Nisarga Conservation Trust
wildlife and Nature conservation
ಸಾಹಸ ಯಾನ ಕೈಗೊಳ್ಳುವುದು ಆಧುನಿಕ ಮಾನವನಿಗೆ ಮಾತ್ರ ಸೀಮಿತವಲ್ಲ, 3000 ವರ್ಷಗಳ ಹಿಂದೆಯೆ ದಕ್ಷಿಣ ಅಮೆರಿಕಾ ಜನರು ಅಪಾಯಕಾರಿ ಪೆಸಿಫಿಕ್ ಸಾಗರವನ್ನು ತೆಪ್ಪದಲ್ಲಿ ದಾಟಿ 5000 ಕಿ ಮೀ ದೂರದ ಪಾಲಿನೇಷ್ಯಾ ದ್ವೀಪಗಳಲ್ಲಿ ವಸಾಹತು ಸ್ಥಾಪಿಸಿದ್ದರು. ಆದರೆ ಆಧುನಿಕ ಮಾನವ ತೆಪ್ಪದಲ್ಲಿ ಪೆಸಿಫಿಕ್ ಸಾಗರ ದಾಟಲು ಸಾಧ್ಯವೆ ಇಲ್ಲ ಎನ್ನುವ ತೀರ್ಮಾನಕ್ಕೆ ಬಂದನು.
ನಾರ್ವೇಯ ಸಾಹಸಿ ಥಾರ್ ಹೆಯರ್ಡಾಲ್ ಜೊತೆಗೆ 5 ಜನರಿದ್ದ ತಂಡವು ಪಾಲಿನೇಷ್ಯಾ ಜನರು ಹೇಗೆ ಈ ಸಾಹಸ ಮಾಡಲು ಸಾಧ್ಯವಾಯಿತು ಎಂದು ನಿರೂಪಿಸಲು, 1947 ರಲ್ಲಿ ಯಾವುದೇ ಆಧುನಿಕ ಸಲಕರಣೆ ಬಳಸದೆ ಒಂಬತ್ತು ಬಲ್ಸಾ ಮರದ ತುಂಡು ಬಳಸಿ ಮಾಡಿದ ತೆಪ್ಪದಲ್ಲಿ ಪೆಸಿಫಿಕ್ ಸಾಗರವನ್ನು 4100 ಮೈಲಿ ಕ್ರಮಿಸಿ ಮೂರುವರೆ ತಿಂಗಳಲ್ಲಿ ಪಾಲಿನೇಷ್ಯಾ ಜನರಿದ್ದ ದ್ವೀಪಗಳಿಗೆ ತಲುಪಿದರು.
Nisarga Conservation Trust
ಮುಳ್ಳುಹಂದಿ ಮತ್ತು ಚಿರತೆ
ಮುಳ್ಳುಹಂದಿಗಳು ಬಾಣದಂತೆ ಮುಳ್ಳುಗಳನ್ನು ಬಿಟ್ಟು ಶತ್ರುಗಳನ್ನು ಹೆದರಿಸುತ್ತವೆ ಎನ್ನುವುದು ಅನೇಕರ ಅಭಿಪ್ರಾಯವಾಗಿದೆ.ಆದರೆ
ಮುಳ್ಳುಹಂದಿಗಳು ಮುಂದಕ್ಕೆ ಚಲಿಸಿ ಒಮ್ಮೆಲೆ ಹಿಂದಕ್ಕೆ ಬಂದು ಶತ್ರುಗಳಿಗೆ ಮುಳ್ಳನ್ನು ಚುಚ್ಚುತ್ತವೆ.
and Leopard
Nisarga Conservation Trust
King Cobra
Dendrocalamus giganteus (Giant Bamboo)
ವಿಶ್ವದಲ್ಲಿ ಅತೀ ಎತ್ತರವಾಗಿ ಬೆಳೆಯುವ ಬಿದಿರು ಇದು
ಸುಮಾರು 50 ಮೀಟರ್ ಎತ್ತರ ಬೆಳೆಯಬಲ್ಲದು.
Nisarga Conservation Trust
ಪ್ರಪಂಚದ ದೊಡ್ಡ ಅಣಬೆ
ಭಾರತದ ಕಾಡು ಕತ್ತೆಗಳು
ಕಾನೂರು ಕೋಟೆ
ಶಿವಮೊಗ್ಗ ಜಿಲ್ಲೆ
ಸಾಗರ
ಕಾನೂರು ಹೆಸರಿಗೆ ತಕ್ಕಂತೆ ಪಶ್ಚಿಮಘಟ್ಟದ ಸಹ್ಯಾದ್ರಿಶ್ರೇಣಿಯ ಗೋವರ್ಧನ ಗಿರಿಪಂಕ್ತಿಯ ನಡುವಿನ ದಟ್ಟಡವಿಯ ನಡುವೆ ಹುದುಗಿರುವ ಪುಟ್ಟ ಗಿರಿಗ್ರಾಮ. ಗ್ರಾಮದಂಚಿನ ಬೆಟ್ಟ, ಮೂರು ದಿಕ್ಕಿನಲ್ಲಿ ಒಂದೂವರೆ ಸಾವಿರ ಅಡಿಗೂ ತಗ್ಗಿನ ಕಣಿವೆ ಮತ್ತು ಊರಿನ ದಿಕ್ಕಿನಿಂದ ಮಾತ್ರ ಪ್ರವೇಶ ಸಾಧ್ಯವಿರುವ ನೈಸರ್ಗಿಕ ರಕ್ಷಣಾವರಣವುಳ್ಳ ಆಯಕಟ್ಟಿನ ಪ್ರದೇಶ. ಚಾಲುಕ್ಯ ಹಾಗೂ ರಾಷ್ಟ್ರಕೂಟರ ಕಾಲದಲ್ಲಿ ಪ್ರತಿಷ್ಟಿತ ಸಾಮಂತರೆಂದು ಯಶೋಜ್ವಲ ಕೀರ್ತಿವಂತರಾಗಿದ್ದ ಹೊಂಬುಜದ ಸಾಂತರಸರು ತಮ್ಮ ರಾಜ್ಯದ ವ್ಯಾಪ್ತಿಯಲ್ಲಿದ್ದ ಈ ತಾಣವನ್ನು ಆಯ್ದು ಮೊದಲು ಇಲ್ಲೊಂದು ನೆಲಗೋಂಟೆಯನ್ನು ನಿರ್ಮಿಸಿದ್ದರು. ಅತ್ಯಂತ ಎತ್ತರದಲ್ಲಿ ಅಡವಿಯ ನಡುವೆ ಶತ್ರುವಿನ ವಿರುದ್ದ ಸಹಜವಾಗಿ ಒದಗುವ ರಕ್ಷಣೆ, ಸುತ್ತಲಿನ ಪ್ರದೇಶಗಳ ಮೇಲಿನ ಒಡೆತನ ಹಾಗೂ ನೆಲ ಜಲಗಳ ಸಮೃದ್ಧಿ ಅವರನ್ನು ಆಕರ್ಷಿಸಿದ್ದರಲ್ಲಿ ಆಶ್ಚರ್ಯವಿಲ್ಲ.
ಹೊಗೆವಡ್ಡಿ, ಮೇಘಾನೆ, ಬಾಳಿಗೆ, ಭೀಮೇಶ್ವರ, ಅಂಬಾರಗುಡ್ಡವೇ ಮೊದಲಾದ ಹಲವು ಗಿರಿಶಿಖರಗಳ ಸಾಲಿನ ಈ ಕಾನೂರು ಬೆಟ್ಟದ ತುದಿಯಲ್ಲಿ ವರ್ತುಲಾಕಾರದ ಮಣ್ಣುಕಟ್ಟೆ, ಸುತ್ತಲೂ ನೀರಿನ ಕಂದಕ, ನಡುವೆ ಚೂಪಾದ ಉದ್ದನೆ ಗೂಟಗಳ ಬೇಲಿಯನ್ನು ಕಟ್ಟಿ ಇಲ್ಲಿ ಕೆಲವು ತಾತ್ಕಾಲಿಕ ಕಟ್ಟಡಗಳನ್ನು ನಿರ್ಮಿಸಿದ್ದ ಸಾಂತರಸರಿಗೆ ಇದು ಪಶ್ಚಿಮದ ದಿಕ್ಕಿನಿಂದ ತಮ್ಮ ರಾಜ್ಯದ ಮೇಲೆ ನಡೆಯಬಹುದಾಗಿದ್ದ ಆಕ್ರಮಣವನ್ನು ತಡೆಯಲು ಸಹಕಾರಿಯಾಗಿತ್ತು. ನಂತರದ ದಿನಗಳಲ್ಲಿ ಇದು ಪಾಳುಬಿದ್ದಿತ್ತು. ಮುಂದೆ ಸಾಳುವ ವಂಶದ ಹೊನ್ನ ಇದನ್ನು ಸಾಕಷ್ಟು ಅಭಿವೃದ್ಧಿ ಪಡಿಸಿದ್ದನಾದರೂ ಇದು ಹೆಚ್ಚು ಬಳಕೆಗೆ ತೆರೆದುಕೊಂಡಿದ್ದು ಗೇರುಸೊಪ್ಪೆ ರಾಜ್ಯಕ್ಕೆ ರಾಣಿ ಚೆನ್ನಭೈರಾದೇವಿಯ ಪಟ್ಟಕ್ಕೆ ಬಂದಮೇಲೆಯೇ.
ಬಾಲ್ಯದಲ್ಲಿ ಆಕೆ ಅಡವಿ ಸುತ್ತುತ್ತಿದ್ದ ಕಾಲದಿಂದಲೂ ಚೆನ್ನಭೈರಾದೇವಿಯ ಕಣ್ಸೆಳೆದಿದ್ದ ಕಾನೂರು, ಅವಳ ಆಳ್ವಿಕೆ ಆರಂಭಗೊಳ್ಳುತ್ತಿದ್ದಂತೆ ಪುನರ್ನಿರ್ಮಾಣಗೊಂಡಿತ್ತು. ಸಾಂತರಸರ ಮಣ್ಣುದಿಬ್ಬಗಳ ಹೊದ್ದಿನಲ್ಲಿ ರಾಣಿ ಉರುಟುಗಲ್ಲು ಜಂಬಿಟ್ಟಿಗೆ ಮತ್ತು ಗ್ರಾನೈಟ್ ಶಿಲೆಗಳನ್ನು ಬಳಸಿ ಎತ್ತರವಾದ ದಪ್ಪ ಕಲ್ಲಿನ ಸುಭದ್ರ ಕೋಟೆ ಕಟ್ಟಿಸಿದಳು. ಗೋಡೆಯ ಮೇಲೆ ರಕ್ಷಣಾದಳದ ಸೈನಿಕರು ಸುಲಭದಲ್ಲಿ ಓಡಾಡಿ ತಮ್ಮ ಆಯುಧಗಳನ್ನು ಉಪಯೋಗಿಸಲು ಸಾಧ್ಯವಾಗುವಂತೆ ಮುನ್ನೆಚ್ಚರಿಕೆ ವಹಿಸಿದ್ದಳು. ವಿಶಾಲವಾದ ಗೋಡೆ ಕಟ್ಟೆಯ ಉದ್ದಕ್ಕೂ ಅಲ್ಲಲ್ಲಿ ಕಾವಲುಗೋಪುರಗಳು, ಬುರುಜುಗಳು ಪಹರೆ ಬಿಡಾರಗಳು ನಿರ್ಮಾಣಗೊಂಡವು. ಗೋಪುರಗಳ ಪಕ್ಕದಿಂದ ಶತ್ರು ಸೈನ್ಯದ ಮೇಲೆ ಉರುಳುಗಲ್ಲು, ಉರಿಯುವ ವಸ್ತುಗಳು ಮತ್ತು ಮುಳ್ಳುಕೋಲುಗಳನ್ನು ಎಸೆಯಲು ಆಸ್ಪದವಾಗುವಂತೆ ಹಾಗೂ ಶತ್ರುಗಳು ಹಲ್ಲೆಮಾಡಿದರೆ ದುರ್ಗರಕ್ಷಕರಿಗೆ ಆಶ್ರಯ ಪಡೆಯಲು, ಅಡಗಲು ಸಾಕಷ್ಟು ಅವಕಾಶವಿರುವಂತೆ ನೋಡಿಕೊಂಡಳು.
ಈ ಅಬೇಧ್ಯ ಕೋಟೆಯ ಒಳಗೆ ಆನೆಹೊಂಡವೆಂಬ ವಿಶಾಲವಾದ ಕೆರೆ, ಅಲ್ಲಲ್ಲಿ ನೈಸರ್ಗಿಕ ಕೊಳ ನಿರ್ಮಿಸಿ ನೀರಿನ ಕೊರತೆ ನೀಗಿದಳು. ಈ ವಿಶಿಷ್ಟ ಗಿರಿದುರ್ಗದೊಳಗೆ ಗುಪ್ತಭಂಡಾರ, ಪಣತ, ಆನೆಯ ಮಹಲು, ಉಗ್ರಾಣ, ಜ್ಞಾನಶಾಲೆ, ಠಂಕಶಾಲೆ, ಕುದುರೆ ಲಾಯ, ಶಸ್ತ್ರಾಗಾರ, ಪಿರಂಗಿ ಕಟ್ಟೆಗಳನ್ನು ನಿರ್ಮಿಸಿದಳು. ಎತ್ತರವಾದ ಸ್ಥಳದಲ್ಲಿ ನೇಮೀಶ್ವರ ಚೈತ್ಯಾಲಯವನ್ನೂ ಪಕ್ಕದಲ್ಲೊಂದು ಶಿವಾಲಯವನ್ನೂ ಕಟ್ಟಿಸಿದಳು. ಚೈತ್ಯಾಲಯದ ಎದುರು ನಗಿರೆಯ ಹಿರಿಯ ವ್ಯಾಪಾರಿಯಾಗಿದ್ದ ಯೋಜನೆ ಶೆಟ್ಟಿಯ ಮೊಮ್ಮಗನು ಒಂದು ಸುಂದರ ಮಾನಸ್ತಂಭವನ್ನೂ ಅದರ ತುದಿಯಲ್ಲಿ ಸುವರ್ಣ ಕಳಶವನ್ನೂ ಇಡಿಸಿದನು. ಈ ಮಾನಸ್ತಂಭದ ತುದಿಯಲ್ಲಿ ದೀಪ ಬೆಳಗಿದರೆ ಅದು ಗೇರುಸೊಪ್ಪೆಗೆ ಕಾಣುವಷ್ಟು ಎತ್ತರವಾಗಿತ್ತು ಎನ್ನಲಾಗುತ್ತಿತ್ತು. ಕೋಟೆಯ ಬಾಗಿಲಿನಲ್ಲಿ ವಿಶಾಲವಾದ ಕೋಟೆ ಆಂಜನೇಯ ಸ್ವಾಮಿ ದೇಗುಲವನ್ನೂ ಅದರ ಪಕ್ಕದಲ್ಲಿ ಶತ್ರುಗಳು ಹಠಾತ್ ದಾಳಿ ನಡೆಸಿದರೆ ರಕ್ಷಣೆ ಪಡೆಯಲು ನೆಲಮಾಳಿಗೆಯನ್ನೂ ಅಲ್ಲಿಂದ ಗೇರುಸೊಪ್ಪೆಗೆ ಗುಪ್ತಮಾರ್ಗವನ್ನೂ ನಿರ್ಮಿಸಿದಳು. ತನಗೆ ಅತ್ಯಂತ ಪ್ರಿಯವಾದ ಏಳು ಸುತ್ತಿನ ಕೋಟೆಯ ಕಾನೂರಿನಲ್ಲಿ ಒಂದು ಸುಂದರವಾದ ರಾಣಿವಾಸವನ್ನು ನಿರ್ಮಿಸಿ ಆಗಾಗ ಬಂದು ಅದರಲ್ಲಿ ವಾಸ್ತವ್ಯ ಹೂಡುತ್ತಿದ್ದಳು.
ಯಾರು ಚೆನ್ನಭೈರಾದೇವಿ?
ಭರತಖಂಡದ ಇತಿಹಾಸದಲ್ಲಿ ರಾಣಿ ಚೆನ್ನಭೈರಾದೇವಿಯಷ್ಟು ಸುದೀರ್ಘಕಾಲ ರಾಜ್ಯವಾಳಿದ ಇನ್ನೊಬ್ಬ ರಾಣಿಯಿಲ್ಲ. ರಾಜರೂ ಬೆರಳೆಣಿಕೆಯಷ್ಟೇ. ಸರಿಸುಮಾರು ಕ್ರಿಸ್ತಶಕ ೧೫೫೨ ರಿಂದ ೧೬೦೬ ರವರೆಗೆ ಒಟ್ಟು ಐವತ್ನಾಲ್ಕು ವರ್ಷಗಳ ಕಾಲ ರಾಜ್ಯವಾಳಿದ ಸಾಳುವ ವಂಶದ ಈ ವೀರವನಿತೆ. ತಾನು ಬದುಕಿರುವಷ್ಟೂ ಕಾಲ ಪೋರ್ಚುಗೀಸರಿಗೆ ಸಿಂಹಸ್ವಪ್ನವಾಗಿದ್ದವಳು.
ದಕ್ಷಿಣ ಕೊಂಕಣಕ್ಕೆ ತಮ್ಮ ಒಡೆತನವನ್ನು ಮತ್ತು ಮತಾಂತರ ಪ್ರಕ್ರಿಯೆಯನ್ನು ವಿಸ್ತರಿಸಲು ತುದಿಗಾಲಲ್ಲಿ ನಿಂತಿದ್ದ ಪೋರ್ಚುಗೀಸರ ಪ್ರಯತ್ನಕ್ಕೆ ತಡೆ ಗೋಡೆಯಾಗಿ ಅಡ್ಡ ನಿಂತು ಇಂದಿನ ಕೆನರಾ ಪ್ರದೇಶವನ್ನು ಸಂರಕ್ಷಿಸಿದವಳು ರಾಣಿ ಚೆನ್ನಭೈರಾದೇವಿ. ಪರಂಗಿಯವರೊಡನೆ ಅಗತ್ಯವಿದ್ದಾಗ ಸ್ನೇಹ, ಅನಿವಾರ್ಯವಾದಾಗ ಸಮರ ಎರಡಕ್ಕೂ ಸೈ ಎನ್ನಿಸಿಕೊಂಡಿದ್ದವಳು. ರಾಜಕೀಯವಾಗಿ ಪೋರ್ಚುಗೀಸರನ್ನು ವಿರೋಧಿಸಿದರೂ ಬಹು ಚಾಣಾಕ್ಷತೆಯಿಂದ ಅವರೊಂದಿಗೆ ವ್ಯಾವಹಾರಿಕ ಮೈತ್ರಿಯನ್ನು ಬೆಸೆದುಕೊಂಡು, ಅಕ್ಕಿ, ಮೆಣಸು, ಏಲಕ್ಕಿ, ದಾಲ್ಚಿನ್ನಿ, ಬೆಲ್ಲ, ಬೆತ್ತ, ಗಂಧ, ಶುಂಠಿ, ಲವಂಗ, ದಂತ ಮುಂತಾದ ಪದಾರ್ಥಗಳನ್ನು ಮಾರಿ ಅವರಿಂದಲೇ ‘ರೈನಾ ದ ಪಿಮೆಂಟಾ’ ( Rainha da pimenta- The pepper Queen) ಎಂಬ ಬಿರುದನ್ನು ಪಡೆದು ಮುತ್ಸದ್ದಿ ಎನ್ನಿಸಿಕೊಂಡವಳು. ಅವಳೊಬ್ಬಳಿಲ್ಲದಿದ್ದರೆ ಪೋರ್ಚುಗೀಸರು ನಾವೆಗಳ ನಿರ್ಮಾಣಕ್ಕೆ ಬೇಕಾದ ಮಾವು, ಗುಳಮಾವು, ಸುರಹೊನ್ನೆ, ಹೆಬ್ಬಲಸು ಮುಂತಾದ ಮರಗಳನ್ನು ಕಡಿದು ಕದ್ದೊಯ್ದು ಇಡೀ ಪಶ್ಚಿಮಘಟ್ಟದ ದಟ್ಟಡವಿಯನ್ನು ಅಂದೇ ಬೆತ್ತಲಾಗಿಸಿಬಿಡುತ್ತಿದ್ದರು.
ಬಿಜಾಪುರದ ಮೇಲೆ ವಿಜಯ ಸಾಧಿಸಿ ಗೋವೆಯನ್ನು ವಶಪಡಿಸಿಕೊಂಡ ಆರಂಭದಲ್ಲಿ ಕೇವಲ ಮಹಮ್ಮದೀಯರ ಮೇಲೆ ವೈರ ಸಾಧಿಸುತ್ತಿದ್ದ ಪರಂಗಿಗಳು ಕ್ರಮೇಣ ಹಿಂದೂಗಳನ್ನೂ ಪೀಡಿಸತೊಡಗಿದರು. ತಮ್ಮ ವಸಾಹತನ್ನು ಉಳಿಸಿಕೊಳ್ಳಲು ಸ್ಥಳೀಯರ ನೆರವು ಅನಿವಾರ್ಯವೆಂಬುದನ್ನು ಮನಗಂಡು ಕಂಡ ಕಂಡವರನ್ನು ಮತಾಂತರಕ್ಕೆ ಒಳಪಡಿಸಿ ‘ತಮ್ಮವರ’ನ್ನಾಗಿಸಿಕೊಳ್ಳತೊಡಗಿದರು. ಮತಾಂತರಕ್ಕಾಗಿ ಅತ್ಯಾಚಾರ ಅನಾಚಾರಕ್ಕಿಳಿದರು. ಪರಂಗಿಗಳ ದಬ್ಬಾಳಿಕೆಗೆ ಸಿಲುಕಿ ನಿರಾಶ್ರಿತರಾದ ಹಲವು ಹತ್ತು ಸಮುದಾಯದವರಿಗೆ ತನ್ನ ರಾಜ್ಯದಲ್ಲಿ ಸುರಕ್ಷಿತ ಆಶ್ರಯವಿತ್ತು ವಾತ್ಸಲ್ಯದಿಂದ ಪರಿಪೋಷಿಸಿದವಳು ಚೆನ್ನಭೈರಾದೇವಿ. ಕಲ್ಲಿಕೋಟೆಯ ಜಾಮೋರಿನ್ನನಿಂದ ಹಿಡಿದು ಗುಜರಾತಿನ ಸುಲ್ತಾನನವರೆಗೆ ಇಡೀ ಪಶ್ಚಿಮ ಕರಾವಳಿಯ ಅರಸರು ಒಗ್ಗೂಡಿ ೧೫೭೦ ರಲ್ಲಿ ಪೋರ್ಚುಗೀಸರ ವಿರುದ್ಧ ನಡೆಸಿದ ಸಂಯುಕ್ತ ಹೋರಾಟದ ಹಿಂದಿನ ಸ್ಪೂರ್ತಿ ಚೆನ್ನಭೈರಾದೇವಿ. ಬಿಜಾಪುರದ ಸುಲ್ತಾನನ ನೇತೃತ್ವದಲ್ಲಿ ಎರಡು ವರ್ಷಗಳ ಕಾಲ ನಡೆದ ಈ ಸಂಗ್ರಾಮ, ಪರಂಗಿಗಳ ಒಡೆದು ಆಳುವ ನೀತಿ ಮತ್ತು ಆಮಿಷಗಳಿಗೆ ಕೈಯ್ಯೊಡ್ಡುವ ನಮ್ಮವರ ಸ್ವಾರ್ಥಕ್ಕೆ ಸಿಲುಕಿ ವಿಫಲವಾಗಿರದಿದ್ದರೆ ಪೋರ್ಚುಗೀಸರು ಅಂದೇ ಹಡಗು ಹತ್ತಬೇಕಾಗುತ್ತಿತ್ತು.
ಎಲ್ಲ ಜಾತಿ ಮತದವರನ್ನು ಒಳಗೊಂಡಂತೆ ಆಡಳಿತ ನಡೆಸುವ ಧರ್ಮಸಮನ್ವಯತೆಗೆ ಆಕೆಯೊಂದು ಗಟ್ಟಿ ಉದಾಹರಣೆ. ಹಾಡುವಳ್ಳಿಯಲ್ಲಿ ಹುಟ್ಟಿದ ಈ ಹೆಣ್ಣುಮಗಳ ವಿದ್ಯಾಭ್ಯಾಸ ನಡೆದದ್ದು ಜೈನರ ಅಕಳಂಕ ಗುರುಪೀಠ ನಡೆಸುತ್ತಿದ್ದ ಹಾಡುವಳ್ಳಿಯ ಸುಪ್ರಸಿದ್ದ ಗುರುಕುಲದಲ್ಲಿ. ಬಾಲ್ಯದಲ್ಲಿ ಅವಳ ವ್ಯಕ್ತಿತ್ವವನ್ನು ರೂಪಿಸಿದವರು ಜೈನ ಗುರುಗಳಾದರೆ ಆಡಳಿತದಲ್ಲಿ ಅವಳಿಗೆ ಮಾರ್ಗದರ್ಶನ ನೀಡಿ ರಾಜಕೀಯ ವ್ಯಕ್ತಿತ್ವ ಕಟ್ಟಿಕೊಟ್ಟವರು ಹವ್ಯಕ ಬ್ರಾಹ್ಮಣರು. ಆರಂಭದ ಅವಳ ವಾಣಿಜ್ಯ ಕಲಿಕೆಗೆ ಸಹಕಾರವಿತ್ತು ಮಧ್ಯಪ್ರಾಚ್ಯದ ಮಹಮ್ಮದೀಯರೊಂದಿಗೆ ವ್ಯಾವಹಾರಿಕ ಮೈತ್ರಿ ಬೆಸೆಯಲು ನೆರವಾದವರು ಭಟ್ಕಳದ ನವಾಯಿತರು. ಉದ್ದಕ್ಕೂ ಅವಳ ಮೈತ್ರಿ ಬಿಜಾಪುರದ ಮಹಮ್ಮದೀಯ ಸುಲ್ತಾನರೊಂದಿಗೆ. ಅವಳಿಗೆ ಗೇರುಸೊಪ್ಪೆ ಗದ್ದುಗೆಯನ್ನು ವಹಿಸಿಕೊಟ್ಟು, ಉದ್ದಕ್ಕೂ ಬೆಂಬಲಕ್ಕೆ ನಿಂತವರು ಹಿಂದೂ ಸಾಮ್ರಾಜ್ಯ ಪ್ರತಿಷ್ಠಾಪಕರೆಂದು ಹೆಸರಾಗಿದ್ದ ವಿಜಯನಗರದ ಚಕ್ರವರ್ತಿಗಳು.
ಅವಳ ವ್ಯಾವಹಾರಿಕ ಮೈತ್ರಿ ಮತ್ತು ರಾಜಕೀಯ ಸಂಘರ್ಷವಿದ್ದುದು ಪೋರ್ಚುಗೀಸರೊಂದಿಗೆ. ಅವಳ ದೀರ್ಘಕಾಲದ ಮೈತ್ರಿಯಿದ್ದದ್ದು ಮಲಬಾರದ ಜಾಮೋರಿನ್ನನ ಜೊತೆಗೆ. ಇನ್ನು ಅವಳ ಪ್ರಜೆಗಳು ಜೈನರು, ಬ್ರಾಹ್ಮಣರು, ಗೊಂಡರು, ಮುಕ್ರಿಗಳು, ಖಾರ್ವಿ ಮುಂತಾಗಿ ಹತ್ತು ಹಲವು ಜಾತಿಗಳು. ಆಕೆ ಎಲ್ಲ ಜಾತಿ ಧರ್ಮಗಳ ಜೊತೆ ಸಾಮರಸ್ಯಗಳನ್ನು ಕಾಪಾಡಿಕೊಂಡು, ಎಲ್ಲರನ್ನೂ ಸಮಾನ ಪ್ರೀತಿ ವಿಶ್ವಾಸದಿಂದ ಒಳಗೊಂಡು ಐವತ್ತಾರು ವರ್ಷಗಳಿಗೂ ಹೆಚ್ಚುಕಾಲ ರಾಜ್ಯಭಾರ ನಡೆಸಿದಳೆಂದರೆ ಅವಳ ಸರ್ವಧರ್ಮ ಸಮಭಾವ ಮತ್ತು ಪ್ರಜಾವಾತ್ಸಲ್ಯ ಎಷ್ಟು ಗಟ್ಟಿಯಾಗಿದ್ದಿರಬೇಡ? ರಾಜಕೀಯವಾಗಿ ಆಕೆ ಪರಸ್ಪರ ವಿರೋಧಿಗಳ ನಡುವೆ ವ್ಯವಹರಿಸಬೇಕಾದ ಇಕ್ಕಟ್ಟಿಗೆ ಸಿಕ್ಕಿಬಿದ್ದಿದ್ದಳು. ಬಿಜಾಪುರದ ಆದಿಲ್ ಶಾಹಿಗೆ ತಮ್ಮಿಂದ ಗೋವೆಯನ್ನು ಕಿತ್ತುಕೊಂಡ ಪರಂಗಿಗಳ ಮೇಲೆ ಆಕ್ರೋಶ. ಅದೇ ಗೋವೆಯನ್ನು ಅದಕ್ಕೂ ಮೊದಲು ತಮ್ಮಿಂದ ಕಿತ್ತಕೊಂಡಿದ್ದ ಬಿಜಾಪುರದವರ ಮೇಲೆ ವಿಜಯನಗರಕ್ಕೆ ವೈರ. ಶತ್ರುವಿನ ಶತ್ರು ಮಿತ್ರನೆಂಬಂತೆ ವಿಜಯನಗರಕ್ಕೂ ಗೋವೆಗೂ ಮೈತ್ರಿ. ಗೋವೆಗೂ ಕಲ್ಲಿಕೋಟೆಯ ಜಾಮೋರಿನ್ನನಿಗೂ ವೈರ.
ನಗಿರೆಗೆ ಜಾಮೋರಿನ್ ಮತ್ತು ಬಿಜಾಪುರ, ಇಬ್ಬರೊಂದಿಗೂ ಮೈತ್ರಿ. ತಮ್ಮಿಬ್ಬರು ಶತ್ರುಗಳೊಂದಿಗೆ ಕೈ ಜೋಡಿಸಿದಳೆಂದು ಗೋವೆಗೆ ನಗಿರೆಯ ಮೇಲೆ ದ್ವೇಷ. ತನ್ನ ಶತ್ರು ಬಿಜಾಪುರದೊಂದಿಗೆ ಮೈತ್ರಿ ಸಾಧಿಸಿದ್ದಕ್ಕಾಗಿ ವಿಜಯನಗರಕ್ಕೆ ನಗಿರೆಯ ಮೇಲೆ ಇರುಸುಮುರುಸು. ಈ ನಡುವೆ ಕೆಳದಿಯ ನಾಯಕರಿಗೆ ಶ್ರೀಮಂತ ನಗಿರೆಯ ಮೇಲೆ ಕೆಂಗಣ್ಣು. ಬಿಳಗಿಗೆ ನಗಿರೆಯ ಮೇಲೆ ಮತ್ಸರ. ಇಂತಹ ಕ್ಲಿಷ್ಟ ರಾಜಕೀಯ ಚದುರಂಗದಾಟದಲ್ಲಿ ಸದಾ ಎಚ್ಚರಿಕೆಯಿಂದ ಹೆಜ್ಜೆಯಿಡುತ್ತ ಯಶಸ್ಸು ಕಂಡವಳು ಚೆನ್ನಭೈರಾದೇವಿ. ಹಾಗಿದ್ದೂ ಅವಳೆಂದೂ ಯಾರ ಮೇಲೂ ತಾನಾಗಿ ಯುದ್ದ ಘೋಷಿಸಿದವಳಲ್ಲ. ಪರಂಗಿಗಳೂ ಸೇರಿದಂತೆ ಮಲೆತು ಮೇಲೆ ಬಿದ್ದ ಯಾರನ್ನೂ ಮಣ್ಣುಮುಕ್ಕಿಸದೆ ಬಿಟ್ಟವಳೂ ಅಲ್ಲ.
ನಗಿರೆ, ಹದಿನಾರನೆಯ ಶತಮಾನದಲ್ಲಿ ದಕ್ಷಿಣ ಭಾರತದ ಅತ್ಯಂತ ಶ್ರೀಮಂತ ಸಂಸ್ಥಾನವೆಂದು ಹೆಸರಾಗಲು ಚೆನ್ನಭೈರಾದೇವಿಯ ವ್ಯವಹಾರ ಕೌಶಲವೇ ಕಾರಣವಾಗಿತ್ತು. ವರ್ತಕರು ಅನ್ಯ ರಾಜ್ಯಗಳಲ್ಲಿ ಖರೀದಿಸಿದ ವಸ್ತುಗಳನ್ನು ತನ್ನ ರಾಜ್ಯದಲ್ಲಿ ಮಾರಿ ಲಾಭಗಳಿಸಲು ಮುಕ್ತ ಪರವಾನಗಿ ಕೊಟ್ಟು ವ್ಯವಹಾರ ನೈಪುಣ್ಯವನ್ನು ಮೆರೆದ ರಾಣಿ, ತನ್ನ ರಾಜ್ಯದ ವರ್ತಕರಿಗೆ ವಿಧಿಸುವ ಅಗ್ಗದ ಸುಂಕವನ್ನೇ ಅನ್ಯ ರಾಜ್ಯಗಳ ವರ್ತಕರಿಗೂ ವಿಸ್ತರಿಸಿ, ಭಟ್ಕಳ, ಬೈಂದೂರು, ಹೊನ್ನಾವರ, ಕುಮುಟ, ಮಿರ್ಜಾನ, ಅಂಕೋಲ, ಕಾರವಾರ, ಹಳ್ಳಿಕೇರಿ ರೇವುಗಳನ್ನು ವ್ಯಾಪಾರ ಕೇಂದ್ರಗಳಾಗಿ ಪರಿವರ್ತಿಸಿ, ರಾಜ್ಯದಲ್ಲಿ ಸದಾ ವಾಣಿಜ್ಯ ಚಟುವಟಿಕೆ ನಡೆಯುವಂತೆ ನೋಡಿಕೊಂಡ ಚತುರೆ. ಗೋವೆಯ ಕುಶಲಕರ್ಮಿಗಳಿಗೆ ತನ್ನ ರಾಜ್ಯದಲ್ಲಿ ಆಶ್ರಯವಿತ್ತು ರಥ, ಮೇನೆ, ಎತ್ತಿನಗಾಡಿ ಕುದುರೆಬಂಡಿಗಳನ್ನು ನಿರ್ಮಿಸಿ ಜನರ ಮತ್ತು ವಸ್ತುಗಳ ಸುಲಭದ ಸಾಗಣೆಗೆ ಅವಕಾಶ ಕಲ್ಪಿಸಿದವಳು. ನೌಕೆ ಮತ್ತು ದೋಣಿಗಳ ನಿರ್ಮಾಣಕ್ಕೆ ಆದ್ಯತೆ ಕೊಟ್ಟು ಸಾಗರೋತ್ತರ ವ್ಯಾಪಾರವನ್ನು ಪ್ರೋತ್ಸಾಹಿಸಿದವಳು. ಬಿಳಿಮೆಣಸಿಗೆ ಬರುತ್ತಿದ್ದ ಬೇಡಿಕೆಯನ್ನು ಮುಂದಾಗಿ ಗ್ರಹಿಸಿ ಕರಿಮೆಣಸನ್ನು ಬಿಳಿಮೆಣಸನ್ನಾಗಿ ಪರಿವರ್ತಿಸಿ, ಅಧಿಕ ದರ ವಿಧಿಸಿ, ನಿರ್ಯಾತ ಮಾಡಿ ಅಪಾರ ಲಾಭ ಗಳಿಸಿದವಳು. ಮಲೆಯಾಳದಿಂದ ಮೆಣಸಿನ ಕುಡಿ ತರಿಸಿ ಕಾಳುಮೆಣಸನ್ನು ತೋಟದ ಬೆಳೆಯಾಗಿ ಬೆಳೆಯುವುದನ್ನು ಕೆನರಾ ಮತ್ತು ಮಲೆನಾಡಿಗೆ ವಿಸ್ತರಿಸಿದ ಬುದ್ಧಿವಂತೆ. ಭಟ್ಕಳ ಹೊನ್ನಾವರ ರೇವುಗಳ ಮೂಲಕ ವಿಜಯನಗರದ ಚಕ್ರವರ್ತಿಗಳಿಗೆ ಪರ್ಶಿಯಾದಿಂದ ಉತ್ತಮ ಜಾತಿಯ ಕುದುರೆಗಳನ್ನು ತರಿಸಿ ತಲುಪಿಸುತ್ತಿದ್ದ ಆಕೆ ಗೋವೆ ಪರಂಗಿಗಳ ಪಾಲಾದ ಮೇಲೆ ಬಿಜಾಪುರದವರಿಗೂ ಕುದುರೆಗಳನ್ನು ಒದಗಿಸುತ್ತಿದ್ದ ವ್ಯವಹಾರ ಕುಶಲಿ. ಯುರೋಪು ಬೆಳ್ಳಿಯ ಅತಿಪ್ರಸರಣಕ್ಕೆ ಸಿಲುಕಿ ಬಳಲುತ್ತಿದ್ದ ಸಂದರ್ಭದಲ್ಲಿ ತಾನು ಸಾಂಬಾರು ಪದಾರ್ಥಗಳಿಗೆ ಬಂಗಾರದ ಬದಲಿಗೆ ಬೆಳ್ಳಿ ವಿನಿಮಯವನ್ನು ಒಪ್ಪಿ ಅದಕ್ಕೆ ಅನುಗುಣವಾಗಿ ವ್ಯಾಪಾರದ ಒಪ್ಪಂದಗಳನ್ನು ಪರಿಷ್ಕರಿಸಿಕೊಂಡು ಸಾಗರೋತ್ತರ ವ್ಯವಹಾರದಲ್ಲಿ ಮುಂಚೂಣಿಯಲ್ಲಿ ನಿಂತವಳು. ತನ್ನ ರಾಜ್ಯದಲ್ಲಿ ಬೆಳ್ಳಿಯ ನಾಣ್ಯವನ್ನು ಠಂಕಿಸಿ ವ್ಯವಹಾರವನ್ನು ಸರಳಗೊಳಿಸಿದವಳು. ತನ್ನ ವ್ಯಾಪ್ತಿಯ ಕಾನೂರು, ಮೇದಿನಿ, ಮಿರ್ಜಾನಗಳಲ್ಲಿ ಪಾಳುಬಿದ್ದಿದ್ದ ಹಳೆಯ ಕೋಟೆಗಳನ್ನು ಪುನರ್ನಿರ್ಮಿಸಿ ಅಲ್ಲಿ ಕಾಳುಮೆಣಸು ಮತ್ತು ಸಂಪತ್ತನ್ನು ಸಂಗ್ರಹಿಸಿದವಳು. ರಾಜ್ಯದುದ್ದಕ್ಕೂ ಕೋಟೆ, ಕೆರೆ ಬಾವಿ ರಸ್ತೆ ಕಾಲುವೆ ಸಂತೆಕಟ್ಟೆಗಳನ್ನು ನಿರ್ಮಿಸಿ ಅಥವಾ ದುರಸ್ತಿಗೊಳಿಸಿ ರಾಜ್ಯದ ಸಮೃದ್ಧಿಗೆ ಕಾರಣಳಾದವಳು. ನಾಡಿನ ಹಲವೆಡೆ ದೇವಾಲಯ, ಬಸಿದಿ ಚೈತ್ಯಾಲಯಗಳನ್ನು ನಿರ್ಮಿಸಿದವಳು. ಚತುರ್ಮುಖ ಬಸಿದಿಯಂತಹ ಅಪರೂಪದ ನಿರ್ಮಾಣಕ್ಕೆ ಇಂಬುಗೊಟ್ಟು ನಗಿರೆಯನ್ನು ನಗಿರೆ- ಬಸ್ತಿಕೇರಿಯಾಗಿಸಿದವಳು. ನೂರಾರು ದೇಗುಲ ಮತ್ತು ಬಸಿದಿಗಳಿಗೆ ದಾನ ಧರ್ಮ ದತ್ತಿ ಉಂಬಳಿಗಳನ್ನಿತ್ತು ಸಮಾಜದಲ್ಲಿ ಧರ್ಮಕಾರ್ಯ ಸುಸ್ಥಿರವಾಗುವಂತೆ ನಡೆದುಕೊಂಡವಳು.
ರಾಣಿ ಚೆನ್ನಭೈರಾದೇವಿ, ಶರಾವತಿ ಕಣಿವೆಯ ಒಡತಿ!
ನಮ್ಮ ಹಿರಿಯರು ಆಕೆಯನ್ನು ಶರಾವತಿ ಕಣಿವೆಯ ಒಡತಿಯೆಂದೇ ಹೆಮ್ಮೆಯಿಂದ ನೆನಪಿಸಿಕೊಳ್ಳುತ್ತಿದ್ದರು. ಕರಾವಳಿಯ ಕಾರವಾರ,ಅಂಕೋಲ , ಕುಮಟ, ಹೊನ್ನಾವರ ಭಟ್ಕಳ ತಾಲ್ಲೂಕುಗಳಲ್ಲದೆ ಬೈಂದೂರಿನ ಬಳಿಯ ತ್ರಾಸಿಯವರೆಗಿದ್ದ ಆಕೆಯ ಒಡೆತನ, ಘಟ್ಟದ ಮೇಲಿನ ಮರಬಿಡಿ, ಭಾರಂಗಿ, ಕರೂರು, ಹನ್ನಾರ, ಸೌಳುನಾಡೂ ಸೇರಿದಂತೆ ಇಕ್ಕೇರಿಗೆ ಕೂಗಳತೆ ದೂರದಲ್ಲಿದ್ದ ಆವಿನಹಳ್ಳಿಯವರೆಗೂ ವ್ಯಾಪಿಸಿತ್ತು. ಅಂದರೆ ಈಗಿನ ಸಾಗರ ತಾಲ್ಲೂಕು ಅರ್ಧಕ್ಕಿಂತ ಹೆಚ್ಚುಭಾಗ ಅವಳ ಆಳ್ವಿಕೆಗೆ ಒಳಪಟ್ಟಿತ್ತು. ತಾಳಗುಪ್ಪ ಸಮೀಪದ ಹೆಬ್ಬೈಲಿನ ಬಳಿಯಲ್ಲಿ ಶರಾವತಿ ನದಿಯನ್ನು ದಾಟಿಸಲು ತೆಪ್ಪದ ವ್ಯವಸ್ಥೆಯಿದ್ದಮೆಣಸುಗಾರಿಗೆ ಆ ಹೆಸರು ಬಂದಿದ್ದೇ ರಾಣಿ ಚೆನ್ನಭೈರಾದೇವಿಯಿಂದ. ಒಣಗಿಸಿದ ಕರಿ ಮೆಣಸಿಗೆ ಬದಲಾಗಿ ಬಿಳಿ ಮೆಣಸಿಗೆ ಬೇಡಿಕೆ ಬಂದಾಗ, ಘಟ್ಟದ ಮೇಲಿನ ಪ್ರದೇಶಗಳಲ್ಲಿ ಬೆಳೆದ ಹಸಿಮೆಣಸಿನ ಕಾಳುಗಳನ್ನು ಕೊಂಡು ಶೀಘ್ರದಲ್ಲಿ ಕಾನೂರು ಅಥವಾ ಗೇರುಸೊಪ್ಪೆಗೆ ದಾಟಿಸಲು ಆಕೆ ತನ್ನ ತನ್ನ ಆಡಳಿತವಿದ್ದ ಆವಿನಹಳ್ಳಿಯಿಂದ ಮಡೇನೂರು ಮೂಲಕ ಮೆಣಸುಗಾರಿಗೆ ಮತ್ತು ಭಾರಂಗಿಯಿಂದ ಮರಬಿಡಿ, ಹುಕ್ಕಲು ಮೂಲಕ ವಟ್ಟಕ್ಕಿ ಸಮೀಪದ ಸುಂಕದಮನೆ ಮೂಲಕ ಗೇರುಸೊಪ್ಪೆಗೆ ಹೆದ್ದಾರಿಯೊಂದನ್ನು ನಿರ್ಮಿಸಿದ್ದಳು. ಹಾಗಾಗಿಯೇ ಹುಕ್ಕಲಿನಲ್ಲಿರುವ ದಟ್ಟ ಅರಣ್ಯವನ್ನು ಇಂದಿಗೂ ಹೆದ್ದಾರಿ ಕಾನು ಎಂದು ಕರೆಯುವುದು. ಗೇರುಸೊಪ್ಪೆಗೂ ಮೊದಲು ಸುಂಕ ವಸೂಲು ಮಾಡುತ್ತಿದ್ದ ತಾಣವನ್ನು ಇಂದಿಗೂ ಸುಂಕದಮನೆ ಎಂದು ಕರೆಯುವುದು
ಡಾ.ಗಜಾನನ ಶರ್ಮಾ
Fb/Nisarga Conservation Trust
ಕರ್ನಾಟಕದ ಎತ್ತರದ ಶಿಖರಗಳು
ದಕ್ಷಿಣ ಭಾರತದ ಎವರೆಸ್ಟ್
ಅನೈಮುಡಿ
ಕೇರಳ
ಇದು ಪಶ್ಚಿಮ ಘಟ್ಟದ ಅತೀ ಎತ್ತರದ ಶಿಖರ
ಕಲವಂತಿನ್ ದುರ್ಗ್
ರಾಯಗಡ್ ಜಿಲ್ಲೆ
ಮಹಾರಾಷ್ಟ್ರ
ಪಶ್ಚಿಮ ಘಟ್ಟಗಳು
ಸಸ್ತನಿಗಳ ಮರಿಗಳು ಹೇಗೆ ಬೆಳೆಯುತ್ತವೆ ಎನ್ನುವುದರ ಆಧಾರದ ಮೇಲೆ ಮೂರು ಮುಖ್ಯ ಗುಂಪುಗಳನ್ನಾಗಿ ವಿಂಗಡಿಸಲಾಗಿದೆ.
Nisarga Conservation Trust
ಸರೀಸೃಪಗಳ ಜಾಗೃತಿ ದಿನ
ಅಕ್ಟೋಬರ್ 21
*ಮಹಾ ವಲಸೆ*
GREAT MIGRATION
ಇತಿಹಾಸದಲ್ಲಿ ಬರ ಸಾಂಕ್ರಾಮಿಕ ರೋಗ ಇಲ್ಲವೆ ಯುದ್ಧಗಳಾದಾಗ ಜನ ಸಾಮೂಹಿಕವಾಗಿ ಗುಳೆ ಅಥವಾ ವಲಸೆ ಹೋಗಿರುವುದನ್ನು ಕೇಳಿರಬಹುದು,ವಲಸೆ ಹೋಗಿ ಹೊಸ ಜಾಗದ ಖಾಯಂ ನಿವಾಸಿಯಾಗಲೂಬಹುದು.
ವಲಸೆ ಹೋಗುವುದು ಮಾನವನಿಗೆ ಮಾತ್ರ ಸೀಮಿತವಲ್ಲ, ಪ್ರಾಣಿ ಪಕ್ಷಿಗಳು ಕೂಡ ವಲಸೆ ಹೋಗುತ್ತವೆ, ಮಾನವ ಬೇರೆ ಬೇರೆ ಕಾರಣಗಳಿಗೆ ವಲಸೆ ಹೋದರೆ ಪ್ರಾಣಿ ಪಕ್ಷಿಗಳು ಆಹಾರ ನೀರು ಸಂತಾನೋತ್ಪತ್ತಿ ಹವಾಮಾನ ವೈಪರೀತ್ಯಗಳನ್ನು ತಪ್ಪಿಸಿಕೊಳ್ಳಲು ವಲಸೆ ಹೋಗುತ್ತವೆ, ವಲಸೆ ಹೋಗದ ಪ್ರಾಣಿ-ಪಕ್ಷಿಗಳೂ ಇವೆ ಅವುಗಳಿಗೆ Resident species ಎನ್ನುತ್ತಾರೆ.
ಒಂದು ಕಾಲದಲ್ಲಿ ಕಗ್ಗತ್ತಲೆಯ ಖಂಡ ಎಂದು ಕರೆಯುತ್ತಿದ್ದ ಆಫ್ರಿಕಾ ಪ್ರಾಣಿಗಳ ಸ್ವರ್ಗ ಎಂದೇ ಪ್ರಸಿದ್ಧಿ ಪಡೆದಿದೆ.ಸಿಂಹ ಜಿರಾಫೆ ಜೀಬ್ರಾ ಕಾಡೆಮ್ಮೆ ಆನೆ ನೀರಾನೆ ಗೆಜೆಲ್ ಗಳ ಹಿಂಡು ಹಿಂಡೇ ಇಲ್ಲಿವೆ.
ಆಫ್ರಿಕಾದಲ್ಲಿ ಎರಡು ಮಳೆಗಾಲಗಳಿವೆ ಮಾರ್ಚ್ ಕೊನೆಯಿಂದ ಮೇ ವರೆಗೂ ಬೀಳುತ್ತದೆ, ನಂತರ ನವೆಂಬರ್ ತಿಂಗಳಿನಿಂದ ಜನವರಿ ತನಕ ಮಳೆಗಾಲ ಇರುತ್ತದೆ.ಆಫ್ರಿಕಾದ ವಿಶಾಲ ಬಯಲುಗಳಲ್ಲಿ ಸುರಿವ ಮಳೆಗೆ ಅಪಾರ ಹಸಿರು ಹುಲ್ಲು ಚಿಗುರುತ್ತದೆ, ಇದನ್ನು ಮೇಯಲು ಲಕ್ಷಾಂತರ ಸಂಖ್ಯೆಯ ಕಾಡು ಪ್ರಾಣಿಗಳು ಮಹಾವಲಸೆ ಅಥವಾ ಗ್ರೇಟ್ ಮೈಗ್ರೇಶನ್ ಪ್ರಯಾಣ ಕೈಗೊಳ್ಳುತ್ತವೆ.
ಜೂನ್ ಜುಲೈ ತಿಂಗಳಲ್ಲಿ ಮುಂದೆ ಬೀಳುವ ಮಳೆಯ ಮುನ್ಸೂಚನೆ ಅರಿವ ವೈಲ್ಡ್ ಬೀಸ್ಟ್, ಜೀಬ್ರಾ ಗೆಜೆಲ್ ಇಂಪಾಲಗಳು ವಲಸೆ ಹೋಗಲು ಶುರು ಮಾಡುತ್ತವೆ.
Great migration ಅಥವಾ ಮಹಾ ವಲಸೆಯಲ್ಲಿ 2-3 ಲಕ್ಷ ವೈಲ್ಡ್ಬೀಸ್ಟ್ ಗಳು ಲಕ್ಷಾಂತರ ಸಂಖ್ಯೆಯ ಜೀಬ್ರಾಗಳು ಗೆಜೆಲ್ ಇಂಪಾಲ ಹಾಗು ಆನೆಗಳು ಮಳೆಯನ್ನು ಅನುಸರಿಸಿ ಅಲ್ಲಿನ ಹಸಿರು ಹುಲ್ಲನ್ನು ಮೇಯಲು ಸಾಮೂಹಿಕವಾಗಿ ವಲಸೆ ಕೈಗೊಳ್ಳುತ್ತವೆ, ಈ ವಲಸೆಯು ವೃತ್ತಾಕಾರವಾಗಿದ್ದು ಸುಮಾರು 800-1000 ಕಿಲೋ ಮೀಟರ್ ಕ್ರಮಿಸಿ ಮೂಲಸ್ಥಾನಕ್ಕೆ ಬರುತ್ತವೆ, ನಂತರ ಮಳೆಗಾಲ ಶುರುವಾಗುತ್ತಿದ್ದಂತೆ ಮತ್ತೆ ಪ್ರಯಾಣ ಶುರು ಮಾಡುತ್ತವೆ.
ಈ ಮಹಾವಲಸೆ ಸುಲಭದ ಪ್ರಯಾಣವಲ್ಲ, ಮಾರ ಹಾಗು ಗೃಮೇಟಿ ಎನ್ನುವ ಎರಡು ಮುಖ್ಯ ನದಿಗಳನ್ನು ದಾಟಬೇಕು,ನದಿಗಳನ್ನು ದಾಟುವಾಗಿ ಬಾಯ್ತೆರೆದು ಬರುವ ಮೊಸಳೆಗಳಿಂದ ತಪ್ಪಿಸಿಕೊಳ್ಳಬೇಕು ಆದರೂ ಪ್ರತಿವರ್ಷ ಸಾವಿರಾರು ಪ್ರಾಣಿಗಳನ್ನು ಮೊಸಳೆಗಳು ತಿಂದು ಹಾಕುತ್ತವೆ ಹಾಗು ಅಂಗವೈಕಲ್ಯಗೊಳಿಸುತ್ತವೆ, ಲಕ್ಷಾಂತರ ಪ್ರಾಣಿಗಳು ನದಿ ದಾಡುವಾಗ ಕಾಲ್ತುಳಿತ ಉಂಟಾಗಿ ಅನೇಕ ಪ್ರಾಣಿಗಳು ಜೀವ ಕಳೆದುಕೊಳ್ಳುತ್ತವೆ.ಇಲ್ಲಿ ಸಮರ್ಥವಿದ್ದವು ಮಾತ್ರ ಬದುಕುಳಿಯುತ್ತವೆ.
ಮಹಾ ವಲಸೆ ಸಮಯದಲ್ಲಿ ಮಿಲನ ನಡೆದು ಮರಿಗಳನ್ನು ಹಾಕಿ ಮರಿಯನ್ನು ತಾಯಿ ಕರೆದೊಯ್ಯಬೇಕು ಅಲ್ಲಿ ಎದುರಾಗುವ ಮಾಂಸಹಾರಿಗಳಿಂದ ತನ್ನ ಕರುಳ ಕುಡಿಯನ್ನು ರಕ್ಷಿಸಿ ಮುಂದೆ ಪಯಣ ಕೈಗೊಳ್ಳಬೇಕು.
ಆಫ್ರಿಕಾದ ಸರಂಗೆಟಿ ಹಾಗು ಮಸಾಯಿ ಮಾರಾದಲ್ಲಿ ನಡೆವ ಮಹಾ ವಲಸೆಯ ವಿದ್ಯಮಾನವನ್ನು ಬಾಹ್ಯಾಕಾಶದಿಂದಲೂ ನೋಡಬಹುದು.
migration #
Zebra mara
ನಾಗರಾಜ್ ಬೆಳ್ಳೂರು
Nisarga Conservation Trust
ಮಣ್ಣೊಂದಿಗೆ ಮಗುವಿನ ಆಟ - ಇವನು ಅಧೋಕ್ಷ. 15 ತಿಂಗಳ ನನ್ನ ಮೊಮ್ಮಗ. ನನ್ನ ಮಗಳು ರಿಶಿಕಾಳ ಮಗ.
ಮಗುವೊಂದು ಮಣ್ಣಲ್ಲಿ ಆಟವಾಡುವುದು ಬಹು ಮುಖ್ಯ. ಮಣ್ಣು / ಮರಳು ಇರುವೆಡೆ ಬರಿಗಾಲಲ್ಲಿ ನಡೆಯುವುದು - ಆಡುವುದು - ಮಣ್ಣಲ್ಲಿ ಹೊರಳಾಡುವುದು. ಇವೆಲ್ಲವೂ ಮಗುವಿನಲ್ಲಿರುವ ಮಾನಸಿಕ ಒತ್ತಡವನ್ನು ತಗೆದುಹಾಕುತ್ತವೆ. - ಮಕ್ಕಳಲ್ಲಿ ಕೌಶಲ್ಯಪ್ರಜ್ಞೆ ಸೃಷ್ಟಿಸುತ್ತದೆ - ಶೋಧನಾ ಮನೋಭಾವ ಬೆಳೆಸುತ್ತದೆ.
ಬರಿಯ ಮಣ್ಣಲ್ಲಿ ಆಟವಾಡುವುದರಿಂದಲೇ ಇದೆಲ್ಲಾ ಹೇಗೆ ಸಾಧ್ಯ ? ಎಂಬ ಪ್ರಶ್ನೆಗೆ ಮಕ್ಕಳ ಮಾನಸಿಕ ಆರೋಗ್ಯ ತಜ್ಞರು ಹೇಳುವುದನ್ನು ಕೇಳಿ.
" ಇವೆಲ್ಲವೂ ಮಣ್ಣಲ್ಲಿನ ಜೀವಮಂಡಲದ ಪ್ರಭಾವದಿಂದ ನಡೆಯುತ್ತದೆ. ನಮ್ಮೊಳಗೆ ಹಾಗೂ ನಮ್ಮ ಮೇಲೆ ಇಂದು 100 ಟ್ರಿಲಿಯನ್ ಗಳಷ್ಟು ಸೂಕ್ಷ್ಮಾತಿಸೂಕ್ಷ್ಮ ಜೀವಾಣುಗಳು ವಾಸಿಸುತ್ತಿವೆ. ಇವುಗಳಲ್ಲಿ ಬ್ಯಾಕ್ಟೀರಿಯಾಗಳು - ಫಂಗೈಗಳು - ಪ್ರೋಟೋಝೊವಾ ಹಾಗೂ ವೈರಸ್ ಮುಂತಾದ ಬರಿಗಣ್ಣಿಗೆ ಕಾಣಿಸದ ಜೀವಿಗಳೂ ಸೇರಿವೆ.
ಇವೆಲ್ಲವೂ ನಾವು ತಿನ್ನುವ ಆಹಾರ ಜೀರ್ಣವಾಗಿಸಿ ವಿಟಮಿನ್ನುಗಳನ್ನು ಸೃಷ್ಟಿಸುತ್ತವೆ. ಜೊತೆಗೆ ನಮ್ಮೊಳಗಿರುವ ಅಪಾಯಕಾರಿ ಬ್ಯಾಕ್ಟೀರಿಯಾಗಳನ್ನೂ ಸಹ ನಿಯಂತ್ರಿಸುತ್ತವೆ.
ಮಕ್ಕಳು ಅರೋಗ್ಯವಾಗಿರಲು - ಸಂತೋಷವಾಗಿರಲು ಈ ಜೀವಾಣುಗಳೇ ಕಾರಣ ".
ಇಂದು ನಮ್ಮ ಮಕ್ಕಳು ಮಣ್ಣಲ್ಲಿ ದಿನಕ್ಕೆ ಎಷ್ಟು ಸಮಯ ಆಟವಾಡುತ್ತಾರೆ ? ಸ್ವಲ್ಪ ಯೋಚಿಸೋಣ.
ಮಣ್ಣ ಮೇಲೆ ನಡೆದಾಡಿಸೋಣವೆಂದರೆ, ನಗರ ಪ್ರದೇಶಗಳಲ್ಲಿ ಮೊದಲಿಗೆ ಮಣ್ಣೇ ಕಾಣುವುದಿಲ್ಲ. ಬಹುತೇಕ ಪೋಷಕರು ಹಾಗೂ ಶಿಕ್ಷಕರು ಮಣ್ಣನ್ನು ಕಸವೆಂದೂ - ಧೂಳೆಂದೂ - ಕೊಳೆಯೆಂದೂ ಭಾವಿಸಿರುವುದರಿಂದ, ನಾಲ್ಕು ಗೋಡೆಗಳ ನಡುವಿನ ಮನೆ - ಶಾಲೆಗಳಲ್ಲಿ ಮಣ್ಣೊಂದಿಗೆ ಆಟವಾಡುವುದಿರಲಿ, ಮುಟ್ಟಲೂ ಬಿಡುವುದಿಲ್ಲ.
ಅತಂಕಕಾರಿ ವಿಷಯವೆಂದರೆ, National Wildlife Foundation 2012ರಲ್ಲಿ ಹೊರತಂದ ವರದಿಯೊಂದರಲ್ಲಿ, ಜಗತ್ತಿನ ಬಹುತೇಕ 0 - 5 ವರ್ಷ ವಯೋಮಾನದೊಳಗಿನ ಮಕ್ಕಳು ಇಂದು ವಿಟಮಿನ್ D ಕೊರತೆಯಿಂದ ನರಳುತ್ತಿದ್ದಾರೆ.
ಇತ್ತೀಚೆಗೆ ಮಕ್ಕಳಲ್ಲಿ ಆಹಾರ ತಿಂದೊಡನೆ ಅಲರ್ಜಿಗೆ ಈಡಾಗುವಂತಹ ಪರಿಸ್ಥಿತಿ ಎದುರಾಗಿದೆ ಎನ್ನುತ್ತಾರೆ ಖ್ಯಾತ ಅಲರ್ಜಿ ಮತ್ತು ಅಸ್ಥಮಾ ತಜ್ಞ ಡಾ. ಡೇವಿಡ್ . ಇದೇಕೆ ಹೀಗೆ ಎಂದು ಕೇಳಿದರೆ, " ಇಂದು ನಾವು ನಮ್ಮ ಮಕ್ಕಳನ್ನು ಪರಿಶುದ್ದ ವಾತಾವರಣದಲ್ಲಿ ಬೆಳೆಸುತ್ತಿದ್ದೇವೆ. ನಮ್ಮ ಮಕ್ಕಳಿಗೆ ನಮ್ಮ ಸುತ್ತಮುತ್ತಲಿನ ಉಪಯುಕ್ತ ಸೂಕ್ಷ್ಮಾತಿಸೂಕ್ಷ್ಮ ಜೀವಜಂತುಗಳ ಪರಿಚಯವೇ ಇಲ್ಲ - ಸ್ಪರ್ಷವೂ ಇಲ್ಲ. ಇದರಿಂದಲೇ ನಮ್ಮ ಮಕ್ಕಳಲ್ಲಿ ನಿರೋಧಕ ಶಕ್ತಿ ಸಂಚಯವಾಗಿಲ್ಲ.
ಏಕೆಂದರೆ ಮನೆ / ಶಾಲೆಗಳನ್ನು ಸ್ವಛ್ಚತೆ ಯಿಂದಿರಿಸುವತ್ತ ಬಳಸುತ್ತಿರುವ ಬಹುತೇಕ ರಾಸಾಯನಿಕಗಳು (disinfectant wipes, antibiotics, hand sanitizers etc) ಉಪಯುಕ್ತ ಜೀವಾಣುಗಳನ್ನು ನಾಶಗೊಳಿಸುತ್ತಿವೆ. ಕೆಡುಕು ತರುವ ಜೀವಜಂತುಗಳೇ ಇಂದು ನಮ್ಮ ಸುತ್ತಮುತ್ತಲೂ ಹರಡಿಕೊಂಡಿವೆ.
ಅಂದಹಾಗೆ, ಇದು ಬಟ್ಟೆ ಸಾಬೂನು ಪುಡಿ ಪ್ರಚಾರ ಮಾಡಲು ತೆಗೆದ ಚಿತ್ರವಲ್ಲ.
PC: Soil Vasu
ಭೂಮಿಯ ಮೇಲಿರುವ ಸಿಹಿನೀರಿನ ಒಟ್ಟು ಪ್ರಮಾಣದ ಶೇ 20ರಷ್ಟು ಇರುವುದು ಬ್ರೆಜಿಲ್ನ ಅಮೆಜಾನ್ ಮಳೆಕಾಡು ಪ್ರದೇಶದಲ್ಲಿರುವ ಅಮೆಜಾನ್ ನದಿಯಲ್ಲಿ. ಆದರೆ, ಈ ನದಿಯ ಎರಡು ಪ್ರಮುಖ ಉಪನದಿಗಳಾದ ರಿಯೊ ನೆಗ್ರೊ ಹಾಗೂ ಮಡೈರಾ ಬತ್ತಿ ಹೋಗಿವೆ. ಸೊಲಿಮೊಸ್, ಜುರುವಾ, ಪ್ಯುರಸ್ ನದಿಗಳಲ್ಲಿನ ನೀರಿನ ಪ್ರಮಾಣವು ಹಿಂದೆಂದೂ ಕಾಣದ ಮಟ್ಟಿಗೆ ಕುಸಿದಿದೆ. ಅಮೆಜಾನ್ ಮಳೆಕಾಡು ಪ್ರದೇಶದ ವ್ಯಾಪ್ತಿ ಕೂಡ ಹಂತ ಹಂತವಾಗಿ ಕುಗ್ಗುತ್ತಾ ಬಂದಿದೆ. ಅಮೆಜಾನ್ ಮಳೆಕಾಡು ಪ್ರದೇಶಕ್ಕೆ ಬರ ಬಡಿದಿದೆ.
ಈ ಪ್ರದೇಶದಲ್ಲಿ ತೀವ್ರ ಪ್ರವಾಹ ಹಾಗೂ ತೀವ್ರ ಬರ ಹೊಸತೇನಲ್ಲ. ಆದರೆ, ಈ ಬಾರಿ ಬಂದಿರುವ ಬರದ ತೀವ್ರತೆ ಹೆಚ್ಚಿದೆ ಮತ್ತು ಈ ರೀತಿಯ ತೀವ್ರ ಬರವು ಭವಿಷ್ಯದಲ್ಲಿ ಸಾಮಾನ್ಯವಾಗಲಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ವನ್ಯಜೀವಿ ಸಪ್ತಾಹ
ಅಕ್ಟೋಬರ್ 2-8
ಸುಳ್ಯ: ವಿಷಕಾರಿ ಹಣ್ಣನ್ನು ಮೈರೋಲ್ ಹಣ್ಣು ಎಂದು ಭಾವಿಸಿ ಜ್ಯೂಸ್ ಮಾಡಿ ಕುಡಿದ ಮಹಿಳೆಯೊಬ್ಬರು ಸಾವನ್ನಪ್ಪಿದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಬೆಳ್ಳಾರೆ ಸಮೀಪದ ಶೇಣಿ ಎಂಬಲ್ಲಿ ನಡೆದಿದೆ.
ಮೃತರನ್ನು ಇಲ್ಲಿನ ಶೇಣಿ ಸಮೀಪದ ಕುಳ್ಳಾಜೆ ನಿವಾಸಿ ಲೀಲಾವತಿ (35)ಎಂದು ಗುರುತಿಸಲಾಗಿದೆ.
ವಾರದ ಹಿಂದೆ ಲೀಲಾವತಿಯ ತಂದೆ ಮೈರೋಲ್ ಹಣ್ಣಿನ ಜ್ಯೂಸ್ ಮಾಡಿ ಕುಡಿದಿದ್ದರು.
ಲೀಲಾವತಿ ಅವರು ಕೂಡ ಮೈರೋಲ್ ಹಣ್ಣಿನ ಜ್ಯೂಸ್ ಸೇವನೆ ಮಾಡಿದ್ದರು.
ಪರಿಣಾಮ ಲೀಲಾವತಿ ಅವರಿಗೆ ವಾಂತಿ, ಭೇದಿಯಾಗಿದ್ದು, ಸುಳ್ಯ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಹೆಚ್ಚಿನ ಚಿಕಿತ್ಸೆಗೆ ಮಂಗಳೂರಿಗೆ ದಾಖಲಿಸುವ ಸಂದರ್ಭ ದಾರಿ ಮಧ್ಯೆ ಅವರು ಸಾವನ್ನಪಿದ್ದಾರೆ ಎಂದು ತಿಳಿದು ಬಂದಿದೆ.
ಈ ಮೈರೋಲ್ ಎನ್ನುವ ಹಣ್ಣು ಹೆಚ್ಚಾಗಿ ಕಾಡಿನಲ್ಲಿ ಕಂಡು ಬರುತ್ತದೆ.
ಲೀಲಾವತಿ ಅವರು ಮೈರೋಲ್ ಹಣ್ಣಿನ ಬದಲು ವಿಷಕಾರಿ ಅಂಶವಿರುವ ಕಾಯಿಯ ಸೇವನೆ ಸಾವನ್ನಪ್ಪಿರುವ ಶಂಕೆ ವ್ಯಕ್ತವಾಗಿದೆ.
Source: nammakudlanews.com
ಆಮೆಯೆಂಬ ಅದ್ಭುತ ಪ್ರಾಣಿ !
ಆಮೆ ನಿಧಾನ ವೇಗಕ್ಕೆ ಹೆಸರುವಾಸಿ. ಆದರೆ ಅದು ಜೀವಜಗತ್ತಿನ ಓಟದಲ್ಲಿ ಹಿಂದೆ ಬಿದ್ದಿಲ್ಲ. ಆಮೆ ಮತ್ತು ಮೊಲದ ಓಟದ ಸ್ಪರ್ಧೆಯ ಕಥೆಯನ್ನು ಸಾಕಷ್ಟು ಬಾರಿ ಕೇಳಿ ಕೊನೆಗೆ ಆಮೆಯ ನಿಧಾನವೇ ಪ್ರಧಾನದ ವೇಗವೇ ಉತ್ತಮ ಎಂದು ತೀರ್ಮಾನಿಸಿಯಾಗಿ ಶತಮಾನಗಳೇ ಕಳೆದಿವೆ. ಮೊಲ ಮತ್ತು ಆಮೆ ನಡುವಿನ ಓಟದ ಕಥೆಯು ಅದ್ಭುತವಾದ ಮಕ್ಕಳ ಕಥೆಯಾಗಿದೆ. ನಿಧಾನ ಮತ್ತು ಸ್ಥಿರವಾದ ವೇಗ ಹೊಂದಬೇಕು ಎಂಬುದಕ್ಕೆ ಈ ಕಥೆಯು ಮಕ್ಕಳಿಗೆ ನಿಧಾನ ಮತ್ತು ನಿರಂತರ ಪರಿಶ್ರಮದ ಮಹತ್ವವನ್ನು ಕಲಿಸುತ್ತದೆ.ಆದರೆ ಇದೊಂದು ಕಾಲ್ಪನಿಕ ಕಥೆ. ಆಮೆ ಎಂದೂ ಮೊಲದ ಜೊತೆ ಸ್ಪರ್ಧಿಸಿಲ್ಲ.
ಆಮೆ "ಟೆಸ್ಟುಡಿನಿಡೆ" ಕುಟುಂಬದ ಸರೀಸೃಪ ವರ್ಗದ ಸದಸ್ಯ. ಆಂಗ್ಲ ಭಾಷೆಯಲ್ಲಿ ಟಾರ್ಟೈಸ್ ಮತ್ತು ಟರ್ಟಲ್ ಎಂಬ ಎರಡು ವರ್ಗಗಳಿವೆ. ಜಲಚರ ಆಮೆಗಳಿಗೆ ಟರ್ಟಲ್ ಎಂದು ಕರೆದರೆ ಭೂಚರ ಆಮೆಗಳಿಗೆ ಟಾರ್ಟೈಸ್ ಎನ್ನುತ್ತಾರೆ. ಆದರೆ ಕನ್ನಡದಲ್ಲಿ ಎಲ್ಲವನ್ನೂ ಆಮೆ ಎಂದು ಕರೆಯಲಾಗುತ್ತಿದೆ. ಇವುಗಳಿಗೆ ಅನೇಕ ಗುರುತರ ವ್ಯತ್ಯಾಸಗಳಿವೆ. ಟರ್ಟಲ್ಲುಗಳು ಸಮುದ್ರದ ನೀರಿನಲ್ಲಿದ್ದರೆ ಟಾರ್ಟೈಸುಗಳು ಭೂಮಿಯಲ್ಲಿ ಮತ್ತು ಸಿಹಿ ನೀರಿನಲ್ಲಿ ವಾಸಿಸುತ್ತವೆ.
ಜಲಚರ ಆಮೆಗಳು (ಟರ್ಟಲ್ಲುಗಳು)
-ಸಮುದ್ರದ ನೀರಿನಲ್ಲಿರುತ್ತವೆ ಅಥವಾ ಸಿಹಿನೀರಿನಲ್ಲಿ ವಾಸಿಸುತ್ತವೆ.
-ಗಾತ್ರದಲ್ಲಿ ಚಿಕ್ಕದಾಗಿರುತ್ತವೆ.
-ತಲೆಯನ್ನು ಚಿಪ್ಪಿನೊಳಗೆ ಸಂಪೂರ್ಣವಾಗಿ ಎಳೆದುಕೊಳ್ಳಲಾರವು.
-ಸರ್ವಭಕ್ಷಕಗಳಿವು. ಕೆಲವೊಮ್ಮೆ ಇವು ಮಾಂಸವನ್ನು ಸೇವಿಸುತ್ತವೆ.
--ತಲೆಯನ್ನು ಚಿಪ್ಪಿನೊಳಗೆ ಸಂಪೂರ್ಣವಾಗಿ ಎಳೆದುಕೊಳ್ಳಬಲ್ಲವು.
ಭೂಚರ ಆಮೆಗಳು (ಟಾರ್ಟೈಸುಗಳು )
-ದೊಡ್ಡ ಗಾತ್ರದವು
-ಹಿಂದಿನ ಮತ್ತು ಮುಂದಿನ ಪಾದಗಳು ಜಾಲಪಾದಗಳು ಭೂಮಿಯ ಮೇಲೆ ನಡೆದಾಡಲು ಅನುಕೂಲವಾಗುವಂತೆ ಬೆರಳುಗಳನ್ನು ಹೊಂದಿವೆ
-ಶುದ್ಧ ಸಸ್ಯಾಹಾರಿಗಳು
ಆಮೆಯ ವೈಶಿಷ್ಟ್ಯಗಳು
ಆಮೆಯ ಚಿಪ್ಪು ಅತ್ಯಂತ ವಿಶಿಷ್ಟವಾಗಿದ್ದು ಆಮೆಯ ರಕ್ಷಣೆಯಲ್ಲಿ ಅತ್ಯಂತ ಮಹತ್ವದ ಪಾತ್ರ ವಹಿಸುತ್ತದೆ. ವಿಧದ ಆಮೆ ಜಾತಿಗಳು ಸಮತಟ್ಟಾದ ತಳವನ್ನು ಹೊಂದಿರುವ ಗೋಳಾಕಾರದ ಚಿಪ್ಪುಗಳನ್ನು ಹೊಂದಿರುತ್ತವೆ. ಪ್ರಪಂಚದಲ್ಲಿ ಸುಮಾರು ೩೫೦ಕ್ಕೂ ಹೆಚ್ಚಿನ ವಿವಿಧ ಆಮೆಯ ಸಂತತಿಗಳಿವೆ. ಇವು ಇರದ ಜಾಗಗಳೇ ಇಲ್ಲ ಎನ್ನಬಹುದು. ಇವು ಭೂಮಿ, ಸಮುದ್ರದ ನೀರು, ನದಿ ಮತ್ತು ಕೆರೆ ಕೊಳ್ಳಗಳ ಸಿಹಿ ನೀರಿನಲ್ಲಿ ಎಲ್ಲೆಡೆ ವಾಸಿಸುತ್ತವೆ.
ಆಮೆಯನ್ನು ಅವುಗಳ ವಿಶಿಷ್ಟವಾದ ಹಿಂಗಾಲು ಅಂಗರಚನಾಶಾಸ್ತ್ರದಿಂದ ಸುಲಭವಾಗಿ ಗುರುತಿಸಬಹುದು. ಅವಗಳ ಹಿಂಗಾಲುಗಳು ಎಲಿಫೆಂಟೈನ್ ಅಥವಾ ಸಿಲಿಂಡರಾಕಾರದವು. ಅವುಗಳ ಮುಂಗಾಲು ಮತ್ತು ಹಿಂಗಾಲುಗಳಲ್ಲಿರುವ ಪ್ರತಿಯೊಂದು ಅಂಕೆಯು ಎರಡು ಅಥವಾ ಅದಕ್ಕಿಂತ ಕಡಿಮೆ ಬೆರಳಿನಂತ ಆಕಾರಗಳನ್ನು ಹೊಂದಿರುತ್ತದೆ. ಬೆದರಿಕೆಯಿಂದ ತಮ್ಮನ್ನು ತಾವು ರಕ್ಷಿಸಿಕೊಳ್ಳಲು ತಮ್ಮ ತಲೆ ಮತ್ತು ಕುತ್ತಿಗೆಯನ್ನು ನೇರವಾಗಿ ಹಿಮ್ಮುಖವಾಗಿ ಚಿಪ್ಪಿನೊಳಗೆ ಹಿಂತೆಗೆದುಕೊಳ್ಳುವ ಸಾಮರ್ಥ್ಯವನ್ನು ಹೊಂದಿವೆ. ಅವುಗಳ ಚಿಪ್ಪು ಅವುಗಳ ಅತ್ಯಂತ ಗಟ್ಟಿಯಾಗಿದ್ದು ಆಮೆಯ ರಕ್ಷಣೆಗೆ ಸದಾ ಅವಶ್ಯವಿದೆ.
ಆಮೆಗಳು ಏನು ತಿನ್ನುತ್ತವೆ?
ಹೆಚ್ಚಿನ ಆಮೆ ಜಾತಿಗಳು ಸಸ್ಯಾಹಾರಿಗಳು.ಅವು ತಮ್ಮ ಪೌಷ್ಟಿಕಾಂಶದ ಅಗತ್ಯಗಳಿಗಾಗಿ ಹುಲ್ಲುಗಳು, ಕಳೆಗಳು, ಎಲೆಗಳು, ಹೂವುಗಳು ಮತ್ತು ಹಣ್ಣುಗಳ ಮೇಲೆ ಹೆಚ್ಚು ಅವಲಂಬಿತವಾಗಿರುತ್ತವೆ. ಆಮೆಗಳು ಸಸ್ಯಾಹಾರಿಗಳೇ ಆಗಿದ್ದರೂ ಆಮೆಗಳ ಮರಿಗಳು ಮತ್ತು ನೀರಾಮೆಗಳು ಹೆಚ್ಚುವರಿ ಪ್ರೋಟೀನ್ಗಾಗಿ ಹುಳುಗಳು ಅಥವಾ ಕೀಟಗಳು ಅಥವಾ ಲಾರ್ವಾಗಳನ್ನು ಸೇವಿಸುತ್ತವೆ.
ಆಮೆಗಳು ಎಲ್ಲಿ ವಾಸಿಸುತ್ತವೆ?
ಆಸ್ಟ್ರೇಲಿಯಾ ಮತ್ತು ಅಂಟಾರ್ಟಿಕಾವನ್ನು ಹೊರತುಪಡಿಸಿ ಆಮೆಗಳು ಎಲ್ಲಾ ಕಡೆ ವಾಸಿಸುತ್ತವೆ. ಆಮೆ ಗಳನ್ನು ಪ್ರಪಂಚದ ಅನೇಕ ಕಡೆ ಸಾಕು ಪ್ರಾಣಿಯನ್ನಾಗಿ ಬಳಸುತ್ತಾರೆ. ಆಮೆಗಳನ್ನು ಆಹಾರವನ್ನಾಗಿ ಬಳಸುವುದು ಅಪರಾಧ.
ಆಮೆ ಮತ್ತು ಮಾನವ ಸಂಸ್ಕೃತಿ
ಆಮೆ ಮಾನವ ಸಂಸ್ಕೃತಿಯ ಅವಿಭಾಜ್ಯ ಅಂಗವಾಗಿದೆ. ಚೀನೀ ಸಂಸ್ಕೃತಿಗಳಲ್ಲಿ, ಆಮೆ ದೀರ್ಘಾಯುಷ್ಯದ ಸಂಕೇತವಾಗಿದೆ. ಕೆಲವು ಚೀನೀ ಸಂಸ್ಕೃತಿಗಳಲ್ಲಿ, ಭವಿಷ್ಯವನ್ನು ಮಾಡಲು ಆಮೆ ಚಿಪ್ಪುಗಳನ್ನು ಮೂಳೆಗಳಾಗಿ ಬಳಸಲಾಗುತ್ತದೆ. ಆರಂಭಿಕ ಕ್ರಿಶ್ಚಿಯನ್ ಧರ್ಮದಲ್ಲಿ ಅವುಗಳನ್ನು ಅಶುದ್ಧ ಪ್ರಾಣಿಗಳಾಗಿ ನೋಡಲಾಗುತ್ತದೆ. ಗ್ರೀಕ್ ಸಂಸ್ಕೃತಿಯಲ್ಲಿ, ಆಮೆ ಪ್ರಾಚೀನ ದೇವರ ಸಂಕೇತವಾಗಿದೆ. ಭಾರತದಲ್ಲಿ ಆಮೆ ಮಹಾವಿಷ್ಣುವಿನ ಎರಡನೆ ಅವತಾರವಾದ ಕೂರ್ಮಾವತಾರ. ಸಮುದ್ರಮಥನದ ಸಮಯದಲ್ಲಿ ಸಮುದ್ರದಲ್ಲಿ ಮುಳುಗುತ್ತಿದ್ದ ಮಂದಾರಪರ್ವತವನ್ನು ಆಮೆಯ ರೂಪ ಧರಿಸಿ ಬೆನ್ನಮೇಲೆ ಹೊತ್ತು ಸಮುದ್ರ ಮಥನಕ್ಕೆ ಸಹಕರಿಸಿದ ಎನ್ನಲಾಗಿದೆ.
ಆಮೆಯ ಸಂತಾನೋತ್ಪತ್ತಿ ಮತ್ತು ಜೀವನ ಚಕ್ರ
ಗಂಡು ಮತ್ತು ಹೆಣ್ಣು ಆಮೆಗಳ ಮಿಲನದಿಂದ ಫಲೀಕರಣ ಹೊಂದಿದ ೧೦-೨೦ ಮೊಟ್ಟೆಯನ್ನು ಆಮೆ ಇಡುತ್ತದೆ. ಭೂಮಿಯ ಆಮೆಗಳು ಕಾವು ಕೊಡುತ್ತವೆ. ಸಮುದ್ರದ ಆಮೆಗಳು ಮೊಟ್ಟೆ ಇಟ್ಟು ಮರಳಿನಲ್ಲಿ ಮುಚ್ಚಿದ ನಂತರ ಆ ಕಡೆ ತಲೆ ಹಾಕುವುದಿಲ್ಲ. ಮೊಟ್ಟೆಯಿಂದ ಮರಿಯಾಗಲು ಸುಮಾರು 60 ರಿಂದ 120 ದಿನಗಳನ್ನು ತೆಗೆದುಕೊಳ್ಳುತ್ತದೆ. ಕಾವು ನಂತರ, ಮೊಟ್ಟೆಯೊಡೆಯುವ ಮರಿಯು ತನ್ನ ಚಿಪ್ಪುಗಳನ್ನು ಮುರಿಯಲು ಮೊಟ್ಟೆಯ ಹಲ್ಲನ್ನು ಬಳಸುತ್ತದೆ. ಮೊಟ್ಟೆಯೊಡೆದ ನಂತರ ಶರೀರಕ್ಕೆ ಅಂಟಿಕೊಂಡ ಭ್ರೂಣಚೀಲವು ಸುಮಾರು ೭ ದಿನಗಳ ವರೆಗೂ ಆಹಾರ ಒದಗಿಸುತ್ತದೆ.
ಆಮೆಗಳ ಮಿಲನ ಕ್ರಿಯೆ
ಈ ಪ್ರಕ್ರಿಯೆಯು ಪ್ರಣಯದ ನಡವಳಿಕೆಯೊಂದಿಗೆ ಪ್ರಾರಂಭವಾಗುತ್ತದೆ, ಅಲ್ಲಿ ಗಂಡು ಆಮೆ ಹೆಣ್ಣನ್ನು ಸಮೀಪಿಸುತ್ತದೆ. ಸಾಮಾನ್ಯವಾಗಿ ತಲೆ ಬಡಿಯುವುದು, ಸುತ್ತುವುದು ಮತ್ತು ಧ್ವನಿಯಂತಹ ಹಲವಾರು ನಡವಳಿಕೆಗಳನ್ನು ಒಳಗೊಂಡಿರುತ್ತದೆ. ಗಂಡು ಹೆಣ್ಣನ್ನು ಸಂಯೋಗಕ್ಕೆ ಗ್ರಾಹ್ಯವಾಗಿದ್ದರೆ, ಆರೋಹಿಸಲು ಪ್ರಯತ್ನಿಸುತ್ತದೆ. ಗಂಡು ಆಮೆ ತನ್ನ ಕ್ಲೋಯೆಕಾವನ್ನು (ವಿಸರ್ಜನೆ ಮತ್ತು ಸಂತಾನೋತ್ಪತ್ತಿಗೆ ಇರುವ ಏಕ ಅಂಗ) ಹೆಣ್ಣಿನ ಕ್ಲೋಯೆಕಾದೊಂದಿಗೆ ಯಶಸ್ವಿಯಾಗಿ ಜೋಡಿಸಿದಾಗ ಸಂಭವಿಸುತ್ತದೆ. ಸಂಯೋಗದ ಸಮಯದಲ್ಲಿ ಗಂಡು ಆಮೆ ತನ್ನ ವೀರ್ಯವನ್ನು ಹೆಣ್ಣಿನ ಜನನಾಂಗಕ್ಕೆ ವರ್ಗಾಯಿಸುತ್ತದೆ. ಆಮೆಗಳಲ್ಲಿ ಶಿಶ್ನ ಇರುವುದಿಲ್ಲ ಮತ್ತು ಸಂಯೋಗ ಪ್ರಕ್ರಿಯೆಯು ಪರೋಕ್ಷವಾಗಿರುತ್ತದೆ. ಸಂಯೋಗದ ನಂತರ, ಗಂಡು ಮತ್ತು ಹೆಣ್ಣು ಆಮೆಗಳು ಒಂದು ಅವಧಿಯವರೆಗೆ ಒಟ್ಟಿಗೆ ಇರುತ್ತವೆ. ಆದರೆ ಅವು ಸಾಮಾನ್ಯವಾಗಿ ತಮ್ಮ ಪ್ರತ್ಯೇಕ ಮಾರ್ಗಗಳಲ್ಲಿ ಹೋಗುತ್ತವೆ. ಹೆಣ್ಣು ಆಮೆಗಳು ಸಾಮಾನ್ಯವಾಗಿ ತಮ್ಮ ಮೊಟ್ಟೆಗಳನ್ನು ಇಡಲು ಸೂಕ್ತವಾದ ಗೂಡುಕಟ್ಟುವ ತಾಣಗಳನ್ನು ಕಂಡುಕೊಳ್ಳುತ್ತವೆ. ಗಂಡು ಆಮೆ ಇತರ ಸಂಭಾವ್ಯ ಸಂಗಾತಿಗಳನ್ನು ಹುಡುಕುವುದನ್ನು ಮುಂದುವರಿಸುತ್ತದೆ.
ಹೆಣ್ಣು ಆಮೆಗಳು ಸಾಮಾನ್ಯವಾಗಿ ಸೂಕ್ತವಾದ ಸ್ಥಳದಲ್ಲಿ ಗೂಡನ್ನು ಅಗೆಯುತ್ತವೆ. ನೆಲದಲ್ಲಿ ರಂಧ್ರವನ್ನು ಅಗೆಯಲು ತಮ್ಮ ಹಿಂಗಾಲುಗಳನ್ನು ಬಳಸುತ್ತವೆ. ನಂತರ ಅವು ತಮ್ಮ ಮೊಟ್ಟೆಗಳನ್ನು ಗೂಡಿನಲ್ಲಿ ಇಟ್ಟು, ಅವುಗಳನ್ನು ಮಣ್ಣಿನಿಂದ ಮುಚ್ಚಿ, ಕಾವುಕೊಡಲು ಬಿಡುತ್ತವೆ. ಸ್ವತ: ಅವು ಕಾವು ಕೊಡುವುದಿಲ್ಲ. ಕಾವು ಕಾಲಾವಧಿಯು ಆಮೆಯ ಜಾತಿಗಳು ಮತ್ತು ಪರಿಸರ ಪರಿಸ್ಥಿತಿಗಳನ್ನು ಅವಲಂಬಿಸಿ ಬದಲಾಗುತ್ತದೆ.
ಸಮುದ್ರದಲ್ಲಿರುವ ಗರ್ಭಿಣಿ ಹೆಣ್ಣು ಆಮೆಗಳು ತೀರ ಪ್ರದೇಶಕ್ಕೆ ತೆವಳಿಕೊಂಡಂತೆ ಬರುತ್ತವೆ. ಅದರ ಹೊಟ್ಟೆಯಲ್ಲಿ ಸುಮಾರು 100ರಷ್ಟು ಮೊಟ್ಟೆ ಗಳಿರುತ್ತವೆ. ಹೀಗೆ ತೆವಳಿಕೊಂಡಂತೆ ಬರುವ ಆಮೆ ದಾರಿಯುದ್ದಕ್ಕೂ ಕಣ್ಣನ್ನು ಅತ್ತಿತ್ತ ತಿರುಗಿಸುತ್ತಲೇ ಇರುತ್ತದೆ. ಕೊನೆಗೆ ಅದು ಒಂದು ಸ್ಥಳದಲ್ಲಿ ನಿಲ್ಲುತ್ತದೆ. ಅತ್ತಿತ್ತ ನೋಡಿ ಮರಳನ್ನು ಅಗೆಯಲು ಪ್ರಾರಂಭಿಸುತ್ತದೆ. ಅನುಮಾನ ಬಂದಾಗಲೆಲ್ಲ ಅದು ಅಗೆಯುವುನ್ನು ನಿಲ್ಲಿಸಿ ಕಣ್ಣನ್ನು ಅತ್ತಿತ್ತ ಹೊರಳಿಸಿ ಪರಿಶೀಲನೆ ನಡೆಸುವುದಿದೆ. ಹೀಗೆ ಪರಿಶೀಲಿಸುತ್ತಾ ಅಗೆಯುತ್ತಾ ಆಳ ಗುಂಡಿಯೊಂದು ನಿರ್ಮಾಣವಾದ ಬಳಿಕ ಮೊಟ್ಟೆಗಳನ್ನಿಡುತ್ತವೆ ಮತ್ತು ಅಗೆಯುವುದಕ್ಕಿಂತ ಮೊದಲು ಆ ಸ್ಥಳ ಹೇಗಿತ್ತೋ ಅದೇ ರೀತಿಯಲ್ಲಿ ಗುಂಡಿಯನ್ನು ಮರಳಿನಿಂದ ಮುಚ್ಚಿಬಿಡುತ್ತದೆ. ಆದರೆ, ಅಲ್ಲಿಗೇ ಅದರ ಕರ್ತವ್ಯ ಮುಗಿಯುವುದಿಲ್ಲ.
ಅದು ಆ ಗುಂಡಿಯಿಂದ ತುಸು ದೂರದಲ್ಲಿ ಇಂಥದ್ದೇ ಇನ್ನೊಂದು ಗುಂಡಿಯನ್ನು ತೋಡುತ್ತದೆ. ಅಷ್ಟಕ್ಕೂ, ಪುಟ್ಟ ಪುಟ್ಟ ಕಾಲುಗಳಿರುವ ಮತ್ತು ಭಾರ ದೇಹದ ಆಮೆಗೆ ಗುಂಡಿ ತೋಡುವುದು ಸುಲಭ ಅಲ್ಲ. ಮರಳನ್ನು ಸರಿಸಿ ಗುಂಡಿ ತೋಡುತ್ತಾ ಹೋದಂತೆಲ್ಲಾ ಸರಿಸಿದ ಮರಳು ಮತ್ತೆ ಮತ್ತೆ ಗುಂಡಿಯೊಳಗೆ ಜಾರಿ ಬೀಳುತ್ತಲೂ ಇರುತ್ತದೆ. ಹೀಗೆ ಸೆಣಸಾಡಿ ಸೆಣಸಾಡಿ ಇನ್ನೊಂದು ಗುಂಡಿಯನ್ನು ಅದು ಸಿದ್ಧಪಡಿಸುತ್ತದೆ. ಆದರೆ ಈ ಗುಂಡಿಯನ್ನು ಅದು ಮೊದಲಿನ ಗುಂಡಿಯಂತೆ ಮರಳಿನಿಂದ ಮುಚ್ಚುವುದಿಲ್ಲ. ಬಾಹ್ಯದೃಷ್ಟಿಗೆ ಗೋಚರವಾಗುವಂತೆ ಆ ಗುಂಡಿಯನ್ನು ಹಾಗೆಯೇ ಇರಗೊಟ್ಟು ಸೂರ್ಯೋದಯಕ್ಕಿಂತ ಮೊದಲೇ ಅದು ಸಮುದ್ರ ಸೇರಿಕೊಳ್ಳುತ್ತದೆ.
ಮೊಟ್ಟೆಯಿಟ್ಟ ಗುಂಡಿಯನ್ನು ಮುಚ್ಚಿ ಮೊಟ್ಟೆಯಿಡದ ಗುಂಡಿಯನ್ನು ಮುಚ್ಚದೇ ಬಿಟ್ಟು ಬಿಡುವುದರ ಹಿಂದೆ ತನ್ನ ಸಂತಾನ ವನ್ನು ಕಾಪಾಡುವ ಅಪಾರ ಕಾಳಜಿಯ ಕತೆಯಿದೆ. ಆಮೆಯ ಮೊಟ್ಟೆಯನ್ನು ತಿನ್ನುವುದಕ್ಕೆಂದೇ ನರಿ, ಸಮುದ್ರ ಹಕ್ಕಿ ಮತ್ತು ಏಡಿಗಳು ಕಾಯುತ್ತಿರುತ್ತವೆ. ಮರಳನ್ನು ಅಗೆದು ಗುಂಡಿ ತೋಡಿ ಆಮೆ ಮೊಟ್ಟೆ ಇಡುತ್ತದೆ ಎಂಬುದೂ ಅವಕ್ಕೆ ಗೊತ್ತಿದೆ. ಅದನ್ನು ಕಬಳಿಸುವುದಕ್ಕೆ ಅವು ಕಾಯುತ್ತಲೂ ಇರುತ್ತವೆ. ಆದ್ದರಿಂದ ಅವನ್ನು ವಂಚಿಸುವುದಕ್ಕಾಗಿ ಆಮೆ ಕಂಡುಕೊಂಡ ಉಪಾಯವೇ ಈ "ನಕಲಿ ಗುಂಡಿ"ಗಳು. ಅವು ಈ ಗುಂಡಿಯಲ್ಲಿ ಮೊಟ್ಟೆಯನ್ನು ಹುಡುಕಿ ಹೊರಟು ಹೋಗಬೇಕೆಂಬುದು ಆಮೆಯ ಬಯಕೆ. ಆಮೆಗಳು ತಮ್ಮ ಜೀವಿತಾವಧಿಯಲ್ಲಿ ಏನಿಲ್ಲವೆಂದರೂ ಸುಮಾರು 50 ರಿಂದ 60 ಸಾವಿರ ಮೊಟ್ಟೆಗಳನ್ನಿಡುತ್ತವೆ.
ಇಡೀ ಪ್ರಕ್ರಿಯೆಯಲ್ಲಿ ಗಂಡು ಆಮೆಯ ಯಾವ ಪಾತ್ರವೂ ಇರುವುದಿಲ್ಲ. ಗರ್ಭಿಣಿ ಆಮೆ ತಡರಾತ್ರಿ ಸಮುದ್ರದಿಂದ ಹೊರಬಂದು ತೀರ ಪ್ರದೇಶಕ್ಕೆ ಸಾಗುವಾಗ ಅದು ಕಾವಲು ನಿಲ್ಲುವುದೂ ಇಲ್ಲ. ಮೊಟ್ಟೆ ಇಡುವುದಕ್ಕೆಂದು ಗುಂಡಿ ಅಗೆಯುವಾಗ ನೆರವು ನೀಡುವುದೂ ಇಲ್ಲ. ಒಂಟಿಯಾಗಿಯೇ ಸಮುದ್ರದಿಂದ ಹೊರಬಂದು ತನ್ನ ಸಂತಾನವನ್ನು ಬೆಳೆಸುವ ಪ್ರಕ್ರಿಯೆಯಲ್ಲಿ ಒಂಟಿಯಾಗಿಯೇ ತೊಡಗಿಸಿಕೊಂಡು ಕೊನೆಗೆ ಒಂಟಿಯಾಗಿಯೇ ಮರಳಿ ಸಮುದ್ರ ಸೇರುವ ಈ ಹೆಣ್ಣು ಆಮೆಗಳು ಪ್ರಕೃತಿಯ ಒಂದು ವಿಶಿಷ್ಟ ಜೀವಿ. ಹೆಣ್ಣಿನ ಸಾಮರ್ಥ್ಯ, ಬುದ್ಧಿವಂತಿಕೆ ಮತ್ತು ಸಂತಾನದ ಕುರಿತಾದ ಕಾಳಜಿಗೆ ಅನ್ವರ್ಥ ಈ ಆಮೆ. ಮೊಟ್ಟೆಗಳನ್ನು ಹೇಗೆ ಶತ್ರು ಗಳಿಂದ ರಕ್ಷಿಸಿಕೊಳ್ಳಬೇಕು ಎಂಬ ಸೂಕ್ಷ್ಮತೆಯೂ ಅದಕ್ಕೆ ಗೊತ್ತಿದೆ. ನಿಧಾನವಾಗಿ ಚಲಿಸುವ ತಾನು ಸಮುದ್ರದಿಂದ ಯಾವಾಗ ತೀರಕ್ಕೆ ಬರಬೇಕು ಮತ್ತು ಯಾವಾಗ ಸಮುದ್ರ ಸೇರಿಕೊಳ್ಳಬೇಕು ಎಂಬ ಸಮಯ ಪ್ರಜ್ಞೆಯೂ ಅದಕ್ಕಿದೆ.
ಮರಳನ್ನು ಮೊಟ್ಟೆಯಲ್ಲಿ ಅಡಗಿಸಿಟ್ಟು ಹೊರಟು ಹೋಗುವ ಆಮೆ ಮರಳಿ ಮೊಟ್ಟೆಯನ್ನು ಪರಿಶೀಲಿಸುವುದಕ್ಕೋ ಅಥವಾ ಮರಿಗಳನ್ನು ಕರೆದುಕೊಂಡು ಹೋಗುವುದಕ್ಕೋ ಎಂದೂ ಬರುವುದೇ ಇಲ್ಲ. ಆ ಬಳಿಕ ಬದುಕುಳಿಯುವ ಕೆಲಸವನ್ನು ಮೊಟ್ಟೆ ಮತ್ತು ಅದರಿಂದ ಹೊರಬರುವ ಮರಿಗಳು ಸ್ವಯಂ ಹೊತ್ತುಕೊಳ್ಳಬೇಕು. ಸುಮಾರು 55 ದಿನಗಳ ವರೆಗೆ ಎಲ್ಲವೂ ಸಹಜವಾಗಿಯೇ ಇರುತ್ತದೆ. ಆದರೆ, 55 ದಿನಗಳ ಬಳಿಕ ಮೊಟ್ಟೆ ಇರುವ ಗುಂಡಿಯಲ್ಲಿ ಚಲನೆ ಕಾಣಿಸಿಕೊಳ್ಳುತ್ತದೆ. ಕ್ಪಣಮಾತ್ರದಲ್ಲಿ ಒಂದೊಂದೇ ಮರಿ ಆಮೆಗಳು ಭೂಮಿಯೊಳಗಿನಿಂದ ಹೊರಬರಲು ಪ್ರಾರಂಭಿಸುತ್ತವೆ. ಹಾಗಂತ, ಈ ಮರಿಗಳಿಗೆ ಸಮುದ್ರದ ದಾರಿಯನ್ನು ತೋರಿಸುವುದಕ್ಕೆ ಅಮ್ಮ ಇಲ್ಲ. ಒಂದುವೇಳೆ ಸಮುದ್ರ ಸೇರಿಕೊಳ್ಳದಿದ್ದರೆ ಅದು ಜೀವಂತ ಉಳಿಯುವುದಕ್ಕೆ ಸಾಧ್ಯವೂ ಇಲ್ಲ. ಅದನ್ನು ತಿನ್ನುವುದಕ್ಕೆಂದೇ ಶತ್ರುಗಳು ಹುಡುಕುತ್ತಾ ತಿರುಗುತ್ತಿರುವುದರಿಂದ ಅಪಾಯ ಬೆನ್ನ ಹಿಂದೆಯೇ ಇರುತ್ತದೆ. ಭೂಮಿಯೊಳಗಿನಿಂದ ಒಂಟಿಯಾಗಿಯೇ ಬಾಹ್ಯ ಜಗತ್ತನ್ನು ಪ್ರವೇಶಿಸುವ ಪುಟ್ಟ ಪುಟ್ಟ ಆಮೆಗಳು ಆ ಕ್ಷಣದಲ್ಲೇ ಶತ್ರುಗಳಿಂದ ರಕ್ಷಿಸಿಕೊಳ್ಳುವ ಕಲೆಯನ್ನೂ ಕಲಿತುಕೊಳ್ಳಬೇಕು. ತಮ್ಮ ಸುರಕ್ಷಿತ ಜಾಗವನ್ನು ಆ ಶೈಶವಾವಸ್ಥೆಯಲ್ಲೇ ಸ್ವತಃ ಕಷ್ಟಪಟ್ಟು ಕಂಡುಕೊಳ್ಳಬೇಕು.
ಈ ಮರಿಗಳು ಭೂಮಿಯೊಳಗಿನಿಂದ ಹೊರಬರುವುದು ಸೂರ್ಯ ಮುಳುಗುವ ಸಮಯದಲ್ಲಿ. ಸೂರ್ಯ ಮುಳುಗಿ ಚಂದ್ರನ ಪ್ರವೇಶವಾಗುತ್ತದೆ. ಚಂದ್ರನ ಬೆಳಕು ಸಮುದ್ರದ ಮೇಲೆ ಬಿದ್ದು ಆ ಬೆಳಕು ಮರಳಿನ ಮೇಲೆ ಪ್ರತಿಫಲನಗೊಳ್ಳತೊಡಗಿದಾಗ ಈ ಮರಿಗಳು ಚುರುಕಾಗುತ್ತವೆ. ಸಮುದ್ರ ಯಾವ ದಿಕ್ಕಿನಲ್ಲಿದೆ ಎಂಬುದನ್ನು ಆ ಮೂಲಕ ಅದು ಕಂಡುಕೊಳ್ಳುತ್ತವೆ. ಮಾತ್ರವಲ್ಲ, ಕ್ಷಣಮಾತ್ರದಲ್ಲಿ ಅವು ಸಾಲುಸಾಲಾಗಿ ಸಮುದ್ರದೆಡೆಗೆ ಧಾವಿಸುತ್ತವೆ. ಸಮುದ್ರ ಸೇರುವ ಮರಿಗಳು ಆ ಬಳಿಕ ದೀರ್ಘ ವಲಸೆಯೊಂದಕ್ಕೆ ಸಿದ್ಧವಾಗುತ್ತವೆ. ಪ್ರತಿ ಋತುವಿನಲ್ಲಿ ಏಳೆಂಟು ಬಾರಿ ಅದು ಸಮುದ್ರ ತೀರಕ್ಕೆ ಬಂದು ಮರಳಲ್ಲಿ ಗುಂಡಿ ತೋಡುವ ಅಭ್ಯಾಸ ಮಾಡಿ ಮರಳಿ ಸಮುದ್ರಕ್ಕೆ ಹೋಗುತ್ತಿರುತ್ತದೆ.
ಆಮೆಗಳ ಸಾಮಾನ್ಯ ಕಾಯಿಲೆಗಳು
ಆಮೆಗಳು ಉಸಿರಾಟದ ಸೋಂಕುಗಳಿಗೆ ಸಾಮಾನ್ಯವಾಗಿ ಒಳಪಡುತ್ತವೆ. ಶೀತ, ಒದ್ದೆಯಾದ ಪರಿಸ್ಥಿತಿಗಳು ಅಥವಾ ಕಳಪೆ ಸಾಕಣೆಗೆ ಒಡ್ಡಿಕೊಳ್ಳುವುದರಿಂದ ಉಸಿರಾಟದ ಸೋಂಕುಗಳು ಉಂಟಾಗಬಹುದು. ಇದರಲ್ಲಿ ಉಬ್ಬಸ, ಮೂಗು ಸೋರುವಿಕೆ, ಆಲಸ್ಯ ಮತ್ತು ಉಸಿರಾಟವನ್ನು ಒಳಗೊಂಡಿರಬಹುದು. ಇದಲ್ಲದೇ ಎಲುಬಿನ ಮೃದುತ್ವ (ಮೆಟಾಬಾಲಿಕ್ ಬೋನ್ ಡಿಸೀಸ್), ಮೂಳೆ ವಿರೂಪಗಳು ಮತ್ತು ದೌರ್ಬಲ್ಯಗಳ ಆಹಾರದಲ್ಲಿನ ಕ್ಯಾಲ್ಶಿಯಂ ಕೊರತೆಯಿಂದ ಬರಬಹುದು. ಚಿಪ್ಪಿನ ಕೊಳೆತವು ಶಿಲೀಂದ್ರ ಮತ್ತು ಬ್ಯಾಕ್ಟಿರಿಯಾದ ಸೋಂಕಿನಿಂದ ಆಗಬಹುದು. ಇದರಿಂದ ಮೃದುವಾದ ಕಲೆಗಳು, ಬಣ್ಣ ಮತ್ತು ದುರ್ವಾಸನೆಗೆ ಕಾರಣವಾಗುತ್ತದೆ.ಜಂತುಹುಳಗಳು ಸಹ ಆಮೆಗಳನ್ನು ಬಾಧಿಸಬಹುದು. ಇದರಿಂದ ತೂಕ ನಷ್ಟ, ಅತಿಸಾರ ಮತ್ತು ಆರೋಗ್ಯದಲ್ಲಿ ಸಾಮಾನ್ಯ ಕುಸಿತವನ್ನು ಉಂಟುಮಾಡಬಹುದು. ಕಣ್ಣಿನ ಸೋಂಕುಗಳು ಮತ್ತು ಗಾಯಗಳು ಸಂಭವಿಸಬಹುದು.
ಆಮೆಗಳು ನಿರ್ಜಲೀಕರಣಕ್ಕೆ ಗುರಿಯಾಗುತ್ತವೆ. ವಿಶೇಷವಾಗಿ ಶುಷ್ಕ ಪರಿಸರದಲ್ಲಿ. ಗುಳಿಬಿದ್ದ ಕಣ್ಣುಗಳು, ಆಲಸ್ಯ, ಒಣ ಚರ್ಮ ಮತ್ತು ಕಡಿಮೆಯಾದ ಮೂತ್ರದ ಉತ್ಪಾದನೆಯು ಚಿಹ್ನೆಗಳನ್ನು ಒಳಗೊಂಡಿರುತ್ತದೆ. ಅತಿಯಾಗಿ ಬೆಳೆದ ಮೂತಿಯ ಕೊಕ್ಕುಗಳು ಅಥವಾ ಬಾಯಿಯ ಗಾಯಗಳು ಆಮೆಗಳಿಗೆ ತಿನ್ನಲು ಕಷ್ಟವಾಗಬಹುದು. ಬಾಹ್ಯ ವಸ್ತುಗಳು ಅಥವಾ ಅನುಚಿತ ಆಹಾರ ಸೇವನೆಯು ಜೀರ್ಣಾಂಗದಲ್ಲಿ ಅಡಚಣೆಗಳಿಗೆ ಕಾರಣವಾಗಬಹುದು. ಇದು ಹಸಿವಾಗದಿರುವುದು, ವಾಂತಿ ಮತ್ತು ಮಲಬದ್ಧತೆಗೆ ಕಾರಣವಾಗಬಹುದು.
ಸಾಕಿದ ಆಮೆಗಳು ಸ್ಥೂಲಕಾಯತೆಯಿಂದ ಬಳಲುತ್ತವೆ. ಅತಿಯಾಗಿ ತಿನ್ನುವುದು ಅಥವಾ ಅಸಮತೋಲಿತ ಆಹಾರವನ್ನು ಒದಗಿಸುವುದು ಸ್ಥೂಲಕಾಯತೆಗೆ ಕಾರಣವಾಗಬಹುದು.
ಆಮೆ ಮತ್ತು ಪರಿಸರ
ಆಮೆಗಳು ತಮ್ಮ ಮಲದ ಮೂಲಕ ಬೀಜಗಳನ್ನು ಹರಡಲು ಸಹಾಯ ಮಾಡುವ ಮೂಲಕ ತಮ್ಮ ಪರಿಸರ ವ್ಯವಸ್ಥೆಗಳಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತವೆ. ಅದರಲ್ಲಿಯೂ ಅವು ಸಣ್ಣ ಸಣ್ಣ ಹುಲ್ಲು, ಸಸಿಗಳನ್ನು ತಿನ್ನುವುದರಿಂದ ಅವುಗಳ ಬೀಜ ಮಲದ ಮೂಲಕ ಪ್ರಸರಣವಾಗುತ್ತದೆ. ಇದಲ್ಲದೇ ವಿವಿಧ ಬ್ಯಾಕ್ಟಿರಿಯಾಗಳು ಮತ್ತು ಶಿಲೀಂದ್ರಗಳ ಸ್ಪೋರುಗಳನ್ನು ಸಹ ಇವು ಪ್ರಸರಣ ಮಾಡುತ್ತವೆ. ಅವು ಸಸ್ಯ ಸಮುದಾಯಗಳ ಆರೋಗ್ಯ ಮತ್ತು ವೈವಿಧ್ಯತೆಯನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತವೆ. ಇವುಗಳ ಹೊರಗಿನ ಚಿಪ್ಪು ಹೆಚ್ಚಿಗೆ ಕ್ಯಾಲ್ಶಿಯಂ ಹೊಂದಿರುವುದರಿಂದ ವಿವಿಧ ಖನಿಜ ಮಿಶ್ರಣದಲ್ಲಿ ಉಪಯೋಗವಾಗುತ್ತದೆ. ಜೀವವೈವಿಧ್ಯತೆಗೆ ಇವುಗಳು ನೀಡುವ ಕೊಡುಗೆ ಅಸದಳ.
ಆಮೆಯ ಬಗ್ಗೆ ಕೆಲವು ಆಸಕ್ತಿದಾಯಕ ಸಂಗತಿಗಳು
ಆಮೆ ಅತ್ಯಂತ ನಿಧಾನ ಜೀವಿ. ಅವು ಸದಾ ಶಾಂತವಾಗಿರುತ್ತವೆ ಮತ್ತು ನಿಧಾನವಾಗಿ ಚಲಿಸುತ್ತವೆ. ಆಮೆಯ ವೇಗ ಸರಾಸರಿ 0.2 - 0.5 ಕಿಮೀ / ಗಂಟೆಗೆ. ಸರ್ಕಾರದ ವ್ಯವಸ್ಥೆಯಲ್ಲಿ ಕಡತದ ಚಲನೆಯ ವೇಗವನ್ನು ಆಮೆಯ ವೇಗಕ್ಕೆ ಹೋಲಿಸಿ ಹೀಗಳೆಯುವುದು ಸಾಮಾನ್ಯ.
ಆಮೆಯ ಮೆದುಳನ್ನು ಶಸ್ತ್ರಚಿಕಿತ್ಸೆಯಿಂದ ತೆಗೆದ ನಂತರ 6 ತಿಂಗಳವರೆಗೆ ಅವು ಬದುಕುಳಿದ ನಿದರ್ಶನಗಳಿವೆ. ಇದರ ಜೀವನಕ್ಕೆ ಮೆದುಳು ಅಷ್ಟೊಂದು ಅವಶ್ಯವಲ್ಲ ಎಂಬುದಕ್ಕೆ ಇದು ನಿದರ್ಶನ.
ಆಮೆ ಜಾತಿಯ ಸರಾಸರಿ ಜೀವಿತಾವಧಿ 80-150 ವರ್ಷಗಳು. ಗ್ಯಾಲಪಗೋಸ್ ಆಮೆಗಳು 150 ವರ್ಷಗಳಿಗಿಂತ ಹೆಚ್ಚು ಕಾಲ ಬದುಕಿವೆ ಮತ್ತು ಅಲ್ದಬ್ರಾ ದೈತ್ಯ ಆಮೆ ಅದ್ವೈತಾ 255 ವರ್ಷಗಳ ಕಾಲ ಬದುಕಿದೆ ಎಂದು ಅಂದಾಜಿಸಲಾಗಿದೆ.
ಆಮೆಗಳ ಶರೀರಕ್ಕೆ ಹೋಲಿಸಿದರೆ ಅವುಗಳ ತಲೆ ಮತ್ತು ಮೆದುಳಿನ ಗಾತ್ರ ಬಹಳ ಚಿಕ್ಕದು. ಅವುಗಳ ಮೆದುಳನ್ನು ತೆಗೆದುಹಾಕಿದಾಗಲೂ ಸಹ ಅವು ಬದುಕುತ್ತವೆ ಎಂದು ಪ್ರಯೋಗವೊಂದರ ಮೂಲಕ ಸಾಬೀತು ಮಾಡಲಾಗಿದೆ.
ಮರದ ಕಾಂಡದಲ್ಲಿನ ಉಂಗುರಗಳಂತೆಯೇ ಆಮೆಯ ಚಿಪ್ಪಿನ ಬೆಳವಣಿಗೆಯ ಉಂಗುರಗಳನ್ನು ಕಾಣಬಹುದು. ಉಂಗುರಗಳ ಸಂಖ್ಯೆಯಿಂದ ಆಮೆಗಳ ವಯಸ್ಸನ್ನು ಅಂದಾಜಿಸಬಹುದು.
ಆಮೆಗಳು ಹ್ರದಯ ಮಿಡಿತ ೨೫-೩೦ ಪ್ರತಿನಿಮಿಷಕ್ಕೆ, ಉಸಿರಾಟ ೩-೧೨ ಪ್ರತಿನಿಮಿಷಕ್ಕೆ ಮತ್ತು ಶರೀರದ ತಾಪಮಾನ ೮೦-೯೫ ಡಿಗ್ರೀ ಫ್ಯಾರಾನ್ಹಿಟ್.
ಆಮೆಗಳು ಶಬ್ಧರಹಿತ ಜೀವಿಗಳು. ಇವು ದೊಡ್ಡದಾಗಿ ಶಬ್ಧ ಮಾಡದಿದ್ದರೂ ಸಹ ಒಮ್ಮೊಮ್ಮೆ ಸಣ್ಣದಾಗಿ ಕಂಪನದಂತ ಶಬ್ಧ ಹೊರಡಿಸುತ್ತವೆ.
ಭೂಮಿಯಲ್ಲಿ ನಿಧಾನ ಚಲನೆಯ ಹೊರತಾಗಿಯೂ, ಆಮೆಗಳು ಆಶ್ಚರ್ಯಕರವಾಗಿ ಉತ್ತಮ ಈಜುಗಾರಗಳು. ಅವರು ತಮ್ಮ ತೇಲುವ ದೇಹಗಳಿಂದ ನೀರಿನಲ್ಲಿ ತೇಲಬಹುದು. ಆದರೂ ಅವುಗಳ ಈಜುವ ವೇಗವೂ ಕಡಿಮೆಯೇ.
ಆಮೆಯ ಚಿಪ್ಪು ಅದರ ಬೆನ್ನುಮೂಳೆ ಮತ್ತು ಪಕ್ಕೆಲುಬುಗಳ ವಿಸ್ತರಣೆಯಾಗಿದ್ದು, ಅದರ ಪ್ರಮುಖ ಅಂಗಗಳಿಗೆ ರಕ್ಷಣಾತ್ಮಕ ರಚನೆಯನ್ನು ಒದಗಿಸುತ್ತದೆ.
ಕೆಲವಂದು ಜಾತಿಯ ಆಮೆಗಳು ಚಳಿಗಾಲದಲ್ಲಿ ೨೦ ದಿನಗಳಿಂದ ೬ ತಿಂಗಳುಗಳವರೆಗೆ ಶೀತನಿದ್ರೆಗೆ ಜಾರುತ್ತವೆ.
ಆಮೆಗಳ ಕಣ್ಣುಗಳು 360 ಡಿಗ್ರೀ ನೋಡುವಷ್ಟು ವಿಶಾಲ ಕೋನ ಹೊಂದಿವೆ. ಅವುಗಳು ಬಣ್ಣಗಳನ್ನು ಗುರುತಿಸಬಲ್ಲವು.
ಭೂಮಿಯ ಮತ್ತು ಸಮುದ್ರದ ಆಮೆಗಳಿಗೆ ಶ್ವಾಸಕೋಶವಿರುತ್ತದೆ. ಸಮುದ್ರದ ಆಮೆಗಳು ನೀರಿನಲ್ಲಿದ್ದಾಗ ಅಗಾಗ ಮೇಲೆ ಬಂದು ಉಸಿರು ತೆಗೆದುಕೊಂಡು ವಾಪಸ್ ನೀರಿನಡಿ ಹೋಗುತ್ತವೆ. ಇವುಗಳಿಗೆ ರಕ್ತದಲ್ಲಿನ ಕಣಗಳಲ್ಲಿ ಹೆಚ್ಚಿನ ಆಮ್ಲಜನಕವನ್ನು ಹಿಡಿದಿಟ್ಟುಕೊಳ್ಳುವ ಸಾಮರ್ಥ್ಯವಿರುತ್ತದೆ. ಇವುಗಳಿಗೆ ವಫೆ ಇರುವುದಿಲ್ಲ.
ಆಮೆಗಳ ಚಿಪ್ಪಿನ ಮೇಲೆ ನರಗಳ ತುದಿ ಇರುವುದರಿಂದ ಅವುಗಳಿಗೆ ಶಾಖ, ಸ್ಪರ್ಷ, ತಂಪು ಇತ್ಯಾದಿಗಳ ಸಂವೇದನೆ ಇರುತ್ತದೆ.
ಅಮೆಗಳಿಗೆ ಹಾವುಗಳ ಹಾಗೆ ಕಿವಿಗಳಿರುತ್ತವೆ. ಆದರೆ ಕಿವಿಯ ಹೊರಪದರ ಇರುವುದಿಲ್ಲ. ಅವು ಸುಲಭವಾಗಿ ಶಬ್ಧಗ್ರಹಣ ಮಾಡುತ್ತವೆ.
ಇತರ ಪ್ರಾಣಿಗಳ ಹಾಗೆ ಮಟ್ಟೆ ಇಡವ ಮೊದಲೇ ಆಮೆಗಳಲ್ಲಿ ಲಿಂಗ ನಿರ್ಧಾರವಾಗುವುದಿಲ್ಲ. ಆಮೆಗಳಲ್ಲಿ ಗಂಡು ಮತ್ತು ಹೆಣ್ಣು ಎಂದು ನಿರ್ಧಾರವಾಗುವುದು ಅವುಗಳು ಮೊಟ್ಟೆಯ ಅವಸ್ಥೆಯಲ್ಲಿದ್ದಾಗ ಮತ್ತು ಕಾವು ಕೊಡುವ ತಾಪಮಾನ ಮತ್ತು ಅವಧಿಯ ಮೇಲೆ. ಬೆಚ್ಚನೆಯ ಉಷ್ಣತೆಯು ಸಾಮಾನ್ಯವಾಗಿ ಹೆಣ್ಣು ಆಮೆಗಳನ್ನು ಉತ್ಪಾದಿಸಿದರೆ ತಂಪಾದ ತಾಪಮಾನವು ಗಂಡು ಆಮೆಗಳನ್ನು ಉತ್ಪಾದಿಸುತ್ತದೆ.
ಆಮೆಗಳು ಬೊಚ್ಚುಬಾಯಿಯ ಪ್ರಾಣಿಗಳು. ಅವುಗಳಿಗೆ ಹಲ್ಲಿರುವುದಿಲ್ಲ. ಇವುಗಳು ಬಾಯಿಯಲ್ಲಿಯೇ ಆಹಾರವನ್ನು ಚೆನ್ನಾಗಿ ಅರೆಯುತ್ತವೆ. ಇವುಗಳ ಜೀರ್ಣಕ್ರಿಯೆ ದೊಡ್ಡಕರುಳಿನಲ್ಲಿ ಸೂಕ್ಷ್ಮಾಣುಗಳ ಸಹಾಯದಿಂದ ಆಗುತ್ತದೆ.
ಗಂಡು ಆಮೆಗಳಿಗೆ ಬಾಲ ಉದ್ದವಾಗಿರುತ್ತದೆ. ಗಂಡ ಮತ್ತು ಹೆಣ್ಣು ಆಮೆಗಳ ವ್ಯತ್ಯಾಸ ಪತ್ತೆ ಸ್ವಲ್ಪ ಕಷ್ಟ.
ಹೀಗೆ ಹೇಳುತ್ತಾ ಹೊರಟರೆ ಆಮೆಗಳದು ಮುಗಿಯದ ಕಥೆ. ಈ ಪ್ರಪಂಚದಲ್ಲಿ ಆಮೆಗಳಿಗೂ ಸಹ ಬದುಕುವ ಹಕ್ಕಿದೆ. ಅವೂ ನಮ್ಮ ಜೊತೆಯಲ್ಲಿಯೇ ಪ್ರಕ್ರತಿಯಲ್ಲಿ ಬದುಕಲಿ.
ಡಾ:ಎನ್.ಬಿ.ಶ್ರೀಧರ
ಪ್ರಾಧ್ಯಾಪಕರು ಮತ್ತು ಮುಖ್ಯಸ್ಥರು
ಪಶುವೈದ್ಯಕೀಯ ಔಷಧಶಾಸ್ತ್ರ ಮತ್ತು ವಿಷಶಾಸ್ತ್ರ ವಿಭಾಗ
ಪಶುವೈದ್ಯಕೀಯ ಮಹಾವಿದ್ಯಾಲಯ, ಶಿವಮೊಗ್ಗ-577204
ನವದೆಹಲಿ: ದಿನಪತ್ರಿಕೆ ಹಾಗೂ ಇನ್ನಿತರ ಪತ್ರಿಕೆಗಳಲ್ಲಿ ಆಹಾರಗಳನ್ನು ಹಾಕಿ ಕೊಡುವುದು, ಕಟ್ಟಿ ಕೊಡುವುದು, ಸಂಗ್ರಹಿಸುವುದನ್ನು ಕೂಡಲೇ ನಿಲ್ಲಿಸಬೇಕು ಎಂದು ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ (FSSAI) ಮಾರಾಟಗಾರರಿಗೆ ತಾಕೀತು ಮಾಡಿದೆ.
ಆಹಾರಗಳನ್ನು ಪತ್ರಿಕೆಗಳಲ್ಲಿಟ್ಟು ಕೊಡುವುದು, ಸಂಗ್ರಹಿಸುವುದು ಅನೇಕ ಜನರಲ್ಲಿ ಅನೇಕ ಗಂಭೀರ ಆರೋಗ್ಯ ಸಮಸ್ಯೆಗಳನ್ನು ತಂದೊಡ್ಡುತ್ತಿವೆ. ಹೀಗಾಗಿ ಮಾರಾಟಗಾರರು ಇದನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ಇಲ್ಲದಿದ್ದರೆ ಭಾರಿ ದಂಡ ವಿಧಿಸಲಾಗುತ್ತದೆ ಎಂದು FSSAI ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ ಕಮಲಾ ವರ್ಧನಾ ರಾವ್ ಅವರು ಆದೇಶಿಸಿದ್ದಾರೆ.
ಈ ನಿಯಮಾವಳಿಯನ್ನು FSSAI, ರಾಜ್ಯ ಆಹಾರ ಸುರಕ್ಷತೆ ಸಕ್ಷಮ ಪ್ರಾಧಿಕಾರಗಳ ಜೊತೆ ಜಂಟಿಯಾಗಿ ನಿಗಾ ಇಡಲಿದೆ ಎಂದು ಹೇಳಿದ್ದಾರೆ.
ಪತ್ರಿಕೆಗಳಿಗೆ ಬಳಸುವ ಇಂಕ್ನಲ್ಲಿ ಸೀಸ ಇನ್ನಿತರ ರಸಾಯನಿಕಗಳು ಇರುವುದರಿಂದ ಇವು ಆಹಾರಗಳ ಮೂಲಕ ಮಾನವ ದೇಹವನ್ನು ಸೇರುವ ಸಂಭವವಿದೆ. ಹಾಗಾಗಿ ಆಹಾರಗಳನ್ನು ಹಾಕಿ ಕೊಡಲು, ಸಂಗ್ರಹಿಸಲು ಪತ್ರಿಕೆಗಳನ್ನು ಬಳಸಬಾರದು. ಬದಲಿಗೆ ಆರೋಗ್ಯಕರ ಉತ್ಪನ್ನಗಳನ್ನು ಬಳಸಬೇಕು ಎಂದು ಮಾರಾಟಗಾರರಿಗೆ ಸಲಹೆ ನೀಡಿದೆ.
ಆಹಾರದಲ್ಲಿನ ಎಣ್ಣೆ ಪತ್ರಿಕೆಗಳಿಗೆ ಬಳಸಲಾದ ಇಂಕ್ನಲ್ಲಿನ ರಸಾಯನಿಕಗಳನ್ನು ಹೀರುವ ಸಾಮರ್ಥ್ಯವನ್ನು ಹೊಂದಿರುವುದರಿಂದ ಇದು ಮಾನವನಲ್ಲಿ ಗಂಭೀರ ಆರೋಗ್ಯ ಸಮಸ್ಯೆಗಳನ್ನು ತರುವುದು ಎಂದು FSSAI ಎಚ್ಚರಿಸಿದೆ.
✍️ಪರಿಸರ ಪರಿವಾರ
Click here to claim your Sponsored Listing.
Videos (show all)
Website
Address
Vidyanagara
Shimoga
577203
B H Road
Shimoga, 577301
Karnataka rajya vanniyakula Kshatriya sangha (R) DRSH/SOR/4/2021/2022
Shimoga
Shimoga
Bringing the Nature closer to the Community Wildlife Conservation Training Camp Join us to experien
Shimoga
Shimoga
Building compassionate communities around the world, Inspired by Hussain�
Shimoga
Shimoga, 577201
a small initiative to make understand the concept of harmonious living in the society by following
Shimoga, 577204
Anjuman-E-Islam, Shivamogga for Islamic Family Councelling as per Sharia & Muslim Personal Law, educ
Hennur Cross
Shimoga, 560077
One and only National GorkhaOrganization which was formed in 2001. We are the Karnataka Unit to safeg