Anugraha Eye Hospital Vijayapur and Kalaburgi
Anugraha Eye Hospital Vijayapur and kalaburgi has online app called "eKannu" where you can consult Doctors online for any eye related issues.
ಈ ದಿನದ ಪತ್ರಿಕಾ ಪ್ರಕಟಣೆಗಳು.
ಎಲ್ಲ ಮಾದ್ಯಮ ಮಿತ್ರರಿಗೆ ಅನುಗ್ರಹ ಆಸ್ಪತ್ರೆ ವತಿಯಿಂದ ಧನ್ಯವಾದಗಳು.
ದಿನಾಂಕ 17.03.2024 ರವಿವಾರ ರಂದು ಕೋರವಾರದಲ್ಲಿ ಅನುಗ್ರಹ ಕಣ್ಣಿನ ಆಸ್ಪತ್ರೆ ವಿಜಯಪುರ ಮತ್ತು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ಕೋರವಾರ, ಕೊರವಾರದ ಸಮಸ್ತ ಜನತೆಯ ಸಹಯೋಗದಲ್ಲಿ ನಡೆದ ಉಚಿತ ನೇತ್ರ ತಪಾಸಣೆ ಹಾಗೂ ಶಸ್ತ್ರ ಚಿಕಿತ್ಸೆ ಶಿಬಿರದಲ್ಲಿ ಸುಮಾರು 450 ಕ್ಕಿಂತ ಹೆಚ್ಚು ಜನರ ನೇತ್ರ ತಪಾಸಣೆ ಮಾಡಲಾಯಿತು.
170 ಹೆಚ್ಚು ಜನರನ್ನು ಉಚಿತ ನೇತ್ರ ಚಿಕಿತ್ಸೆಗೆ ಆಯ್ಕೆ ಮಾಡಿಲಾಯಿತು. ಈ ಶಿಬಿರ ಯಶಸ್ವಿಯಾಗಲು ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಸಹಕಾರ ನೀಡಿದ ಅಧ್ಯಕ್ಷರಿಗೆ, ನಿರ್ದೇಶಕ ಮಂಡಳಿಯ ಸಿಬ್ಬಂದಿಗಳಿಗೆ,ಊರಿನ ಎಲ್ಲ ಗಣ್ಯ ವ್ಯಕ್ತಿಗಳಿಗೆ ಡಾ ಪ್ರಭುಗೌಡ ಬ ಲಿಂಗದಳ್ಳಿ ಸರ್ ಹಾಗೂ ಅನುಗ್ರಹ ಕಣ್ಣಿನ ಆಸ್ಪತ್ರೆಯ ಎಲ್ಲ ಸಿಬ್ಬಂದಿಗಳ ವತಿಯಿಂದ ಹೃದಯಪೂರ್ವಕವಾದ ಧನ್ಯವಾದಗಳು 🙏🏾🙏🏾🙏🏾🙏🏾🙏🏾
ಮಾರ್ಚ್ 12, 2024ರಂದು ವಿಶ್ವ ಗ್ಲುಕೋಮಾ ದಿನಾಚರಣೆಯ ಅಂಗವಾಗಿ ಅನುಗ್ರಹ ಕಣ್ಣಿನ ಆಸ್ಪತ್ರೆ ವಿಜಯಪುರದಲ್ಲಿ 40 ವರ್ಷ ಮೇಲ್ಪಟ್ಟವರಿಗೆ ಉಚಿತವಾಗಿ ಕಣ್ಣಿನ ತಪಾಸಣೆ ಮಾಡಲಾಯಿತು. ಕಾರ್ಯಕ್ರಮಕ್ಕೆ ಡಾ,ಪ್ರಭುಗೌಡ ಸರ್ ಹಾಗೂ ಡಾ,ಮಾಲಿನಿ ಪ್ರಭುಗೌಡ ಮೇಡಂ ಚಾಲನೆ ನೀಡಿದರು.
ನಮ್ಮ ಆಸ್ಪತ್ರೆಯ ಗ್ಲುಕೋಮಾ ಕನ್ಸಲ್ಟೆಂಟ್ಸ್ ಡಾ.ಕಾವೇರಿ ಪಾಟೀಲ ಹಾಗೂ ಡಾ. ಸುಷ್ಮಾ ವಾರದ ಅವರು ಸುಮಾರು 50 ರೋಗಿಗಳ ತಪಾಸಣೆ ಮಾಡಿದರು.
ಆಸ್ಪತ್ರೆಯಿಂದ ಪ್ರಕಟಣೆ.
ನಾಳೆ ನಡೆಯಲಿರುವ ಉಚಿತ ಕಣ್ಣಿನ ತಪಸಣಾ ಶಿಬಿರದಲ್ಲಿ ಎಲ್ಲರೂ ಭಾಗವಹಿಸಬೇಕೆಂದು ವಿನಂತಿ.
Admissions are Open in Anugraha Eye Hospital Kalaburgi.
ದಿ,27-11-2023 ರಂದು ಅನುಗ್ರಹ ಕಣ್ಣಿನ ಆಸ್ಪತ್ರೆ ವಿಜಯಪುರ ಹಾಗೂ ಇಂಡಿಯನ್ ಆಯಿಲ್ ಕಾರ್ಪೊರೇಶನ್ ವತಿಯಿಂದ ನಡೆದ ಉಚಿತ ಕಣ್ಣಿನ ತಪಾಸಣೆ ಶಿಬಿರದಲ್ಲಿ ವಿಜಯಪುರ ನಗರದ 127 ಕಾರ್ಪೊರೇಶನ್ ಸಿಬ್ಬಂದಿ ಹಾಗೂ ಚಾಲಕರನ್ನು ತಪಾಸಣೆ ಮಾಡಿ ಸುಮಾರು 6 ಜನರನ್ನು ಉಚಿತ ನೇತ್ರ ಚಿಕಿತ್ಸೆಗೆ ಆಯ್ಕೆ ಮಾಡಲಾಗಿದೆ.
ದಿ,20-03-2023 ರಂದು ಬೆಂಗಳೂರಿನ ಟೌನ್ ಹಾಲ್ ನಲ್ಲಿ ನಡೆದ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ನಡೆದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಖ್ಯಾತ ನೇತ್ರ ತಜ್ಞರು ಹಾಗೂ ಅನುಗ್ರಹ ಕಣ್ಣಿನ ಆಸ್ಪತ್ರೆ ವಿಜಯಪುರ ಹಾಗೂ ಕಲಬುರಗಿಯ ಮುಖ್ಯಸ್ಥರಾದ ಡಾ.ಮಾಲಿನಿ ಪ್ರಭುಗೌಡ ಅವರಿಗೆ ಯುನಿವರ್ಸಲ್ ಐಕಾನ್ ಉಮನ್ ಅಚೀವರ್ಸ ಅವಾರ್ಡ್ ನೀಡಿ ಗೌರವಿಸಲಾಯಿತು . ಯುನಿವರ್ಸಲ್ ಫಿಲ್ಮ್ ಮೇಕರ್ಸ ಕೌನ್ಸಿಲ್ ಮತ್ತು ನವ ಕರ್ನಾಟಕ ಚಲನಚಿತ್ರ ಅಕ್ಯಾಡಮಿ ಅವರು ಹಮ್ಮಿಕೊಂಡ ಈ ಸಮಾರಂಭದಲ್ಲಿ ಮುಖ್ಯ ಅಥಿತಿಗಳಾಗಿ ವಿಧಾನ ಪರಿಷತ್ತಿನ ಸಭಾಪತಿಗಳಾದ ಸನ್ಮಾನ್ಯ ಬಸವರಾಜ ಹೊರಟ್ಟಿ ಯವರು ಹಾಗೂ ಭಾರತ ಚಿತ್ರರಂಗದ ಹೆಮ್ಮೆಯ ನಟರಾದ ಶ್ರೀ ಸುಮನ್ ತಳವಾರ ಅವರು ಭಾಗವಹಿಸಿ ಪ್ರಶಸ್ತಿ ಪ್ರಧಾನ ಮಾಡಿದರು.
Wish you many more happy returns of the day Sir.
ಸಾಮಾಜಿಕ ಕಳಕಳಿಯ ಸನ್ಮಾಗ೯ದ ಮೇಲೆ ನಡೆಯುತ್ತಿರುವ ಸ್ವಾಭಿಮಾನಿ,ನಂಬಿ ಬಂದವರ ಬಾಳಿನ ಬೆಳಕಾಗಿಸಿದ ಕಾಯಕಯೋಗಿ, ತನಗೆ ಸ್ವಲ್ಪ ಸಮಾಜಕ್ಕೆ ಸಾಕಷ್ಟು ಎಂಬಂತೆ Pay Back to The Society ತತ್ವದ ಮೇಲೆ ನಂಬಿಕೆ ಇರಿಸಿರುವ ನೇತಾರ, ಸವ೯ರನ್ನೊಳಗೊಳ್ಳುವ ಆದಶ೯ಮಯ ಜೀವಿ, ಉದ್ಯೋಗದಾತರಾಗಿ ಯುವ ಸಮುದಾಯಕ್ಕೆ ದಾರಿದೀಪವಾದ ಹಸನ್ಮುಖಿ, ಉಚಿತ ನೇತ್ರ ಚಿಕಿತ್ಸೆಗಳ ಮೂಲಕ ಅಸಂಖ್ಯಾತರ ಮನೆ ಮನ ಬೆಳಗಿದ ವೈದ್ಯ, ಸರಳತೆಯ ಸಮಾನತೆಯ ಸಾಕಾರಮೂತಿ೯, ಜೊತೆಗಿದ್ದವರ ಓರೆಕೊರೆಗಳನ್ನ ತಿದ್ದಿ ತಿಳಿ ಹೇಳಿ ಸವ೯ರಿಗೂ ಒಳಿತನ್ನೇ ಬಯಸುವ ನಮ್ಮ ವಿಜಯಪುರದ ಹ್ರದಯವಂತಿಕೆಯ ಜ್ಯೋತಿ, ಕನಾ೯ಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕ್ರತರು ಶರಣ ಶ್ರೀ ಪ್ರಭುಗೌಡ .ಬ. ಲಿಂಗದಳ್ಳಿ(ಚಬನೂರ) ಇವರಿಗೆ ಹುಟ್ಟುಹಬ್ಬದ ಅನಂತ ಶರಣು ಶರಣಾಥಿ೯ಗಳು.
ನಿಮ್ಮ ಹಾಗೂ ನಿಮ್ಮ ಪ್ರೀತಿಪಾತ್ರರ ಜೀವನದಲ್ಲಿ ನಗು ನೆಮ್ಮದಿ ಹಾಗೂ ಆರೋಗ್ಯ ಸದಾ ನೆಲೆಸಿರಲಿ ಎಂದು ಸ್ರಷ್ಟಿಕತ೯ನಲ್ಲಿ ಪ್ರಾಥಿ೯ಸುತ್ತೇವೆ.
ಎಲ್ಲರಿಗೂ ಮಕರ ಸಂಕ್ರಾಂತಿ ಹಬ್ಬದ ಹಾರ್ದಿಕ ಶುಭಾಶಯಗಳು.
ಕುಮಾರೇಶ್ವರ ಜೀವನ ವಿಕಾಸ ಪೌಂಡೇಶನ್ ಮತ್ತು ಕುಂಟೋಜಿ ಸಂಸ್ಥಾನ ಹಿರೇಮಠದಿಂದ ಸಾಧಕರಿಗೆ ನೀಡುವ "ನಯನ ಭಾರ್ಗವ" ಪ್ರಶಸ್ತಿಗೆ ನಮ್ಮ ಹೆಮ್ಮೆಯ ಡಾಕ್ಟರ್ ಪ್ರಭುಗೌಡ ಸರ್ ಅವರನ್ನು ಆಯ್ಕೆಮಾಡಿದಕ್ಕೆ ಸಂಸ್ಥೆಯ ಸಮಸ್ತ ಬಂಧುಗಳಿಗೆ ಧನ್ಯವಾದಗಳು🙏.
ಪ್ರಶಸ್ತಿ ಪ್ರದಾನ ಕಾರ್ಯಕ್ರಮವು ದಿನಾಂಕ 29-07-2022 ರಂದು ಬೆಳಿಗ್ಗೆ 10 ಗಂಟೆಗೆ ಮುದ್ದೇಬಿಹಾಳ ಪಟ್ಟಣದ ಎ. ಪಿ. ಎಂ. ಸಿ. ಯಲ್ಲಿರುವ ಕರ್ನಾಟಕ ಬ್ಯಾಂಕ್ ಸಭಾಭವನದಲ್ಲಿ ಜರುಗಲಿದೆ.
ಕನ್ನಡಕದಿಂದ ಕನ್ನಡಕ ರಹಿತ ದೃಷ್ಟಿ 15 ನಿಮಿಷದಲ್ಲಿ.
Clipping of Udayavani Kannada Daily - Vijayapura Dated 23 Dec 2021
Honoured to be invited as the chief guest at the annual day celebrations at BLDE Association's A.V.S Ayurveda Mahavidyalaya Vijayapur.
Click here to claim your Sponsored Listing.
Videos (show all)
Category
Contact the practice
Telephone
Address
Behind Central Bus Stand, Navabhag Main Road
Vijayapur
586101
Karpurmath Capus, 100Ft Ring Road, Behind KC Nagar, Near Solapur Road
Vijayapur
20 DOULAT KOTI Road, NEAR JMAIYA MASJID VIJAYPUR
Vijayapur, 586104
Multispeciality Hospitals
# 8 & 15, Mallikarjun Nagar, Near Ganesh Nagar Bus Stop, Managuli Road
Vijayapur, 586109