Majethia Foundation Hospice
Free Hospice Palliative Care Center
ಮಾರಣಾಂತಿಕ ರೋಗದ ಕಾರಣದಿಂದ ಬಳಲುತ್ತಿರುವ ರೋಗಿಗಳ ಉಚಿತವಾದ ಆರೈಕೆ ಕೇಂದ್ರ
ನಾಲ್ಕನೇ ಹಂತದಲ್ಲಿರುವ ಕ್ಯಾನ್ಸರ್ ರೋಗಿಗಳ ಉಚಿತವಾದ ಆರೈಕೆ ಕೇಂದ್ರ.
ಹುಬ್ಬಳ್ಳಿಯ ನವನಗರದಲ್ಲಿರುವ ಕರ್ನಾಟಕ ಕ್ಯಾನ್ಸರ್ ಥೆರಪಿ ಹಾಗೂ ಸಂಶೋಧನಾ ಸಂಸ್ಥೆ ಆವರಣದಲ್ಲಿ "ರಮಿಳಾ ಪ್ರಶಾಂತಿ ಮಂದಿರ" ಹಾಸ್ಪೈಸ್ ಸೆಂಟರ್ ಸ್ಥಾಪಿಸಲಾಗಿದೆ. ನಾಲ್ಕನೇ ಹಂತದಲ್ಲಿರುವ ಕ್ಯಾನ್ಸರ್ ರೋಗಿಗಳು ಮನೆಗೆ ಹೋಗಲಾಗುವುದಿಲ್ಲ. ಆಸ್ಪತ್ರೆಯಲ್ಲೂ ಚಿಕಿತ್ಸೆ ಪಡೆಯದ ಸ್ಥಿತಿ ತಲುಪಿರುತ್ತಾರೆ ಇಂಥವರನ್ನು ಸಲಹುವುದೆ ಈ ಹಾಸ್ಪೈಸ್ ಸೆಂಟರ್.
“ಬದುಕಿನ ಕೊನೆಯ ಕಾಲಘಟ್ಟದಲ್ಲಿರುವ ಕ್ಯಾನ್ಸರ್ ರೋಗಿಗಳ
ಭೋಲೋ ಭಾರತ ಮಾತಾ ಕೀ ಜೈ!
भोलो भारत माता की जय!
Bolo Bharti Mata ki Jai
ಮಜೇಥಿಯಾ ಫೌಂಡೇಶನ್ ವತಿಯಿಂದ ಉತ್ತರ ಕರ್ನಾಟಕದ ಉಚಿತವಾದ ಮೊಟ್ಟ ಮೊದಲ ಹಾಸ್ಪೈಸ್ (ಆರೈಕೆ) ಕೇಂದ್ರವನ್ನು
KCTRI ಅವರ ಸಹಯೋಗದೊಂದಿಗೆ ಹುಬ್ಬಳ್ಳಿಯ ನವನಗರದಲ್ಲಿ ಆರಂಭಿಸಲಾಗಿದೆ.
ಇಲ್ಲಿ ಮಾರಣಾಂತಿಕ ಖಾಯಿಲೆಯ ಕಾರಣದಿಂದ ಸಾವಿನಂಚಿನಲ್ಲಿರುವವರನ್ನು ಆರೈಕೆ ಮಾಡಲಾಗುತ್ತದೆ. ಸುಸಜ್ಜಿತವಾದ ಕಟ್ಟಡದೊಂದಿಗೆ, ನುರಿತ ಸಿಬ್ಬಂದಿ ವರ್ಗ ಸೇವೆಗಾಗಿ ಸದಾ ಸಿದ್ದರಾಗಿದ್ದಾರೆ.
ಇನ್ನೂ ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ :
Cancer Hospital Campus (KCTRI),
Navanagar, Hubballi
Ph: 0836-2001316
M: 9341798093, 9886223233
ಸೋಷಿಯಲ್ ಮಿಡಿಯಾ ಮೂಲಕವೂ ನಮ್ಮನ್ನು ಸಂಪರ್ಕಿಸಬಹುದು
Majethia Foundation Hospice Majethia Foundation Hubli
ಕನ್ನಡ ಎನೆ ಕುಣಿದಾಡುವುದೆನ್ನೆದೆ
ಕನ್ನಡ ಎನೆ ಕಿವಿ ನಿಮಿರುವುದು ||
ಕನ್ನಡ ಕನ್ನಡ ಹ! ಸವಿಗನ್ನಡ
ಮಜೇಥಿಯಾ ಫೌಂಡೇಶನ್ ವತಿಯಿಂದ ನಡೆಸಲಾದ ಉಚಿತವಾದ ಕೃತಕ ಕೈ-ಕಾಲು ಜೋಡನಾ ಶಿಬಿರ...
ಸ್ವಾತಂತ್ರ್ಯ ಸುಮ್ಮ ಸುಮ್ಮನೆ ಯಾರೋ ಬಂದು ತಾಂಬೂಲದಲ್ಲಿಟ್ಟು ಕೊಟ್ಟಿದ್ದಲ್ಲ. "ಸ್ವಾತಂತ್ರ್ಯ" ಲಕ್ಷಾಂತರ ಕ್ರಾಂತಿಕಾರಿಗಳ ತ್ಯಾಗ ಹೋರಾಟದ ಫಲ.
ತಾಯಿ ಭಾರತಿಗಾಗಿ ಸರ್ವಸ್ವವನ್ನು ತ್ಯಾಗ ಮಾಡಿದ ಆ ಎಲ್ಲ ರಾಷ್ಟ್ರ ನಾಯಕ-ನಾಯಕಿಯರನ್ನು ನೆನಪಿಸಿಕೊಂಡು ಶ್ರದ್ಧೆಯಿಂದ ಗೌರವಿಸೋಣ. ವಂದೇ ಮಾತರಂ...
"ಸ್ವಾತಂತ್ರ್ಯೋತ್ಸವದ ಶುಭಾಶಯಗಳು"
🇮🇳
🇮🇳🇮🇳❤️
ನವನಗರದ ಮಜೇಥಿಯಾ ಫೌಂಡೇಶನ್ ವತಿಯಿಂದ ಆರಂಬಿಸಲಾಗಿರುವ ಉತ್ತರ ಕರ್ನಾಟಕದ ಮೊಟ್ಟ ಹಾಸ್ಪೈಸ್ (ಆರೈಕೆ) ಕೇಂದ್ರ, ರಮೀಳಾ ಪ್ರಶಾಂತಿ ಮಂದಿರದಲ್ಲಿ ನಡೆದ ಯೋಗ ಮತ್ತು ಮುದ್ರಾ ಚಿಕಿತ್ಸೆಯ ಯಶಸ್ವಿ ಆರೋಗ್ಯ ಶಿಬಿರ ಯಶಸ್ವಿಯಾಗಿ ನಡೆಯಿತು. ಗೌರವಾನ್ವಿತ ಹಿರಿಯ ಪತ್ರಕರ್ತೆ ಶ್ರೀಮತಿ ಕೃಷ್ಣ ಶಿರೂರ್ ಅವರು ಈ ಕಾರ್ಯಕ್ರಮವನ್ನು ನಡೆಸಿಕೊಟ್ಟು, ಉತ್ತಮ ಆರೋಗ್ಯವನ್ನು ಕಾಪಾಡಿಕೊಳ್ಳಲು ಯೋಗ, ಮುದ್ರೆ ಮತ್ತು ಪ್ರಾಚೀನ ಅಭ್ಯಾಸಗಳ ಪ್ರಯೋಜನಗಳ ಬಗ್ಗೆ ತಮ್ಮ ಆಳವಾದ ಜ್ಞಾನ ಮತ್ತು ಪರಿಣತಿಯನ್ನು ಹಂಚಿಕೊಂಡರು.
ಈ ಕಾರ್ಯಕ್ರಮದಲ್ಲಿ ಪಾಟೀದಾರ್ ಸಮುದಾಯ ಮತ್ತು ವಿವಿಧ ಪ್ರದೇಶಗಳಿಂದ ನೂರಕ್ಕೂ ಹೆಚ್ಚು ಜನರು ಭಾಗವಹಿಸಿದ್ದರು. ಈ ಸಾಂಪ್ರದಾಯಿಕ ಮುದ್ರಾ ಅಭ್ಯಾಸಗಳ ಬಗ್ಗೆ ಕಲಿಯಲು ಭಾಗವಹಿಸುವವರು ತೋರಿಸಿದ ಅಪಾರ ಉತ್ಸಾಹ ಮತ್ತು ಆಸಕ್ತಿ ಹೃದಯಸ್ಪರ್ಶಿಯಾಗಿತ್ತು.
ಶಿಬಿರವು ದೈಹಿಕ, ಮಾನಸಿಕ ಮತ್ತು ಆಧ್ಯಾತ್ಮಿಕ ಯೋಗಕ್ಷೇಮವನ್ನು ಉತ್ತೇಜಿಸುವಲ್ಲಿ ಯೋಗ ಮತ್ತು ಮುದ್ರಾ ಚಿಕಿತ್ಸೆಯ ಮಹತ್ವವನ್ನು ಕೇಂದ್ರೀಕರಿಸಿತು. ಶ್ರೀಮತಿ ಕೃಷ್ಣ ಶಿರೂರ್ ಅವರು ಈ ಅಭ್ಯಾಸಗಳ ಸಮಗ್ರ ವಿಧಾನವನ್ನು ಒತ್ತಿಹೇಳಿದರು, ಮನಸ್ಸು, ದೇಹ ಮತ್ತು ಆತ್ಮವನ್ನು ಸಮನ್ವಯಗೊಳಿಸುವ ಸಾಮರ್ಥ್ಯವನ್ನು ಎತ್ತಿ ತೋರಿಸಿದರು. ಭಾಗವಹಿಸಿದವರಿಗೆ ವಿವಿಧ ಯೋಗ ಭಂಗಿಗಳು, ಉಸಿರಾಟದ ವ್ಯಾಯಾಮಗಳು ಮತ್ತು ಮುದ್ರೆಗಳನ್ನು ಆಯಾ ಆರೋಗ್ಯ ಪ್ರಯೋಜನೆಗಳೊಂದಿಗೆ ಪರಿಚಯಿಸಲಾಯಿತು.
ತಮ್ಮ ಉಪಸ್ಥಿತಿಯೊಂದಿಗೆ ಈ ಸಂದರ್ಭವನ್ನು ಅಲಂಕರಿಸಿದ ಗೌರವಾನ್ವಿತ ಅತಿಥಿಗಳು ಮತ್ತು ಗಣ್ಯರಿಗೆ ನಮ್ಮ ಕೃತಜ್ಞತೆಯನ್ನು ವ್ಯಕ್ತಪಡಿಸಲು ನಾವು ಬಯಸುತ್ತೇವೆ. ಶ್ರೀ ಅಮೃತಲಾಲ್ ಪಟೇಲ್, ದಯಾ ಜೀ, ಡಾ.ಜ್ಯೋತಿ ಕೆ., ಸಿಇಒ ಶ್ರೀ ಅಜಿತ್ ಕುಲಕರ್ಣಿ, ಡಾ.ನಾಗರಾಜ್ ಸಾನು, ಸುನಿಲ್ ಕುಮಾರ್ ಕೆ. ಶ್ರೀ ಸುಶಾಂತ್ ರಾಜೇ ಎಂ. ಮತ್ತು ಸಮರ್ಪಿತ ಹಾಸ್ಪೈಸ್ ಸಿಬ್ಬಂದಿ ಭಾಗವಹಿಸಿದ್ದರು.
ನಿಮ್ಮ ಪ್ರೀತಿಯ ಸಹಕಾರಕ್ಕೆ ನಮ್ಮ ವಂದನೆಗಳು.
ಈ ಯೋಜನೆಯ ಮಾಹಿತಿಯನ್ನು ತಪ್ಪದೇ ನಿಮ್ಮವರೊಂದಿಗೆ ಹಂಚಿಕೊಳ್ಳಿ. ನಮ್ಮ ಒಂದು ಶೇರ್ ಒಂದು ಕುಟುಂಬದಲ್ಲಿ ನಗುವನ್ನು ತರಬಲ್ಲದು
ಉತ್ತರ ಕರ್ನಾಟಕದ ಮೊಟ್ಟಮೊದಲ. ಸುಸಜ್ಜಿತ “ಹಾಸ್ಪೈಸ್ (ಆರೈಕೆ) ಕೇಂದ್ರ” ಕೆಸಿಟಿಆರ್ಐ ಸಹಯೋಗದೊಂದಿಗೆ ಆರಂಭಿಸಲಾಗಿದೆ.
ಹೆಚ್ಚಿನ ಮಾಹಿತಿಗಾಗಿ :
ಮಜೇಥಿಯಾ ಫೌಂಡೇಶನ್, ರಮಿಳಾ ಪ್ರಶಾಂತಿ ಮಂದಿರ,ಕ್ಯಾನ್ಸರ್ ಆಸ್ಪತ್ರೆಯ ಆವರಣ, ನವನಗರದ , ಹುಬ್ಬಳ್ಳಿ
ಸಂಪರ್ಕ : Landline : 0836-2001316, Mobile : +91 87923 66374
#ವೈದ್ಯೋ_ನಾರಾಯಣೋ_ಹರಿಃ
#ವೈದ್ಯರ_ದಿನಾಚರಣೆ
ಮಜೇಥಿಯಾ ಫೌಂಡೇಶನ್ ಕಷ್ಟದಲ್ಲಿರುವವರಿಗೆ ಸಹಾಯಹಸ್ತ ಚಾಚುವುದಲ್ಲದೆ. ಕಷ್ಟ ಕಾಲದಲ್ಲಿ ನೇರವಾದಂತಹ ಮಹನಿಯರನ್ನು ನೆನೆದು ಗೌರವಿಸುವ ಕಾರ್ಯವನ್ನು ಮಾಡಿಕೊಂಡು ಬಂದಿದೆ. ವೈದ್ಯರ ದಿನಾಚರಣೆಯನ್ನು ಉತ್ತರ ಕರ್ನಾಟಕದ ಮೊಟ್ಟ ಮೊದಲ ಹಾಸ್ಪೈಸ್ (ಆರೈಕೆ) ಕೇಂದ್ರವಾದ “ರಮಿಲಾ ಪ್ರಶಾಂತಿ ಮಂದಿರ” ನವನಗರದಲ್ಲಿ ಆಚರಿಸಲಾಯಿತು.
ಮಜೇಥಿಯಾ ಫೌಂಡೇಶನ್ ಆಯೋಜಿಸಿದ ಈ ಕಾರ್ಯಕ್ರಮ, ಆರೋಗ್ಯ ಸೇವೆಗಳನ್ನು ಒದಗಿಸುವಲ್ಲಿ ಮತ್ತು ಜೀವಗಳನ್ನು ಉಳಿಸುವಲ್ಲಿ ವೈದ್ಯರ ಅಮೂಲ್ಯ ಕೊಡುಗೆಯನ್ನು, ದಣಿವರಿಯದ ಪ್ರಯತ್ನಗಳನ್ನು ಗುರುತಿಸಿ ಗೌರವಿಸುವ ಕಾರ್ಯಕ್ರಮ ಇದಾಗಿತ್ತು.
ಡಾ. ವಿ.ಜಿ. ನಾಡಗೌಡ, ಡಾ. ಸುಭಾಷ್ ಬಬ್ರುವಾಡ್ (ಐಎಂಎ ಅಧ್ಯಕ್ಷರು), ಡಾ. ಅರುಣ್ ಕುಮಾರ್ (ವೈದ್ಯಕೀಯ ಅಧೀಕ್ಷಕರು, ಕಿಮ್ಸ್), ಮತ್ತು ಶ್ರೀ ಜಿತೇಂದ್ರ ಮಜೇಥಿಯಾ (ಅಧ್ಯಕ್ಷರು, ಮಜೇಥಿಯಾ ಫೌಂಡೇಶನ್) ಸೇರಿದಂತೆ ಹಲವಾರು ಗಣ್ಯರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದು ಕಾರ್ಯಕ್ರಮಕ್ಕೆ ಶೋಭೆಯನ್ನು ತಂದುಕೊಟ್ಟರು.
ಡಾ.ನಾಗರಾಜ ಸಾನು ಅವರು ಆತ್ಮೀಯ ಸ್ವಾಗತಾರ್ಹ ಭಾಷಣ ಮಾಡಿ, ವೈದ್ಯರಿಗೆ ಕೃತಜ್ಞತೆಯನ್ನು ವ್ಯಕ್ತಪಡಿಸಿ ಮತ್ತು ಸಮಾಜದಲ್ಲಿ ಅವರ ಪ್ರಮುಖ ಪಾತ್ರವನ್ನು ಎತ್ತಿ ತೋರಿಸಿದರು. ಇದೇ ಸಂದರ್ಭದಲ್ಲಿ ಅವಳಿ ನಗರದಲ್ಲಿ ವೈದ್ಯಕೀಯ ಸೇವಾ ಕ್ಷೇತ್ರದಲ್ಲಿ ನಿರತರಾದ ಮೂವತ್ತು ಜನ ಗೌರವಾನ್ವಿತ ವೈದ್ಯರಿಗೆ ಆದರದಿಂದ ಗೌರವಿಸಿ ಸನ್ಮಾನಿಸಲಾಯಿತು.
ಆತ್ಮೀಯ ಗೌರವ ಸನ್ಮಾನವನ್ನು ಸ್ವೀಕರಿಸಿದ ವೈದ್ಯ ಬಳಗಕ್ಕೆ ನಮ್ಮ ಹೃದಯಾಂತರಾಳದ ಧನ್ಯವಾದಗಳು….
ಡಾ.ಆನಂದ ಪಾಂಡುರಂಗಿ | ಡಾ.ವಿ.ಜಿ. ಕುಲಕರ್ಣಿ | ಡಾ.ಎ.ಎಸ್. ಗುರುಪ್ರಸಾದ್ | ಡಾ.ಎ.ಎಸ್. ಮಂತ್ಗಾಣಿಕರ್
ಡಾ.ಎಸ್.ಜಿ.ಬಬ್ರುವಾಡ | ಡಾ. ಅಬ್ದುಲ್ ಕರೀಂ | ಡಾ.ಪಿ.ಎನ್. ಬಿರಾದಾರ್ | ಡಾ.ಸವಿತಾ ಕನಕಪುರ
ಡಾ.ಸುನೀತಾ ಟಂಕಸಾಲಿ | ಡಾ.ಪಿ.ಆರ್.ಹಿರೇಮಠ | ಡಾ. ವಿಜಯ ಮಹಾಂತೇಶ ಪೂಜಾರ್ | ಡಾ.ಎಂ.ಸಿ.ಸಿಂಧೂರ
ಡಾ. ವಿಶ್ವಾಸ್ ಪೈ | ಡಾ. ಅಜರ್ ಕಿತ್ತೂರು | ಡಾ.ಎಸ್.ಎಂ. ಹೊನಕೇರಿ | ಡಾ.ನಾಡಗೌಡ | ಡಾ.ರಾಚಯ್ಯ ಹಿರೇಮಠ
ಡಾ.ವಿ.ಡಿ. ಪಟೇಲ್ | ಡಾ. ಇಟಗಿ | ಡಾ.ಚಂದ್ರಕಾಂತ ದೇಸಾಯಿ | ಡಾ.ಈಶ್ವರ್ ಪಟೇಲ್ | ಡಾ. ವೀರಂದ ಗಂಡ
ಡಾ. ಓಜಾ | ಡಾ.ಮಂಜುನಾಥ್ | ಡಾ. ಭಾಸ್ಕರ್ | ಡಾ. ಹಿತ್ತಲಮನಿ | ಡಾ. ಅಣ್ಣಿಗೇರಿ | ಡಾ.ಬಿ.ಸಿ. ಲಕ್ಕುಂಡಿ
ಡಾ.ವಿಜಯ ಲಕ್ಷ್ಮೀ ಬಿರಾದಾರ್ | ಡಾ.ಜೆ.ಡಿ.ಪಟೇಲ್
ಕಾರ್ಯಕ್ರಮವನ್ನು ಉದ್ದೇಶಿಸಿ ಗಣ್ಯರಾದ, ಡಾ.ವಿ.ಜಿ. ನಾಡಗೌಡ, ಡಾ. ಅಬ್ದುಲ್ ಕರೀಂ, ಡಾ. ಬಬ್ರುವಾಡ್, ಡಾ. ಅರುಣ್ ಕುಮಾರ್, ಡಾ. ವಿಶ್ವಾಸ್ ಪೈ, ಮತ್ತು ಮಜೇಥಿಯಾ ಫೌಂಡೇಶನಿನ ಅಧ್ಯಕ್ಷರಾದ ಶ್ರೀಮತಿ ನಂದಿನಿ ಕ. ಮೆಜೆಥಿಯಾ ಅವರು ವೈದ್ಯಕೀಯ ವೃತ್ತಿಯ ಪ್ರಾಮುಖ್ಯತೆಯನ್ನು ಸಾರಿ ಹೇಳಿದರು ಮತ್ತು ಮಾನವೀಯತೆಯ ಸೇವೆಯಲ್ಲಿ ವೈದ್ಯರ ಸಮರ್ಪಣೆ, ನಿಸ್ವಾರ್ಥತೆಯನ್ನು ಗುರುತಿಸಿ ಮನಸಾರೆ ನೆನೆದರು.
ಸಿಇಒ ಅಜಿತ್ ಕುಲಕರ್ಣಿ ಅವರು ಕೃತಜ್ಞತೆ ಸಲ್ಲಿಸಿ ಮಜೇಥಿಯಾ ಫೌಂಡೇಶನ್ ಪರವಾಗಿ ಧನ್ಯವಾದ ಅರ್ಪಿಸಿ. ವೈದ್ಯರ ಕಠಿಣ ಪರಿಶ್ರಮ, ಬದ್ಧತೆಯನ್ನು ಗುರುತಿಸಿದರು ಮತ್ತು ಕಾರ್ಯಕ್ರಮವನ್ನು ಆಯೋಜಿಸುವಲ್ಲಿ ಬೆಂಬಲ ನೀಡಿದ ಧರ್ಮಶಾಲೆಯ ಸಂಪೂರ್ಣ ಸಿಬ್ಬಂದಿಗೆ ತಮ್ಮ ಮೆಚ್ಚುಗೆಯನ್ನು ವ್ಯಕ್ತಪಡಿಸಿದರು.
ಮಜೇಥಿಯಾ ಫೌಂಡೇಶನ್ನ ಟ್ರಸ್ಟಿಗಳಾದ ಶ್ರೀ ಪ್ರಹ್ಲಾದ್ ರಾವ್, ಡಾ. ವಿ.ಬಿ. ನಿತಾಲಿ, ಶ್ರೀ ಅಮೃತಲಾಲ್ ಪಟೇಲ್, ಡಾ.ಜ್ಯೋತಿ ಕಾಚಾಪುರ, ಅಧ್ಯಕ್ಷೆ ನಂದಿನಿ ಕೆ.ಮಜೇಥಿಯಾ, ಕಾರ್ಯದರ್ಶಿ ಅಮರೇಶ ಹಿಪ್ಪರಗಿ, ಸಿಇಒ ಅಜಿತ ಕುಲಕರ್ಣಿ, ವೈದ್ಯಕೀಯ ಅಧೀಕ್ಷಕ ಡಾ.ನಾಗರಾಜ ಸಾನು. ಸುನೀಲಕುಮಾರ್ ಮತ್ತು ಸುಶಾಂತರಾಜ ಹಾಗೂ ಹಾಸ್ಪೈಸ್ ಕೇಂದ್ರದ ಸಿಬ್ಬಂದಿಗಳು ಉಪಸ್ಥಿತರಿದ್ದರು
#ಜಾಗತಿಕ_ಶಸ್ತ್ರಚಿಕಿತ್ಸೆ_ದಿನಾಚರಣೆ
ಮಜೇಥಿಯಾ ಫೌಂಡೇಶನ್
ಹಾಸ್ಪೈಸ್ ರಮಿಲಾ ಪ್ರಶಾಂತಿ ಮಂದಿರ ಕೆಸಿಟಿಆರ್ಐ ಕ್ಯಾಂಪಸ್ ನವನಗರ ಜಾಗತಿಕ ಶಸ್ತ್ರಚಿಕಿತ್ಸೆ ದಿನಾಚರಣೆಯನ್ನು ಅತ್ಯಂತ ಉತ್ಸಾಹ ಮತ್ತು ಗೌರವದಿಂದ ಆಚರಿಸಿತು. ಗೌರವಾನ್ವಿತ ಹಿರಿಯ ಶಸ್ತ್ರಚಿಕಿತ್ಸಕರ ಕೊಡುಗೆಗಳನ್ನು ಗೌರವಿಸಲು ಮತ್ತು ಗುರುತಿಸಲು ಮತ್ತು ವೈದ್ಯಕೀಯ ಕ್ಷೇತ್ರಕ್ಕೆ ಅವರ ಅಸಾಧಾರಣ ಸೇವೆಯನ್ನು ಶ್ಲಾಘಿಸಲು ಈ ಸಮಾರಂಭವನ್ನು ಏರ್ಪಡಿಸ ಲಾಗಿತ್ತು
ಸಮಾರಂಭವು ಹಲವಾರು ಪ್ರಖ್ಯಾತ ಹಿರಿಯ ಶಸ್ತ್ರಚಿಕಿತ್ಸಕರ ಸನ್ಮಾನಕ್ಕೆ ಸಾಕ್ಷಿಯಾಯಿತು, ಅವರ ಗಮನಾರ್ಹ ಸಾಧನೆಗಳು ಮತ್ತು ಸಮರ್ಪಣೆ ಆರೋಗ್ಯ ಕ್ಷೇತ್ರದ ಮೇಲೆ ಗಮನಾರ್ಹ ಪರಿಣಾಮ ಬೀರಿದೆ. ಗೌರವಾನ್ವಿತ ಅತಿಥಿಗಳಲ್ಲಿ ಡಾ.ರವಿ ಕಲಘಟಗಿ, ಖ್ಯಾತ ಹಿರಿಯ ಶಸ್ತ್ರಚಿಕಿತ್ಸಕ ಡಾಕಿಮ್ಸ್ನ ಪ್ರಾಂಶುಪಾಲ ಈಶ್ವರ್ ಹೊಸಮನಿ, ಎಸ್ಡಿಎಂನ ಮುಖ್ಯ ಶಸ್ತ್ರಚಿಕಿತ್ಸಕ ಡಾ. ಮಲ್ಲಿಕಾರ್ಜುನ್ ದೇಸಾಯಿ ಮತ್ತು ಕಿಮ್ಸ್ನ ಶಸ್ತ್ರಚಿಕಿತ್ಸಾ ವಿಭಾಗದ ಮುಖ್ಯಸ್ಥ ಡಾ.ಗುರುಶಾಂತಪ್ಪ. ಕಾರ್ಯಕ್ರಮದಲ್ಲಿ ಗೌರವಾನ್ವಿತ ವೈದ್ಯಕೀಯ ವೃತ್ತಿಪರರು, ಡಾ.ಶ್ರೀನಿವಾಸ್ ಪೈ, ಡಾ.ವಿ.ಇ. ಗದಗಿನ್, ಡಾ.ಆರ್.ಬಿ.ಮಗ್ದೂರು, ಡಾಶಶಿಧರ್, ಕಿಮ್ಸ್ನ ಆಂಕೊಲಾಜಿಸ್ಟ್ ಮತ್ತು ಎಚ್ಒಡಿ, ಡಾ. ವಿವೇಕ್ ಯಳಮಲಿ ಮತ್ತು ಡಾ. ಅಶೋಕ್ ಕಮಲದಾನಿ, ಮೂಳೆ ಶಸ್ತ್ರಚಿಕಿತ್ಸಕ. ಸ್ನಾತಕೋತ್ತರ ವೈದ್ಯರೂ ಉಪಸ್ಥಿತರಿದ್ದರು, ತಮ್ಮ ಜ್ಞಾನ ಮತ್ತು ಉತ್ಸಾಹದಿಂದ ಸಮಾರಂಭ ವನ್ನು ಮತ್ತಷ್ಟು ಶ್ರೀಮಂತಗೊಳಿಸಿದರು.
ಸಮಾರಂಭವು ಎಲ್ಲಾ ಗಣ್ಯರಿಂದ ಪ್ರಬುದ್ಧ ಭಾಷಣಗಳನ್ನು ಒಳಗೊಂಡಿತ್ತು, ಅವರು ತಮ್ಮ ಅಮೂಲ್ಯವಾದ ಪರಿಣತಿ ಮತ್ತು ಅನುಭವಗಳನ್ನು ಪ್ರೇಕ್ಷಕರೊಂದಿಗೆ ಹಂಚಿಕೊಂಡರು. ಅವರ ಬುದ್ಧಿವಂತಿಕೆಯ ಮಾತುಗಳು ಮತ್ತು ಒಳನೋಟಗಳು ಭವಿಷ್ಯದ ಪೀಳಿಗೆಯ ವೈದ್ಯಕೀಯ ವೃತ್ತಿಪರರನ್ನು ಶ್ರೇಷ್ಠತೆಗಾಗಿ ಶ್ರಮಿಸಲು ಮತ್ತು ಶಸ್ತ್ರಚಿಕಿತ್ಸಾ ವಿಜ್ಞಾನದ ಪ್ರಗತಿಗೆ ಕೊಡುಗೆ ನೀಡುವಂತೆ ಪ್ರೇರೇಪಿಸಿತು.
ಸಮಾರಂಭದಲ್ಲಿ ಮಜೇಥಿಯಾ ಫೌಂಡೇಶನ್ನ ಅಧ್ಯಕ್ಷರಾದ ಶ್ರೀ ಜಿತೇಂದ್ರ ಮಜೇಥಿಯಾ, ಟ್ರಸ್ಟಿ ಪ್ರಹ್ಲಾದ್ ರಾವ್, ಅಮರೇಶ್ ಹಿಪ್ಪರಗಿ,ಅಮೃತಲಾಲ್ ಪಟೇಲ್, ಡಾ.ವಿ.ಬಿ. ನಿತಾಲಿ, ಡಾ.ಕಾಚಾಪುರ, ಸಿಇಒ ಅಜಿತ್ ಕುಲಕರ್ಣಿ, ವೈದ್ಯಕೀಯ ಅಧೀಕ್ಷಕ ಡಾ.ನಾಗರಾಜ ಸಾನು.
ಹಾಸ್ಪೈಸ ತಂಡ ,ಸಂಚಾಲಕರಾಗಿ ಶ್ರೀ.ಸುನೀಲ್ ಕುಕನೂರು.
ಶ್ರೀ.ಸುಶಾಂತ ರಾಜೆ ಕಾರ್ಯ ನಿರ್ವಹಿಸಿದರು.
"ಧ್ಯಾನ ಚಿತ್ತ" ಧ್ಯಾನ ಶಿಬಿರ...
ಮಜೇಥಿಯಾ ಫೌಂಡೇಶನ್ ಆರಂಭಿಸಿರುವ ಉತ್ತರ ಕರ್ನಾಟಕದ ಮೊಟ್ಟ ಮೊದಲ ಉಚಿತವಾದ ಹಾಸ್ಪೈಸ್ (ಆರೈಕೆ) ಕೇಂದ್ರದಲ್ಲಿ ಫೌಂಡೇಶನ್ ವತಿಯಿಂದ "ಧ್ಯಾನ ಚಿತ್ತ" ಧ್ಯಾನ ಶಿಬಿರವನ್ನು ಆಯೋಜಿಸಲಾಗಿತ್ತು.
ಎರಡು ಗಂಟೆಗಳ ಕಾಲ ನಡೆದ ಕಾರ್ಯಕ್ರಮದಲ್ಲಿ ಧ್ಯಾನದ ಅರ್ಥ, ಧ್ಯಾನದ ಮಹತ್ವ ಹಾಗೂ ಧ್ಯಾನವನ್ನು ಜೀವನದ ಒಂದು ಭಾಗವಾಗಿಸುವುದು ಹೇಗೆ ಮತ್ತು ಪ್ರಯೋಜನಗಳನ್ನು ಕಾರ್ಯಕ್ರಮದ ಮುಖ್ಯ ಅತಿಥಿಗಳಾದ ಶ್ರೀಮತಿ ವಿಶಾಲಾಕ್ಷಿ ಆಕಳವಾಡಿಯವರು ಸವಿಸ್ತಾರವಾಗಿ ತಿಳಿಸಿಕೊಟ್ಟರು.
ಶ್ರೀಮತಿ ವಿಶಾಲಾಕ್ಷಿಯವರು ಧ್ಯಾನದ ಆಧ್ಯಾತ್ಮಿಕ ಹಾಗೂ ವೈಜ್ಞಾನಿಕ ದೃಷ್ಟಿಕೋನದಿಂದ ತಿಳಿಸಿ ಹೇಳಿದರು. ಜೊತೆಗೆ ಜನರು ತಮ್ಮ ದೈನಂದಿನ ಜೀವನವನ್ನು ಶಾಂತಿಯುತವಾಗಿ ನಡೆಸಲು ಧ್ಯಾನ ಸಹಾಯಕ ಎಂಬುದನ್ನು ಮನವರಿಕೆ ಮಾಡಿಕೊಟ್ಟಿದ್ದಲ್ಲದೇ. ಎಲ್ಲರಿಗೂ ಸರಿಯಾದ ಧ್ಯಾನ ಕ್ರಮಗಳನ್ನು ತಿಳಿಸಿಕೊಟ್ಟು, ಪ್ರಾಯೋಗಿಕವಾಗಿಯೂ ಎಲ್ಲರಿಂದಲೂ ಧ್ಯಾನ ಮಾಡಿಸಿದರು. ಧ್ಯಾನದ ನಂತರದ ಸ್ಥಿತಿಯ ಬಗ್ಗೆ ಎಲ್ಲರಿಗೂ ಸಮಾಧಾನವೇನಿಸಿದ್ದು ತಿಳಿದು ಬಾಗವಹಿಸಿದವರು ತಮ್ಮ ಅನುಭವಗಳನ್ನು ಹಂಚಿಕೊಂಡಿದ್ದಲ್ಲದೇ. ತಮ್ಮಲ್ಲಿರುವ ಅನುಮಾನ, ಪ್ರಶ್ನೇಗಳನ್ನು ಕೇಳಿ ಪರಿಹರಿಸಿಕೊಂಡರು.
ನಂತರ ಶ್ರೀಮತಿ ವಿಶಾಲಾಕ್ಷಿಯವರು ಆರೈಕೆ ಕೇಂದ್ರದಲ್ಲಿ ದಾಖಲಾಗಿರುವವರಿಗೆ ಧ್ಯಾನದ ಸರಿಯಾದ ಕ್ರಮಗಳನ್ನು ಪ್ರತ್ಯೇಕವಾಗಿ ತಿಳಿಸಿಕೊಟ್ಟರು.
ಈ ಶಿಬಿರದಲ್ಲಿ ಒಟ್ಟಾರೆ 75+ ಜನರು ಬಾಗವಹಿಸಿದ್ದರು. ಜೊತೆಗೆ ಫೌಂಡೇಶನ್ ಆಡಳಿತ ಮಡಳಿ ಸದಸ್ಯರು, ಆರೈಕೆ ಕೇಂದ್ರದಲ್ಲಿ ದಾಖಲಾಗಿರುವವರು, ಸಿಬ್ಬಂದಿ ವರ್ಗದವರು ಈ ಶಿಬಿರದಲ್ಲಿ ಉತ್ಸಾಹದಿಂದ ಬಾಗವಹಿಸಿದ್ದರು.
ಧ್ಯಾನ ನೆಮ್ಮದಿಯ ಜೀವನಕ್ಕೆ ಅವಶ್ಯಕ...
ಪರಿಸರ ದಿನಾಚರಣೆಯ ಪ್ರಯುಕ್ತ ಮಜೇಥಿಯಾ ಫೌಂಡೇಶನಿನ ಹಾಸ್ಪೈಸ್ (ಆರೈಕೆ) ಕೇಂದ್ರದಲ್ಲಿ ದಾಖಲಾಗಿರುವರೊಂದಿಗೆ ಜೊತೆಯಾಗಿ ವೈದ್ಯರು, ಶುಶ್ರೂಕಿಯರು ಹಾಗೂ ಸಿಬ್ಬಂದಿ ವರ್ಗದವರು ಸೇರಿ ಗಿಡ ನೆಟ್ಟು ಸಂಭ್ರಮದಿಂದ ಆಚರಿಸಲಾಯಿತು.
ಆರೈಕೆ ಕೇಂದ್ರದಲ್ಲಿ ದಾಖಲಾದವರೇ ಈ ಕಾರ್ಯಕ್ರಮದ ಮುಖ್ಯ ಆಕರ್ಷಣೆಯಾಗಿದ್ದು ವಿಶೇಷವಾಗಿತ್ತು...
ಮಜೇಥಿಯಾ ಫೌಂಡೇಶನ ಆರಂಭಿಸಿರುವ ಉತ್ತರ ಕರ್ನಾಟಕದ ಮೊಟ್ಟ ಮೊದಲ ಉಚಿತವಾದ ಹಾಸ್ಪೈಸ್ )(ಆರೈಕೆ) ಕೇಂದ್ರವಾದ ರಮಿಲಾ ಪ್ರಶಾಂತಿ ಮಂದಿರದಲ್ಲಿ ಅಂತರಾಷ್ಟ್ರೀಯ ಶುಶ್ರೂಕಿಯರ ದಿನಾಚರಣೆ ನಿಮಿತ್ತ ಸನ್ಮಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ರೋಗಿಗಳಿಗೆ ಗುಣಮಟ್ಟದ ಆರೈಕೆಯನ್ನು ನೀಡಲು ದಣಿವರಿಯಿಲ್ಲದೆ ಕೆಲಸ ಮಾಡುವ ಸಮರ್ಪಿತ (ಶುಶ್ರೂಕಿ)ದಾದಿಯರನ್ನು ಗೌರವಿಸುವ ವಿಶೇಷ ಕಾರ್ಯಕ್ರಮ ಇದಾಗಿತ್ತು. ಮಜೇಥಿಯಾ ಫೌಂಡೇಶನ್ ಪ್ರತಿಷ್ಠಿತ ಆಸ್ಪತ್ರೆಗಳಾದ KIMS, KCTRI ಮತ್ತು SVYM ನ ಶುಶ್ರೂಕಿಯರನ್ನು ಕಾರ್ಯಕ್ರಮಕ್ಕೆ ಆಹ್ವಾನಿಸಿ ಅವರ ಅನುಭವಗಳನ್ನು ಹಂಚಿಕೊಳ್ಳಲು ವೇದಿಕೆಯನ್ನು ಕಲ್ಪಿಸಿತ್ತು.
ಸಮಾರಂಭವು ಸುಂದರವಾದ ಪ್ರಾರ್ಥನೆಯೊಂದಿಗೆ ಪ್ರಾರಂಭವಾಯಿತು. ನಮ್ಮ ಫೌಂಡೇಶನಿನ ಟ್ರಸ್ಟಿಯಾದ ಡಾ.ವಿ.ಬಿ.ನಿತಾಲಿ ಅವರು ಸ್ವಾಗತ ಭಾಷಣ ಮಾಡಿ, ತಮ್ಮ ಭಾಷಣದಲ್ಲಿ ಆರೋಗ್ಯ ವ್ಯವಸ್ಥೆಯಲ್ಲಿ ದಾದಿಯರ ಮಹತ್ವವನ್ನು ಎತ್ತಿ ತೋರಿಸಿದರು. ಮತ್ತೊಬ್ಬ ಟ್ರಸ್ಟಿಯಾದ ಡಾ.ರಮೇಶ್ ಬಾಬು ಅವರು ಮಾತನಾಡಿ ದಾದಿಯರ ಕೆಲಸವನ್ನು ಶ್ಲಾಘಿಸಿ, ರೋಗಿಗಳಿಗೆ ತಾಳ್ಮೆಯಿಂದ ಆರೈಕೆಯನ್ನು ಒದಗಿಸುವ ನಿಟ್ಟಿನಲ್ಲಿ ಅವರ ಪ್ರಯತ್ನಗಳನ್ನು ಶ್ಲಾಘಿಸಿದರು.
ಡಾ. ನಾಗರಾಜ ಸಾನು ಅವರು ಮಾತನಾಡಿ, ರೋಗಿಗಳ ಆರೈಕೆ ಕುರಿತು ಸಿಬ್ಬಂದಿಗೆ ಅಮೂಲ್ಯ ಸಲಹೆಗಳನ್ನು ನೀಡಿ, ವೃತ್ತಿಯ ಮಹತ್ವವನ್ನು ಒತ್ತಿಹೇಳಿದರು. ಮಜೇಥಿಯಾ ಫೌಂಡೇಶನಿನ ಅಧ್ಯಕ್ಷರು ಹಾಗೂ ಕಾರ್ಯಕ್ರಮದ ಮುಖ್ಯ ಅತಿಥಿಗಳಾದ ಶ್ರೀಮತಿ ನಂದಿನಿ ಕಶ್ಯಪ್ ಮಜೇಥಿಯಾ ಅವರು ಮಾತನಾಡಿ, ರೋಗಿಗಳಿಗೆ ಸಮಗ್ರ ಆರೈಕೆ ನೀಡುವಲ್ಲಿ ದಾದಿಯರ ನಿರ್ಣಾಯಕ ಪಾತ್ರ, ಅವರು ತೋರುವ ತಾಳ್ಮೆ, ಶ್ರದ್ಧೆ ಮತ್ತು ಅವರ ವೃತ್ತಿಪರತೆಯನ್ನು ಹೊಗಳಿದರು.
ಫೌಂಡೇಶನಿನ ಸಿಇಒ ಆದಂತಹ ಶ್ರೀ ಅಜಿತ್ ಕುಲಕರ್ಣಿ ಅವರು ವಂದನಾರ್ಪಣೆ ಮಾತುಗಳಲ್ಲಿ ದಾದಿಯರಿಗೆ ವೃತ್ತಿ ಪರತೆ ನಡೆ ನುಡಿ ಬಗ್ಗೆ ಮೆಚ್ಚುಗೆ ಜೊತೆಗೆ ಸಲಹೆ ನೀಡಿದರು.ಕಾರ್ಯಕ್ರಮದಲ್ಲಿ ಶ್ರೀ ಅಮೃತಲಾಲ್ ಪಟೇಲ್, Dr. ಮೋಹನ ಕುಮಾರ್.T ಮತ್ತು ಇತರ ಗಣ್ಯರು ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ಸುಶಾಂತರಾಜೆ ಎಂ ಮತ್ತು ಸುನೀಲಕುಮಾರ್.ಕೆ ನಿರ್ವಹಿಸಿದರು.
"ಉಚಿತ ಆರೋಗ್ಯ ಮತ್ತು ದಂತ ತಪಾಸಣಾ ಶಿಬಿರ"
#ಆರೋಗ್ಯ #ಕ್ಷೇತ್ರದಲ್ಲಿ #ಮಜೇಥಿಯಾ #ಫೌಂಡೇಶನ್ ತನ್ನ ಕೈಲಾದ ಮಟ್ಟಿಗೆ #ಉತ್ಕೃಷ್ಟವಾದ ಸೇವೆಯನ್ನು ನೀಡುತ್ತಾ ಬಂದಿರುವುದು ನಿಮಗೆಲ್ಲರಿಗೂ ತಿಳಿದಿದೆ. ಮುಂದುವರೆದ ಭಾಗವಾಗಿ ಇತ್ತೀಚಿಗೆ #ಹುಬ್ಬಳ್ಳಿ #ನವನಗರದ #ಕ್ಯಾನ್ಸರ್ #ಆಸ್ಪತ್ರೆ #ಆವರಣದಲ್ಲಿರುವ ಮಜೇಥಿಯಾ ಫೌಂಡೇಶನ್ ಹಾಸ್ಪೈಸ್ #ಕೇಂದ್ರ (ರಮೀಲಾ ಪ್ರಶಾಂತಿ ಮಂದಿರ)ದಲ್ಲಿ “ #ಉಚಿತ ಆರೋಗ್ಯ ಮತ್ತು #ದಂತ #ತಪಾಸಣಾ #ಶಿಬಿರ” ವನ್ನು ಆಯೋಜಿಸಲಾಗಿತ್ತು. ಈ ಶಿಬಿರವನ್ನು #ಖ್ಯಾತ ವೈದ್ಯರಾದ ಕೆ. ರಮೇಶ್ ಬಾಬು ಅವರು #ಉದ್ಘಾಟಿಸಿದರು. ನಂತರ ಮಾತನಾಡಿದ ಅವರು, ಮನುಷ್ಯನು ತನ್ನ #ಒತ್ತಡದ ಜೀವನದಲ್ಲಿ ತನ್ನ ಆರೋಗ್ಯ ಬಗ್ಗೆ #ಕಾಳಜಿ ಮಾಡದೆ, #ನಿತ್ಯ ಬದುಕಿನ #ಹೋರಾಟಕ್ಕೆ #ಪ್ರಾಮುಖ್ಯತೆ ಕೊಡುತ್ತಿದ್ದಾನೆ. ನಿತ್ಯ #ಕಾಯಕದೊಂದಿಗೆ ಜೀವನ ಸುಂದರಗೊಳಿಸಲು #ಸದೃಡವಾದ ಆರೋಗ್ಯವು ತುಂಬಾ #ಅವಶ್ಯಕ ಎಂದು #ನುಡಿದರು.
ಖ್ಯಾತ ವೈದ್ಯರಾದ ಜ್ಯೋತಿ ಕಾಚಾಪೂರ ಅವರು ಮಾತನಾಡಿ ಅನಾರೋಗ್ಯದಿಂದ ಬಳಲುತ್ತಿರುವ ಜನರು ವೈದ್ಯರ ಸಲಹೆ ಅತಿ #ಮುಖ್ಯವಾಗಿ ತೆಗೆದುಕೊಳ್ಳಬೇಕು ಇದರಿಂದ ರೋಗವನ್ನು ಶಮನ ಮಾಡಲು ಸಾಧ್ಯ ಮತ್ತು ನಿತ್ಯ ಚಟುವಟಿಕೆಯೊಂದಿಗೆ #ವ್ಯಾಯಾಮ ಮಾಡುವುದು ಅತೀ #ಶ್ರೇಷ್ಠ ಎಂದು ನುಡಿದರು.
ಮಜೇಥಿಯಾ ಫೌಂಡೇಶನ್ C.E.O ಅಜಿತ್ ಕುಲಕರ್ಣಿಯವರು ಶಿಬಿರಾರ್ಥಿಗಳಿಗೆ ಮನುಷ್ಯ ಯಾವ ರೀತಿ ಆರೋಗ್ಯದಿಂದ ಇರಬೇಕು ಎಂಬ ವಿಷಯ ಕುರಿತು #ಉಪನ್ಯಾಸ ನೀಡಿ, ಹಾಸ್ಪೈಸ್ ಕೇಂದ್ರದ ಕುರಿತು ವಿವರವಾದ ಮಾಹಿತಿಯನ್ನು #ಹಂಚಿಕೊಂಡರು.
ಈ ಸಂದರ್ಭದಲ್ಲಿ ಡಾll ಸುಮಾ ಪಾಟೀಲ, ಶ್ರೀಶೈಲ ದೊಡ್ಡಮನಿ, ಅಪೂರ್ವ ಹಿರೇಗೌಡ್ರು, ವಿದ್ಯಾ ಹಾಲಹರವಿ, ನಮ್ರತಾ ಒಡೆ, ರೇಣುಕಾ ಹುರಕಡ್ಲಿ ಮತ್ತು ಮಜೇಥಿಯಾ ಫೌಂಡೇಶನ್ #ಕಾರ್ಯದರ್ಶಿ ಅಮರೇಶ್ ಹಿಪ್ಪರಗಿ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.
ಪ್ರಾರಂಭದಲ್ಲಿ ಸುನಿಲ್ ಕುಮಾರ್ ಕುಕನೂರ ಸ್ವಾಗತಿಸಿದರು ಹಾಗೂ ಶುಶಾಂತ ಜೀ ಮಂಟಗನೀಕರ #ವಂದಿಸಿದರು.
ಅನ್ನಪೂರ್ಣ ಅಂಬಿಗೇರ್, ಚಂಪಾ ಇಸ್ಟರ್, ದಿಶಾದ ಹಂಚಿನಾಳ, ಕೀರ್ತಿ ಹೊಸಮನಿ ಉಪಸ್ಥಿತರಿದ್ದರು.
ಮಜೇಥಿಯಾ ಫೌಂಡೇಶನ್ ಆಯೋಜಿಸಿದ ಆರೋಗ್ಯ ತಪಾಸಣೆಯಲ್ಲಿ ನೂರಾರು ಜನರು ಭಾಗವಹಿಸಿ ಶಿಬಿರದ ಲಾಭವನ್ನು ಪಡೆದಿದ್ದು ಅತ್ಯಂತ ಖುಷಿಯನ್ನು ನೀಡಿತ್ತು.
ಕಾರ್ಯಕ್ರಮದ #ಯಶಸ್ಸಿಗೆ ಶ್ರಮಿಸಿದ ಎಲ್ಲರಿಗೂ ತುಂಬು #ಹೃದಯದ #ಧನ್ಯವಾದಗಳು
ವೀರ ಪ್ರತಿಭಾ 2023
ಫೆಬ್ರುವರಿ 4 ವಿಶ್ವ ಕ್ಯಾನ್ಸರ್ ದಿನದಂದು ಚಿಲ್ ಗ್ರೂಪ್, ಮಜೇಥಿಯಾ ಫೌಂಡೇಷನ್ ಹಾಗೂ ಇತರೆ ಸಮಾನ ಮನಸ್ಕ ಸಂಘಟನೆಗಳ ಸಹಯೋಗದೊಂದಿಗೆ “ವೀರ ಪ್ರತೀಭಾ” ಎಂಬ ವಿಶೇಷ ಕಾರ್ಯಕ್ರಮವನ್ನು ವಿಶ್ವ ಕ್ಯಾನ್ಸರ್ ದಿನದಂದು ಆಯೋಜಿಸಲಾಗಿತ್ತು.
ಕ್ಯಾನ್ಸರ್ ರೋಗವನ್ನು ಹಿಮ್ಮೆಟ್ಟಿಸಿ, ಯಮನಿಗೆ ಸವಾಲ ಹಾಕಿ, ಸಾವನ್ನು ಗೆದ್ದು ಬಂದ ವ್ಯಕ್ತಿಗಳು ಈ ಕಾರ್ಯಕ್ರಮದ ಸ್ಪೂರ್ತಿಯಾಗಿದ್ದರು.
ನಾವು ಜೀವನದಲ್ಲಿ ಸುಧಾರಿಸಿಕೊಳ್ಳಲು ಸಾಧ್ಯವಾಗುವಂತಹ ಸವಾಲುಗಳು ಎದುರಾದಾಗ ಧೈರ್ಯವನ್ನು ಕಳೆದುಕೊಂಡು ಸೋತು ನಿಂತು ಬೀಡುವ ಈ ಕಾಲದಲ್ಲಿ, ಕ್ಯಾನ್ಸರ್ ಎಂಬ ಮಹಾಮಾರಿಯನ್ನು ಸಮರ್ಥವಾಗಿ ಎದುರಿಸಿ ಗೆದ್ದು ಬಂದ ಇವರೆಲ್ಲರೂ ಕಾರ್ಯಕ್ರಮದಲ್ಲಿ ಹಾಜರಿದ್ದವರಿಗೆ ಹೊಸ ಸ್ಪೂರ್ತಿ ತುಂಬಿದ್ದು ಸುಳ್ಳಲ್ಲ.
ಕಾರ್ಯಕ್ರಮದಲ್ಲಿ ಅವರಾಡಿದ ಮಾತುಗಳು, ಅನುಭವಿಸಿದ ನೋವುಗಳು, ಜನರ ಹಿಯಾಳಿಕೆಯ ಮಾತುಗಳು ರೋಗಕ್ಕಿಂತ ಅವರನ್ನು ಜರ್ಜರಿತರನ್ನಾಗಿಸಿದ್ದವು. ಇವುಗಳೆಲ್ಲದರ ನಡುವೆ ಕೆಲವರಿಂದ ದೊರೆತ ಸಾಂತ್ವನ ಮತ್ತು ಸಹಯೋಗ, ಮಹಾಮಾರಿ ಕ್ಯಾನ್ಸರ್ ರೋಗವನ್ನು ಗೆದ್ದು ಬಂದ ಬಗೆ ಎಂತವರನ್ನೂ ಕೂಡ ಎಂತಹುದೆ ಸವಾಲನ್ನು ಸಮರ್ಥವಾಗಿ ಹಿಮ್ಮೆಟ್ಟಿಸಿ ನಿಲ್ಲಲು ಶಕ್ತಿ ನೀಡಬಲ್ಲವಾಗಿದ್ದವು. ಇವರಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.
ಇದೇ ಸಂದರ್ಭದಲ್ಲಿ ಪತ್ರಿಕೆ ಕೃಷ್ಣಿ ಶಿರೂರ ಅವರು ಬರೆದಿರುವ “Second Chance” ಎಂಬ ಇಂಗ್ಲೀಷ್ ಪುಸ್ತಕವನ್ನು ಬಿಡುಗಡೆ ಮಾಡಲಾಯಿತು. ಮುಖ್ಯ ಅತಿಥಿಗಳಾದ ಖ್ಯಾತ ವೈದ್ಯರು ಡಾ. ಗುರುಶಾಂತಪ್ಪ ಯಲಗಚ್ಚಿನ ಅವರು ಮಾತನಾಡಿ, ಮಜೇಥಿಯಾ ಫೌಂಡೇಷನ್ ಉಚಿತವಾಗಿ ನಡೆಸುತ್ತಿರುವ ಹಾಸ್ಪೈಸ್ ಕೇಂದ್ರದ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದರು.
ಕನ್ನಡ ಚಿತ್ರರಂಗದ ಜನಪ್ರಿಯ ನಟಿ ಶ್ರೀಮತಿ ಶ್ರುತಿ ಹರಿಹರನ್ ಅವರು ಕಾರ್ಯಕ್ರಮದ ಮುಖ್ಯ ಆಕರ್ಷಣೆಯ ಕೇಂದ್ರವಾಗಿದ್ದರು. ಅತಿಥಿಗಳಾದ ಶ್ರಿ ಅಜಯ ಜೋಶಿ, MDW MD ಶ್ರೀ ಗೌತಮ್ ಭಾಪಣ, ಶ್ರೀಮತಿ ಜ್ಯೋತಿ ಸಣ್ಣಕ್ಕಿ, ಶ್ರೀ ಎಮ್. ಎಸ್ ದೇವಾಡಿಗ ಅವರುಗಳು ಆಗಮಿಸಿ ಕಾರ್ಯಕ್ರಮದ ಮೆರುಗನ್ನು ಹೆಚ್ಚಿಸಿದ್ದರು.
ಮಜೇಥಿಯಾ ಫೌಂಡೇಷನಿನ್ ನಿರ್ದೇಶಕರಾದ ಡಾ. ನಿಟಾಲಿಯವರನ್ನು ಗೌರವಿಸಲಾಯಿತು. ಮಜೇಥಿಯಾ ಫೌಂಡೇಷನಿನ್ ಪದಾಧಿಕಾರಿಗಳು ಈ ವಿಶೇಷ ಕಾರ್ಯಕ್ರಮಕ್ಕೆ ಸಾಕ್ಷಿಯಾಗಿದ್ದರು.
ಈ ವಿಶೇಷ ಕಾರ್ಯಕ್ರಮದಲ್ಲಿ ಮಜೇಥಿಯಾ ಫೌಂಡೇಷನ್ ಸೇವೆ ಸಲ್ಲಿಸಲು ಅವಕಾಶ ನೀಡಿದ "Chill" ಬಳಗಕ್ಕೆ ನಮ್ಮ ಧನ್ಯವಾದಗಳು.
#ವಿಶ್ವ_ಕ್ಯಾನ್ಸರ್_ದಿನ
#ವಿಶ್ವ_ಕ್ಯಾನ್ಸರ್_ದಿನ
ಫೆಬ್ರುವರಿ 4 ವಿಶ್ವ ಕ್ಯಾನ್ಸರ್ ದಿನವನ್ನಾಗಿ ಆಚರಿಸಲಾಗುತ್ತದೆ. ಇದು ಜಾಗೃತಿ ಮತ್ತು ರೋಗದ ಚಿಕಿತ್ಸೆಯನ್ನು ಉತ್ತೇಜಿಸುವ ಗುರಿಯನ್ನು ಹೊಂದಿರುವ ಅಂತರರಾಷ್ಟ್ರೀಯ ಕಾರ್ಯಕ್ರಮವಾಗಿದೆ. ಜಾಗತಿಕವಾಗಿ ಸಾವುಗಳಿಗೆ ಪ್ರಮುಖ ಕಾರಣವಾಗಿರುವ ಕ್ಯಾನ್ಸರ್ನ ಪರಿಣಾಮವನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ಕೆಲಸ ಮಾಡಲು ಸರ್ಕಾರಗಳು, ಆರೋಗ್ಯ ವೃತ್ತಿಪರರು ಮತ್ತು ಸಾರ್ವಜನಿಕರು ಸೇರಿದಂತೆ ವಿವಿಧ ಪಾಲುದಾರರನ್ನು ಒಟ್ಟುಗೂಡಿಸುವ ಗುರಿಯನ್ನು ಇದು ಹೊಂದಿದೆ.
ಥೀಮ್ ಮೂರು ವರ್ಷಗಳವರೆಗೆ - 2022, 2023 ಮತ್ತು 2024 - ವಿಶ್ವ ಕ್ಯಾನ್ಸರ್ ದಿನದ ಥೀಮ್ ಅನ್ನು "ಕ್ಲೋಸ್ ದಿ ಕೇರ್ ಗ್ಯಾಪ್" ಎಂದು ನಿರ್ಧರಿಸಲಾಗಿದೆ. ಈ ಬಹು-ವರ್ಷದ ಅಭಿಯಾನ ಜಗತ್ತಿನಾದ್ಯಂತ ಕ್ಯಾನ್ಸರ್ ಆರೈಕೆಯಲ್ಲಿನ ಅಸಮಾನತೆಗಳನ್ನು ಅರ್ಥಮಾಡಿಕೊಳ್ಳುವುದು ಮತ್ತು ಗುರುತಿಸುವುದಾಗಿದೆ.
ಮಹತ್ವ:
ಜಾಗೃತಿ ಮೂಡಿಸುವುದು ಮತ್ತು ರೋಗಕ್ಕೆ ಸಂಬಂಧಿಸಿದ ಸಾಮಾಜಿಕ ಕಳಂಕವನ್ನು ಕಡಿಮೆ ಮಾಡುವುದು ದಿನದ ಮುಖ್ಯ ಗುರಿಯಾಗಿದೆ. ಶ್ವಾಸಕೋಶ, ಸ್ತನ, ಗರ್ಭಕಂಠ, ತಲೆ ಮತ್ತು ಕುತ್ತಿಗೆ ಮತ್ತು ಕೊಲೊರೆಕ್ಟಲ್ ಕ್ಯಾನ್ಸರ್ (CRC) ಭಾರತೀಯ ಜನಸಂಖ್ಯೆಯ ಮೇಲೆ ಪರಿಣಾಮ ಬೀರುವ ಪ್ರಮುಖ ಕ್ಯಾನ್ಸರ್ಗಳಾಗಿವೆ. ವಿಶ್ವ ಕ್ಯಾನ್ಸರ್ ದಿನದಂದು, ಪ್ರತಿಯೊಬ್ಬರೂ ಕ್ಯಾನ್ಸರ್ ಮುಕ್ತ ಆರೋಗ್ಯಕರ ಜಗತ್ತನ್ನು ಹೊಂದಲು ಒಟ್ಟಾಗಿ ನಿಲ್ಲಬೇಕಿದೆ. ಇಂದು ಹಲವಾರು ಕಾರ್ಯಕ್ರಮಗಳನ್ನು ಯೋಜಿಸಲಾಗಿದೆ. ಕಾರ್ಯಕ್ರಮಗಳಲ್ಲಿ ಕ್ಯಾನ್ಸರ್ ಮತ್ತು ಅದರ ಆರಂಭಿಕ ಪತ್ತೆ, ಚಿಕಿತ್ಸೆ ಮತ್ತು ಹೆಚ್ಚಿನದನ್ನು ಜನರಿಗೆ ತಿಳಿಸಲು ಮತ್ತು ಅರಿವು ಮೂಡಿಸಲಾಗುತ್ತದೆ.
ಸರ್ವರಿಗೂ 74ನೇ ಗಣರಾಜ್ಯೋತ್ಸವದ ಶುಭಾಶಯಗಳು.
Happy 74th Republic Day to All.
ಉಚಿತವಾದ ಮಜೇಥಿಯಾ ಫೌಂಡೇಷನ್ ಹಾಸ್ಪೈಸ್ ಕೇಂದ್ರ, ಹುಬ್ಬಳ್ಳಿ
"ಹಾಸ್ಪೈಸ್ (ಆರೈಕೆ) ಕೇಂದ್ರದ ಒಳಾಂಗಣದ ಮುಸ್ಸಂಜೆ ನೋಟ."
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ :
ಮಜೇಥಿಯಾ ಫೌಂಡೇಶನ್,
ರಮಿಳಾ ಪ್ರಶಾಂತಿ ಮಂದಿರ,
ನವನಗರದ ಕ್ಯಾನ್ಸರ್ ಆಸ್ಪತ್ರೆಯ ಆವರಣ, ಹುಬ್ಬಳ್ಳಿ
Landline : 0836-2001316
Majethia Foundation Hospice
ಬದುಕಿರುವಾಗ ಅನಾರೋಗ್ಯದ ಕಾರಣದಿಂದ ನೋವುಂಡ ಜೀವ. ತನ್ನ ಜೀವನದ ಕೊನೆಯ ಕ್ಷಣದಲ್ಲಾದರೂ ನೆಮ್ಮದಿಯನ್ನು ಕಾಣಲಿ ಎಂಬ ಆಶಯದ ಪ್ರಯತ್ನವೇ ನಮ್ಮ ಗುರಿ. ಉಚಿತವಾದ ಈ ಸೇವೆಯ ಮಾಹಿತಿಯನ್ನು ಹೆಚ್ಚಿನ ಜನರಿಗೆ ಶೇರ್ ಮಾಡಿ.
ಸಾವಿರಾರು ಜನರಿಗೆ ಅನುಕೂಲವಾಗುವ ಮಾಹಿತಿಯ ಪೋಸ್ಟ್ ನಾವು ಹೆಚ್ಚಿನ ಜನರೊಂದಿಗೆ ಹಂಚಿಕೊಳ್ಳುವುದರಿಂದ(ಶೇರ್) ಒಂದು ಕುಟುಂಬಕ್ಕೆ ನೆಮ್ಮದಿಯನ್ನು ನೀಡಲು ಸಹಾಯವಾಗಬಹುದು.
ಉತ್ತರ ಕರ್ನಾಟಕದ ಮೊಟ್ಟ ಮೊದಲ ಮಜೇಥಿಯಾ ಫೌಂಡೇಷನಿನ್ ಉಚಿತವಾದ ಹಾಸ್ಪೈಸ್ ಕೇಂದ್ರ (ಆರೈಕೆ ಕೇಂದ್ರ). ನಮ್ಮಲ್ಲಿ 4ನೇ ಹಂತದ ಕ್ಯಾನ್ಸರ್ ರೋಗಿಗಳಿಗೆ ಉಚಿತವಾಗಿ ಆರೈಕೆಯನ್ನು ನೀಡಲಾಗುತ್ತೆ.
ಈ ಹಾಸ್ಪೈಸ್ ಕೇಂದ್ರದ ಮಾಹಿತಿಯನ್ನು ಹೆಚ್ಚಿನ ಜನರಿಗೆ ತಲುಪಿಸುವಲ್ಲಿ ನಿಮ್ಮ ಸಹಕಾರ ನಮಗೆ ಅತ್ಯವಶಕ. ನೀವು ನೀಡುತ್ತಿರುವ ಸಹಕಾರಕ್ಕೆ ತುಂಬು ಹೃದಯದ ಧನ್ಯವಾದಗಳು.
ಉತ್ತರ ಕರ್ನಾಟಕದ ಹೆಚ್ಚಿನ ಜನರಿಗೆ ಈ ಹಾಸ್ಪೈಸ್ ಕೇಂದ್ರದ ಬಗ್ಗೆ ಅಷ್ಟಾಗಿ ಮಾಹಿತಿಯಿಲ್ಲ. ದಯವಿಟ್ಟು ಮಜೇಥಿಯಾ ಫೌಂಡೇಷನಿನ ಹಾಸ್ಪೈಸ್ ಕೇಂದ್ರದ ಬಗ್ಗೆ ಮಾಹಿತಿಯನ್ನು ಹಂಚಿಕೊಳ್ಳಿ. ನಾವು ಶೇರ್ ಮಾಡುವ ಒಂದು ಪೋಸ್ಟ್ ಒಂದು ಜೀವಕ್ಕೆ ಮತ್ತು ಕುಟುಂಬಕ್ಕೆ ಆಸರೆಯಾಗಬಹುದು...
ಕರ್ನಾಟಕ ಮಣ್ಣಿನ ಶ್ರೇಷ್ಠ ಗುಣವೆಂದರೆ ಎಲ್ಲರನ್ನೂ ತನ್ನವರೆಂದು ಅಪ್ಪಿಕೊಂಡು ನಡೆಸುವುದು. ಕನ್ನಡ ಭಾಷೆ ಕಲೆಯುವುದು ಎಷ್ಟು ಸರಳವೆಂದರೆ, ತಿಳಿದವರು ಹೇಳಿರುವುದು ಈ ಭಾಷೆ ಕಲೆಯೊದು ಆಹಾ! ಬೆಣ್ಣೆನ ತಿಂದಂತೆ ಅಂತಾ...
ಕನ್ನಡಿಗನಾಗಿ ಜೀವಿಸುತ್ತಿರುವ ಬಗ್ಗೆ ಅಪಾರ ಹೆಮ್ಮೆ ಮತ್ತು ಗೌರವವಿದೆ.
ಹೆಚ್ಚಾಗಿ ಕನ್ನಡ ಬಳಸೋಣ; ಆಗ ಕನ್ನಡ ಇನ್ನೂ ಪ್ರಕಾಶಮಾನವಾಗಿ ಬೆಳಗುತ್ತೆ.
ಸರ್ವರಿಗೂ ಕನ್ನಡ ರಾಜ್ಯೋತ್ಸವದ ಹಾರ್ದಿಕ ಶುಭಾಶಯಗಳು...
Jitendra Majethia
Kashyap Majethia
ಉತ್ತರ ಕರ್ನಾಟಕದ ಮೊಟ್ಟ ಮೊದಲ ಮಜೇಥಿಯಾ ಹಾಸ್ಪೈಸ್ (ಆರೈಕೆ) ಕೇಂದ್ರದ ಸಂಕ್ಷಿಪ್ತ ಮಾಹಿತಿ.
4ನೇ ಹಂತದ ಕ್ಯಾನ್ಸರ್ ರೋಗಿಗಳಿಗಾಗಿ ಉಚಿತವಾದ ಆರೈಕೆ ಕೇಂದ್ರ
ಹೆಚ್ಚಿನ ಮಾಹಿತಿಗಾಗಿ :
For More Details:
Landline : 0836-2001316,
Mobile : +91 87923 66374
ಗಣೇಶ ಚತುರ್ಥಿಯ ಶುಭಾಶಯಗಳು
Happy Ganesh Chaturthi
ಮಜೇಥಿಯಾ ಫೌಂಡೇಷನ್ ವತಿಯಿಂದ ನಡೆಸಲಾಗುತ್ತಿರುವ ಅನೇಕ ಸೇವಾಕಾರ್ಯಗಳನ್ನು ಗುರುತಿಸಿ ಹುಬ್ಬಳ್ಳಿಯ ಪ್ರೇಮ್ ಜಿ ಫೌಂಡೇಷನ್ ಮತ್ತು ಪಿ ಆಂಡ್ ಜಿ ಮೀಡಿಯಾ ಕಮ್ಯೂನಿಕೇಶನ್ ನೇತೃತ್ವದಲ್ಲಿ ಹಾಗೂ ಇಂದುಸಂಜೆ, ಹಸಿರುಕ್ರಾಂತಿ, ಸಮತೋಲನ ದಿನಪತ್ರಿಕೆಗಳ ಸಹಭಾಗಿತ್ವದಲ್ಲಿ "ಸಮಾಜ ಸೇವಾ ರತ್ನ" ಪ್ರಶಸ್ತಿಯನ್ನು ನೀಡಿ ಗೌರವಿಸಿದೆ.
ಮಜೇಥಿಯಾ ಫೌಂಡೇಷನ್ ಪರವಾಗಿ ಈ ಪ್ರಶಸ್ತಿಯನ್ನು ಮಜೇಥಿಯಾ ಹಾಸ್ಪೈಸ್ ಕೇಂದ್ರದ CEO ಆದಂತಹ ಶ್ರೀ ಅಜೀತ್ ಕುಲಕರ್ಣಿ ಅವರು ಸ್ವೀಕರಿಸಿದರು...
ಫೇಡಿಯಾಟ್ರಿಕ್ ಕ್ಯಾನ್ಸರ್(pediatric cancer) ರೋಗಿಗಳ ಸೇವಾ ಕಾರ್ಯ ಮಾಡುತ್ತಿರುವ ಧಾರವಾಡ ಮೂಲದ ರುಬಿನ್ ಫೌಂಡೇಷನಿನ ಸಂಯೋಜಕರಾಗಿ ಕಾರ್ಯ ನಿರ್ವಹಿಸುತ್ತಿರುವ ಜೆರ್ರಿ ಫರ್ನಾಂಡಿಸ್ ಅವರು ತಮ್ಮ ಸಹುದ್ಯೋಗಿಗಳಾದ ಬೆವಿಂದಾ ಅವರ ಜೊತೆಗೂಡಿ ನಮ್ಮ ಮಜೇಥಿಯಾ ಫೌಂಡೇಷನಿನ ಹಾಸ್ಪೈಸ್ ಕೆಂದ್ರಕ್ಕೆ ಭೇಟಿ ನೀಡಿ, ನಮ್ಮ ಹಾಸ್ಪೈಸ್ (ಆರೈಕೆ ಕೇಂದ್ರ)ನಲ್ಲಿ ದೊರೆಯುತ್ತಿರುವ ಸೇವೆಯನ್ನು ಕಂಡು ಹರ್ಷವನ್ನು ವ್ಯಕ್ತಪಡಿಸಿದರು....
Jerry Fernandes, who is working as coordinator of Dharwad-based Rubin Foundation, who is doing the service for pediatric cancer patients. Visited our Majethia Foundation Hospice Center along with his colleagues Bevinda. Expressed his happiness to see the service being provided in our Hospice....
ತ್ಯಾಗ ಬಲಿದಾನ ಹೋರಾಟಗಾರರ ಸ್ಮರಿಸೋಣ
ಹುಬ್ಬಳ್ಳಿಯ ಮಜೇಥಿಯಾ ಗ್ರೂಪ್ ಆಶ್ರಯದಲ್ಲಿ ಸ್ವಾತಂತ್ರ್ಯ ದಿನಾಚರಣೆಯ ಅಮೃತ ಮಹೋತ್ಸವನ್ನು ಸಡಗರ ಸಂಭ್ರಮದಿಂದ ಆಚರಿಸಲಾಯಿತು.
ಧ್ವಜಾರೋಹಣವನ್ನು ಮಜೇಥಿಯಾ ಫೌಂಡೇಶನ್ ಚೇರ್ಮನ್ನರಾದ ಶ್ರೀ ಜಿತೇಂದ್ರ ಮಜೇಥಿಯಾ, ಶ್ರೀಮತಿ ರಮೀಲಾ ಜಿತೇಂದ್ರ
ಅವರು ನೆರವೇರಿಸಿದರು. ಈ ಸಂದರ್ಭದಲ್ಲಿ ಶ್ರೀಜಿತೇಂದ್ರ ಮಜೇಥಿಯ ಅವರು ಮಾತನಾಡಿ ಸ್ವಾತಂತ್ರ್ಯಕ್ಕಾಗಿ ನಮ್ಮ ಹೋರಾಟಗಾರರು ತಮ್ಮ ಬದುಕನ್ನು ತ್ಯಾಗ ಮಾಡಿದ್ದಾರೆ. ಅವರ ತ್ಯಾಗ ಬಲಿದಾನ ಹೋರಾಟವನ್ನು ನಾವು ಸ್ಮರಿಸೋಣ ಅಲ್ಲದೆ ಅವರ ಆದರ್ಶ ರಾಷ್ಟ್ರ ಪ್ರೇಮ ಏಕತೆಯನ್ನು ನಾವು ಅಳವಡಿಸಿ ಕೊಳ್ಳುವುದರ ಮೂಲಕ ಮಕ್ಕಳಿಗೂ ಕೂಡ ಮಾರ್ಗದರ್ಶನ ಮಾಡಬೇಕು ಇದರಿಂದ ನಮ್ಮೆಲ್ಲರಲ್ಲಿ ರಾಷ್ಟ್ರಪ್ರೇಮ ಹಿಮ್ಮಡಿಯಾಗಲು ಸಾಧ್ಯ ಎಂದು ನುಡಿದರು.
ಅತಿಥಿಯಾಗಿ V R L ಸಮೂಹ ಸಂಸ್ಥೆಗಳ ಚೇರ್ಮನ್ನರಾದ ಶ್ರೀ ಡಾ. ವಿಜಯ ಸಂಕೇಶ್ವರ, ಡಾ. ರಮೇಶ್ ಬಾಬು, ಡಾ. ವಿ.ಬಿ. ನಿಟಾಲಿ, ಶ್ರೀ ಅಜಿತ್ ಕುಲಕರ್ಣಿ, ಶ್ರೀ ಶ್ರೀಧರ ಜೋಶಿ ಸುನೀತಾ ಉಪ್ಪಿನ, ಶ್ರೀ H.R. ಪ್ರಹ್ಲಾದ್ ರಾವ್, ಅಮರೇಶ್ ಹಿಪ್ಪರಗಿ, ಕಾರ್ಯಕ್ರಮಕ್ಕೆ ಶುಭ ಕೋರಿದರು.
ಮಜೇಥಿಯಾ ಫೌಂಡೇಶನ್ ಸ್ವಯಂಸೇವಕರಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ನೆರವೇರಿಸಿದರು. ಪ್ರಾರಂಭದಲ್ಲಿ ಕಶ್ಯಪ್ ಜಿತೇಂದ್ರ ಮಜೇಥಿಯಾ ಸ್ವಾಗತಿಸಿದರು. ಕೊನೆಗೆ ಶ್ರೀಮತಿ ನಂದಿನಿ ಕಶ್ಯಪ್ ಮಜೇಥಿಯಾ ವಂದಿಸಿದರು.
ಉತ್ತರ ಕರ್ನಾಟಕದ ಮೊಟ್ಟ ಮೊದಲ ಪ್ಯಾಲಿಯಟೀವ್ ಕೇರ್ "ಮಜೇಥಿಯಾ ಹಾಸ್ಪೈಸ್ ಕೇಂದ್ರ".
"ಪ್ಯಾಲಿಯಟೀವ್ ಕೇರ್" ಹಿಂಗದ್ರೆ ಏನೂ ಅಂತಾ ಖ್ಯಾತ ವಾಗ್ಮಿಗಳು, ಲೇಖಕರು, ಅಂಕಣಕಾರರು ಹಾಗೂ ಯುವ ಹೃದಯಗಳನ್ನು ಜಾಗೃತಗೋಳಿಸಿ ಮುನ್ನಡೆಸುತ್ತಿರುವ ಯುವಾ ಬ್ರಿಗೇಡ್ ನ ಸಂಸ್ಥಾಪಕರು ಆದ ಶ್ರೀ ಚಕ್ರವರ್ತಿ ಸೂಲಿಬೆಲೆಯವರ ಮಾತುಗಳಲ್ಲಿ ಕೇಳೋಣ ಬನ್ನಿ...
North Karnataka's 1st ever Palliative care.
What is Palliative Care!?..
Let's hear the words of Shri. Chakravarthy Mithun a well-known orator, writer, columnist, and founder of the Yuva Brigade & who is leading the hearts of young people.
ಉತ್ತರ ಕರ್ನಾಟಕದ ಮೊಟ್ಟ ಮೊದಲ ಹಾಸ್ಪೈಸ್ ಕೇಂದ್ರವನ್ನ ನಿಮ್ಮ ನೆಚ್ಚಿನ ಸೋಷಿಯಲ್ ಮಿಡಿಯಾ ಮೂಲಕವೂ ಸಂಪರ್ಕಿಸಬಹುದು. ನಿಮ್ಮಿಷ್ಟದ ಸೋಷಿಯಲ್ ಮಿಡಿಯಾ ಮೂಲಕ ಕೈಜೋಡಿಸಿ.
https://www.facebook.com/MajethiaFoundationHospice
https://www.instagram.com/majethiafoundation/
Chakravarthy Mithun
Jitendra Majethia Jitendra Majethia
Subhassingh Jamadar
ಭಾರತೀಯ ವೈದ್ಯಕೀಯ ಸಂಘದ ಮಾಜಿ ಅಧ್ಯಕ್ಷರಾದ ಮತ್ತು ಅವಳಿ ನಗರದ ಖ್ಯಾತ ಆರ್ಥೋಪೆಡಿಕ್ ವೈದ್ಯರಾದ ಡಾ. ಸಫಾರೆಯವರು ದಂಪತಿ ಸಮೇತರಾಗಿ ನಮ್ಮ ಮಜೇಥಿಯಾ ಹಾಸ್ಪೈಸ್ ಕೇಂದ್ರಕ್ಕೆ ಭೇಟಿ ನೀಡಿದರು. ಹಾಸ್ಪೈಸ್ ನಲ್ಲಿ ಕಾರ್ಯ ನಿರ್ವಹಿಸುತ್ತಿರುವ ಸಿಬ್ಬಂದಿಗಳೊಂದಿಗೆ ಕೆಲವು ಸಮಯ ಕಳೆದರು, ಜೊತೆಗೆ ಮಜೇಥಿಯಾ ಫೌಂಡೇಶನ್ ಸೇವಾ ಕಾರ್ಯಕ್ಕೆ ಮೆಚ್ಚುಗೆಯನ್ನು ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಡಾ. ನಟಾಲಿಯವರು ಉಪಸ್ಥಿತರಿದ್ದರು.
Former President of IMA (INDIAN MEDICAL ASSOCIATION) and a well-known orthopaedic doctor of the twin cities, Dr. Safare visited our Majethia Hospice Centre along with his wife. He spent some time with the staff working at the hospice, as well as expressed appreciation for the service work done by the Majethia Foundation.
In this case, Dr. Natalie was also present.
ಕಿಮ್ಸ್ ನಿರ್ದೇಶಕರಾದ ಡಾ.ರಾಮಲಿಂಗಪ್ಪಾ ಮತ್ತು ಅವರ ಸಹ ವೈದ್ಯರ ತಂಡದೊಂದಿಗೆ ಇಂದು ನಮ್ಮ ಹಾಸ್ಪೈಸ್ ಕೇಂದ್ರಕ್ಕೆ ಭೇಟಿ ನೀಡಿದರು.
Today Director of KIMS Dr. Ramalingappa and his team of fellow doctors visited to our Hospice Center.
ಮಜೇಥಿಯಾ ಫೌಂಡೇಷನ್ ಹಾಸ್ಪೈಸ್ ಲೋಕಾರ್ಪಣೆಯಾದ ನಂತರ ಹಿರಿಯ ಗಣ್ಯ ವೈದ್ಯರೊಂದಿಗೆ ವಿಚಾರ ಮಿನಿಮಯ ಮಾಡಿಕೊಂಡು ಚರ್ಚಿಸಲಾಯಿತು. ಅಗತ್ಯ ಸಲಹೆ ಸೂಚನೆಗಳನ್ನು ನೀಡಿವುದಲ್ಲದೇ ಮುಂದಿನ ದಿನಗಳಲ್ಲಿ ಮಜೇಥಿಯಾ ಫೌಂಡೇಷನ್ ಹಾಸ್ಪೈಸ್ ಕಾರ್ಯ ಚಟುವಟಿಕೆಗಳಲ್ಲಿ ಬಾಗವಹಿಸಲು ಉತ್ಸುಕತೆಯನ್ನು ಎಲ್ಲ ವೈದ್ಯರು ತೋರಿಸಿದ್ದು ವಿಶೇಷವೆನಿಸಿತು.
ನಿಮಗೆಲ್ಲರಿಗೂ ಮಜೇಥಿಯಾ ಫೌಂಡೇಷನ್ ಸದಾ ನಮಿಸುತ್ತೆ.
#ಲೋಕಾರ್ಪಣೆ
ಮಜೇಥಿಯಾ ಫೌಂಡೇಷನ್ ವತಿಯಿಂದ ಹುಬ್ಬಳ್ಳಿಯ ನವನಗರದ ಕ್ಯಾನ್ಸರ್ ಆಸ್ಪತ್ರೆಯಲ್ಲಿ ನಿರ್ಮಿಸಲಾಗಿರುವ ಹಾಸ್ಪೈಸ್ ರಮೀಲಾ ಪ್ರಶಾಂತಿ ಮಂದಿರದ ಲೋಕಾರ್ಪಣೆ ಪೂಜಾ ಕಾರ್ಯಕ್ರಮವನ್ನು ಡಾ. ಬಿ. ಆರ್. ಪಾಟೀಲ ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಜಿತೇಂದ್ರ ಮಜೇಥಿಯಾ, ಹಿರಿಯ ವೈದ್ಯರಾದ ಡಾ. ರಮೇಶಬಾಬು, ಡಾ. ಸಂಜೀವ ಕುಲಗೋಡ, ಡಾ. ವಿಶಾಲ ಮಾಳವದೆ, ಡಾ. ಸಂತೋಷ ಚಿಕ್ಕರೆಡ್ಡಿ, ಡಾ. ಉಲ್ಲಾಸ, ಡಾ. ವಿ. ಬಿ. ನಿಟಾಲಿ, ಮಹೇಂದ್ರ ಸಿಂಘಿ, ಕ್ಯಾನ್ಸರ್ ಆಸ್ಪತ್ರೆ ಆಡಳಿತಾಧಿಕಾರಿ ಡಾ. ಮಂಜುಳಾ ಹುಗ್ಗಿ, ಸಿಎ ಎನ್. ಎ. ಚರಂತಿಮಠ, ನಂದಿನಿ ಕಶ್ಯಪ್ ಮಜೇಥಿಯಾ, ಎಚ್. ಆರ್. ಪ್ರಹ್ಲಾದರಾವ್, ಅಮೃತಲಾಲ್ ಪಟೇಲ್, ಸುಭಾಸಸಿಂಗ್ ಜಮಾದಾರ, ಅಜಿತ ಕುಲಕರ್ಣಿ, ಸುಶಾಂತರಾಜ ಮಂಟಗಣಿಕರ ಹಾಗೂ ಮಜೇಥಿಯಾ ಫೌಂಡೇಷನ್ ಮತ್ತು ಹಾಸ್ಪೈಸ್ ಆಡಳಿತ ವರ್ಗದ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.
Majethia Foundation
Click here to claim your Sponsored Listing.
Videos (show all)
Category
Contact the organization
Telephone
Address
Hubli
580025
Hubali
Hubli, 580030
WE ARE HERE TO SERVE THE SOCIETY & HELP THE NEEDY PEOPLE.. SERVICE ABOVE SELF
Kahnqah E Shaikhul Islam, Bandar Chawl, Bankapur Chowk, Road. Hubli-580024
Hubli, 580024
Hubli
Hubli, 580009
This page will showcase activities of MHM as a group. From time to time ( sundays) members will be
Yellapur Street
Hubli, 580020
Falaah Research Foundation is the organization of Sunni Muslim. Its main objectives are education,
#7, LGF, Giriraj Annex, T. B. Road, Nr Court Circle
Hubli, 580029
Majethia Foundation equally doing philanthropic and charitable work for upliftment of the socially we
Gadag Road
Hubli, 580020
Sr. Pastor, Lyricist, Servant of God, Director, AS Rao Musicals (Leading every person to a real hope)
A G Walsangad Building Opposite To J G College Of Commerce Vidya Nagar
Hubli, 580028
Bread For the Hunger NON PROFIT ORGANISATION (NPO).
Hubli
"Building Communities, Fostering Friendships" This Motto Emphasizes On Our Organization's Commitment.
IBMR Degree College, Behind KIMS, Baillappanavaer Nagar
Hubli, 580029
Rotaract Club, IBMR Hubli Chapter is a Rotary-sponsored service club for all students ages 18 to 30.