಳಿಕ ಶ್ರೀರಾಮ ಮತ್ತು ಲಕ್ಷ್ಮಣ ಸಹಿತ ಪ್ರತಿಯೊಬ್ಬರು ಚಿಂತಾಕ್ರಾಂತರಾಗಿದ್ದರು. ಸೀತೆಯನ್ನು ಬಿಡುಗಡೆ ಮಾಡಿಕೊಂಡು ಬರಬೇಕು ಎನ್ನುವ ನಿಟ್ಟಿನಲ್ಲಿ ಮೊದಲು ಶಾಂತಿ ದೂತನನ್ನು ಲಂಕೆಗೆ ಕಳುಹಿಸಿಕೊಡಲಾಯಿತು. ಆದರೆ ರಾವಣನು ತನ್ನ ಹಠ ಬಿಡದೆ ರಾಮನನ್ನು ಸೋಲಿಸಿ, ಸೀತೆಯನ್ನು ವಶಪಡಿಸಿಕೊಳ್ಳುವೆ ಎಂದು ಅಹಂ ತೋರಿಸುತ್ತಿದ್ದ. ಶಾಂತಿದೂತನಾಗಿ ಹೋಗಿದ್ದ ಹನುಮಂತನ ಬಾಲಕ್ಕೆ ಕೂಡ ಬೆಂಕಿ ಹಚ್ಚಲಾಯಿತು. ಇದರ ಬಳಿಕ ರಾವಣನ ಸೇನೆಯ ವಿರುದ್ಧ ಹೋರಾಡಲು ಶ್ರೀರಾಮ ದೇವರ ಸೇನೆ ಅತ್ಯುತ್ಸಾಹದಲ್ಲಿತ್ತು ಮತ್ತು ದ್ವೇಷಾಗ್ನಿಯು ಅವರ ಹೃದಯದಲ್ಲಿ ಕುದಿಯುತ್ತಲಿತ್ತು. ಅದೇ ರೀತಿಯಲ್ಲಿ ಅಲ್ಲಿದ್ದ ಅಳಿಲಿನ ಹೃದಯದಲ್ಲಿ ಈ ದ್ವೇಷದ ಬೆಂಕಿ ಹತ್ತಿಕೊಂಡಿತ್ತು. ರಾಮನ ಸೇನೆಯಲ್ಲಿ ಇದ್ದ ಹೆಚ್ಚಿನ ಎಲ್ಲಾ ಯೋಧರು ಕಪಿಗಳು. ಇವರೆಲ್ಲರೂ ಸಮುದ್ರಕ್ಕೆ ಸೇತುವೆ ಕಟ್ಟಿ ಲಂಕೆಗೆ ಹೋಗುವ ನಿರೀಕ್ಷೆಯಲ್ಲಿ ಸಮುದ್ರ ತಡದಲ್ಲಿ ನಿಂತಿದ್ದರು. ಪ್ರತಿಯೊಬ್ಬರು ದೊಡ್ಡ ದೊಡ್ಡ ಕಲ್ಲುಗಳನ್ನು ಎತ್ತಿಕೊಂಡು ಅದನ್ನು ಸಮುದ್ರಕ್ಕೆ ಎಸೆದು ಸೇತುವೆ ನಿರ್ಮಾಣ ಮಾಡಲು ನಿರ್ಧರಿಸಿದ್ದರು. ಹಾಗೆ ಅವರು ತಮ್ಮ ಕಾಯಕದಲ್ಲಿ ತೊಡಗಿದ್ದರು.

ಸೀತೆಯ ಅಪಹರಣದ ಬಳಿಕದ ಸಂಕಟ
ಹನುಮಂತ, ಸುಗ್ರೀವ ಅಥವಾ ಕಪಿ ಸೇನೆಯ ಬೇರೆ ಯಾರೇ ಆಗಿರಲಿ, ಅವರು ತಮ್ಮ ಆರೋಗ್ಯ, ವಯಸ್ಸು ಮತ್ತು ಮನಸ್ಸನ್ನು ಮರೆತು ಸೀತಾ ಮಾತೆಯ ರಕ್ಷಿಸಬೇಕೆಂಬ ಒಂದೇ ಉದ್ದೇಶದಿಂದ ಬದ್ಧತೆ ಹಾಗೂ ಹುರುಪಿನಿಂದ ಕೆಲಸ ಮಾಡುತ್ತಲಿದ್ದರು. ಸಮುದ್ರವು ತುಂಬಾ ಆಳ ಮತ್ತು ಅಗಲವಾಗಿದ್ದಂತೆ ಇವರೆಲ್ಲರ ಹೃದಯದಲ್ಲಿದ್ದ ಬೆಂಕಿ ಕೂಡ ಅಷ್ಟೇ ಆಳ ಹಾಗೂ ಅಗಲದಲ್ಲಿತ್ತು. ಯಾಕೆಂದರೆ ಅವರೆಲ್ಲರೂ ಶ್ರೀರಾಮ ಮತ್ತು ಸೀತಾಮಾತೆಯನ್ನು ತುಂಬಾ ಪ್ರೀತಿಸುತ್ತಿದ್ದರು ಮತ್ತು ಆಕೆಯನ್ನು ರಕ್ಷಿಸಲು ಅವರು ಬಯಸುತ್ತಿದ್ದರು.

ಸೀತಾಮಾತೆಯ ರಕ್ಷಣೆಗಾಗಿ ಎಲ್ಲರು ಜತೆಗೂಡಿ ಕೆಲಸ ಮಾಡುತ್ತಿದ್ದರು.

ಸೇನೆಯಲ್ಲಿ ಕಪಿಗಳು ಮತ್ತು ಬೇರೆ ಯೋಧರು ಮಾತ್ರ ಶ್ರೀರಾಮನಿಗೆ ನೆರವಾಗುತ್ತಿರಲಿಲ್ಲ. ಹತ್ತಿರ ಅರಣ್ಯವಾಸಿಗಳು ಮತ್ತು ಗ್ರಾಮಸ್ಥರು ಕೂಡ ಶ್ರೀರಾಮನ ಬೆಂಬಲಕ್ಕೆ ಬರುತ್ತಿದ್ದರು. ಶ್ರೀರಾಮನು ಅಯೋಧ್ಯೆಯ ರಾಜ ಮತ್ತು ಆತನು ವನವಾಸ ಅನುಭವಿಸಲು ಬಂದಿರುವುದಾಗಿ ಇವರೆಲ್ಲರಿಗೂ ತಿಳಿದಿತ್ತು. ಸೀತಾ ಮಾತೆಯು ತುಂಬಾ ಗೌರವಯುತ ಮತ್ತು ಘನತೆಯ ರಾಣಿಯಾಗಿದ್ದು, ಆಕೆಯನ್ನು ರಾವಣನು ಕಾಡಿನಿಂದಲೇ ಅಪಹರಿಸಿಕೊಂಡು ಹೋಗಿದ್ದ. ಇವರೆಲ್ಲರೂ ಜತೆಯಾಗಿ ಕೆಲಸ ಮಾಡಿ ಸೀತಾಮಾತೆಯ ರಕ್ಷಿಸಲು ಬಯಸಿದ್ದಾರೆ.

ಅಳಿಲಿನ ಸೇವೆ ಗಮನಕ್ಕೆ ಬರಲಿಲ್ಲ.
ದೊಡ್ಡ ಮಟ್ಟದ ಸೇನೆಯು ಸೇತುವೆ ನಿರ್ಮಾಣ ಕಾರ್ಯದಲ್ಲಿ ತೊಡಗಿದ್ದ ವೇಳೆ ಒಂದು ಪ್ರಾಣಿಯ ಸೇವೆ ಮಾತ್ರ ಯಾರ ಗಮನಕ್ಕೂ ಬಂದಿರಲಿಲ್ಲ. ಅಳಿಲು ಸಣ್ಣ ಸಣ್ಣ ಕಲ್ಲುಗಳನ್ನು ತೆಗೆದುಕೊಂಡು ಹೋಗಿ ಅದು ಎಲ್ಲಿ ಸಾಧ್ಯವೋ ಅಲ್ಲಿ ಕೊಂಡು ಹೋಗಿ ಇಡುತ್ತಲಿತ್ತು. ಈ ಮೂಲಕ ಅದು ಕೂಡ ಸೇತುವೆ ನಿರ್ಮಾಣಕ್ಕೆ ತನ್ನ ಸೇವೆ ನೀಡಲು ಬಯಸಿತ್ತು. ಈ ಪ್ರಾಣಿಯ ಗಾತ್ರವು ತುಂಬಾ ಸಣ್ಣದಾಗಿದ್ದರೂ ಸೇತುವೆ ನಿರ್ಮಾಣದ ಕಾರ್ಯ ಮತ್ತು ಸೇನೆಯಲ್ಲಿದ್ದ ಇತರರ ಸೇವೆಗೆ ಇದನ್ನು ಹೋಲಿಸಿದರೆ ತುಂಬಾ ಸಣ್ಣದು ಎಂದು ಅನಿಸಿದರೂ ಈ ಸೇವೆಯನ್ನು ಕಡೆಗಣಿಸುವಂತಿಲ್ಲ. ಆ ಅಳಿಲು ತನ್ನಷ್ಟಕ್ಕೆ ತನ್ನ ಸೇವೆ ಮಾಡುತ್ತಲಿತ್ತು. ಬೇರೆ ಯಾವುದೇ ವಿಚಾರವು ಅದರ ಕಾರ್ಯದ ಮೇಲೆ ಪರಿಣಾಮ ಬೀರಲಿಲ್ಲ.

ಕಪಿಯು ಅಳಿಲಿಗೆ ತಮಾಷೆ ಮಾಡಿತು
ಸಣ್ಣ ಅಳಿಲು ತನ್ನ ಸೇವೆ ನೀಡುತ್ತಿರುವುದನ್ನು ನೋಡಿದ ಕಪಿಯೊಂದು ಅದರ ಬಗ್ಗೆ ತಮಾಷೆ ಮಾಡಿತು. ಅಳಿಲನ್ನು ನೋಡಿದ ಕಪಿಯು ತನ್ನ ದಾರಿಯಿಂದ ದೂರ ಹೋಗುವಂತೆ ಹೇಳಿತು. ನಿನ್ನ ಸೇವೆಯನ್ನು ಯಾರೂ ಗಮನಿಸದೆ ಇರುವ ಕಾರಣದಿಂದ ಈ ಕಾರ್ಯವನ್ನು ನಿಲ್ಲಿಸಿಬಿಡು ಮತ್ತು ನೀವು ಕೆಲಸ ಮಾಡದೆ ಇದ್ದರೂ ಅದರಿಂದ ಯಾವುದೇ ತೊಂದರೆ ಆಗದು ಎಂದು ಕಪಿಯು ಗೇಲಿ ಮಾಡುತ್ತದೆ. ಕೆಲಸ ನಿಲ್ಲಿಸಿ, ಹೋಗಿ ವಿಶ್ರಾಂತಿ ಪಡೆಯುವಂತೆ ಅದು ಸೂಚಿಸುತ್ತದೆ. ಅಳಿಲು ತನ್ನನ್ನು ಸಮರ್ಥಿಸಿಕೊಂಡ ವೇಳೆ ಬೇರೆಯವರು ಕೂಡ ಅದರತ್ತ ನೋಡಿ ಗೇಲಿ ಮಾಡಲು ಆರಂಭಿಸಿದರು.

ಅಳಿಲು ರಾಮ ದೇವರ ಬಳಿಗೆ ಹೋಯಿತು ತನ್ನನ್ನು ಗೇಲಿ ಮಾಡಿದ ಕಾರಣ ನೊಂದ ಅಳಿಲು ಶ್ರೀರಾಮನ ಬಳಿಗೆ ಹೋಯಿತು. ಸೇನೆಯಲ್ಲಿ ಇರುವವರ ಬಗ್ಗೆ ದೂರು ನೀಡಿದ ಅಳಿಲು, ಅವರೆಲ್ಲರಿಗೂ ಶಿಕ್ಷೆ ನೀಡುವಂತೆ ಕೇಳಿಕೊಂಡಿತು. ಸೇತುವೆ ಬಳಿ ಸೇನೆಯ ಎಲ್ಲರೂ ಜತೆ ಸೇರುವಂತೆ ಶ್ರೀರಾಮನು ಸೂಚಿಸುತ್ತಾನೆ. ಎಲ್ಲರು ಅಲ್ಲಿ ಬಂದ ಸೇರಿದ ವೇಳೆ ಶ್ರೀರಾಮನು ಬಂದು ಎರಡು ಕಲ್ಲುಗಳು ಜಾರಿ ಬಿದ್ದಿರುವುದರತ್ತ ಬೊಟ್ಟು ಮಾಡುವನು. ಯಾಕೆಂದರೆ ಇವುಗಳನ್ನು ಸಣ್ಣ ಸಣ್ಣ ಕಲ್ಲುಗಳ ನೆರವಿಲ್ಲದೆ ನಿಲ್ಲಿಸಲಾಗಿತ್ತು. ಸಣ್ಣ ಸಣ್ಣ ಕಲ್ಲುಗಳನ್ನು ಅಳಿಲು ಅಲ್ಲಿಗೆ ತಂದು ಹಾಕಿದೆ ಮತ್ತು ಅದು ಜೋಡಣೆಗೆ ನೆರವಾಗಿದೆ ಎಂದು ರಾಮನು ಹೇಳುವನು. ಸಣ್ಣ ಕಲ್ಲುಗಳು ದೊಡ್ಡ ಕಲ್ಲುಗಳನ್ನು ಜತೆಯಾಗಿಟ್ಟಿದ್ದವು ಸಣ್ಣ ಸಣ್ಣ ಕಲ್ಲುಗಳು ದೊಡ್ಡ ಕಲ್ಲುಗಳ ಜೋಡಣೆಯಲ್ಲಿ ಹೇಗೆ ನೆರವಾಗಿದೆ ಎಂದು ನೋಡಿ ಎಲ್ಲರಿಗೂ ಅಚ್ಚರಿಯಾಗಿದೆ. ಯಾವುದೇ ಕಾರ್ಯವು ಸಣ್ಣದು ಅಥವಾ ದೊಡ್ಡದು ಎಂದು ಇರುವುದಿಲ್ಲವೆಂದು ಅವರು ಮನವರಿಕೆ ಮಾಡಿಕೊಂಡರು. ಪ್ರಾಮಾಣಿಕ ಉದ್ದೇಶದಿಂದ, ಸದುದ್ದೇಶದಿಂದ ಮಾಡಿರುವಂತಹ ಯಾವುದೇ ಕಾರ್ಯವು ಒಳ್ಳೆಯದಾಗಿರುವುದು. ಅಳಿಲಿನ ಬಗ್ಗೆ ಗೇಲಿ ಮಾಡಿದವರೆಲ್ಲರೂ ತುಂಬಾ ಮುಜುಗರಕ್ಕೆ ಒಳಗಾದರು ಮತ್ತು ಕ್ಷಮೆ ಕೇಳಿದರು. ಅಳಿಲಿನ ಪ್ರಶಂಸೆ ಮಾಡಲು ಶ್ರೀರಾಮನು ಅದರ ಬೆನ್ನನ್ನು ಸವರುತ್ತಾನೆ. ಇದರಿಂದ ಅಳಿಲಿನ ಬೆನ್ನ ಮೇಲೆ ಮೂರು ಬೆರಳಿನ ಗುರುತು ಈಗಲೂ ಇದೆ ಎಂದು ಹೇಳಲಾಗುತ್ತದೆ. ಅಳಿಲಿನ ಬೆನ್ನ ಮೇಲೆ ಇರುವ ಮೂರು ಗೆರೆಗಳಿಗೆ ಇದು ಪೌರಾಣಿಕ ಕಾರಣವಾಗಿದೆ.

ಸಂಗ್ರಹ-ಮಮಶಿ

18/01/2024

ಧೃತರಾಷ್ಟ್ರನಿಗೆ 101 ಮಕ್ಕಳು ಯಾಕೆ ಹುಟ್ಟಿದರು? ಕುರುಕ್ಷೇತ್ರ ಯುದ್ಧ ಮುಗಿದಿತ್ತು.

ತನ್ನನ್ನು ನೋಡಲು ಬಂದ ಶ್ರೀಕೃಷ್ಣನನ್ನು ಧೃತರಾಷ್ಟ್ರ ಕೇಳಿದನು..

ನನ್ನ ನೂರು ಮಕ್ಕಳನ್ನೂ ನೀನು ಯುದ್ಧದಲ್ಲಿ ಕೊಲ್ಲಿಸಿದೆಯಲ್ಲ. ಏಕೆ?

ಕೃಷ್ಣ:-೫೦ ಜನ್ಮಗಳ ಹಿಂದಿನ ನಿನ್ನ ಜನ್ಮದಲ್ಲಿ, ನೀನೊಬ್ಬ ಬೇಟೆಗಾರನಾಗಿದ್ದೆ. ಬೇಟೆಯಾಡಲು ಹೋದಾಗ ಒಂದು ಗಂಡು ಪಕ್ಷಿಯ ಮೇಲೆ ಬಾಣ ಬಿಟ್ಟೆ. ಆದರೆ ಅದೃಷ್ಟವಶಾತ್ ಆ ಹಕ್ಕಿಯು ತಪ್ಪಿಸಿಕೊಂಡು ಹಾರಿಹೋಯಿತು. ಸಿಟ್ಟುಗೊಂಡ ನೀನು ಗೂಡಿನಲ್ಲಿದ್ದ ಅದರ ನೂರು ಪುಟ್ಟ ಮರಿಗಳನ್ನು ನಿಷ್ಕರುಣೆಯಿಂದ ಕೊಂದು ಹಾಕಿದೆ.ಪಕ್ಕದ ಮರದ ಮೇಲೆ ಕುಳಿತಿದ್ದ ತಂದೆ ಪಕ್ಷಿಯು,ಕಣ್ಣೆದುರೇ ತನ್ನ ಮರಿಗಳನ್ನು ನೀನು ಕೊಲ್ಲುತ್ತಿರುವುದನ್ನು ಅಸಹಾಯಕವಾಗಿ ನೋಡುತ್ತ ರೋದಿಸುತ್ತಿತ್ತು.

ಆ ಪಕ್ಷಿಯ ಪುತ್ರಶೋಕಕ್ಕೆ ನೀನು ಕಾರಣನಾಗಿದ್ದೆ.
ಕಣ್ಣೆದುರೇ ನೂರು ಮಕ್ಕಳನ್ನು ಕಳೆದುಕೊಂಡ ಹಕ್ಕಿಯ ದುಃಖ ಎಷ್ಟಿರಬಹುದು? ಅದನ್ನು ನೀನು ಅನುಭವಿಸಲು ನಿನ್ನ ನೂರು ಮಕ್ಕಳು ಈ ಯುದ್ಧದಲ್ಲಿ ಮಡಿಯಬೇಕಾಯಿತು.

ಧೃತರಾಷ್ಟ್ರ: ಸರಿˌ ಆದರೆ ಇದಕ್ಕಾಗಿ ನಾನು ೫೦ ಜನ್ಮಗಳಷ್ಟು ದೀರ್ಘಕಾಲ ಕಾಯುವಂತಾದುದು ಏಕೆ?

ಕೃಷ್ಣ:ನೂರು ಮಕ್ಕಳನ್ನು ಪಡೆಯಲು ಬಹಳ ಪುಣ್ಯಫಲ ಬೇಕು.ಅಷ್ಟು ಪುಣ್ಯ ಸಂಚಯನಕ್ಕಾಗಿ ೫೦ ಜನ್ಮ ಬೇಕಾಯಿತು.
ನೂರು ಮಕ್ಕಳನ್ನು ಪಡೆಯುವಷ್ಟು ಪುಣ್ಯ ಸಂಪಾದನೆ ಮಾಡಿದ ನಂತರವೇ,೫೦ ಜನ್ಮಗಳ ಹಿಂದೆ, ನೂರು ಮರಿಗಳನ್ನು ಕೊಂದ ಪಾಪದ ಫಲದ ಅನುಭವ ನಿನಗಾಗಬೇಕಾಗಿತ್ತು.
ಭಗವದ್ಗೀತೆಯಲ್ಲಿ ಅರ್ಜುನನಿಗೆ ಇದನ್ನೇ

"ಕರ್ಮಣೋ ಹ್ಯಪಿ ಬೋದ್ಧವ್ಯಂಬೋದ್ಧವ್ಯಂ ಚ ವಿಕರ್ಮಣಃ | ಅಕರ್ಮಣಶ್ಛ ಬೋದ್ಧವ್ಯಂ
ಗಹನಾ ಕರ್ಮಣೋ ಗತಿಃ ||" (4-17)

ಕರ್ಮ ಮತ್ತು ಅಕರ್ಮದ ಸ್ವರೂಪವನ್ನು ತಿಳಿಯ ಬೇಕು. ಹಾಗೆಯೇ,ವಿಕರ್ಮದ ಸ್ವರೂಪವನ್ನೂ ತಿಳಿಯ ಬೇಕಾದುದು ಅವಶ್ಯಕ.ಏಕೆಂದರೆˌ ಕರ್ಮದ ಗತಿಯು ಬಹಳ ಗಹನವಾಗಿದೆ.ಕ್ರಿಯೆ ಮತ್ತು ಪ್ರತಿಕ್ರಿಯೆಯು ಹೇಗೆ ಕೆಲಸ ಮಾಡುತ್ತದೆ ಎಂಬ ರೀತಿಯು ಬಹಳ ಸಂಕೀರ್ಣವಾದುದು. ಪಾಪ ಮಾಡಿದ ಜೀವಿಗಳಿಗೆ, ಯಾವಾಗ, ಯಾವ ರೀತಿ,ಹೇಗೆ ಪ್ರತಿಕ್ರಿಯಿಸಬೇಕು ಎಂಬುದನ್ನು ಭಗವಂತ ನಿರ್ಧರಿಸುತ್ತಾನೆ. ಅಂತಹ ಸಕಾಲವನ್ನು ನಿರೀಕ್ಷಿಸುತ್ತ, ಕೆಲವನ್ನು ಈ ಜನ್ಮದಲ್ಲಿ,ಮತ್ತೆ ಕೆಲವನ್ನು ಮುಂದಿನ ಜನ್ಮದಲ್ಲಿ ಅನುಭವಿಸುವಂತೆ ಮಾಡುತ್ತಾನೆ.

ಹೀಗೊಂದು ಮಾತಿದೆ...
"ಭಗವಂತನ ಗಾಣವು ಬಹಳ ನಿಧಾನಗತಿಯಲ್ಲಿ ತಿರುಗುತ್ತಿರುತ್ತದೆ.ಆದರೆ ಅದರಲ್ಲಿ ಸಿಕ್ಕಿಕೊಂಡ ವಸ್ತುವನ್ನು ( ಜೀವಿ) ಸರಿಯಾದ ಹದದಲ್ಲಿ,ನುಣ್ಣಗೆ ಹಿಟ್ಟಾಗಿಸುತ್ತದೆ"

ಆದ್ದರಿಂದ ಪ್ರತಿ ಪ್ರಕ್ರಿಯೆಯೂ ಅದರ ಲೆಕ್ಕದಲ್ಲಿ ಈಗಲೋ, ನಂತರವೋ, ಆಮೇಲೋ, ಎಂದು ಸೇರಿರುತ್ತದೆ.ಅಂತೆಯೇ ಕರ್ಮಫಲದ ಉರುಳು ಸರಿಯಾದ ಸಮಯದಲ್ಲಿ ಬಿಗಿಯುತ್ತದೆ. ಯಾವುದೂ ತಪ್ಪಿಸಿಕೊಂಡು ಇದರಿಂದ ಉಳಿಯುವುದಿಲ್ಲ.

ಇದಕ್ಕೆ ಭಗವದ್ಗೀತೆಯಲ್ಲಿ ಒಂದು ಉದಾಹರಣೆ ಇದೆ.
ಸಾವಿರ ಕರುಗಳಿರುವ ಗುಂಪಿನಲ್ಲಿ ತಾಯಿ ಹಸುವನ್ನು ಬಿಟ್ಟರೆ,ಆ ಹಸು ಸಾವಿರ ಕರುಗಳಲ್ಲಿ ತನ್ನ ಕರು ಯಾವುದೆಂದು ಸರಿಯಾಗಿ ಗುರುತಿಸಿ ಹಾಲೂಡಿಸುತ್ತದೆ.
ಮುಂದಿನ ಭಾಗ comment box ನಲ್ಲಿ ಓದಿ
ಸಂಗ್ರಹ - ಮಮಶಿ

17/01/2024

ಗಾಂಧಾರಿ : "ಕೃಷ್ಣ! ನಾನು ಉತ್ತಂಕನಂತೆ ಜ್ಞಾನಿಯಲ್ಲ! ನಾನು ವಿಶ್ವರೂಪ ನೋಡಲು ಅರ್ಹಳೂ ಅಲ್ಲ! ನಿನ್ನ ಅವತಾರ ಕಾಲದಲ್ಲೇ ನಿನ್ನನ್ನು ಕಾಣದೆ, ಬದುಕಿಯೂ ಕಣ್ಣಿಗೆ ಬಟ್ಟೆ ಕಟ್ಟಿಕೊಂಡು, ಆ ಭಾಗ್ಯವನ್ನು ಕಳೆದುಕೊಂಡವಳು! ಇದೊಂದೇ ನನ್ನನ್ನು ಕಾಡುತ್ತಿದೆ!.. ನನ್ನ ಮಕ್ಕಳಿಗೆ ನೀನೇಕೆ ಸದ್ಬುದ್ಧಿಯನ್ನು ಕೊಡಲಿಲ್ಲ? ಸತ್ ಕರ್ಮಪ್ರೇರಕ ನೀನೆ ತಾನೆ? ಗಾಯತ್ರಿ ಮಂತ್ರವು ಹಾಗೆಂದೇ ನಿನ್ನನ್ನು ವರ್ಣಿಸುವುದಿಲ್ಲವೇ?"

#ಶ್ರೀಕೃಷ್ಣ: "ದೇವಿ! ನಿನಗೆ ಗಾಯತ್ರಿ ಅರ್ಥ ಹೇಳಬೇಕೋ? ನನ್ನ ಲೀಲೆಯ ಅರ್ಥ ಹೇಳಬೇಕೋ? ನನ್ನ ಸಂಕಲ್ಪದ ವಿವರಣೆ ಕೊಡಬೇಕೋ? ನಿನ್ನನ್ನು ಪ್ರಶ್ನೆಯೇ ಕೇಳದಂತೆ ಮಾಡಬೇಕೋ?.. ನಾನೂ ಹೇಳುವುದು ನಿನಗೆ ತಿಳಿಯಲಾರದು! ಆದರೂ ಹೇಳುತ್ತೇನೆ... ಯಾರಿಗಾದರೂ ಉಪಯೋಗ ಬಂದೀತು... ಕೇಳು... ನಾನೇ ಜಗದೀಶ್ವರ! ಹಾಗೆಂದರೂ ನಿನಗೆ ತಿಳಿಯಲಾರದು! ಏಕೆಂದರೆ ಜಗದೀಶ್ವರನ ಜಗತ್ತಿನಲ್ಲಿ ಈಶ್ವರನಲ್ಲದ ಇತರ ಜಡವಸ್ತುಗಳೂ, ಜಡಪ್ರಾಯರಾದ ನಿನ್ನಂಥ, ಉತ್ತಂಕನಂಥ, ಜೀವರು ಇರುತ್ತಾರೆ! ಇಲ್ಲವಾದರೆ ಜಗತ್ತಿಗೆ ಅರ್ಥವೇ ಇಲ್ಲ! ಜಗತ್ತೂ, ಈಶ್ವರನೂ, ಈ ಯಾವುದು ಇಲ್ಲವೆಂಬ ಶೂನ್ಯವಾದಿಗಳು ಕಲಿಯುಗದಲ್ಲಿ ಬರುತ್ತಾರೆಯಷ್ಟೇ! ಇವರಿಗೂ ಇತರರಿಗೂ ನಾನೂ ಅವರವರ ಅನಾದಿ ಕರ್ಮವಾಸನೆಯಿಂದ ಪ್ರೇರಿತ ಕರ್ಮಗಳಿಗೆ ಫಲ ಕೊಡುತ್ತೇನೆ! ಕೈಹಿಡಿದು ಯಾರಿಗೂ ಒಳ್ಳೆಯ ಕೆಟ್ಟ ಕೆಲಸಗಳನ್ನು ಮಾಡಿಸುವುದು ನನ್ನ ರೀತಿಯಲ್ಲ! ಹಾಗೆ ಮಾಡಿದ್ದರೆ ಒಬ್ಬರಿಗೊಂದು ಇನ್ನೊಬ್ಬರಿಗೊಂದು ಮಾಡಿಸಿದ ಪಕ್ಷಪಾತ ನನ್ನನ್ನು ತಟ್ಟುತ್ತಿತ್ತು. ಕರುಣಾಶೂನ್ಯನೆಂದೂ ನನ್ನನ್ನು ಆಗ ಜನ ಹೇಳುತ್ತಿದ್ದರು! 'ಒಳ್ಳೆಯದನ್ನೇ ಮಾಡಿರಿ' ಎಂದು ಸದಾ ನಾನು ಅಂತರ್ಯಾಮಿಯಾಗಿರುತ್ತಲೇ ಎಲ್ಲರ ಹೃದಯದಲ್ಲೂ ಪ್ರೇರಿಸುತ್ತಿರುತ್ತೇನೆ. ಅದೇ ಗಾಯತ್ರಿ ಹೇಳುವ ಅರ್ಥ! ಅದರಂತೆ ನಡೆಯುವುದು ಬಿಡುವುದು ಜೀವರ ಹೊಣೆ! ಅದು ನನ್ನ ಭಾರವಲ್ಲ! ಎಲ್ಲರನ್ನು ಹೊಣೆಗೇಡಿಗಳನ್ನಾಗಿಸಿ, ನಾನೇ ನಡೆಸುವ ಲೋಕವ್ಯಾಪಾರವೆಂಬುವುದುಂಟೇ? ಅದಕ್ಕೆ ಅರ್ಥವುಂಟೇ?ಕರ್ಮ ಯಾರಿಗೆ? ಫಲ ಯಾರಿಗೆ? ನಿನ್ನ ಮಕ್ಕಳಿಗೆ ನನ್ನಂತೆ ಸದ್ಬುದ್ಧಿ ಹೇಳಿದವರುಂಟೆ?.. ನನ್ನಾಣೆಗೆ ಹೇಳು!.. ಅದರಂತೆ ನಡೆಯದೇ ಸತ್ತರೆ ಯಾರು ಹೊಣೆ! ಅಥವಾ ಅವರವರ ಹೊಣೆಗೂ ನಾನೇ ಹೊಣೆ ಎನ್ನುವೆಯೋ?"

ಪುಸ್ತಕ- ಶ್ರೀಕೃಷ್ಣಾವತಾರದ ಕೊನೆಯ ಗಳಿಗೆಗಳು
ಸಂಗ್ರಹ-ಮಮಶಿ

16/01/2024

ಕೃಷ್ಣನ ಕೊಳಲಿನ ಕಥೆ

ದಿನಕ್ಕೆ 24 ಗಂಟೆಗಳ ಕಾಲ ಕೊಳಲು ಕೃಷ್ಣನ ಒಡನಾಟದೊಂದಿಗೆ ಇತ್ತು. ಗೋಪಿಕೇಯರು ಸಹ ಕೊಳಲೀನ ಬಗ್ಗೆ ಅಸೂಯೆ ಹೊಂದಿದ್ದರು. ಅವರು ಕೊಳಲಿಗೆ ಹೇಳಿದರು, “ನೋಡಿ, ಕೃಷ್ಣ ನಮ್ಮ ಕರ್ತನು, ಆದರೆ ನಾವು ಆತನೊಂದಿಗೆ ಕೇವಲ ಸ್ವಲ್ಪ ಸಮಯವನ್ನು ಕಳೆಯುತ್ತೇವೆ. ಆದರೆ ಅವನು ನಿನ್ನೊಂದಿಗೆ ಎಚ್ಚರಗೊಳ್ಳುತ್ತಾನೆ, ಅವನು ನಿದ್ದೆ ಮಾಡುವಗಲೂ ನಿನ್ನೊಂದಿಗೆ ಇರುತ್ತಾನೆ, ಪ್ರತಿ ಕ್ಷಣದಲ್ಲೂ ಅವನ ಜೊತೆ ಇರುವ ಸೌಭಾಗ್ಯ ಕೇವಲ ನಿನಗೆ ಮಾತ್ರ ”

ನಂತರ ಗೋಪಿಕೇಯರು ಬಿದಿರನ್ನು ಕೇಳಿದರು, “ನಮಗೆ ನಿನ್ನ ರಹಸ್ಯ ಹೇಳಿ ಕೊಡು. ನಿನ್ನಲ್ಲಿ ಯಾವ ರಹಸ್ಯವಿದೆ? ಕೃಷನು ಯಾವಾಗಲು ನಿನ್ನನ್ನು ಜೊತೆಗಿಟ್ಟುಕೊಳ್ಳುತ್ತನಲ್ಲ?"

ಆಗ ಬಿದಿರು ಮಾರುತ್ತರಿಸಿತು "ರಹಸ್ಯವೆಂದರೆ ನಾನು ನನ್ನನ್ನು ಕೃಷ್ಣನಿಗೆ ಸಮರ್ಪಿಸಿಕೊಂಡು ಬಿಟ್ಟೆ, ಮತ್ತು ಅವನು ನನಗೆ ಸರಿಯಾದದ್ದನ್ನು ಮಾಡಿದನು, ಅವನ ಮನ್ವಂತರದ ಪ್ರಕ್ರಿಯೆಯಲ್ಲಿ ನಾನು ಬಹಳಷ್ಟು ನೋವನ್ನು ಅನುಭವಿಸಬೇಕಾಗಿತ್ತು. ಆದರೆ ನನಗೆ ಈಗ ಅವನ ಜೊತೆಯೇ ಇರುವ ಸೌಭಾಗ್ಯವನ್ನು ಕೊಟ್ಟಿದೆ” ಎಂದು ಹೇಳಿ ತನ್ನ ಜೀವನದ ಹುಟ್ಟಿನ ರಹಸ್ಯದ ಕಥೆಯನ್ನು ಹೇಳಲು ಶುರುಮಾಡಿತು.

ಪ್ರತಿದಿನ ಕೃಷ್ಣನು ಬೃಂದಾವನದಲ್ಲಿರುವ ಉದ್ಯಾನವನಕ್ಕೆ ಭೇಟಿ ನೀಡುತ್ತಿರುತ್ತಾನೆ ಮತ್ತು “ನಾನು ನಿನ್ನನ್ನು ಪ್ರೀತಿಸುತ್ತೇನೆ” ಎಂದು ಎಲ್ಲ ಸಸ್ಯಗಳಿಗೆ ಹೇಳುತ್ತಿರುತ್ತಾನೆ. ಸಸ್ಯಗಳು ಕೂಡ ಬಹಳ ಸಂತೋಷದಿಂದ “ಕೃಷ್ಣ ನಾವು ನಿನ್ನನ್ನೂ ಪ್ರೀತಿಸುತ್ತೇವೆ” ಎಂದು ಪ್ರತಿಕ್ರಿಯಿಸುತ್ತಿದ್ದವು. ಒಂದು ದಿನ ಕೃಷ್ಣ ಗಲಿಬಿಲಿಯಲ್ಲಿ ಬಹಳ ಬೇಗ ಉದ್ಯಾನವನಕ್ಕೆ ಬರುತ್ತಾನೆ. ಕೃಷನು ಬಿದಿರು ಸಸ್ಯದ ಬಳಿ ತೆರಳಿದಾಗ, ಬಿದಿರು ಸಸ್ಯ “ಕೃಷ್ಣ, ಏಕೆ ಗಲಿಬಿಲಿಯಲ್ಲಿರುವೆ, ಏನಾದರೂ ತಪ್ಪು ನಡೆಯಿತೇ ಅಥವಾ ನಡೆಯುವುದೇ?” ಎಂದು ಕೇಳಿತು. ಕೃಷ್ಣನು “ನಾನು ನಿನ್ನ ಬಳಿ ಏನೋ ಕೇಳಬೇಕೆಂದುಕೊಂಡಿರುವೇ, ಆದರೆ ಇದು ತುಂಬಾ ಕಷ್ಟ ಮತ್ತು ದುಃಖದ ವಿಷಯ ” ಎಂದು ಹೇಳಿದನು.

ಬಿದಿರು : “ಹೇಳಿ ಸಾಧ್ಯವಾದರೆ,ಎಷ್ಟೇ ಕಷ್ಟವಾದರೂ, ನಾನು ಅದನ್ನು ನಿಮಗೆ ಕೊಡುತ್ತೇನೆ” ಎಂದು ಹೇಳಿತು. ಆಗ ಕೃಷ್ಣನು “ನನಗೆ ನಿನ್ನ ಜೀವ ಬೇಕು. ನಾನು ನಿನ್ನನ್ನು ಕತ್ತರಿಸಬೇಕಾಗಿದೆ ” ಎಂದು ಹೇಳಿದನು.

ಸ್ವಲ್ಪ ಸಮಯ ಬಿದಿರು ಯೋಚನೆ ಮಾಡಿ ನಂತರ ಹೇಳಿತು “ನಿನಗೆ ಬೇರೆ ಯಾವುದೇ ಆಯ್ಕೆ ಇಲ್ಲವೇ ? ನಿಮಗೆ ಬೇರೆ ಯಾವುದೇ ಮಾರ್ಗಗಳಿಲ್ಲವೇ?” “ಇಲ್ಲ, ಬೇರೆ ಯಾವುದೇ ಮಾರ್ಗವಿಲ್ಲ” ಎಂದು ಕೃಷ್ಣ ಉತ್ತರಿಸಿದನು.

" ಹಾಗದರೆ ಸರಿ, ನೀವು ನನ್ನ ಜೀವವನ್ನು ತೆಗೆದುಕೊಳ್ಳಬಹುದು ” ಎಂದು ಹೇಳಿ ಬಿದಿರು ತನ್ನ ಜೀವವನ್ನು ಕೃಷ್ಣನಿಗೆ ಸಮರ್ಪಿಸಿಕೊಂಡಿತು. ಕೃಷ್ಣನು ಬಿದಿರನ್ನು ಕತ್ತರಿಸಿ ಅದರಲ್ಲಿ ರಂಧ್ರಗಳನ್ನು ಮಾಡಿದನು ಮತ್ತು ಪ್ರತಿ ಬಾರಿಯೂ ರಂಧ್ರಗಳನ್ನು ಕೆತ್ತುವಾಗಲು, ಬಿದಿರು ನೋವಿನಿಂದ ಕೂಗುತ್ತಿತ್ತು. ಕೃಷ್ಣನು ಅದರಲ್ಲಿ ಒಂದು ಸುಂದರವಾದ ಕೊಳಲನ್ನು ಮಾಡಿದನು ಮತ್ತು ಈ ಕೊಳಲು ಸಾರ್ವಕಾಲಿಕವಾಗಿ ಅವನ ಜೊತೆಯಲ್ಲೇ ಇತ್ತು.

ಇದು ದೇವರಿಗೆ ಸಂಪೂರ್ಣ ಶರಣಾಗತಿಯಾಗುವುದು, ದೇವರು ಬಯಸಿದಂತೆ ಒಪ್ಪಿ ನಡೆಯಿರಿ, ಅವನು ನಿಮ್ಮೊಂದಿಗೆ ಏನೇನು ಬಯಸುತ್ತಾನೋ ಅದರಂತೆ ನಡೆಯಿರಿ.

ಸಂಪೂರ್ಣವಾಗಿ ಅವನನ್ನು ನಂಬಿ ಮತ್ತು ಅವನ ಮೇಲೆ ನಂಬಿಕೆ ಇಡಿ ಮತ್ತು ಯಾವಾಗಲೂ ತಿಳಿಯಿರಿ .. ನೀವು ಅವನ ಕೈಯಲ್ಲಿದ್ದರೆ, ಏನು ತಪ್ಪು ನಡೆಯುವುದಿಲ್ಲವೆಂದು. ಇದೇ ಶರಣಾಗತಿ.

ಸಂಗ್ರಹ-ಮಮಶಿ

Want your organization to be the top-listed Non Profit Organization in Hubli?
Click here to claim your Sponsored Listing.

Videos (show all)

😂😂😂
ಅವ್ವ....
ಅಪ್ಪ...ಅಪ್ಪ... ಎಂದು ಕಿರುಚುತ್ತಾ ಪೊಲೀಸರಿಗೆ ಕೈಕೊಟ್ಟರು. ಕೊನೆಗೆ ತಂದೆಯನ್ನು ಕಂಡ ಕುಂಜಯ್ಯಪ್ಪನವರು ಸಮಾಧಾನದಿಂದ ಕೈ ಬೀಸಿದರು.
ಹುಡುಗ ತನ್ನ ವಯಸ್ಸಿಗೆ ಮೀರಿದಂತ ಮಾತ ಆಡಾತ್ತಾನ ಅಂದರೆ ವಿಚಾರ ಮಾಡರಿ ರೈತನ ಕಷ್ಟ ರೈತನಮಕ್ಕಳಿಗೆ ಮಾತ್ರ ಗೊತ್ತು ಆಗೊದ ಹೆಸರಿಗೆ ಅಷ್ಟೇ ದೇಶದಬೆ...
ಶುಭೋದಯ...⏬...ನಮ್ಮನ್ನು ಫಾಲೋ ಮಾಡಿ Notification on ಮಾಡ್ಕೋಳಿ...FOLLOW 💟 @pustaka.prapanchaFOLLOW 💟 @pustaka.prapanchaFOLLOW ...
ಮೈಸೂರು ದಸರಾ ಅಂಬಾರಿಯನ್ನ ಎಂಟು ಬಾರಿ ಹೊತ್ತಿದ್ದ ಅರ್ಜುನ, ಇಂದು ಕಾಡಾನೆಯೊಂದಿಗಿನ ಕಾಳಗದಲ್ಲಿ ಪ್ರಾಣ ಬಿಟ್ಟಿದೆ.ಪುಂಡಾನೆ ಸೆರೆ ಹಿಡಿದು ಸ್ಥಳ...
ಅಕ್ಷರ ಸಿಂಗಾರೋತ್ಸವದಲ್ಲಿ@nimmavima
Just for fun 😂😂
ಶುಭೋದಯ...⏬...ನಮ್ಮನ್ನು ಫಾಲೋ ಮಾಡಿ Notification on ಮಾಡ್ಕೋಳಿ...FOLLOW 💟 @pustaka.prapanchaFOLLOW 💟 @pustaka.prapanchaFOLLOW ...
ಎಷ್ಟು ಚಂದ ಮಾತಾಡಿದೆ ನೋಡಿ ಈ ಮುದ್ದು ಕಂದ....
ಬೆಂಗಳೂರು ಪರಿಸ್ಥಿತಿ ಇದು‌‌‌‌..
ಬಿಕನಾಸಿ ನಗು‌‌‌...Ask for the credit

Telephone

Website

Address

Hubli
Other Community Organizations in Hubli (show all)
Innerwheel Club of Hubli West Innerwheel Club of Hubli West
Hubli

Non Profit Organization. Charity.

Swavalambi Sakhi Ltd Swavalambi Sakhi Ltd
Deshpande Startups Next To Hubli Airport, Gokul Village Cross Gokul Road Hubli
Hubli, 580030

A Plaform for atmanirbhar women an Initiative supported by @deshpande foundation

Marwari Yuva Manch Hubli Marwari Yuva Manch Hubli
Hubli, 580020

Karnatak Chamber of Commerce & Industry , Hubballi Karnatak Chamber of Commerce & Industry , Hubballi
G. Mahadevappa Chamber Building, J. C. Nagar, HUBBALLI-580 020.
Hubli, 580020

Karnatak Chamber of Commerce, KCC&I, as popularly known, is affiliated to Federation of Indian Chambe

Hubli Ladies Circle 45 Hubli Ladies Circle 45
Hubli

Its a non-political & non sectarian organisation of young women between the ages 18-40. it offers opp

Shree Veerabhadreshwar Temple Devangpet,  Hubli Shree Veerabhadreshwar Temple Devangpet, Hubli
Naduvin Oni
Hubli, 580028

Shri veerbhadreshwar temple is sutiuted at devangpet naduvin oni devangpet gopankoppa Hubli

Hubli Moms group Hubli Moms group
Hubli

A wonderful platform for ladies to share ideas

B2W in Christ B2W in Christ
Hubli, 580020

Born to Win in Christ

Robot Makers Hub Robot Makers Hub
Hubli, 580031

Where real engineers meet

Portuguese Goan Institute Portuguese Goan Institute
Keshwapur
Hubli, 580023

Portuguese Goan Institute, established in 1901, is a fraternity of Goans. The premises located in th